ಹೊಸ ಚಿತ್ರಕ್ಕಾಗಿ ಡಿಫರೆಂಟ್ ಗೆಟಪ್ ನಲ್ಲಿ ಪವರ್ ಸ್ಟಾರ್

0 0

ಕನ್ನಡದ ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾಗಳಲ್ಲಿ ಏನಾದರೊಂದು ಸ್ಪೆಷಾಲಿಟಿ ಇದ್ದೆ ಇರುತ್ತೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಪುನೀತ್ ಸಿನಿಮಾಗಳನ್ನ ಇಷ್ಟ ಪಟ್ಟು ನೋಡುತ್ತಾರೆ. ಸಾಲು ಸಾಲು ಹಿಟ್ ಚಿತ್ರಗಳನ್ನ ನೀಡಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಅಪ್ಪು ಕೈ ಯಲ್ಲಿ ಈಗಲು ಸಾಕಷ್ಟು ಪ್ರಾಜೆಕ್ಟ್‌ಗಳಿದ್ದು, ಒಂದಾದ ಮೇಲೊಂದರಂತೆ ಶೂಟಿಂಗ್ ಕಂಪ್ಲೀಟ್ ಮಾಡುತ್ತಿದ್ದಾರೆ. ಈಗ ಬಂದಿರುವ ಸುದ್ದಿ ಪ್ರಕಾರ ಅಪ್ಪು ಮತ್ತೊಂದು ಚಿತ್ರದ ಕಥೆ ಕೇಳಿ ಫೈನಲ್ ಮಾಡಿದ್ದಾರಂತೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸ್ಯಾಂಡಲ್‌ವುಡ್‌ನ ಸೂಕ್ಷ್ಮಗ್ರಾಹಿ ನಿರ್ದೇಶಕರಲ್ಲಿ ಜೇಕಬ್‌ ವರ್ಗೀಸ್‌ ಸಹ ಒಬ್ಬರು. ಅವರು ನಿರ್ದೇಶನ ಮಾಡಿರುವ ಮೂರು ಸಿನಿಮಾಗಳು ವಿಭಿನ್ನ ಕಥೆಯನ್ನು ಹೊಂದಿದ್ದವು. ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಯನ್ನೂ ಇವು ಗಳಿಸಿದ್ದವು. ಈಗ ಪುನೀತ್‌ ರಾಜ್‌ಕುಮಾರ್‌ ಜತೆ ಮತ್ತೊಂದು ಸಿನಿಮಾ ಮಾಡಲು ಅವರು ಸಜ್ಜಾಗಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿಗಳನ್ನು ಮತ್ತು ಕನ್ನಡಿಗರನ್ನು ಅಪ್ಪು ಅವರ ಸಿನಿಮಾ ಕರಿಯರ್‌ನಲ್ಲಿ ವಿಭಿನ್ನವಾದ ಸಿನಿಮಾ ಯಾವುದು ಎಂದು ಕೇಳಿದರೆ ತಟ್ಟನೆ ‘ಪೃಥ್ವಿ’ ಎಂದು ಹೇಳುತ್ತಾರೆ.

ಆ ಸಿನಿಮಾವನ್ನು ಜೇಕಬ್‌ ಅವರೇ ನಿರ್ದೇಶನ ಮಾಡಿದ್ದರು. ‘ಪೃಥ್ವಿ’ ಬಿಡುಗಡೆಯಾದ ಸಮಯದಲ್ಲಿ ಇಡೀ ಕರ್ನಾಟಕದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಪುನೀತ್‌ ಅವರು ಐಎಎಸ್‌ ಅಧಿಕಾರಿಯಾಗಿ ನಟಿಸಿದ್ದರು. ಪೃಥ್ವಿ ಮೂಲಕ ಜೇಕಬ್‌ ಹಲವು ಸೂಕ್ಷ್ಮ ವಿಷಯಗಳನ್ನು ಹೇಳಿದ್ದರು. ಈಗ ಅದೇ ಜೋಡಿ ಮತ್ತೆ ಒಂದಾಗುತ್ತಿದೆ. ಪುನೀತ್‌ ರಾಜ್‌ಕುಮಾರ್‌ ಅವರ ಜತೆ ಸಿನಿಮಾ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸಿನಿಮಾ ಮಾಡುವುದು ಕನ್ಫರ್ಮ್ ಆಗಿದೆ. ಕಥೆಯ ಬಗ್ಗೆ ಚರ್ಚೆ ನಡೆದಿದೆ. ಸದ್ಯದಲ್ಲೇ ಎಲ್ಲವನ್ನೂ ಹೇಳುತ್ತೇವೆ.

ಸಿನಿಮಾ ರಂಗ ಎಂಬುದು ಮನರಂಜನಾ ಮಾಧ್ಯಮ. ಜನರನ್ನು ಎಂಗೇಜಿಂಗ್‌ ಆಗಿ ಇಟ್ಟುಕೊಳ್ಳುವಂತಹ ಕಥೆ ಮಾಡಿದರೆ ಮಾತ್ರ ಅವರು ಸಿನಿಮಾ ನೋಡುತ್ತಾರೆ. ಅದೇ ನಿಟ್ಟಿನಲ್ಲಿ ಕಥೆ ಮಾಡಿದ್ದೇವೆ. ಪ್ರೇಕ್ಷಕರು ಇಷ್ಟಪಡುವಂತಹ ಕಥೆಯ ಮೂಲಕ ನಾವಿಬ್ಬರೂ ಒಂದಾಗುತ್ತಿದ್ದೇವೆ, ಅಷ್ಟನ್ನು ಮಾತ್ರ ಈಗ ಹೇಳಬಲ್ಲೆ ಎಂದು ಜೇಕಬ್‌ ಹೇಳಿದ್ದಾರೆ.

ಅಪ್ಪು ಕೈಯಲ್ಲಿ ವರ್ಷಪೂರ್ತಿ ಮಾಡುವಷ್ಟು ಸಿನಿಮಾ ಇದ್ದರೂ ಒಳ್ಳೆ ಕಥೆ ಬಂದರೆ ಅದನ್ನ ತಿರಸ್ಕರಿಸೋದಿಲ್ಲ. ಸಮಯ ಎಷ್ಟೇ ಆಗಲಿ ಸಿನಿಮಾ ಮಾಡೋಣ ಎಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿರ್ತಾರೆ. ಸದ್ಯ ಈಗ ನಿರ್ದೇಶಕ ಜೇಕಬ್ ವರ್ಗೀಸ್ ಚಿತ್ರದಲ್ಲಿ ನಟಿಸಲು ಅಪ್ಪು ಓಕೆ ಎಂದಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಅಲ್ಲದೇ ಈ ಚಿತ್ರ ಅಪ್ಪು ಅವರ ಪಿಆರ್‌ಕೆ ಬ್ಯಾನರ್‌ನಲ್ಲೆ ಬರಲಿದ್ದು, ಚಿತ್ರದ ಟೈಟಲ್ ಆದಷ್ಟು ಬೇಗ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.

2010ರಲ್ಲಿ ಬಂದ ಪೃಥ್ವಿ ಸಿನಿಮಾದ ಮೂಲಕ ಒಂದಾಗಿದ್ದ ನಿರ್ದೇಶಕ ಜೇಕಬ್ ವರ್ಗೀಸ್ ಮತ್ತು ಅಪ್ಪು ಕಾಂಬಿನೇಷನ್ ಮ್ಯಾಜಿಕ್ ಮಾಡಿತ್ತು. ಚಿತ್ರದಲ್ಲಿ ಅಪ್ಪುಗೆ ಪಾರ್ವತಿ ಮೆನನ್ ಜೋಡಿಯಾಗಿ ಅಭಿನಯಿಸಿದ್ದರು. ಐಎಎಸ್ ಆಫೀಸರ್ ಆಗಿ ಅನ್ಯಾಯದ ವಿರುದ್ಧ ಹೋರಾಡುವ ಪಾತ್ರದಲ್ಲಿ ಅಪ್ಪು ಅಭಿನಯಿಸಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದರು. ಹಾಡುಗಳು ಕೂಡ ಜನ ಮೆಚ್ಚುಗೆ ಪಡೆದಿತ್ತು. 2010 ರಲ್ಲಿ ಈ ರೀತಿಯ ಸಿನಿಮಾ ಕೊಟ್ಟಿದ್ದ ಜೇಕಬ್ ಇದೀಗ ಮತ್ತೊಂದು ಹೊಸ ಬಗೆಯ ಕಥೆಯನ್ನ ಅಪ್ಪು ಮುಂದೆ ಇಟ್ಟಿದ್ದಾರೆ. ಈ ಕಥೆ ಕೇಳಿ ಪುನೀತ್‌ ರಾಜ್ ಕುಮಾರ್ ಕೂಡ ಇಷ್ಟ ಪಟ್ಟಿದ್ದು ಒಪ್ಪಿಕೊಂಡಿರೋ ಸಿನಿಮಾಗಳು ಮುಗಿದ ನಂತರ ಈ ಪ್ರಾಜೆಕ್ಟ್ ಕೈಗೆತ್ತಿಕೊಳ್ಳೋಣ ಎಂದಿದ್ದಾರಂತೆ.

ಹೀಗಾಗಿ ಚಿತ್ರತಂಡ ಕಲಾವಿದರ ಆಯ್ಕೆ ಮತ್ತು ತಾಂತ್ರಿಕ ತಂಡಗಳನ್ನ ಒಟ್ಟು ಮಾಡುತ್ತಿದ್ದು 2022 ಫೆಬ್ರವರಿಯಲ್ಲಿ ಈ ಹೊಸ ಸಿನಿಮಾ ಸೆಟ್ಟೆರಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೂ ಮುಂಚೆ ಅಪ್ಪು ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್, ಇದಾದ ಬಳಿಕ ಪವನ್ ಕುಮಾರ್ ನಿರ್ದೇಶನದ ದ್ವಿತ್ವ, ಹಾಗೇ ನಿರ್ದೇಶಕ ದಿನಕರ್ ತೂಗುದೀಪ ಮತ್ತು ಸಂತೋಷ್ ಆನಂದ್ ರಾಮ್ ಹಾಗೂ ಎಸ್ ಕೃಷ್ಣ ಸಿನಿಮಾಗಳು ಮುಗಿಸಿದ ನಂತರದಲ್ಲಿ ಜೇಕಬ್ ವರ್ಗೀಸ್ ಮತ್ತು ಅಪ್ಪು ಸಿನಿಮಾ ಸೆಟ್ಟೇರಲಿದೆ. ಕನ್ನಡಕ್ಕೆ ಚಂಬಲ್, ಸವಾರಿ 2, ಪೃಥ್ವಿ ಯಂತ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಜೇಕಬ್ ವರ್ಗೀಸ್ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದು, ಸಿನಿಮಾ ಯಾವ ಜಾನರ್‌ನಲ್ಲಿ ಬರುತ್ತೆ, ಬೇರೆ ಯಾರೆಲ್ಲ ಕಲಾವಿದರು ಚಿತ್ರದಲ್ಲಿ ಇರುತ್ತಾರೆ ಎಂಬೆಲ್ಲ ಪ್ರಶ್ನೆಗಳಿಗೆ ಇನ್ನಷ್ಟೆ ಉತ್ತರಸಿಗಬೇಕಿದ್ದು, ಚಿತ್ರ ಸೆಟ್ಟೆರುವವರೆಗೂ ಕಾಯಲೇಬೇಕು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.