ಮದುವೆಗೂ ಮುಂಚೆ ಅಪ್ಪು ಅವರ ವರ್ತನೆ ಬೇರೆ ತರಾನೇ ಇತ್ತು ಅಂದ್ರು ನಟಿ ಪ್ರೇಮ

0 0

ನಮ್ಮ ಕನ್ನಡದ ಸ್ಟಾರ್ ನಟ ಪವರ್ ಸ್ಟಾರ್ ಅವರ ಅಗಲಿಕೆಯಾಗಿ ಈಗಾಗಲೇ ಐದು ತಿಂಗಳು ಮೇಲಾಗಿದೆ. ಆದರೂ ಕೂಡ ಅವರ ಒಂದೊಂದು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ತಿಳಿಯುತ್ತಿದ್ದಂತೆ ಕಣ್ಣೀರು ತನ್ನಂತಾನೆ ಜಾರುತ್ತದೆ. ಅಷ್ಟರಮಟ್ಟಿಗೆ ಅಪ್ಪು ಅವರು ಎಲ್ಲರನ್ನೂ ತುಂಬಾನೇ ಕಾಡುತ್ತಿದ್ದಾರೆ ಎಂದು ನಾವು ಹೇಳಬಹುದು. ಅಪ್ಪು ಅಗಲಿಕೆ ಹೆಚ್ಚು ನೋವನ್ನ ಈಗಲೂ ನೀಡುತ್ತದೆ. ಈಗಲೂ ಕೂಡ ಅಪ್ಪು ಅವರು ನಮ್ಮ ಜೊತೆಗೆ ಇದ್ದಾರೆ, ಎಲ್ಲಿಯೂ ಹೋಗಿಲ್ಲ ಎಂದೆನಿಸುತ್ತದೆ. ಅವರ ವಿಡಿಯೋ, ಫೋಟೋಸ್, ಅವರ ಸಿನಿಮಾಗಳು ಅವರ ಸಾಮಾಜಿಕ ಕಾರ್ಯಗಳು ನೋಡಿ ತಿಳಿದುಕೊಂಡರೆ ನಿಜಕ್ಕೂ ಒಬ್ಬ ಮನುಷ್ಯ ಇವರ ರೀತಿ ಬದುಕಲು ಸಾಧ್ಯವೇ ಇಲ್ಲ ಎಂದೆನಿಸುತ್ತದೆ.

ಸ್ನೇಹಿತರೆ ಪುನೀತ್ ರಾಜಕುಮಾರ್ ಅವರ ನಡುವಳಿಕೆಯನ್ನು ಹಾಗೂ ಅವರ ವ್ಯಕ್ತಿತ್ವವನ್ನು ಫಾಲೋ ಮಾಡುತ್ತಿರುವ ಅದೆಷ್ಟೋ ಅಭಿಮಾನಿಗಳು ಇಂದು ಸನ್ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಹೀಗಿರುವಾಗ ಕನ್ನಡದ ಖ್ಯಾತ ನಟಿ ಪ್ರೇಮಾ ಅವರು ಸಂದರ್ಶನವೊಂದರಲ್ಲಿ ಅಪ್ಪು ಮದುವೆಗೆ ಮುನ್ನ ಹೀಗಿರಲಿಲ್ಲ. ಮದುವೆಯಾದ ನಂತರ ಸಾಕಷ್ಟು ಬದಲಾವಣೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು ಎಂಬ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ವಿವರವಾಗಿ ತಿಳಿದುಕೊಳ್ಳೊಣ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಶ್ವಿನಿ ಅವರನ್ನು ಮದುವೆಯಾಗುವ ಮುನ್ನ.ಪುನೀತ್ ಅವರ ಮತ್ತೊಂದು ಮುಖವನ್ನು ಎಲ್ಲರೆದುರು ಬಯಲು ಮಾಡಿ ಅವರ ಅನಿಸಿಕೆಯನ್ನು ಈಗ ಹಂಚಿಕೊಂಡಿದ್ದಾರೆ. ಹೌದು ನಟಿ ಪ್ರೇಮ ಅವರು ಹೇಳುವ ಹಾಗೆ, ಪುನೀತ್ ಅವರು ಮದುವೆಯಾಗುವ ಮೊದಲು ಹೀಗೆ ಇರಲಿಲ್ಲವಂತೆ. ಅಶ್ವಿನಿ ಅವರನ್ನ ಮದುವೆ ಆದ ಬಳಿಕ ಅವರಿಗೆ ತುಂಬಾನೇ ಜವಾಬ್ದಾರಿ ಬಂದಿತ್ತು. ಹಾಗೆ ಎಲ್ಲಾ ಹಿರಿಯರಿಗೆ, ಕಿರಿಯರಿಗೆ, ಹೆಚ್ಚು ಮರ್ಯಾದೆ ಕೊಡುತ್ತಿದ್ದರು ಎಂದಿದ್ದಾರೆ. ಮದುವೆ ಮುಂಚೆ ಅಪ್ಪು ಅವರು ತಮ್ಮ ಸ್ವಂತ ಗ್ರಾನೈಟ್ ಬಿಸಿನೆಸ್ ಒಂದನ್ನು ನಡೆಸುತ್ತಿದ್ದರು. ಹೌದು ಅತಿ ಚಿಕ್ಕ ವಯಸ್ಸಿನಲ್ಲಿ ಬಿಸಿನೆಸ್ ಮ್ಯಾನ್ ಆಗ ಹೊರಟಿದ್ದ ಪವರ್ ಪುನೀತ್ ರಾಜಕುಮಾರ್ ರವರ ಮೇಲೆ ಇಲ್ಲಸಲ್ಲದಂತಹ ತಪ್ಪು ಧೋರಣೆಗಳನ್ನು ಮಾಡಲಾಯಿತು.

ಹೀಗಾಗಿ ತಮ್ಮ ಗ್ರಾನೆಟ್ ಬಿಸಿನೆಸ್ ಬಿಟ್ಟು ತಾಯಿಯೊಂದಿಗೆ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ಅಪ್ಪು ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಮದುವೆ ಆಗುವ ಮುನ್ನ ಅಪ್ಪು ಅವರಿಗೆ ತುಂಬಾನೇ ಕೋಪ ಬರುತ್ತಿತ್ತು. ಓಂ ಶೂಟಿಂಗ್ ಸೆಟ್ ಗೆ ಅಪ್ಪು ಬರುತ್ತಿದ್ದರು. ಎಲ್ಲರನ್ನೂ ಚುಡಾಯಿಸಿಕೊಂಡು ಹೋಗಲೇ, ಬಾರಲೇ ಎನ್ನುತ್ತಾ ನಗು ನಗುತ್ತಾ ಎಂಜಾಯ್ ಮಾಡಿಕೊಂಡು ಇರುತ್ತಿದ್ದರು. ಹೆಚ್ಚು ಜೀವನ ಬಗ್ಗೆ ತಲೆಯ ಕೆಡಿಸಿಕೊಂಡಿರಲಿಲ್ಲ. ಅವರಿಗೆ ಜವಾಬ್ದಾರಿಗಳು ಸಹ ಆಗ ಇರಲಿಲ್ಲ, ಯಾವ ಟೆನ್ಶನ್ ತೆಗೆದುಕೊಳ್ಳದೆ ತುಂಬಾನೇ ಜಾಲಿಯಾಗಿ ಗೆಳೆಯರೊಟ್ಟಿಗೆ ಟ್ರಿಪ್ ಹೊಡೆದುಕೊಂಡು ಇರುತ್ತಿದ್ದರು. ಒಮ್ಮೆ ಮದುವೆಯಾದ ಬಳಿಕ ಪುನೀತ್ ಅವರು ತುಂಬಾನೇ ಬದಲಾದರು ಎಂದಿದ್ದಾರೆ.

ಚಿಕ್ಕವಯಸ್ಸಿನಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪುನೀತ್ ರಾಜಕುಮಾರ್ ಒಂದು ಹಂತಕ್ಕೆ ಬಂದ ಮೇಲೆ ಆಕ್ಟಿಂಗನ್ನೂ ನಿಲ್ಲಿಸಿ ಬಿಟ್ಟಿದ್ದರು. ಪಾರ್ವತಮ್ಮನವರಿಗೆ ಸಹಾಯ ಮಾಡಬೇಕು ಎಂಬ ದೃಷ್ಟಿಯಿಂದ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡ ಅಪ್ಪು ಶಿವರಾಜಕುಮಾರ್ ಮತ್ತು ಪ್ರೇಮ ನಟನೆಯ ಓಂ ಸಿನಿಮಾವನ್ನು ನಿರ್ಮಾಣ ಮಾಡಿದರು. ಈ ಕಾರಣದಿಂದ ಸಿನಿಮಾದ ಶೂಟಿಂಗ್ ಸೆಟ್ಟಿಗೆ ಬರುತ್ತಿದ್ದ ಪುನೀತ್ ರಾಜ್ ಕುಮಾರ್ರವರನ್ನು ಗಮನಿಸುತ್ತಿದ್ದ ಪ್ರೇಮ ಹೇಳಿದ್ದು ಹೀಗೆ “ಅಪ್ಪು ಮದುವೆಗೂ ಮುನ್ನ ಹೀಗಿರಲಿಲ್ಲ, ಬದಲಿಗೆ ಬಹಳ ತರ್ಲೆ ತುಂಟಾಟದ ಹುಡುಗನಾಗಿದ್ದರು.

ಎಲ್ಲರನ್ನು ಸ್ನೇಹ ಮನೋಭಾವದಿಂದ ಕಾಣುತ್ತಿದ್ದರೂ ಅಲ್ಲದೆ ಯಾರೊಂದಿಗಾದರೂ ಸಂಪೂರ್ಣ ಕ್ಲೋಸ್ ಆಗಿಬಿಟ್ಟರೆ ಅವರನ್ನು ಹೋಗೋಲೋ ಬಾರೋಲೋ ಹೋಗೆ ಬಾರೆ ಎಂದೆಲ್ಲಾ ಮಾತನಾಡಿಸುತ್ತಿದ್ದರು. ನಟ ಪುನೀತ್ ರಾಜಕುಮಾರ್ ಅವರು ಹೆಚ್ಚು ಜವಾಬ್ದಾರಿ ತೆಗೆದುಕೊಂಡು ಸಿನಿಮಾದಲ್ಲಿ ಹೆಚ್ಚು ಆಸಕ್ತಿ ತೋರಿ, ಎಲ್ಲರಿಗೂ ಮರಿಯಾದೆ ಕೊಡುತ್ತ, ಕಷ್ಟ ಅಂದವರಿಗೆ ಸಹಾಯ ಮಾಡುತ್ತಾ, ಅದನ್ನ ಎಲ್ಲಿಯೂ ಹೇಳದೆ ಮಾಡುತ್ತಿದ್ದರು.

ಹಾಗೆ ತುಂಬಾ ಕೋಪ ಕಂಟ್ರೋಲ್ ಆಗಿತ್ತು ಅಪ್ಪು ಅವರಿಗೆ. ಅಂತಹ ಮನುಷ್ಯ ಮತ್ತೆ ನಮಗೆ ಸಿಗುವುದಿಲ್ಲ ಎಂದು ಇದೀಗ ಪ್ರೇಮ ಅವರು ಪುನೀತ್ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಇವರ ಮಾತು ಕೇಳಿ ಪುನೀತ್ ಅವರ ಪತ್ನಿ ಅಶ್ವಿನಿ ಅವರು ಕೂಡ ಕಣ್ಣೀರು ಹಾಕಿದ್ದಾರೆ ಎನ್ನಲಾಗುತ್ತಿದೆ. ಯಾವಾಗ ಅಶ್ವಿನಿ ಅವರ ಕೈಹಿಡಿದರೋ ಆಗ ಅಪ್ಪು ಸಂಪೂರ್ಣ ಬದಲಾಗಿ ಬಿಟ್ಟರು” ಎಂದು ಪ್ರೇಮ ಸಂದರ್ಶನವೊಂದರಲ್ಲಿ ಅಪ್ಪು ಕುರಿತು ವಿಶೇಷವಾದ ಮಾಹಿತಿ ಒಂದನ್ನು ಹೊರ ಹಾಕಿದ್ದಾರೆ.

Leave A Reply

Your email address will not be published.