ಮೇಘನಾ ರಾಜ್ ಬಗ್ಗೆ ತಿಳಿದವರೇ ಇಲ್ಲ ಭಾರತೀಯ ಚಿತ್ರ ರಂಗದ ನಟಿ ಸ್ಯಾಂಡಲ್ ವುಡ್ ಅಷ್ಟೇ ಅಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡ ಮುದ್ದು ಮುಖದ ಚೆಲುವೆ. ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಇವರು ನಮ್ಮೆಲ್ಲರ ನೆಚ್ಚಿನ ಮುದ್ದು ಕುವರನಾದ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಅವರ ಜೊತೆಗಿನ ಬಾಳ ಪಯಣವನ್ನು ಮುಂದುವರೆಸಲು ಅವರ ಜೊತೆ ಕೈ ಬೆಸೆದು ಜೊತೆಯಾಗಿ ಸಪ್ತಪದಿ ತುಳಿದು ಅವರ ಜೀವನಕ್ಕೆ ಕಾಲಿಟ್ಟಿದ್ದರು.ಅವರಿಬ್ಬರ ಪ್ರೀತಿಯ ಮಜಲು ಮತ್ತೊಂದೆಡೆಗೆ ಕರೆದೊಯ್ಯುವ ಮೊದಲೇ ವಿಧಿಯ ಆಟಕ್ಕೆ ಗುರಿಯಾಗಿ ಚಿರು ಎಲ್ಲರನ್ನೂ ಅಗಲಿ ದೂರಾಗಿ ಭೂಮಿತಾಯಿಯ ಮಡಿಲಲ್ಲಿ ಮಗುವಾಗಿ ಬಿಟ್ಟರು.

ಚಿರು ಸತ್ತಾಗ ಮೇಘನಾ ರಾಜ್ ಅವರು ನಾಲ್ಕು ತಿಂಗಳ ಭೀಮತ್ಸೆ ಗರ್ಭಿಣಿ ಆಗಿದ್ದರು. ನೋವಿನ ದಿನಗಳ ಜೊತೆ ಹೆಜ್ಜೆ ಹಾಕುತ್ತಿದ್ದ ಅವರ ಬಾಳಿಗೆ ಬೆಳಕಾಗಿ ಬಂದದ್ದು ಅವರ ಪ್ರೀತಿಯ ಕಂದಮ್ಮ ರಾಯನ್. ಚಿರುವಿನ ಅಕಾಲಿಕ ಮರಣದ ನಂತರ ಟೆಲಿವಿಷನ್ ನಿಂದ ದೂರ ಉಳಿದಿದ್ದ ಮೇಘನಾ ರಾಜ್ ಅವರು ಕಾಲಕ್ರಮೇಣ ಪರಿಸರಕ್ಕೆ ತಕ್ಕಂತೆ ಹೊಂದಿಕೊಂಡು ಈಗ ಟಿವಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಅನ್ನೋ ಕಾರ್ಯಕ್ರಮ ಒಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಮೇಘನಾ ರಾಜ್ ಅವರು ಜೂನಿಯರ್ ಚಿರು ಹೆಸರಲ್ಲಿ ಒಳ್ಳೆ ನಿರ್ಧಾರ ತೆಗೆದುಕೊಂಡಿದ್ದು ಇದಕ್ಕೆ ಅಪ್ಪುವಿನಿಂದ ಪ್ರೇರಿತ ಎಂದು ಹೇಳಿದ್ದಾರೆ .ಹಾಗಾದ್ರೆ ಅದು ಯಾವ ನಿರ್ಧಾರ ಅನ್ನೋದನ್ನ ನೋಡೋಣ ಬನ್ನಿ..

ಮೇಘನಾ ರಾಜ್ ಬೇಬಿ ಜೂನಿಯರ್ ಚಿರು ರಾಯನ್ ರಾಜ್ ಸರ್ಜಾ ಮತ್ತು ಮೇಘನಾ ರಾಜ್ ಜೂನಿಯರ್ ಚಿರು ಹೆಸರಿನಲ್ಲಿ ಇಂತಹ ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ, ಅದೇನೆಂದರೆ ಬದಲಾವಣೆಯ ಬೆಳಕು ಅನ್ನುವ ಆರ್ಗನೈಜೇಷನ್ ಬಡಮಕ್ಕಳಿಗೆ ಎಜುಕೇಶನ್, ಮೆಡಿಕಲ್ ಫೀಸ್ ಎಲ್ಲಾ ಜವಾಬ್ದಾರಿಯನ್ನ ಅವರೇ ತೆಗೆದುಕೊಂಡಿದ್ದು. ಈಗ ಅವರ ಜೊತೆಗೆ ಮೇಘನಾ ರಾಜ್ ಅವರು ಕೂಡ ಕೈ ಜೋಡಿಸಿದ್ದಾರೆ.

ರಿಯಾಲಿಟಿ ಶೋ ಇಂದ ಬಂದ ಸಂಪೂರ್ಣ ಹಣವನ್ನು ದಾನ ನೀಡಿದ್ದಾರೆ . ಮೇಘನಾ ರಾಜ್ ಮತ್ತು ಧ್ರುವ ಸರ್ಜಾ ಅಪ್ಪು ಪ್ರೇರಿತ ಫೌಂಡೇಶನ್ ದೇಣಿಗೆ ನೀಡಲು ನಿರ್ಧಾರ ಮಾಡಿದ್ದಾರೆ. ಷ್ಟದ ಸಮಯದಲ್ಲೂ ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸು ಎಲ್ಲರಲ್ಲೂ ಇರುವುದಿಲ್ಲ. ಇದನ್ನ ನೋಡಿ ನಮ್ಮ ರಾಜಕೀಯ ನಾಯಕರು ಕಲಿಯೋದು ಬಹಳಷ್ಟಿದೆ.

Leave a Reply

Your email address will not be published. Required fields are marked *