ವಿಧಿಯಾಟದ ಮುಂದೆ ನಾವೆಲ್ಲರೂ ಏನು ಅಲ್ಲ. ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗೆ ನಗುನಗುತ್ತಾ ಇದ್ದವರು ಹಠಾತ್ತಾಗಿ ಅಕ್ಟೋಬರ್ 29ರಂದು ಹೃದಯಾಘಾತದಿಂದ ಸಾವನ್ನಪ್ಪಿದರು. ಪುನೀತ್ ಅವರು ಸಾವನ್ನಪ್ಪಿ 11 ದಿನಗಳು ಕಳೆದಿದೆ ಇಂತಹ ದುಃಖದ ನಡುವೆ ದೊಡ್ಮನೆ ಕುಟುಂಬದವರು ಅಭಿಮಾನಿಗಳಿಗಾಗಿ ಅನ್ನಸಂತರ್ಪಣೆಯನ್ನು ಏರ್ಪಡಿಸಿದ್ದರು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಅಪ್ಪು ಅಗಲಿಕೆಯಿಂದ ಅಪ್ಪು ಕುಟುಂಬದ ಮೇಲೆ ಜನರು ತೋರಿದ ಅಭಿಮಾನ ಪ್ರೀತಿಗೆ ಎಂದೂ ಸಹ ಬೆಲೆ ಕಟ್ಟಲಾಗದು. ಆ ಎಲ್ಲಾ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಹೇಳುವ ಸಲುವಾಗಿ ಪುನೀತ್ ರಾಜಕುಮಾರ್ ಅವರ ಕಾರ್ಯದ ಅಂಗವಾಗಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಪುನೀತ್ ರಾಜಕುಮಾರ್ ಅವರ ಹನ್ನೊಂದನೆ ದಿನದ ಕಾರ್ಯದ ಅಂಗವಾಗಿ ಕುಟುಂಬಸ್ಥರಿಗೆ ಹಾಗೂ ಸಿನಿಮಾ ಮಂದಿಗೆ ಸದಾಶಿವನಗರದ ಪುನೀತ್ ಅವರ ನಿವಾಸದ ಬಳಿಯೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಅಭಿಮಾನಿಗಳಿಗಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಪ್ಪು ಅವರು ಇದ್ದಾಗ ಬಹಳಷ್ಟು ಬಾರಿ ಅಭಿಮಾನಿಗಳಿಗಾಗಿ ಒಮ್ಮೆ ನಾನ್ ವೆಜ್ ಊಟದ ವ್ಯವಸ್ಥೆ ಮಾಡಬೇಕು ಎಂದು ಯಾವಾಗಲೂ ಹೇಳ್ಳುತ್ತಿದ್ದರಂತೆ ಆದರೆ ಸರಿಯಾದ ಸಂದರ್ಭ ಒದಗಿ ಬಂದಿರಲಿಲ್ಲ.

ಯಾವುದಾದರೂ ಸಮಾರಂಭಕ್ಕೆ ಹೋಗಿ ಬಂದಾಗಲೆಲ್ಲಾ ಅಶ್ವಿನಿ ಅವರ ಬಳಿ ಈ ವಿಚಾರವನ್ನು ಹಂಚಿಕೊಂಡಿದ್ದರು ಎಂದು ಅಶ್ವಿನಿ ಅವರು ಹೇಳಿಕೊಂಡಿದ್ದಾರೆ ಆದರೆ ಇಂತಹ ಸಮಯದಲ್ಲಿ ಪುನೀತ್ ಅವರ ಆಸೆ ನೆರವೇರಿಸಬೇಕಾಗುತ್ತದೆ ಎಂದು ಕನಸಿನಲ್ಲಿಯೂ ಕುಟುಂಬದವರು ಅಂದುಕೊಂಡಿರಲಿಲ್ಲ. ಕಳೆದ ಹನ್ನೆರೆಡು ದಿನಗಳಿಂದಲೂ ಸಹ ಅಭಿಮಾನಿಗಳು ಅಪ್ಪುವನ್ನು ನೋಡುವ ಸಲುವಾಗಿ ಬರುತ್ತಿದ್ದಾರೆ.

ಪ್ರತಿದಿನ ಮೂವತ್ತರಿಂದ ನಲವತ್ತು ಸಾವಿರ ಮಂದಿ ಅಭಿಮಾನಿಗಳು ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿ ಅಪ್ಪುವಿನ ದರ್ಶನ ಪಡೆದು ಹೋಗುತ್ತಿದ್ದಾರೆ. ಮೊದಲ ಎರಡು ದಿನಗಳ ಕಾಲ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿ ಅಪ್ಪುವಿನ ಅಂತಿಮ ದರ್ಶನ ಪಡೆದಿದ್ದಾರೆ ಐದನೆ ದಿನದಿಂದ ಪ್ರತಿ ದಿನ ಮೂವತ್ತು ಸಾವಿರ ಅಭಿಮಾನಿಗಳು ಆಗಮಿಸಿ ಅಪ್ಪುವಿನ ಸಮಾಧಿಯ ದರ್ಶನ ಪಡೆದು ಹೋಗುತ್ತಿದ್ದಾರೆ.

ನಾಡಿನ ಜನರು ಅಪ್ಪು ಮೇಲೆ ಇಟ್ಟಿರುವ ಪ್ರೀತಿ ನೋಡಿ ದೊಡ್ಮನೆ ಕುಟುಂಬದವರಿಗೆ ಸಂತೋಷ ಪಡಬೇಕೊ ಅಥವಾ ಸಂತೋಷವನ್ನು ಹಂಚಿಕೊಳ್ಳಲು ಅಪ್ಪು ಇಲ್ಲವಲ್ಲ ಎಂದು ನೋವು ಪಡಬೇಕೊ ತಿಳಿಯದಂತಾಗಿದೆ. ಈ ಸಮಯದಲ್ಲಿ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡುವ ನಿರ್ಧಾರ ಮಾಡಿದ ಅಶ್ವಿನಿ ಅವರು ಶಿವಣ್ಣ ಹಾಗೂ ರಾಘಣ್ಣನ ಬಳಿ ವಿಚಾರ ತಿಳಿಸಿದಾಗ ಅವರು ಸಮ್ಮತಿಸಿ ತ್ರಿಪುರವಾಸಿನಿ ಅರಮನೆಯ ಆವರಣದಲ್ಲಿ ಅಭಿಮಾನಿಗಳಿಗೆ ನಾನ್ ವೆಜ್ ಹಾಗೂ ವೆಜ್ ಊಟದ ವ್ಯವಸ್ಥೆ ಮಾಡಲಾಗಿತ್ತು.

ಬರೋಬ್ಬರಿ ಸಾವಿರದ ಐನೂರು ಬಾಣಸಿಗರು ಅಭಿಮಾನಿಗಳಿಗಾಗಿ ಊಟ ತಯಾರಿಸಿದ್ದಾರೆ. ಕೆಲ ದಿನಗಳಿಂದ ಸಿದ್ಧತೆ ಮಾಡಿಕೊಂಡು ಹನ್ನೊಂದನೆ ದಿನ ಬೆಳಗಿನ ಜಾವ ಎರಡು ಗಂಟೆಯಿಂದ ಅಡುಗೆ ಮಾಡಲು ಶುರು ಮಾಡಿದರು ಮೊದಲು ಇಪ್ಪತ್ತು ಸಾವಿರ ಜನರಿಗೆ ನಾನ್ ವೆಜ್ ಊಟ ಐದು ಸಾವಿರ ಜನರಿಗೆ ವೆಜ್ ಊಟದ ವ್ಯವಸ್ಥೆ ಮಾಡಲಾಗಿತ್ತು ಆದರೆ ಜನಸಾಗರವೆ ಹರಿದು ಬಂದಿತ್ತು ಊಟಕ್ಕಾಗಿ ಅಲ್ಲ ಬದಲಿಗೆ ಇದು ಅಪ್ಪುವಿನ ಪ್ರಸಾದ ಎಂದು ಜನರು ಆಗಮಿಸಿ ಊಟ ಸೇವಿಸುತ್ತಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆ ಬರುವ ಯಾವೊಬ್ಬ ಅಭಿಮಾನಿಯೂ ಹೊಟ್ಟೆ ಹಸಿವಿನಿಂದ ಮರಳಬಾರದೆಂದು ಅಶ್ವಿನಿ ಅವರು ಹಾಗೂ ಶಿವಣ್ಣ ಮತ್ತು ರಾಘಣ್ಣ ತಕ್ಷಣ ಕ್ಯಾಟರಿಂಗ್ ವ್ಯವಸ್ಥೆ ಮಾಡಿದ್ದವರನ್ನು ಕರೆದು ಎಷ್ಟು ಅಭಿಮಾನಿಗಳು ಬಂದರೂ ಎಲ್ಲರಿಗೂ ಊಟದ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದಾರೆ. ಆ ತಕ್ಷಣ ಮತ್ತಷ್ಟು ಸಾವಿರ ಜನರಿಗೆ ಅಡುಗೆ ಸಿದ್ಧ ಪಡಿಸಿ ಬಂದವರಿಗೆಲ್ಲಾ ಸಂಜೆ ಐದು ಗಂಟೆಯವರೆಗೂ ಊಟ ಬಡಿಸಿದ್ದಾರೆ.

ಎಲ್ಲಾ ಮುಗಿಯುವವರೆಗೂ ನಾವು ಈ ಜಾಗದಿಂದ ಹೋಗುವುದಿಲ್ಲ ಎಂದ ಬಾಣಸಿಗರು ನಾವು ಪುನೀತ್ ಅವರ ಮದುವೆಗೂ ಅಡುಗೆ ಮಾಡಿದ್ದೇವೆ ಆದರೆ ಇಂತಹ ಸಂದರ್ಭ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಹೇಳಿದರು. ಇದು ನಮ್ಮ ಕರ್ಮ ಅನ್ನಿಸುತ್ತದೆ ನಾವೆಲ್ಲಾ ಹೋಗಿ ಅವರು ಉಳಿಯಬೇಕಿತ್ತು ಎಂದು ಕಣ್ಣೀರಿಟ್ಟ ಬಾಣಸಿಗರು ಸಂಜೆಯವರೆಗೂ ಎಲ್ಲಿಯೂ ಯಾವುದೆ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ.

ಅಶ್ವಿನಿ ಅವರು ಹನ್ನೊಂದನೆ ದಿನ ಬೆಳಗ್ಗೆ ಹನ್ನೊಂದು ಮೂವತ್ತರ ಸಮಯದಲ್ಲಿ ಅರಮನೆ ಮೈದಾನಕ್ಕೆ ಆಗಮಿಸಿ ಪುನೀತ್ ಅವರ ಫೋಟೊ ಮುಂದೆ ಕಣ್ಣೀರಿಟ್ಟು ಅಭಿಮಾನಿಗಳಿಗೆ ಊಟ ಬಡಿಸುವಾಗಲೂ ದುಃಖ ತಡೆಯಲಾಗದೆ ಕಣ್ಣೀರಿಟ್ಟು ಮನೆಗೆ ಮರಳಿ ಹೋದರು. ಜೊತೆಯಾಗಿರುವ ಎಷ್ಟೊ ಜೀವಗಳ ನಡುವೆ ಪ್ರೀತಿಯಿಲ್ಲ. ಅತಿಯಾಗಿ ಪ್ರೀತಿಸುವ ಕುಟುಂಬವೆ ಸರ್ವಸ್ವ ಎನ್ನುತ್ತಿದ್ದ ಜೀವಗಳನ್ನು ಒಟ್ಟಾಗಿ ಇರಲು ಆ ಭಗವಂತ ಬಿಡುವುದಿಲ್ಲ. ಇಷ್ಟೇ ಜೀವನ ಇರುವಷ್ಟು ದಿನ ನಮ್ಮವರಿಗಾಗಿ ಬದುಕಿ ಪ್ರೀತಿ ಹಂಚಿ ಹೋಗುತಿರಬೇಕಷ್ಟೆ ಎಂಬ ಮಾತು ಅಕ್ಷರಶಃ ಸತ್ಯ ಎಂದು ಹೇಳಬಹುದು.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *