ಅತ್ಯುತ್ತಮ ನಿರೂಪಕಿ ಎಂದೇ ಹೆಸರಾದ ಅವರ ಜೀವನದಲ್ಲಿ ಅಚಾನಕ್ಕಾಗಿ ಬಂದ ಮಾದಕ ಜಾಲ ಅವರನ್ನು ಯಾವ ಸಮಸ್ಯೆಗಳಿಗೆ ಒಳಪಡಿಸಿದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಆಡು ಮುಟ್ಟದ ಸೊಪ್ಪಿಲ್ಲ ಅನುಶ್ರೀ ಮಾಡದ ನಿರೂಪಣೆಯಿಲ್ಲ ಎನ್ನುವ ಮಾತೊಂದಿತ್ತು ಆದರೆ ಈಗ ಅನುಶ್ರೀ ಅವರ ಕರಿಯರ್ ಅಪಾಯದಲ್ಲಿದೆ. ಅನುಶ್ರೀ ಅವರ ವಿರುದ್ಧ ಸಿಸಿಬಿ ಸಾಕ್ಷಿಯನ್ನು ಕಲೆ ಹಾಕುತ್ತಿದೆ. ಶುಗರ್ ಡ್ಯಾಡಿಯೊಬ್ಬರು ಅನುಶ್ರೀ ಅವರನ್ನು ಕಾಪಾಡುತ್ತಿದ್ದಾರೆ ಹಾಗೂ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಎಂಬ ಸುದ್ದಿ ಹರಿದಾಡುತ್ತಿದೆ. ಇದೆಲ್ಲದರ ನಡುವೆ ಅನುಶ್ರೀ ಅವರನ್ನು ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಿಂದ ತೆಗೆದು ಹಾಕಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸರಿಗಮಪ ಕಾರ್ಯಕ್ರಮದಲ್ಲಿ ಅವರ ನಿರೂಪಣೆ, ಮಾತಿನ ಶೈಲಿ ಅವರಿಗೆ ಅವರೇ ಸಮ. ಈ ಕಾರ್ಯಕ್ರಮದಲ್ಲಿ ಅನುಶ್ರಿ ಅವರು ಇಲ್ಲಾ ಎಂದರೆ ಆ ಕಾರ್ಯಕ್ರಮಕ್ಕೆ ಮೆರುಗು ಇರುವುದಿಲ್ಲ.

ಈ ಕಾರ್ಯಕ್ರಮದ ಜಡ್ಜ್ ಗಳಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ, ಹಂಸಲೇಖ ಅವರು ಈ ಕಾರ್ಯಕ್ರಮಕ್ಕೆ ಎಷ್ಟು ಮುಖ್ಯವೋ ಅನುಶ್ರೀ ಅವರ ಆ್ಯಂಕರಿಂಗ್ ಕೂಡ ಈ ಕಾರ್ಯಕ್ರಮಕ್ಕೆ ಅಷ್ಟೇ ಮುಖ್ಯ. ಅನುಶ್ರೀ ಅವರ ಆ್ಯಂಕರಿಂಗ್ ನೋಡಲು ಈ ಕಾರ್ಯಕ್ರಮವನ್ನು ನೋಡುವ ಮಂದಿ ಕರ್ನಾಟಕದಲ್ಲಿ ಲಕ್ಷಾಂತರಿದ್ದಾರೆ. ಅನುಶ್ರೀ ಅವರು ಮಾದಕ ಜಾಲದಲ್ಲಿ ಸಿಲುಕಿಕೊಂಡ ಕಾರಣ ಈ ಕಾರ್ಯಕ್ರಮದಿಂದ ಹೊರ ಹಾಕಲಾಗಿದೆ ಎಂಬ ಸುದ್ದಿ ನಿಜ ಅಥವಾ ಸುಳ್ಳು ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ.

Leave a Reply

Your email address will not be published. Required fields are marked *