ರವಿಚಂದ್ರನ್ ಅವರ ನೆಚ್ಚಿನ ನಟ ಯಶ್ ಅಂತೇ ಯಾಕೆ ಗೊತ್ತಾ, ಸತ್ಯ ಬಿಚ್ಚಿಟ್ಟ ಕ್ರೇಜಿಸ್ಟಾರ್

0 1

ಕನ್ನಡ ಚಿತ್ರರಂಗದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರೆಂದರೆ ಬಹಳಷ್ಟು ಸಿನಿಪ್ರಿಯರಿಗೆ ಇಷ್ಟವಾಗುತ್ತಾರೆ. ರವಿಚಂದ್ರನ್ ಅವರ ಸಿನಿಮಾಗಳಲ್ಲಿನ ಹಾಡುಗಳು ಕೂಡ ಫೇಮಸ್ ಆಗಿವೆ. ಅನೇಕ ಸಿನಿಮಾಗಳಲ್ಲಿ ನಟಿಸಿದ ರವಿಚಂದ್ರನ್ ಮಕ್ಕಳ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದಾರೆ. ರವಿಚಂದ್ರನ್ ಅವರು ಅನುಶ್ರೀ ಅವರ ಒಂದು ಪ್ರೊಗ್ರಾಮ್ ನಲ್ಲಿ ತಮಗೆ ಇಷ್ಟವಾದ ನಟ ಯಾರು ಎಂದು ಹೇಳಿದ್ದಾರೆ. ಹಾಗಾದರೆ ರವಿಚಂದ್ರನ್ ಅವರಿಗೆ ಇಷ್ಟವಾದ ಈಗಿನ ಜನರೇಷನ್ ಹೀರೊ ಯಾರು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ನಟ ರವಿಚಂದ್ರನ್ ಮಾತುಗಳು ಸಿಡಿಗುಂಡುಗಳಿದ್ದಂತೆ ಇರುತ್ತದೆ. ಅವರು ಯಾರಿಗೂ ಹೆದರಿದವರೂ ಅಲ್ಲ, ಹೆದರುವವರೂ ಅಲ್ಲ. ಯಾರೆ ಎದುರಿಗಿರಲಿ ತಮಗೆ ಸರಿ ಅನಿಸಿದ್ದನ್ನು ಹೇಳುತ್ತಾರೆ. ಸಿನಿಮಾ ಎಂದರೆ ಅಪರಿಮಿತ ಪ್ರೇಮವುಳ್ಳ ರವಿಚಂದ್ರನ್‌ಗೆ ಚಿತ್ರರಂಗ ಅನೇಕ ಪಾಠಗಳನ್ನು ಕಲಿಸಿದೆ, ಕಲಿತ ಪಾಠಗಳಿಂದಾಗಿ ಅವರು ದೊಡ್ಡ ಅನುಭವದ ಅಕ್ಷಯ ಪಾತ್ರೆಯೆ ಆಗಿದ್ದಾರೆ. ರವಿಚಂದ್ರನ್ ಯಾವುದೆ ಸಂದರ್ಶನಗಳಿಗೆ ಹೋದರು, ಸಿನಿಮಾ ಕಾರ್ಯಕ್ರಮಗಳಿಗೆ ಹೋದರು ಅಲ್ಲಿ ಹೈಲೇಟ್ ಆಗುತ್ತಾರೆ.

ಹಲವು ದಶಕಗಳಿಂದ ಸಿನಿಮಾ ರಂಗವನ್ನು ನೋಡುತ್ತಾ ಬಂದಿರುವ, ಸಿನಿಮಾಗಳನ್ನು ಮಾಡುತ್ತಾ ಬಂದಿರುವ ರವಿಚಂದ್ರನ್, ಹೊಸ ಹುಡುಗರ ಸಾಹಸಗಳಿಗೆ ಹೆಗಲು ನೀಡುತ್ತಿದ್ದಾರೆ. ಇತರ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಳ ಯಶಸ್ಸಿಗೆ ಹೆಗಲು ನೀಡುತ್ತಾರೆ. ಈಗಿನ ಹಲವು ಸ್ಟಾರ್ ನಟರ ನೆಚ್ಚಿನ ನಟರಾಗಿರುವ ರವಿಚಂದ್ರನ್‌ಗೆ ಈಗಿನ ಸ್ಟಾರ್ ನಟರಲ್ಲಿ ಹೆಚ್ಚು ಇಷ್ಟವಾಗುವುದು ಯಶ್ ಅಂತೆ, ಅದಕ್ಕೆ ಕಾರಣವೂ ಇದೆ.

ನಿರೂಪಕಿ ಅನುಶ್ರೀ ತಮ್ಮ ಯೂಟ್ಯೂಬ್ ಚಾನೆಲ್‌ ಆಂಕರ್ ಅನುಶ್ರೀಗಾಗಿ ನಡೆಸಿದ ವಿಶೇಷ ಕಾರ್ಯಕ್ರಮಕ್ಕೆ ನಟ ರಕ್ಷಿತ್ ಶೆಟ್ಟಿ ಹಾಗೂ ರವಿಚಂದ್ರನ್ ಅವರನ್ನು ಕರೆಸಿದ್ದರು. ಎಂದಿನಿಂತೆ ತಮ್ಮದೆ ಸ್ಟೈಲ್‌ನಲ್ಲಿ ಬಿಡು ಬೀಸಾಗಿ ಮಾತನಾಡುತ್ತಿದ್ದ ರವಿಚಂದ್ರನ್‌ ಅವರಿಗೆ ಸರ್, ಈಗಿನ ಜನರೇಷನ್‌ನ ಯಾವ ನಟ ನಿಮಗೆ ಇಷ್ಟ ಎಂದು ರಕ್ಷಿತ್ ಪ್ರಶ್ನಿಸಿದ್ದಾರೆ. ಅದಕ್ಕೆ ಮರು ಯೋಚನೆ ಇಲ್ಲದೆ ರವಿಚಂದ್ರನ್ ಯಶ್ ಎಂದಿದ್ದಾರೆ.

ರವಿಚಂದ್ರನ್ ಅವರಿಗೆ ಯಶ್ ಯಾಕೆ ಇಷ್ಟವೆಂದು ಅನುಶ್ರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರವಿಚಂದ್ರನ್ ಯಶ್ ಅವರಿಗಿರುವ ಸಿನಿಮಾ ಪ್ರೀತಿ ಹಾಗೂ ಸಿನಿಮಾದ ಬಗ್ಗೆ ಇರುವ ತನ್ಮಯತೆ ಮತ್ತೊಬ್ಬ ನಟನಲ್ಲಿ ನಾನು ನೋಡಿಲ್ಲ ಆತ ನನಗೆ ಇಷ್ಟವಾಗಲು ಅದು ಮೊದಲ ಕಾರಣ. ನಾಲ್ಕು ಸಿನಿಮಾ ಮಾಡಿದರೆ ಒಂದಿಷ್ಟು ಕೋಟಿ ಬಂದು ಬಿಡುತ್ತದೆ ಎಂದು ಲೆಕ್ಕ ಹಾಕುತ್ತಿರುವ ಕಾಲದಲ್ಲಿ, ನಾನು ಇದೊಂದೆ ಸಿನಿಮಾಕ್ಕೆ ನಿಂತುಕೊಳ್ಳುತ್ತೀನಿ ಎಂಬ ಅವರ ಡೆಡಿಕೇಶನ್ ಅಸಾಮಾನ್ಯ ಎಂದಿದ್ದಾರೆ ರವಿಚಂದ್ರನ್.

ಯಶ್ ಅವರು ಕೆಜಿಎಫ್ ಸಿನಿಮಾ ಮಾಡಿದ್ದಾರಲ್ಲಾ. ಆ ಕಥೆಯನ್ನು ಯಾರಾದರೂ ಬ್ಯುಸಿನೆಸ್ ಯೋಚಿಸಿ ಬಂಡವಾಳ ಹಾಕುವ ನಿರ್ಮಾಪಕನಿಗೆ ಹೇಳಿದರೆ ಒಪ್ಪುವುದಿಲ್ಲ. ಅದು ಸಾಮಾನ್ಯ ಫಾರ್ಮುಲ್ ಬಿಟ್ಟು ಬೇರೆ ಮಾದರಿ ಸಿನಿಮಾ. ಅದೂ ಅಲ್ಲದೆ ಜನರಿಗೆ ಈ ಪರದೆಗೆ ನಾನು ಏನಾದರೂ ಭಿನ್ನವಾದುದು, ಅದ್ಭುತವಾದುದನ್ನು ಕೊಡಬೇಕು ಎಂಬ ಛಲ ಇದೆಯಲ್ಲ ಅದು ನಾನು ನೋಡಿದ್ದು ಯಶ್‌ ಅಲ್ಲಿ” ಎಂದಿದ್ದಾರೆ ರವಿಚಂದ್ರನ್. ಅಲ್ಲದೆ ಎದುರಿಗೆ ಕೂತಿದ್ದ ರಕ್ಷಿತ್ ಅವರನ್ನು ಹೊಗಳಿದ ರವಿಚಂದ್ರನ್, ಇವರಿಗೂ ಅದೆ ರೀತಿಯ ಛಲ ಇದೆ. ಸಿನಿಮಾ ಬಗ್ಗೆ ಪ್ರೀತಿ, ಡೆಡಿಕೇಶನ್ ಇದೆ.

ಇವರುಗಳು ಗೆಲ್ಲಬೇಕು, ಇವರುಗಳು ಗೆದ್ದರೆ ಸಿನಿಮಾ ಉದ್ಯಮ ಗೆಲ್ಲುತ್ತಾ ಹೋಗುತ್ತದೆ ಎಂದಿದ್ದಾರೆ. ನಾನು ಅಷ್ಟು ವರ್ಷಗಳು ಕಂಡ ಕನಸುಗಳು ಈಗ ನನಸಾಗುತ್ತಿವೆ. ಎಲ್ಲ ಕನಸುಗಳನ್ನು ನಾನೆ ನನಸು ಮಾಡಿಕೊಳ್ಳಬೇಕು ಎಂದೇನೂ ಇಲ್ಲ, ಬೇರೆಯವರು ಮಾಡಿದಾಗ ನಾವು ಸಂತೋಷಿಸಬೇಕು ಎಂದಿದ್ದಾರೆ ರವಿಚಂದ್ರನ್. ರವಿಚಂದ್ರನ್ ಹಾಗೂ ರಕ್ಷಿತ್ ಶೆಟ್ಟಿ ಅವರ ಮಾತುಗಳನ್ನು ಒಮ್ಮೆ ಕೇಳಬೇಕು. ರವಿಚಂದ್ರನ್ ಅವರ ಮಾತುಗಳನ್ನು ಕೇಳಿದ ಯಶ್ ಅಭಿಮಾನಿಗಳು ಸಂತೋಷ ಪಟ್ಟರು.

Leave A Reply

Your email address will not be published.