ನಟ ಶರಣ್ ಮಗಳಿಂದ ಬಸವಣ್ಣನವರ ವಚನಗಳ ಪಠಣ ಎಷ್ಟು ಅದ್ಭುತವಾಗಿದೆ

0 3

ಶರಣ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಹಾಸ್ಯನಟ, ನಾಯಕನಟ ನಿರ್ಮಾಪಕ ಮತ್ತು ಹಿನ್ನಲೆ ಗಾಯಕ ಕೂಡಾ ಹೌದು ಈ ರೀತಿಯಾಗಿ ತಮ್ಮನ್ನು ತಾವು ಚಿತ್ರರಂಗದಲ್ಲಿ ಸಕ್ರಿಯರಾಗಿಸಿಕೊಂಡಿದ್ದಾರೆ. ಸುಮಾರು 2 ದಶಕಗಳಿಂದ ತಮ್ಮ ಹಾಸ್ಯ ನಟನೆಯ ಮೂಲಕ ಕನ್ನಡ ಸಿನಿಪ್ರಿಯರಿಗೆ ಕಚಗುಳಿಯಿಡುತ್ತಿರುವ ಶರಣ್ ಮೂಲತಃ ಕಲಾಕುಟುಂಬದಿಂದ ಬಂದ ವ್ಯಕ್ತಿ. ನಮಗೆಲ್ಲ ತಿಳಿದಿರುವ ಹಾಗೆ ಶರಣ್ ಅವರ ತಂದೆ ತಾಯಿ ಕೂಡಾ ಕಲಾವಿದರು ಹಾಗೂ ಇವರ ಸಹೋದರಿ ಶೃತಿ ಕನ್ನಡ ಚಿತ್ರರಂಗದ ಒಬ್ಬ ಪ್ರಮುಖ ನಾಯಕನಟಿ. ಶರಣ್ ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಸಂಗೀತದಲ್ಲಿ ಆಸಕ್ತಿಯಿದ್ದ ಕಾರಣ ಒಂದು ಆರ್ಕೆಸ್ಟ್ರಾದಲ್ಲಿ ಗಾಯಕರಾಗಿದ್ದರು. ತಮ್ಮದೇ ಆದ ಭಕ್ತಿ ಗೀತೆಗಳ ಅಲ್ಬಮ್‌ ಕೂಡ ಬಿಡುಗಡೆ ಮಾಡಿದ್ದರು.

ನಂತರ ದೂರದರ್ಶನದ ಕೆಲವು ಸೀರಿಯಲ್‌ಗಳಲ್ಲಿ ನಟಿಸತೊಡಗಿದರು. 1996 ರಲ್ಲಿ ತೆರೆಕಂಡ ಪ್ರೇಮ ಪ್ರೇಮ ಪ್ರೇಮ ಚಿತ್ರದ ಮೂಲಕ ಹಾಸ್ಯನಟನಾಗಿ ಚಿತ್ರರಂಗ ಪ್ರವೇಶಸಿದರು. ತದನಂತರ ಸುಮಾರು 99 ಚಿತ್ರಗಳಲ್ಲಿ ಹಾಸ್ಯ ಮತ್ತು ಪೋಷಕ ಕಲಾವಿದನಾಗಿ ಕನ್ನಡದ ಸಿನಿರಸಿಕರ ಮನಗೆದ್ದರು. ಶರಣ್ 2012 ರಲ್ಲಿ ತಾವೇ ನಿರ್ಮಸಿದ ರ‍್ಯಾಂಬೋ ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ಪ್ರೇಕ್ಷಕ ಮತ್ತು ವಿಮರ್ಶಕರಿಂದ ಬಹುವಾಗಿ ಪ್ರಶಂಸೆ ಪಡೆದ ಈ ಚಿತ್ರ 2012 ರ ಟಾಪ್ 5 ಹಿಟ್ ಚಿತ್ರಗಳಲ್ಲಿ ಗುರುತಿಸಿಕೊಂಡಿತು. ನಂತರ ಬಂದ ವಿಕ್ಟರಿ, ಅಧ್ಯಕ್ಷ, ರಾಜರಾಜೇಂದ್ರ ಮುಂತಾದ ಚಿತ್ರಗಳು ಒಂದರ ಮೇಲೊಂದರಂತೆ ಭಾಕ್ಸಾಫೀಸಿನಲ್ಲಿ ಗೆದ್ದು ಶರಣ್‌ ಅವರ ವೃತ್ತಿಜೀವನಕ್ಕೆ ಹೊಸತಿರವು ನೀಡಿದವು. ತಮ್ಮ ಇಷ್ಟದ ಗಾಯನವನ್ನು ಮುಂದುವರೆಸಿರುವ ಶರಣ್ ರಾಜರಾಜೇಂದ್ರ, ವಜ್ರಕಾಯ, ಬುಲೆಟ್ ಬಸ್ಯಾ, ದನ ಕಾಯೋನು ಮುಂತಾದ ಚಿತ್ರಗಳಲ್ಲಿ ಹಿನ್ನೆಲೆ ಗಾಯಕನಾಗಿ ಸಹ ಹಲವು ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಇನ್ನು “ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ” ಎಂಬ ಬಸವಣ್ಣನವರ ವಚನ ಯಾರಿಗೆ ತಾನೇ ತಿಳಿದಿಲ್ಲ ಹೇಳಿ!? ಈ ವಚನದ ಭಾವಾರ್ಥ ಈ ರೀತಿಯಾಗಿದೆ. ಕಳ್ಳತನ ಮಾಡಬೇಡ, ಕೊಲ್ಲಬೇಡ, ಸಿಟ್ಟುಮಾಡಬೇಡ, ಪರರ ದೂಷಣೆ ಮಾಡಬೇಡ, ಆತ್ಮ ಪ್ರಶಂಶೆಯಲ್ಲಿ ತೊಡಗಬೇಡ ಎಂದೂ ಇವುಗಳನ್ನು ಪಾಲಿಸುತ್ತ ಬಂದಲ್ಲಿ ಅಂತರಂಗವೂ ಬಹಿರಂಗವೂ ಶುದ್ಧಿಯಾಗಿರುವುದು ಇದೇ ಮಾರ್ಗದಿಂದ ದೇವರನೊಲಿಸುಕೊಳ್ಳುವದು. ಆತ್ಮೋದ್ಧಾರಕ್ಕೆ ಆತ್ಮಶುದ್ಧಿಗೆ ಇದೇ ಸರಳ ಮಾರ್ಗ ಎಂದು ಬಸವಣ್ಣ ತಿಳಿಸಿದ್ದಾರೆ. ಇನ್ನು ಇದೆ ವಚನ ಸಾಹಿತ್ಯಕ್ಕೆ ಬಸವ ಜಯಂತಿಯಂದು ನಟ ಶರಣ್ ಅವರ ಮಗಳು ಸುಂದರವಾಗಿ ದ್ವನಿಗೂಡಿಸಿ ಸುಂದರವಾಗಿ ಹಾಡಿದ್ದಾಳೆ. ಈ ಮೂಲಕ ಜನರಿಗೆ ಬಸವ ಜಯಂತಿಯ ಶುಭಾಶಯ ತಿಳಿಸಿದ್ದಾರೆ. ಕಲಾ ಕುಟುಂಬದಿಂದ ಬಂದ ಶರಣ್ ಅವರ ಮಾಗಳೂ ಕೂಡಾ ಸುಂದರವಾಗಿ ಹಾಡುತ್ತಾಳೆ ಇವಳು ಮುಂದೆ ಉತ್ತಮ ಗಾಯಕಿ ಆಗಬಹುದು ಎಂದು ಶರಣ್ ಅಭಿಮಾನಿಗಳು ಕಾಮೆಂಟ್ ಮೂಲಕ ತಮ್ಮ ಆಶಯ ತಿಳಿಸುತ್ತಾ ಇದ್ದಾರೆ. ಈ ವಿಡಿಯೋದಲ್ಲಿ ಶರಣ್ ಅವರ ಮಗಳು ಹಾಡಿದ ಹಾಡಿನ ವಿಡಿಯೋ ಕಾಣಬಹುದು

Leave A Reply

Your email address will not be published.