ದರ್ಶನ್ ಸಿನಿಮಾದಲ್ಲಿ ವರ್ಕ್ ಮಾಡಿದ ಸಾಧು ಮಗ ಸುರಾಗ್ ದರ್ಶನ್ ಬಗ್ಗೆ ಹೇಳಿದ್ದು ಹೀಗೆ

0 2

ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಎಂದೆ ಖ್ಯಾತಿ ಪಡೆದ ದರ್ಶನ್ ಅವರ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆಯಾಗಲಿದ್ದು ಈ ಸಿನಿಮಾದಲ್ಲಿ ಕೆಲಸ ಮಾಡಿದ ಸಾಧುಕೋಕಿಲ ಅವರ ಮಗ ಸುರಾಗ ಅವರು ದರ್ಶನ್ ಅವರ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕೊರೋನವೈರಸ್ ಕಾರಣದಿಂದ ಸಿನಿಮಾರಂಗ ಒಂದು ಸಲ ಸ್ತಬ್ಧವಾಗಿತ್ತು ಯಾವುದೆ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಇದೀಗ ಬಹಳ ದಿನಗಳ ನಂತರ ದರ್ಶನ್ ಅವರ ಹೊಸ ಸಿನಿಮಾ ಕ್ರಾಂತಿ ಅವರ ಹುಟ್ಟುಹಬ್ಬ ಫೆಬ್ರವರಿ 16ರಂದು ಬಿಡುಗಡೆಯಾಗಿದ್ದು ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ಕಾಣಿಸುತ್ತಿದೆ. ಸಿನಿಮಾದಲ್ಲಿ ಸಾಧುಕೋಕಿಲ ಅವರ ಮಗ ಸುರಾಗ ಅವರು ಟೆಕ್ನಿಕಲ್ ವರ್ಕ್ ಮಾಡಿದ್ದಾರೆ. ದರ್ಶನ್ ಅವರ ಸಿನಿಮಾ ಐಕಾನ್ ಸಿನಿಮಾ ಆಗಿದ್ದು ಅವರು ಚಾಲೆಂಜಿಂಗ್ ಸ್ಟಾರ್ ಆಗಿರುವ ಸಿನಿಮಾ ಇದಾಗಿದ್ದು ಅಂತ ಸಿನಿಮಾದಲ್ಲಿ ನನಗೆ ವರ್ಕ್ ಮಾಡಲು ಅವಕಾಶ ಸಿಕ್ಕಿದ್ದು ನನಗೆ ಬಹಳ ಖುಷಿ ತಂದುಕೊಟ್ಟಿದೆ ಎಂದು ಹೇಳಿಕೊಂಡರು.

ಹಿಂದಿನ ಸಿನಿಮಾಗಳಿಗಿಂತ ಈ ಸಿನಿಮಾದಲ್ಲಿ ಹಾಗೂ ಥಿಯೇಟರ್ ನಲ್ಲಿ ಕೆಲವು ಟೆಕ್ನಿಕಲ್ ಬದಲಾವಣೆಗಳನ್ನು ಮಾಡಲಾಗಿದೆ ಇದರಿಂದ ಸಿನಿಮಾದ ಕ್ವಾಲಿಟಿ ಹೆಚ್ಚಾಗಿದೆ ಎಂದು ಸುರಾಗ ಅವರು ಹೇಳಿದ್ದಾರೆ. ಕ್ರಾಂತಿ ಸಿನಿಮಾದಲ್ಲಿ ದರ್ಶನ್ ಅವರ ಡೈಲಾಗ್ ಇಂದ ಫಸ್ಟ್ ಲುಕ್ ಟೀಸರ್ ಪ್ರಾರಂಭವಾಗುತ್ತದೆ. ನಂತರ ದರ್ಶನ್ ಅವರ ಮಾಸ್ ಎಂಟ್ರಿ ಇದೆ. ಈ ಸಿನಿಮಾ ಕಂಟೆಂಟ್ ಓರಿಯೆಂಟೆಡ್ ಸಿನಿಮಾ ಆಗಿದೆ ಅಂದರೆ ಇದು ಅಕ್ಷರ ಕ್ರಾಂತಿಯಾಗಿದೆ.

ಕ್ರಾಂತಿ ಸಿನಿಮಾದ ಟೀಸರ್ ನಲ್ಲಿ ಕರ್ನಾಟಕದ ಬಾವುಟವನ್ನು ತೋರಿಸಿದ್ದಾರೆ. ಈ ಸಿನಿಮಾ ಫ್ಯಾನ್ ಇಂಡಿಯಾ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಈ ಸಿನಿಮಾದಲ್ಲಿ ಕನ್ನಡ ಅಕ್ಷರ ಕ್ರಾಂತಿ ನಡೆಯಲಿದೆಯೆ ಎಂಬುದನ್ನು ನೋಡಬೇಕಾಗಿದೆ. ದರ್ಶನ್ ಅವರು ಅನೇಕ ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿ ಚಿತ್ರರಂಗದಲ್ಲಿ ತಮ್ಮದೆ ಛಾಪು ಮೂಡಿಸಿದ್ದಾರೆ. ಅವರು ನಿರ್ಮಾಪಕನಾಗಿ, ನಟನಾಗಿ, ವಿತರಕರಾಗಿ ಕೆಲಸ ಮಾಡುತ್ತಾರೆ. ಇದರ ಜೊತೆಗೆ ದರ್ಶನ್ ಅವರು ಪ್ರಾಣಿಗಳ ಬಗ್ಗೆಯೂ ಹೆಚ್ಚಿನ ಒಲವನ್ನು ತೋರಿಸುತ್ತಾರೆ. ಮೈಸೂರಿನಲ್ಲಿರುವ ಅವರ ಫಾರಂ ಹೌಸ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ದರ್ಶನ್ ಅವರ ಹುಟ್ಟುಹಬ್ಬದ ದಿನದಂದು ಅವರ ಸಿನಿಮಾ ಬಿಡುಗಡೆಯಾಗಿದ್ದು ಅಭಿಮಾನಿಗಳಿಗೆ ಡಬಲ್ ಧಮಾಕಾ. ನೀವು ಕೂಡ ದರ್ಶನ್ ಅವರ ಅಭಿಮಾನಿ ಆಗಿದ್ದರೆ ಅವರ ಸಿನಿಮಾವನ್ನು ಚಿತ್ರರಂಗಕ್ಕೆ ಹೋಗಿ ನೋಡಿ ಆನಂದಿಸಿ.

Leave A Reply

Your email address will not be published.