ನಟಿ ಮೇಘನಾರಾಜ್ ವರ್ಕೌಟ್ ವೀಡಿಯೊ ನೋಡಿ..

0 0

ಮೇಘನಾ ರಾಜ್ ಅವರು ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರು ಎಂದು ಹೇಳಿದರೆ ತಪ್ಪಾಗಲಾರದು. ಪತಿ ಚಿರು ಅವರ ಅಗಲಿಕೆಯಿಂದ ಈಗಷ್ಟೇ ಹೊರ ಬರುತ್ತಿರುವ ಮೇಘನಾ ರಾಜ್ ಅವರು ಸದ್ಯ ತಮ್ಮ ಮುದ್ದಾದ ಮಗುವಿನ ಜೊತೆ ಕಾಲ ಕಳೆಯುತ್ತಿದ್ದಾರೆ. ಇದಲ್ಲದೆ ಮೇಘನಾ ರಾಜ್ ಅವರು ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು, ಚಿರು ಅಗಲಿಕೆಯ ಕಾರಣ, ಕ-ರೋನ ಕಾರಣದಿಂದ ಮೇಘನಾ ರಾಜ್ ಅವರು ಮುಂದಿನ ವರ್ಷ ಕನ್ನಡ ಸಿನಿಮಾಗಳಲ್ಲಿ ಕಾಣಿಸಿ ಕೊಳ್ಳಲ್ಲಿದ್ದಾರೆ.

ಇತ್ತ ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಅವರ ಮತ್ತೊಂದು ಹೊಸ ವರ್ಕೌಟ್ ವಿಡಿಯೋ ಸಕತ್ ವೈರಲ್ ಆಗಿದೆ. ಜಿಮ್ ನಲ್ಲಿ ನಟಿ ಮೇಘನಾ ರಾಜ್ ಅವರು ಹೇಗೆ ವರ್ಕೌಟ್ ಮಾಡುತ್ತಾರೆ ಗೊತ್ತಾ? ಎಷ್ಟು ಕಷ್ಟ ಪಡುತ್ತಾರೆ. ಮೇಘನಾ ಅವರ ವರ್ಕೌಟ್ ವಿಡಿಯೋವೊಂದು ಈಗ ಬಹಳಷ್ಟು ವೈರಲ್ ಆಗುತ್ತಿದೆ.

ಚಿಕ್ಕ ವಯಸ್ಸಿನಿಂದಲೂ ಕನ್ನಡ ಚಿತ್ರರಂಗದ ಹಿರಿಯರ ಜೊತೆ ಆಡಿ ಬೆಳೆದವರು ನಟಿ ಮೇಘನಾ ರಾಜ್. ಮೇಘನಾ ರಾಜ್ ಅವರಿಗೆ ಕನ್ನಡ ಚಿತ್ರರಂಗವೇ ಕುಟುಂಬ ಇದ್ದಂತೆ. ಮೇಘನಾ ರಾಜ್ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಅಭಿನಯ ಶುರುಮಾಡಿ ನಂತರ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಕೂಡ ನಟಿಸಿ ಯಶಸ್ಸು ಗಳಿಸಿದರು. ಅದರಲ್ಲೂ ಮಲಯಾಳಂ ಚಿತ್ರರಂಗದಲ್ಲಿ ಮೇಘನಾ ರಾಜ್ ಅವರಿಗೆ ಬಹಳ ಜನಪ್ರಿಯತೆ ಇದೆ. ಈಗ ಜೂನಿಯರ್ ಚಿರು ಹುಟ್ಟಿದ ನಂತರ ಮೇಘನಾ ರಾಜ್ ಅವರು ಮತ್ತೆ ಜಿಮ್ ವರ್ಕೌಟ್ ಮಾಡಲು ಶುರು ಮಾಡಿದ್ದಾರೆ. ಮೇಘನಾ ರಾಜ್ ಅವರಿಗೆ ಕನ್ನಡ ಚಿತ್ರರಂಗವೇ ಕುಟುಂಬ ಇದ್ದಂತೆ.

ಮೇಘನಾ ರಾಜ್ ಬಹಳ ಸರಳ ಮತ್ತು ಮುಗ್ಧವಾದ ಸ್ವಭಾವ ಹೊಂದಿರುವವರು. ಇವರ ತಂದೆ ತಾಯಿ ಕನ್ನಡ ಚಿತ್ರರಂಗದ ಹಿರಿಯ ನಟರಾದ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್. ಬಾಲನಟಿಯಾಗಿ ಜೋಕುಮಾರ ಸ್ವಾಮಿ ಸಿನಿಮಾದಲ್ಲಿ ನಟಿಸಿದ ಮೇಘನಾ ನಂತರ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಿದರು. ಸೈಕಾಲಜಿ ವಿಷಯದಲ್ಲಿ ಪದವಿ ಪಡೆದ ನಂತರ ಚಿತ್ರರಂಗಕ್ಕೆ ಹೀರೋಯಿನ್ ಆಗಿ ಪಾದಾರ್ಪಣೆ ಮಾಡಿದರು ಮೇಘನಾ. ಪುಂಡ ಸಿನಿಮಾದಲ್ಲಿ ನಟಿಸಿದ ನಂತರ ಮಲಯಾಳಂ ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಮೇಘನಾ ಅಲ್ಲಿನ ಟಾಪ್ ನಟಿಯಾಗಿ ಮಿಂಚಿದರು. ರಾಜಹುಲಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹಿಂದಿರುಗಿ ಬಂದರು.

ನಮಗೆಲ್ಲ ತಿಳಿದಿರುವ ಹಾಗೆ ಬಹಳ ವರ್ಷಗಳ ಕಾಲ ಪ್ರೀತಿಸಿ ಚಿರಂಜೀವಿ ಸರ್ಜಾ ಅವರೊಡನೆ ವಿವಾಹವಾದರು ಮೇಘನಾ, ಆದರೆ ವಿಧಿಯಾಟ ಬೇರೆಯೇ ಆಗಿತ್ತು ಮದುವೆಯಾದ ಎರಡೇ ವರ್ಷಗಳಲ್ಲಿ ಚಿರು ಅಗಲಿದರು. ಜ್ಯೂನಿಯರ್ ಚಿರು ಹುಟ್ಟಿದ ನಂತರ ಮೇಘನಾ ಅವರ ಜೀವನಕ್ಕೆ ಮತ್ತೊಮ್ಮೆ ಹೊಸ ಬೆಳಕು ಮೂಡಿದೆ. ಆಕ್ಟೊಬರ್ 22 ರಂದು ಜ್ಯೂನಿಯರ್ ಚಿರು ಅಗಮನವಾಗಿದ್ದು, ಚಿರಂಜೀವಿ ಸರ್ಜಾ ಇಲ್ಲದ ನೋ-ವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ್ದಾರೆ ಜ್ಯೂನಿಯರ್ ಚಿರು. ಇತ್ತೀಚೆಗಷ್ಟೇ ಜ್ಯೂನಿಯರ್ ಚಿರುಗೆ ಅಜ್ಜನ ಮನೆಯಲ್ಲಿ ತೊಟ್ಟಿಲು ಶಾಸ್ತ್ರ ನಡೆಯಿತು.

ಸರ್ಜಾ ಕುಟುಂಬ ಹಾಗು ಸುಂದರ್ ರಾಜ್ ಅವರ ಕುಟುಂಬದವರ ಸಮ್ಮುಖದಲ್ಲಿ ಜ್ಯೂನಿಯರ್ ಚಿರುಗೆ ತೊಟ್ಟಿಲು ಶಾಸ್ತ್ರ ನಡೆದಿದೆ. ಹುಟ್ಟಿದ ಕ್ಷಣದಿಂದಲೇ ಎರಡು ಕುಟುಂಬಗಳಿಗೆ ಸಂತೋಷ ತಂದಿರುವ ಜ್ಯೂನಿಯರ್ ಚಿರುಗೆ ಕರ್ನಾಟಕದ ಜನತೆ ಮತ್ತು ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಆಶೀರ್ವಾದ ಸಿಕ್ಕಿದ್ದು, ಜೊತೆಗೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಂದ ಭರ್ಜರಿ ಉಡುಗೊರೆಗಳು ಸಿಕ್ಕಿದೆ.

ಸರ್ಜಾ ಕುಟುಂಬ ಮತ್ತು ಸುಂದರ್ ರಾಜ್ ಎರಡು ಕುಟುಂಬದ ಚಿಂತೆಯನ್ನು ದೂರ ಮಾಡಿ, ಎಲ್ಲರ ಮುಖದಲ್ಲೂ ನಗು ಮೂಡಿಸುವ ಅಂಶವಾಗಿದ್ದಾನೆ ಜ್ಯೂನಿಯರ್ ಚಿರು. ಮತ್ತೆ ಸಿನಿಮಾಕಡೆ ಒಲವು ತೋರುವ ಮೇಘನಾ ತಮ್ಮ ಮುಂದಿನ ತಯಾರಿ ಎನ್ನುವ ರೀತಿಯಲ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ ಈ ವಿಡಿಯೋ ಹಾಗೂ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು ನೀವಿಲ್ಲಿ ಕಾಣಬಹುದು.

ಜ್ಯೋತಿಷ್ಯ: ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ

ಸಮಸ್ಯೆಗಳಾದ:- ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.