ಸಿನಿಮಾ ನಟರಾದ ಜೈ ಜಗದೀಶ್ ಅವರಿಗೆ ಚೆಸ್ಕಾಂ ವಿದ್ಯುತ್ ಕಂಪನಿ ಶಾಕ್ ಕೊಟ್ಟಿದೆ ಅದೇನೆಂದು ಈ ಲೇಖನದ ಮೂಲಕ ತಿಳಿಯೋಣ.

ಬಂಧನ, ಹುಲಿ ಹೆಜ್ಜೆ, ಗಾಳಿಮಾತು ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿ ಕೋಟ್ಯಾಂತರ ಕನ್ನಡಿಗರ ಮನ ಗೆದ್ದಿದ್ದಾರೆ. ಇವರಿಗೆ ಚೆಸ್ಕಾಂ ವಿದ್ಯುತ್ ಕಂಪನಿ ಲಕ್ಷಾಂತರ ರೂಪಾಯಿ ದಂಡವನ್ನು ಹಾಕಿದೆ. ಜಗದೀಶ್ ಕೊಡಗು ಜಿಲ್ಲೆಯ ಸೋಮಾರಪೇಟೆ ತಾಲೂಕಿನ ಕಾರೇಕೊಪ್ಪದ ನಿವಾಸಿ. ಇಲ್ಲಿರುವ 10 ಎಕರೆ ಜಮೀನಿನಲ್ಲಿ ಭತ್ತ, ಕಾಫಿ ಕೃಷಿ ಮಾಡುತ್ತಿದ್ದಾರೆ. ಇದಕ್ಕಾಗಿ ಬೋರ್ವೆಲ್ ಕೊರೆಸಿ 5 ಎಚಪಿ ಮೋಟಾರ ಅಳವಡಿಸಿಕೊಂಡಿದ್ದಾರೆ ಆದರೆ ಈ ಭಾಗದಲ್ಲಿ ಹೆಚ್ಚು ಮಳೆಯಾಗುವುದರಿಂದ ಕೆಲವೊಮ್ಮೆ ಮಾತ್ರ ಪಂಪ್ ಬಳಸಿದ್ದಾರೆ. ಆದರೂ ಇವರ ಪಂಪಸೆಟ್ ವಿದ್ಯುತ್ ಬಿಲ್ ಬರೋಬ್ಬರಿ 2.32 ಲಕ್ಷ ಬಂದಿದೆ. ಈ ತಿಂಗಳು ಆನ್ ಮಾಡದೆ ಇದ್ದರೂ 24,000ರೂ ಬಿಲ್ ಬಂದಿದೆ.

ಪದೇ ಪದೇ ನನ್ನ ಬಿಲ್ ರೈಡ್ ಮಾಡುತ್ತಾರೆ ಏಕೆಂದು ನನಗೆ ಗೊತ್ತಿಲ್ಲ, ನಾನು ಯಾವುದೇ ಬಿಲ್ ಬಾಕಿ ಉಳಿಸಿಲ್ಲ ಈ ದೊಡ್ಡ ಬಿಲ್ ಕಟ್ಟದೆ ಹಾಗೆ ಇಟ್ಟುಕೊಂಡಿದ್ದೇನೆ ಪರಿಹಾರ ಸಿಗುವುದೇನೊ ಕಾಯುತ್ತಿದ್ದೇನೆ ಎಂದು ಜೈ ಜಗದೀಶ್ ಅವರು ಹೇಳಿಕೊಂಡರು. ಈ ಬಗ್ಗೆ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಪ್ರಸ್ತಾಪಿಸಿದ ಪ್ರತಾಪ ಸಿಂಹ ಜೈ ಜಗದೀಶ್ ಅವರ ಪ್ರಕರಣವನ್ನು ಪರಿಶೀಲಿಸಿ ಗೊಂದಲ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಒಟ್ಟಿನಲ್ಲಿ ಆಕ್ಷನ್ ಕಟ್ ಹೇಳಿಕೊಂಡು ಸಿನಿಮಾದಲ್ಲಿ ನಟಿಸುತ್ತಿದ್ದ ಜೈ ಜಗದೀಶ್ ಅವರು ವಿದ್ಯುತ್ ಕಂಪನಿ ಅವರಿಂದ ಸರ್ಕಾರಿ ಕಚೇರಿಗಳನ್ನು ಅಲೆಯುವಂತಾಯಿತು. ನ್ಯಾಯ ಕೊಡಿ ಎಂದು ಅಧಿಕಾರಿಗಳಲ್ಲಿ ಕೇಳುತ್ತಿದ್ದಾರೆ ಅವರಿಗೆ ನ್ಯಾಯ ಸಿಗಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *