ಡಿ ಬಾಸ್ ಸ್ಟೇಜ್ ಮೇಲಿದ್ದಾಗ ನಿರೂಪಕ ಕರೀಲಿಲ್ಲವೆಂದು ಅಭಿಷೇಕ್ ಹಾಗೂ ದನ್ವೀರ್ ಬೇಸರದಿಂದ ಏನ್ ಮಾಡಿದ್ರು ಗೊತ್ತಾ, ವಿಡಿಯೋ ವೈರಲ್

0 2

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಹೆಸರುಗಳಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದ್ದಾರೆ ಎಂದರೆ ಅಲ್ಲಿ ಅಭಿಮಾನಿಗಳ ಸಾಗರವೇ ಸೇರುತ್ತದೆ ಎಂದು ಹೇಳಬಹುದಾಗಿದೆ. ಇನ್ನು ಚಿತ್ರರಂಗದಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಲವಾರು ಪ್ರತಿಭೆಗಳನ್ನು ಸಪೋರ್ಟ್ ಮಾಡಿ ಅವರು ಚಿತ್ರರಂಗದಲ್ಲಿ ಬೆಳೆಯುವಂತೆ ಬೆಂಬಲ ನೀಡುತ್ತಿದ್ದಾರೆ.

ಅವರಲ್ಲಿ ಯುವ ಉದಯೋನ್ಮುಖ ನಟ ದನ್ವೀರ್ ಕೂಡ ಹೌದು. ಇನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಆಗಿರುವ ಅಭಿಷೇಕ್ ಅಂಬರೀಶ್ ಅವರನ್ನು ಕೂಡ ತಮ್ಮ ಸ್ವಂತ ತಮ್ಮನಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೋಡಿಕೊಳ್ಳುತ್ತಿದ್ದಾರೆ.

ಆದರೆ ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಹಾಗೂ ಧನ್ವೀರ ಅವರಿಗೆ ಅವಮಾನ ಆಗಿದೆ ಎಂಬುದಾಗಿ ತಿಳಿದು ಬಂದಿದೆ. ಇದಕ್ಕೆ ಅವರು ಗರಂ ಆಗಿ ಕಾರ್ಯಕ್ರಮದಿಂದ ನಿರ್ಗಮಿಸಿದ್ದಾರೆ ಎಂಬುದು ಕೂಡ ಕ್ಯಾಮರಾ ಕಣ್ಣಿನಲ್ಲಿ ಸರಿಯಾಗಿದ್ದು ಈಗಾಗಲೇ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ.

ಹೌದು ಮಿತ್ರರೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವೇದಿಕೆ ಮೇಲಿದ್ದ ಸಂದರ್ಭದಲ್ಲಿ ಧನ್ವಿರ್ ಹಾಗೂ ಅಭಿಷೇಕ್ ಅಂಬರೀಶ್ ಅವರನ್ನು ವೇದಿಕೆಯ ಮೇಲೆ ನಿರೂಪಕರು ಕರೆದಿರಲಿಲ್ಲ. ಇದರಿಂದ ಬೇಸರಕ್ಕೆ ಒಳಗಾದ ಅಭಿಷೇಕ್ ಅಂಬರೀಶ್ ಹಾಗೂ ಧನ್ವೀರ ಅವರು ಕಾರ್ಯಕ್ರಮದ ನಿರೂಪಕರ ಮೇಲೆ ಬೇಸರ ಮಾಡಿಕೊಂಡು ಕಾರ್ಯಕ್ರಮದಿಂದ ಹೊರ ಹೋಗಿದ್ದು ಕೂಡ ಅಲ್ಲಿ ಕಂಡು ಬಂದಿತು.

Leave A Reply

Your email address will not be published.