40 ರಿಂದ 45 ವರ್ಷ ದಾಟುತ್ತಿದ್ದಂತೆ ಪ್ರತಿಯೊಬ್ಬರಿಗೂ ಸಹ ಸಂದುನೋವು ಮೂಳೆ ಸವೆತ ಉಂಟಾಗುತ್ತದೆ. ಆದರೆ ಪ್ರತಿದಿನ ನಾವು ಒಂದು ಸ್ಪೂನ್ ನಷ್ಟು ಈ ಒಂದು ಔಷಧಿಯನ್ನು ತೆಗೆದುಕೊಳ್ಳುವುದರಿಂದ 80 ವರ್ಷ ಆದರೂ ಸಹ ಮೂಳೆಸವೆತ ಬರೆದಂತೆ ನಮ್ಮನ್ನು ನಾವು ಆರೋಗ್ಯವಂತರಾಗಿ ಇಟ್ಟುಕೊಳ್ಳಬಹುದು. ಅದು ಹೇಗೆ ಔಷಧಿ ಯಾವುದು ಅನ್ನೋದನ್ನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕೆಲವೊಮ್ಮೆ ನಾವು ನಡೆಯುವಾಗ ಕೆಳಗೆ ಜಾರಿ ಬಿದ್ದು ಕೈಕಾಲು ಮುರಿದು ಕೊಳ್ಳುವುದು ಸಹಜ. ಮಕ್ಕಳು ಆಟ ಆಡುವಾಗ ಸಹ ಕೆಳಗೆ ಬಿದ್ದು ಮೂಳೆಗಳು ಮುರಿದುಕೊಳ್ಳುವ ಸಂಭವ ಎಷ್ಟು ಇರುತ್ತೆ. ಇನ್ನು ವಯಸ್ಸು ಹೆಚ್ಚಾಗುತ್ತ ಬಂದಹಾಗೆ ಮೊಣಕಾಲು ನೋವು ಕೀಲು ನೋವು ಸಹಜ. ನಮ್ಮ ಮೂಳೆಗಳು ಬಹಳಷ್ಟು ಬಲಹೀನವಾಗುತ್ತದೆ ಈ ರೀತಿ ಅದನಂತಹ ಸಮಸ್ಯೆಗಳು ಕಂಡುಬರುತ್ತದೆ. ಹಾಗಾಗಿ ನಾವು ನಮ್ಮ ಮೂಳೆಗಳ ಆರೋಗ್ಯವನ್ನು ಬಹಳಷ್ಟು ಗಟ್ಟಿಮುಟ್ಟಾಗಿ ಇಟ್ಟುಕೊಳ್ಳಬೇಕು. ನಮ್ಮ ಮೂಳೆಗಳ ಆರೋಗ್ಯಕ್ಕೆ ಮುಖ್ಯವಾಗಿ ಬೇಕಾಗಿರುವುದು ಕ್ಯಾಲ್ಶಿಯಂ. ಒಂದು ವೇಳೆ ಮೂಳೆಗಳು ಮುರಿದರು ಸಹ ಮತ್ತೆ ಮೊದಲಿನ ಹಾಗೆ ಗಟ್ಟಿಯಾಗಿರಲು ಕ್ಯಾಲ್ಸಿಯಂ ನಮಗೆ ಸಹಾಯ ಮಾಡುತ್ತದೆ. ನಮ್ಮ ಶರೀರಕ್ಕೆ ಬೇಕಾದಷ್ಟು ಕ್ಯಾಲ್ಸಿಯಂ ಇದನ್ನು ನಾವು ಪಡೆಯುವುದು ಹೇಗೆ ಎನ್ನುವುದನ್ನು ಒಂದು ಆಯುರ್ವೇದ ಪದ್ಧತಿಯ ಮೂಲಕ ತಿಳಿದುಕೊಳ್ಳೋಣ. ಇದನ್ನು ಮಾಡಲು ನನಗೆ ಮುಖ್ಯವಾಗಿ ಬೇಕಾಗಿರುವುದು ಬಿಳಿ ಎಳ್ಳು. ಬಿಳಿ ಎಳ್ಳಿನಲ್ಲಿ ನಮ್ಮ ಶರೀರಕ್ಕೆ ಬೇಕಾದಂತಹ ಎಷ್ಟು ಪೋಷಕಾಂಶಗಳು ಔಷಧಿಯ ಗುಣಗಳು ಹೆಚ್ಚಾಗಿರುತ್ತದೆ. ಇವೆಲ್ಲದಕ್ಕಿಂತ ಹೆಚ್ಚಾಗಿ ಇದರಲ್ಲಿ ಕ್ಯಾಲ್ಸಿಯಂ ಹೇರಳವಾಗಿದ್ದು ಇದು ನಮ್ಮ ಮೂಳೆಗಳ ಬೆಳವಣಿಗೆಗೆ ಸಹಾಯಕಾರಿ ಆಗಿದೆ. ಹಾಗಾಗಿ ನಮ್ಮ ದೇಹದ ಕ್ಯಾಲ್ಸಿಯಂ ಅನ್ನು ಅಧಿಕಗೊಳಿಸಿ ಕೊಳ್ಳಲು ಒಂದು ಕಪ್ ನಷ್ಟು ಬಿಳಿ ಎಳ್ಳನ್ನು ತೆಗೆದುಕೊಂಡು ಅದನ್ನು ಒಂದು ಪ್ಯಾನ್ ನಲ್ಲಿ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಬೇಕು.

ಹುರಿದುಕೊಂಡ ನಂತರ ಸ್ವಲ್ಪ ತಣ್ಣಗಾಗಲು ಬಿಟ್ಟು ಎಳ್ಳನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ರಾತ್ರಿ ನಾಲ್ಕರಿಂದ ಐದು ಬಾದಾಮಿ ನೆನೆಸಿಟ್ಟು ಕೊಳ್ಳಬೇಕು. ಬಾದಾಮಿಯನ್ನು ಸಿಪ್ಪೆತೆಗೆದು ಬೆಳಗ್ಗೆ ಬ್ರಷ್ ಮಾಡಿದ ನಂತರ ಖಾಲಿ ಹೊಟ್ಟೆಯಲ್ಲಿ ಬಾದಾಮಿಯನ್ನು ಸೇವಿಸಿ ಒಂದು ಲೋಟ ಹಾಲನ್ನು ಕುಡಿಯಬೇಕು. ಇನ್ನು ಎಳ್ಳಿನ ಪುಡಿ ಯನ್ನು ತೆಗೆದುಕೊಳ್ಳುವುದು ಒಂದು ಲೋಟ ಹಾಲಿಗೆ 1 ಸ್ಪೂನ್ ಎಳ್ಳಿನ ಪುಡಿಯನ್ನು ಸೇರಿಸಿ ಅದನ್ನು ಸೇವಿಸಬೇಕು. ಶರೀರದಲ್ಲಿ ಮೂಳೆಗಳು ಜಾಸ್ತಿ ಅಂತ ಹೇಳುತ್ತಾರೆ 1 ಸ್ಪೂನ್ ಬದಲಿಗೆ 2 ಸ್ಪೂನ್ ಎಳ್ಳಿನ ಪುಡಿಯನ್ನು ಬಳಕೆ ಮಾಡಬಹುದು. ಈ ರೀತಿ ಮಾಡಿಕೊಳ್ಳುವುದರಿಂದ ಇವು ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಒದಗಿಸುವುದು ಮಾತ್ರವಲ್ಲದೆ ನಮ್ಮ ಮೂಳೆಗಳನ್ನು ದೃಢವಾಗಿಸುತ್ತದೆ. ನಮ್ಮಲ್ಲಿರುವಂತಹ ಕೀಲು ನೋವು ಮಂಡಿ ನೋವು ನಿವಾರಣೆ ಮಾಡಿ ಮೂಲಗಳನ್ನು ಬಲವಾಗಿಸುತ್ತದೆ.

ಎಳ್ಳಿನಲ್ಲಿ ಇರುವಂತಹ ಆಂಟಿ ಇಂಪ್ಲೇಮೆಟರಿ ಗುಣಗಳು ನಮ್ಮ ಶರೀರದಲ್ಲಿರುವ ಅಂತಹ ನೋವುಗಳನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿವೆ. ಎಳ್ಳು ತಿನ್ನುವುದರಿಂದ ನಮ್ಮ ಶರೀರಕ್ಕೆ ಬೇಕಾದಂತಹ ಬಿ 1, ಬಿ6, ಬಿ12 ಅಂತಹ ಪೋಷಕಾಂಶಗಳನ್ನು ಚೆನ್ನಾಗಿ ಒದಗಿಸುತ್ತದೆ. ಹಾಗೆಯೇ ಡಯಾಬಿಟಿಸ್ ಇರುವವರು ಸಹಾಯವನ್ನು ಸೇವಿಸುವುದರಿಂದ ಶುಗರ್ ನಿಯಂತ್ರಣದಲ್ಲಿರುತ್ತದೆ.

ಬಾದಾಮಿಯನ್ನು ತೆಗೆದುಕೊಳ್ಳುವುದರಿಂದ ಬಾದಾಮಿಯಲ್ಲಿ ಹಾಲಿನ ಸಮಾನ ವಾದಂತಹ ಕ್ಯಾಲಿಸಿಯಂ ಇದ್ದಿರುತ್ತೆ. ನಮ್ಮ ಮೂಳೆಗಳು ಮತ್ತು ಮಾಂಸಖಂಡಗಳಿಗೆ ಚೆನ್ನಾಗಿ ಬಲವನ್ನು ನೀಡುತ್ತದೆ.

Leave a Reply

Your email address will not be published. Required fields are marked *