ಗೋಮಾಳ ಜಮೀನು ಎಂದರೇನು? ಸರ್ಕಾರದ ಯೋಜನೆಯಡಿ ಸಕ್ರಮ ಮಾಡಿಕೊಳ್ಳಬಹುದು ಇಲ್ಲಿದೆ ಮಾಹಿತಿ
ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಜಮೀನನ್ನು ಬಹಳ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಅನೇಕ ರೈತರು ಜೀವನ ಮಾಡುತ್ತಿದ್ದಾರೆ ಆದರೆ ಆ ಜಮೀನು ಅವರ ಸ್ವಂತ ಜಮೀನಾಗಿರದೆ ಸರ್ಕಾರದ ಜಮೀನು ಆಗಿರುತ್ತದೆ. ದನಕರುಗಳಿಗೆ ಮೀಸಲಿಟ್ಟ ಗೋಮಾಳ ಜಮೀನನ್ನು ಬಹಳಷ್ಟು ರೈತರು ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಹಾಗಾದರೆ ಗೋಮಾಳ ಜಮೀನು ಎಂದರೇನು, ಗೋಮಾಳ ಜಮೀನನ್ನು ಸಕ್ರಮ ಮಾಡಿಕೊಳ್ಳುವುದರ ಬಗ್ಗೆ ಹಾಗೂ ಜಮೀನಿನ ಬಗ್ಗೆ ಸರ್ಕಾರದ ನಿಬಂಧನೆಗಳೇನು ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡೋಣ
ದನಕರುಗಳಿಗೆ ಮೇಯಲು ಮೀಸಲಿಟ್ಟಿರುವ ಸರ್ಕಾರದ ಭೂಮಿಯನ್ನು ಗೋಮಾಳ ಜಮೀನು ಎನ್ನುವರು. ಗೋಮಾಳ ಜಮೀನಿನಲ್ಲಿ ಭೂರಹಿತ ರೈತರು ಸಾಗುವಳಿ ಮಾಡಿಕೊಂಡರೆ ಅವರ ಪೂರ್ವಾಪರಗಳನ್ನು ಪರಿಶೀಲಿಸಿ ಸಾಗುವಳಿಗೆ ಅನುಮತಿ ನೀಡುವ ಪರಿಪಾಠ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಪ್ರತ್ಯೇಕ ಕಾನೂನು ಮತ್ತು ಭೂ ಮಂಜೂರಾತಿ ಸಮಿತಿ ಇದೆ. ಕರ್ನಾಟಕ ಭೂಕಂದಾಯ ನಿಯಮಾವಳಿ 1966 ನಿಯಮ 97(1) ರ ಗ್ರಾಮದಲ್ಲಿ ಪ್ರತಿ 100 ಜಾನುವಾರುಗಳಿಗೆ 12 ಹೆಕ್ಟೇರ್ ಗೋಮಾಳ ಜಮೀನು ಎಂದು ಕಾಯ್ದಿರಿಸಬೇಕು
ಅದಕ್ಕಿಂತ ಹೆಚ್ಚಿನ ಭೂಮಿ ಲಭ್ಯವಿದ್ದರೆ ಮಾತ್ರ ಕರ್ನಾಟಕ ಭೂ ಕಂದಾಯ ಕಾಯ್ದೆ 94 ಎ, ಬಿ,ಸಿ ಮತ್ತು ಸಿ ಪ್ರಕಾರ ಅನಧಿಕೃತವಾಗಿ ಸಾಗುವಳಿ ಮಾಡುವವರಿಗೆ ಸಕ್ರಮಗೊಳಿಸಲು ಅವಕಾಶವಿದೆ ಎಂದು 2006 ನವೆಂಬರ್ 18ರಂದು ಹೈಕೋರ್ಟ್ ಆದೇಶ ನೀಡಿದೆ. ಈ ಆದೇಶದಂತೆ 2007ರಲ್ಲಿ ಆದೇಶ ಹೊರಡಿಸಿದ ಸರ್ಕಾರ 1966 ನಿಯಮ 97(1) ರ ಪ್ರಕಾರ ಗೋಮಾಳ ಇದೆಯೆ ಎಂದು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು. ಗೋಮಾಳ ಪ್ರದೇಶ ಹೆಚ್ಚಿದ್ದರೆ ಮಾತ್ರ ಜಾಗದಲ್ಲಿ ಅಕ್ರಮವಾಗಿ ಸಾಗುವಳಿ ಮಾಡುವವರು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಬಹುದು.
ಗ್ರಾಮದಲ್ಲಿ ಕಡಿಮೆ ಗೋಮಾಳ ಇದ್ದರೆ ಸಕ್ರಮಕ್ಕೆ ಅವಕಾಶ ಇರುವುದಿಲ್ಲ. ಗೋಮಾಳ ಭೂಮಿಯನ್ನು ಖಾಸಗಿ ಸಂಸ್ಥೆಗಾಗಲಿ ಅಥವಾ ಗಣಿಗಾರಿಕೆಗೆ ಮಂಜೂರು ಮಾಡಬಾರದು ಎಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ. 2008ರ ತಿದ್ದುಪಡಿಯ 11 ನೇ ಕಲಂ ಪ್ರಕಾರ ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಸ್ವಂತ ಜಮೀನು ಇರಬಾರದು ಅವರು ಗೋಮಾಳ ಜಮೀನನ್ನು ಜೀವನಕ್ಕಾಗಿ ಅವಲಂಬಿಸಿರಬೇಕು. ಗ್ರಾಮದಲ್ಲಿರುವ ಅನುಪಯೋಗಿ ಜಮೀನುಗಳನ್ನು ಗೋಮಾಳ ಭೂಮಿ ಎಂದು ಕರೆಯಲಾಗುತ್ತದೆ.
ಗೋಮಾಳ ಜಮೀನು ಸರ್ಕಾರದ ಅಧೀನದಲ್ಲಿರುವುದರಿಂದ ಸಾರ್ವಜನಿಕ ಉದ್ದೇಶಗಳಿಗೆ ಮಾತ್ರ ಬಳಸಬಹುದು. ಹೊಸದಾಗಿ ಕಂದಾಯ ಗ್ರಾಮಗಳನ್ನು ಸೃಷ್ಟಿಸಲು ಗೋಮಾಳ ಜಮೀನುಗಳನ್ನು ಬಳಸಬಹುದು. ಕಂದಾಯ ಕಾಯ್ದೆ 94 ಎ, ಬಿ ಮತ್ತು ಸಿ ಪ್ರಕಾರ ಅನಧಿಕೃತ ಸಾಗುವಳಿ ಮಾಡುವವರಿಗೆ ಗೋಮಾಳ ಜಮೀನನ್ನು ನಿಬಂಧನೆಗೆ ಒಳಪಟ್ಟು ಸಕ್ರಮಗೊಳಿಸಲು ಅವಕಾಶವಿದೆ.
ಗ್ರಾಮದಲ್ಲಿ ಸಾಕಷ್ಟು ಗೋಮಾಳ ಜಮೀನು ಲಭ್ಯವಿದ್ದರೆ ಮಾತ್ರ ಸಕ್ರಮ ಮಾಡಬಹುದು. ಖಾಸಗಿ ಸಂಸ್ಥೆ ಅಥವಾ ಅನುಕೂಲ ಇರುವ ವ್ಯಕ್ತಿಗೆ ಗೋಮಾಳ ಜಮೀನು ಸಕ್ರಮ ಮಾಡಲು ಬರುವುದಿಲ್ಲ. ಗೋಮಾಳ ಜಮೀನನ್ನು ಸಾಗುವಳಿ ಮಾಡುವವರಿಗೆ ಸ್ವಂತ ಜಮೀನು ಇರಬಾರದು ಆಗ ಸಕ್ರಮ ಮಾಡಬಹುದು. ಹಲವು ವರ್ಷಗಳಿಂದ ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರಬೇಕು. ಗೋಮಾಳ ಜಮೀನನ್ನು ಯಾವುದೆ ಕಾರಣಕ್ಕೂ ಪರಭಾರೆ ಅಂದರೆ ಮಾರಾಟ ಮಾಡುವಂತಿಲ್ಲ.
ಕೃಷಿಯೇತರ ಚಟುವಟಿಕೆಗಳಿಗೆ ಗೋಮಾಳ ಜಮೀನನ್ನು ಬಳಸುವಂತಿಲ್ಲ. ಗೋಮಾಳ ಭೂಮಿಯು ಒಣಭೂಮಿ ಅಥವಾ ಸಾಧಾರಣ ಭೂಮಿಯಾಗಿದ್ದಲ್ಲಿ ಎರಡು ಹೆಕ್ಟೇರ್ ಹಾಗೂ ಭೂಮಿಯ ಲಭ್ಯತೆ ಎಸ್ಸಿ, ಎಸ್ಟಿ, ಸಾಮಾನ್ಯ ಸ್ತರದ ಆಧಾರದ ಮೇಲೆ ಗೋಮಾಳ ಭೂಮಿಯನ್ನು ಮಂಜೂರು ಮಾಡಲಾಗುತ್ತದೆ. ತಾಲೂಕಿನ ತಹಶೀಲ್ದಾರ ಕಚೇರಿಯ ಭೂ ನ್ಯಾಯ ಮಂಡಳಿಯಲ್ಲಿ ಒಮ್ಮೆ ವಿಚಾರಿಸಬಹುದು. ಗೋಮಾಳ ಜಮೀನು ಸಾರ್ವಜನಿಕ ಸ್ವತ್ತು ಆಗಿರುವುದರಿಂದ ಅದನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಕರ್ತವ್ಯವಾಗಿದೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430