ಮನೆ ಮೇಲಿನ ಕೆಟ್ಟ ದೃಷ್ಟಿ ನಿವಾರಿಸಿ ನೆಮ್ಮದಿ ಕೊಡುವ ದೀಪಾರಾಧನೆ

0 2

ಜಗತ್ತು ಎಲ್ಲಾ ರೀತಿಯಲ್ಲೂ ಎಷ್ಟೇ ಮುಂದುವರೆದರೂ ಜಗತ್ತಿನಲ್ಲಿ ಭೇಧಿಸಲಾಗದ ಅದೆಷ್ಟೋ ವಿಷ್ಯಗಳು ನಮ್ಮ ಜನರ ಮನಸಿನಲ್ಲಿ ಹಾಗೆಯೇ ಉಳಿದುಬಿಟ್ಟಿವೆ ಹಾಗಂತ ಅದಕ್ಕೆ ನಮ್ಮ ವೈಜ್ಞಾನಿಕ ಜಗತ್ತು ನಮ್ಮ ವಿಜ್ನಾನಿಗಳು ಅದಕ್ಕೆ ಪರಿಹಾರಗಳನ್ನು ಸೂಚಿಸಿಲ್ಲವೇ ಎಂದರೆ ಯಾರಲ್ಲೂ ಉತ್ತರವಿಲ್ಲ ಅದೊಂದು ಮಾಮರ ನಾವು ಎಷ್ಟೇ ಆಧುನಿಕತೆಯನ್ನು ರೂಡಿಸಿಕೊಂಡರು ನಮ್ಮ ಸಮಾಜ ಅಲ್ಲೊಂದು ದೈವಾರಾಧನೆ ಪೂಜೆ ಹೋಮ ಹವನಗಳನ್ನು ಇನ್ನೂ ಮಾಡುತ್ತಲೇ ಬರುತ್ತಿದ್ದಾರೆ.

ಯಾಕಂದ್ರೆ ನಮ್ಮ ವಿಜ್ಞಾನ ಲೋಕ ಕೊಡದ ಎಷ್ಟೋ ಪರಿಹಾರಗಳನ್ನು ನಾವು ನಂಬಿರುವ ದೇವರುಗಳು ನಾವು ಮಾಡುವ ಆರಾಧನೆಗಳು ನಮಗೆ ನೀಡುತ್ತವೆ, ಅಷ್ಟಲ್ಲದೇ ನಮ್ಮ ಪೂರ್ವಜರು ಹಿಂದಿನ ಋಷಿಗಳು ಈ ರೀತಿಯ ಆಚರಣೆಗಳನ್ನು ನಮ್ಮಲ್ಲಿ ಬಿತ್ತಿ ಹೋಗಿಲ್ಲ ಕಾಲ ಕ್ರಮೇಣ ಇಂದಿನ ದಿನಗಳಲ್ಲೂ ಸಹ ಸರ್ಪ ದೋಷ ಕೆಟ್ಟ ಕಣ್ಣು ದೃಷ್ಟಿ ಮಾನಸಿಕ ನೆಮ್ಮದಿ ಇಲ್ಲದಿರುವುದು ಆರ್ಥಿಕ ಸಮಸ್ಯೆ ಮನೆಯಲ್ಲಿ ಸಾಮರಸ್ಯ ಇಲ್ಲದಿರುವುದು ವಾಸ್ತು ದೋಷ ವಾಮಾಚಾರ ಇಂಥ ಅನೇಕ ಸಮಸ್ಯೆಗಳು ಜನರನ್ನು ಬಾದಿಸುತ್ತಲೇ ಬರುತ್ತಿವೆ ಹಾಗೂ ಇವುಗಳಿಗೆ ನಮ್ಮ ಮುಂದುವರೆದ ವಿಜ್ಞಾನದಲ್ಲಿ ಎಲ್ಲೂ ಪರಿಹಾರಗಳನ್ನು ಸೂಚಿಸಿಲ್ಲ ಆದರೆ ನಮ್ಮ ಪೂರ್ವಜರು ಇದಕ್ಕೆಲ್ಲ ಶಾಶ್ವತ ಪರಿಹಾರವನ್ನು ನಮ್ಮ ಆಚರಣೆಯಲ್ಲಿ ಆರಾಧನೆಯಲ್ಲಿ ಹುದುಗಿಸಿಟ್ಟಿದ್ದಾರೆ.

ನಾವು ಈ ಕೆಳಗೆ ಹೇಳಲಾಗಿರುವ ಒಂದು ದೀಪಾರಾಧನೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳನ್ನು ದೂರಮಾಡಿಕೊಳ್ಳಬಹುದು ಆ ದೀಪಾರಾಧನೆಯ ಕ್ರಮಗಳನ್ನು ತಿಳಿಯೋಣ. ಮೊದಲಿಗೆ ಒಂದು ತಟ್ಟೆಯಲ್ಲಿ ಸ್ವಲ್ಪ ಅಕ್ಕಿಯನ್ನು ಹಾಕಿಕೊಂಡು ನಂತರ ಅಕ್ಕಿ ತುಂಬಿದ ಆ ತಟ್ಟೆಯ ಸುತ್ತಲೂ ಕ್ರಮವಾಗಿ ಶ್ರೀಗಂಧವನ್ನು ಹಚ್ಚಬೇಕು ನಂತರ ಶ್ರೀಗಂಧದ ಮೇಲೆ ಕುಂಕುಮವನ್ನು ಹಚ್ಚಿ ತಟ್ಟೆಯನ್ನು ಹಾಗೆ ಇಟ್ಟುಕೊಂಡು ತಟ್ಟೆಯಲ್ಲಿರುವ ಅಕ್ಕಿಗಳ ಮೇಲೆ ಎರೆಡು ಕಾಯಿ ಹೋಳುಗಳನ್ನು ಬಟ್ಟಲು ರೀತಿಯಲ್ಲಿ ಇರಿಸಬೇಕು ನಂತರ ಎರಡೂ ಕಾಯಿ ಹೋಳುಗಳಿಗೆ ಸುತ್ತಲೂ ಗಂಧವನ್ನು ಹಚ್ಚಿ ಜೊತೆಗೆ ಕುಂಕುಮವನ್ನು ಹಚ್ಚಬೇಕು ಇಷ್ಟಾದ ಮೇಲೆ ದೀಪ ಸಿದ್ಧವಾದಂತೆ ನಂತರ ಎರಡೂ ಕಾಯಿ ಹೋಳುಗಳ ಒಳಗೆ ದೀಪದ ಎಣ್ಣೆಯನ್ನು ತುಂಬಿಸಿ ಅದಕ್ಕೆ ಬತ್ತಿಯನ್ನು ಹಾಕಿ ಸಿದ್ಧಪಡಿಸಬೇಕು

ನಂತರ ಸಿದ್ದಪಡಿಸಿದ ಈ ತಾಂಬೂಲ ದೀಪವನ್ನು ನಮ್ಮ ಮನೆಯ ದೇವರ ಮನೆಯಲ್ಲಿ ಇಟ್ಟು ಮನಸ್ಸಿನಲ್ಲಿ ಭಕ್ತಿಯಿಂದ ನಿಮ್ಮ ಸಂಕಲ್ಪವನ್ನು ನಿಮ್ಮ ಸಮಸ್ಯೆಗಳನ್ನು ದೇವರ ಮುಂದೆ ಇಡಬೇಕು ವಿಶೇಷವಾಗಿ ಈ ದೀಪಾರಾಧನೆಯನ್ನು ಹೆಣ್ಣುಮಕ್ಕಳು ಶುಕ್ರವಾರದಂದು ಅಥವಾ ಅಮಾವಾಸ್ಯೆ ದಿನಗಳಲ್ಲಿ ಆಚರಿಸುವುದರಿಂದ ನಿಮ್ಮ ಮನದ ಸಂಕಲ್ಪ ಸಿದ್ಧಿಸುವುದಲ್ಲದೆ ನಿಮ್ಮ ಮನೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೂ ತಕ್ಷಣದಲ್ಲಿ ದೂರವಾಗುತ್ತವೆ.

Leave A Reply

Your email address will not be published.