ಮೂಲಂಗಿಯಲ್ಲಿದೆ ಗ್ಯಾಸ್ಟ್ರಿಕ್ ಹಾಗೂ ಜಾಂಡಿಸ್ ಸಮಸ್ಯೆಗೆ ಉತ್ತಮ ಮನೆಮದ್ದು

0 30

ಪ್ರತಿದಿನ ನಾವು ಸೇವಿಸುವ ತರಕಾರಿಗಳಲ್ಲಿ ನಮ್ಮ ದೇಹಕ್ಕೆ ಬೇಕಾದಂತಹ ಒಳ್ಳೆಯ ಅಂಶಗಳು ಅಡಕವಾಗಿರುತ್ತದೆ. ಸಾಮಾನ್ಯವಾಗಿ ಮೂಲಂಗಿಯ ಅನೇಕ ಆರೋಗ್ಯ ಪ್ರಯೋಜನದ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದರಲ್ಲಿ ಅಪಾರ ಪ್ರಮಾಣದ ಕಬ್ಬಿಣದ ಅಂಶದ ಜೊತೆಗೆ ರೋಗ ನಿರೋಧಕ ಗುಣವನ್ನು ಹೆಚ್ಚು ಮಾಡುವ ಗುಣ ಕಂಡುಬರುತ್ತದೆ. ಮೂಲಂಗಿ ಸೊಪ್ಪು ಕೂಡ ಮೂಲಂಗಿಗೆ ಹೋಲಿಸಿದರೆ ಯಾವುದರಲ್ಲೂ ಕಡಿಮೆ ಇಲ್ಲ. ದೈಹಿಕ ಸದೃಢತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇದು ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ ತನ್ನದೇ ಆದ ಪ್ರಭಾವದಿಂದ ನಮಗೆ ಅಗತ್ಯವಾಗಿ ಬೇಕಾದ ಕ್ಯಾಲ್ಸಿಯಂ ಪಾಸ್ಪರಸ್ ಅಂಶವನ್ನು ಜೊತೆಗೆ ನಾರಿನಂಶವನ್ನು ಕೂಡ ದೇಹಕ್ಕೆ ಒದಗಿಸುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡಿ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಹಾಗಾದರೆ ಮೂಲಂಗಿ ಸೊಪ್ಪಿನಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಇತ್ತೀಚಿನ ಪೀಳಿಗೆಯ ಕೆಲವು ಜನರಲ್ಲಿ ಮೂಲವ್ಯಾಧಿ ಅಥವಾ ಪೈಲ್ಸ್ ಎನ್ನುವುದು ಸಾಮಾನ್ಯವಾಗಿದೆ ಮೂಲಂಗಿಯ ಎಲೆಗಳಲ್ಲಿ ಆಂಟಿ-ಬ್ಯಾಕ್ಟಿರಿಯಾ ಪ್ರಮಾಣ ತುಂಬಾ ಹೆಚ್ಚಾಗಿದೆ. ನೈಸರ್ಗಿಕವಾದ ರೀತಿಯಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಜೊತೆಗೆ ನರಮಂಡಲದಲ್ಲಿ ಕಂಡುಬರುವ ಸಮಸ್ಯೆಗಳನ್ನು ಇದು ಪರಿಹಾರ ಮಾಡುತ್ತದೆ. ಇದರಿಂದ ಸರಾಗವಾದ ರಕ್ತಸಂಚಾರ ಉಂಟಾಗುವಂತೆ ಆಗುತ್ತದೆ.

ನೀರಿನಲ್ಲಿ ಒಣಗಿದ ಮೂಲಂಗಿ ಎಲೆಯ ಪುಡಿಯನ್ನು ನಿಮ್ಮ ವೈದ್ಯರು ಹೇಳಿದ ರೀತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಅತ್ಯುತ್ತಮ ಪರಿಹಾರವನ್ನು ನಿಮ್ಮ ಪೈಲ್ಸ್ ವಿಚಾರದಲ್ಲಿ ಕಂಡುಕೊಳ್ಳಬಹುದು. ಇನ್ನು ಯಾವಾಗ ನೋಡಿದ್ದೆಲ್ಲ ಹಳದಿ ಬಣ್ಣದಲ್ಲಿ ಕಾಣುತ್ತದೆ ಅದನ್ನು ಜಾಂಡೀಸ್ ಅಥವಾ ಕಾಮಲೆ ಎಂದು ಕರೆಯುತ್ತಾರೆ ಈ ಸಂದರ್ಭದಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ಮೂತ್ರದ ಬಣ್ಣ ಹಳದಿಯಾಗಿರುತ್ತದೆ. ಆದರೆ ಈ ಸಮಸ್ಯೆಯನ್ನು ನೀವು ಸುಲಭವಾಗಿ ಮೂಲಂಗಿ ಎಲೆಗಳಿಂದ ಪರಿಹಾರ ಮಾಡಿಕೊಳ್ಳಬಹುದು ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಮೂಲಂಗಿ ಎಲೆಗಳು ತಮ್ಮ ಪ್ರಭಾವದಿಂದ ನಿಮ್ಮ ಜಾಂಡಿಸ್ ಸಮಸ್ಯೆಯನ್ನು ದೂರ ಮಾಡಬಲ್ಲದು. ಪ್ರತಿದಿನ ಸಾಧ್ಯವಾದರೆ ಖಾಲಿ ಹೊಟ್ಟೆಯಲ್ಲಿ ಮೂಲಂಗಿ ಸೊಪ್ಪಿನ ರಸವನ್ನು ಸ್ವಲ್ಪ ಪ್ರಮಾಣದಲ್ಲಿ ಸೇವನೆ ಮಾಡುತ್ತಾ ಬನ್ನಿ.

ಮೂಲಂಗಿ ಎಲೆಗಳಲ್ಲಿ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಅತ್ಯುತ್ತಮ ಗುಣವಿದೆ ಒಂದು ವೇಳೆ ನೀವು ಮಧುಮೇಹವನ್ನು ನಿಯಂತ್ರಣ ಮಾಡುವುದುಕ್ಕೆ ಸಾಧ್ಯವಾಗದೇ ತೊಂದರೆಯನ್ನು ಅನುಭವಿಸುತ್ತಿದ್ದರೆ ನಿಮ್ಮ ಆಹಾರದಲ್ಲಿ ಮೂಲಂಗಿ ಎಲೆಗಳನ್ನು ಪಲ್ಯದ ರೀತಿಯಲ್ಲಿ ಸೇವನೆ ಮಾಡಬಹುದು ಅಥವಾ ಮೂಲಂಗಿ ಎಲೆಗಳ ರಸವನ್ನು ಕುಡಿದು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತರಬಹುದು. ಇನ್ನು ಮೂಲಂಗಿ ಎಲೆಗಳಿಂದ ನಿಮ್ಮ ದೇಹದ ಒಳಗೆ ಚಮತ್ಕಾರ ಉಂಟಾಗುತ್ತದೆ ಜೊತೆಗೆ ಬಾಯಿಯ ವಸಡಿನಲ್ಲಿ ಕಂಡುಬರುವ ರಕ್ತಸ್ರಾವ ಸಮಸ್ಯೆಯನ್ನು ಇದು ನಿಯಂತ್ರಿಸುತ್ತದೆ.

ಮೂಲಂಗಿ ಎಲೆಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಸಿಗಲಿದ್ದು ವಸಡುಗಳ ರಕ್ಷಣೆಯನ್ನು ಹಾಗೂ ಹಲ್ಲುಗಳ ಆರೋಗ್ಯವನ್ನು ಇದು ಕಾಪಾಡುತ್ತದೆ. ಇನ್ನು ಮೂಲಂಗಿ ಎಲೆಗಳ ರಸ ನೈಸರ್ಗಿಕವಾಗಿ ಮೂತ್ರ ವರ್ಧಕ ಗುಣಲಕ್ಷಣಗಳನ್ನು ಪಡೆದಿರುವ ಕಾರಣಕ್ಕಾಗಿಯೇ ಜನರು ಇದರ ಸೇವನೆಗೆ ಹೆಚ್ಚು ಒತ್ತು ಕೊಡುತ್ತಾರೆ. ಕಿಡ್ನಿಗಳಲ್ಲಿ ಕಂಡು ಬರುವ ಕಲ್ಲುಗಳನ್ನು ಕರಗಿಸುವ ಗುಣ ಇದರಲ್ಲಿ ಕಂಡು ಬರುವುದರಿಂದ ಮತ್ತು ಅತಿ ಹೆಚ್ಚು ಮೂತ್ರ ವಿಸರ್ಜನೆ ಮಾಡಲು ಇದು ಪ್ರೇರೇಪಿಸುವುದರಿಂದ ದುಪ್ಪಟ್ಟು ಆರೋಗ್ಯದ ಲಾಭವೂ ಸಿಗುತ್ತದೆ.ನೀವು ಕೂಡ ಮೂಲಂಗಿ ಸೊಪ್ಪನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ಮತ್ತು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.

Leave A Reply

Your email address will not be published.