Viral Story In Kannada: ಬದುಕಿನಲ್ಲಿ ಗಂಡ ಹೆಂಡತಿಯ ನಡುವೆ ಪ್ರೀತಿ ವಿಶ್ವಾಸ ಇರಬೇಕು. ಒಬ್ಬರನ್ಯಾನೊಬ್ಬರು ಅರ್ಥ ಮಾಡಿಕೊಂಡು ಒಳ್ಳೆಯ ಜೀವನ ಸಾಗಿಸಬೇಕು. ಆದರೆ ಮದುವೆಯಾದ ಎಲ್ಲಾ ದಂಪತಿಗಳ ವಿಚಾರದಲ್ಲಿ ಈ ರೀತಿ ನಡೆಯುವುದಿಲ್ಲ. ಕೆಲವೊಮ್ಮೆ ಇಬ್ಬರಲ್ಲಿ ಒಬ್ಬರು ಮೋಸ ಮಾಡುವಂಥ ಘಟನೆಗಳು ಕೂಡ ನಡೆಯುತ್ತವೆ. ಅಂಥದ್ದೊಂದು ಘಟನೆ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.

ಈ ದಂಪತಿಗೆ ಮದುವೆಯಾಗಿ ಮೂರು ವರ್ಷ ಕಳೆದಿದೆ. ಈ ವ್ಯಕ್ತಿ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ.. ತನ್ನ ಪತ್ನಿಗೆ ಮುಂದೆ ಓದಬೇಕು ಎನ್ನುವ ಆಸೆ ಇರುವ ಕಾರಣಕ್ಕೆ ಈತ ಕೂಡ ಸಂತೋಷದಿಂದಲೇ ಆಕೆ ಓದಿ ಒಳ್ಳೆಯ ಸ್ಥಾನಕ್ಕೆ ಹೋಗಲಿ ಎನ್ನುವ ಆಸೆಯಿಂದ ಹೆಂಡತಿಯನ್ನು ಆಕೆಯ ಆಸೆಯಂತೆ ನರ್ಸಿಂಗ್ ಕಾಲೇಜಿಗೆ ಸೇರಿಸಿ ಓದಿಸುತ್ತಾನೆ. ಕೊನೆಗೆ ಆಕೆ ತನ್ನ ಲವ್ವರ್ ಜೊತೆಗೆ ಓಡಿ ಹೋಗಿದ್ದಾಳೆ.

ಇಂಥದ್ದೊಂದು ಘಟನೆ ನಡೆದಿರುವುದು ಜಾರ್ಖಂಡ್ ನಲ್ಲಿ. ಈ ವ್ಯಕ್ತಿಯ ಹೆಸರು ಟಿಂಕು ಕುಮಾರ್ ಯಾದವ್, ಈತನ ಹೆಂಡತಿಯ ಹೆಸರು ಪ್ರಿಯಾ ಕುಮಾರಿ. ಹೆಂಡತಿಯ ಬಗ್ಗೆ ಟಿಂಕು ಕುಮಾರ್ ಮಾತನಾಡಿದ್ದು, ತನ್ನ ಹೆಂಡತಿ ಕಾಲೇಜಿನಿಂದ ಮನೆಗೆ ಹೋಗುತ್ತೇನೆ ಎಂದು ಸೆಪ್ಟೆಂಬರ್ 19ರಂದು ಕಾಲೇಜಿನಿಂದ ಹೊರಟಿದ್ದು, ಮನೆಗೆ ಬಂದಿರಲಿಲ್ಲ ಎಂದು ಗೊಡ್ಡಾನಗರ ಪೊಲೀಸ್ ಸ್ಟೇಶನ್ ಗೆ ಕಂಪ್ಲೇಂಟ್ ನೀಡಿದ್ದಾನೆ. ಪೊಲೀಸರು ತನಿಖೆ ನಡೆಸಿದಾಗ, ಆಕೆ ಅದೇ ಗ್ರಾಮದ ದಿಲ್ಖುಶ್ ರಾವತ್ ಎನ್ನುವ ಹುಡುಗನ ಜೊತೆಗೆ ಓಡಿ ಹೋಗಿದ್ದಾಳೆ ಎನ್ನುವುದು ಗೊತ್ತಾಗಿದೆ.

ಆತನ ಜೊತೆಗೆ ದೆಹಲಿಗೆ ಹೋಗಿ, ಅಲ್ಲಿ ಮದುವೆಯಾಗಿ ಮದುವೆಯ ಫೋಟೋಗಳನ್ನು ಕಳಿಸಿದ್ದಾಳೆ ಎಂದು ತಿಳಿಸಿದ್ದಾರೆ ಟಿಂಕು ಕುಮಾರ್. ಕೂಲಿ ಮಾಡಿ, ಕಷ್ಟಪಟ್ಟು ನರ್ಸಿಂಗ್ ಸೇರಿಸಿ ಓದಿಸಿದರು ಅವಳು ನನಗೆ ಮೋಸ ಮಾಡಿ ಓಡಿ ಹೋಗಿದ್ದಾಳೆ ಎಂದು ಟಿಂಕು ಕುಮಾರ್ ಬೇಸರ ಮಾಡಿಕೊಂಡಿದ್ದಾರೆ. ಇವರಿಬ್ಬರ ಮದುವೆ ಆಗಿದ್ದು 2020ರಲ್ಲಿ. ಪ್ರಿಯಾ ಕುಮಾರಿಗೆ ನರ್ಸಿಂಗ್ ಓದಬೇಕು ಎಂದು ಆಸೆ ಇತ್ತು.

ಹೆಂಡತಿಯ ಆಸೆಯ ಹಾಗೆ ಆಕೆಯನ್ನು ಶಕುಂತಲಾ ನರ್ಸಿಂಗ್ ಕಾಲೇಜಿಗೆ ಸೇರಿಸಿದರು, ಜೊತೆಗೆ 2.5 ಲಕ್ಷ ಸಾಲ ಮಾಡಿ ಹೆಂಡತಿಯನ್ನು ಓದಿಸುತ್ತಿದ್ದರು. ಈಗ ಪ್ರಿಯಾ ಕುಮಾರಿ ನರ್ಸಿಂಗ್ ಕೋರ್ಸ್ ನ ಕೊನೆಯ ವರ್ಷ ಓದುತ್ತಿದ್ದಳು, ಇನ್ನೇನು ಕೆಲವೇ ದಿನಗಳಲ್ಲಿ ಪರೀಕ್ಷೆ ಕೂಡ ಇತ್ತು. ಆದರೆ ಇಂಥದ್ದೊಂದು ಘಟನೆ ಕೂಡ ನಡೆದಿದೆ. ಪೊಲೀಸರು ಇವರಿಬ್ಬರನ್ನು ಹುಡುಕಿ ಕರೆತರುತ್ತಾರಾ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *