17 ವರ್ಷದ ವಿದ್ಯಾರ್ಥಿಯ ಜೊತೆಗೆ ಟೀಚರ್ ಲವ್ವಿ ಡವ್ವಿ, ಕೊನೆಗೆ ಹುಡುಗನ ಸ್ಥಿತಿ ಏನಾಗಿದೆ ಗೊತ್ತಾ..

0 13,112

Viral Story Benagalore: ಈಗಿನ ಕಾಲದಲ್ಲಿ ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ, ಯಾವುದೇ ಕಂಡೀಷನ್ ಗಳು ಇಲ್ಲ ಎಂದರೆ ತಪ್ಪಲ್ಲ. ಈಗ ಯಾರಿಗೆ ಯಾರ ಮೇಲೆ ಯಾವಾಗ ಹೇಗೆ ಪ್ರೀತಿ ಆಗುತ್ತದೆ ಎಂದು ಊಹೆ ಮಾಡುವುದಕ್ಕೂ ಕಷ್ಟವೇ. ಆದರೆ ಶುರುವಾಗುವ ಎಲ್ಲಾ ಜನರ ಪ್ರೀತಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಲು ಅಸಾಧ್ಯ. ಏಕೆಂದರೆ ಈ ಪ್ರಪಂಚದಲ್ಲಿ ಹಲವು ಜನರ ಪ್ರೀತಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ.

ಅಂಥ ಪ್ರೀತಿಯಿಂದ ಆ ಇಬ್ಬರು ವ್ಯಕ್ತಿಗಳ ಮನೆಯವರಿಗೆ, ಇಡೀ ಕುಟುಂಬಕ್ಕೆ ತೊಂದರೆ ಎಂದೇ ಹೇಳಬಹುದು. ಆದರೆ ಪ್ರೀತಿ ಮಾಡುವವರು ಇದ್ಯಾವುದರ ಬಗ್ಗೆ ಕೂಡ ಯೋಚನೆ ಮಾಡುವುದಿಲ್ಲ. ತಪ್ಪೋ, ಸರಿಯೋ ಎಂದು ಯೋಚಿಸದೆ ಪ್ರೀತಿ ಮಾಡಿಬಿಡುತ್ತಾರೆ. ಇಂಥದ್ದೇ ಒಂದು ಘಟನೆ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಇಲ್ಲಿ ಟೀಚರ್ ಗೆ ತನ್ನ ಸ್ಟುಡೆಂಟ್ ಮೇಲೆಯೇ ಲವ್ ಆಗಿತ್ತು.

10ನೇ ತರಗತಿ ಓದುತ್ತಿದ್ದ ತನ್ನ ಸ್ಟುಡೆಂಟ್ ಮೇಲೆ ಈ ಟೀಚರ್ ಗೆ ಸಿಕ್ಕಾಪಟ್ಟೆ ಲವ್ ಆಗಿ, ಇಬ್ಬರು ತಮ್ಮ ಲವ್ವಿ ಡವ್ವಿಯನ್ನು ಯಾರಿಗೂ ಗೊತ್ತಾಗದ ಹಾಗೆ ಮುಂದುವರೆಸಿಕೊಂಡು ಹೋಗುತ್ತಿದ್ದರು. ಇತ್ತ ಹುಡುಗ 10ನೇ ತರಗತಿ ಪಾಸ್ ಆಗಿ, ಪ್ರಥಮ ಪಿಯುಸಿಗು ಸೇರಿಕೊಳ್ಳುತ್ತಾರೆ. ಹುಡುಗ ಶಾಲೆ ಬಿಟ್ಟು ಹೋದ ನಂತರ ಕೂಡ ಟೀಚರ್ ಗೆ ಅವನ ಮೇಲೆ ಪ್ರೀತಿ ಕಡಿಮೆ ಆಗುವುದಿಲ್ಲ. ಇಬ್ಬರು ಆಗಾಗ ಭೇಟಿ ಆಗುತ್ತಿರುತ್ತಾರೆ.

Viral Story Benagalore

ನಂತರ ಟೀಚರ್ ಗೆ ಮತ್ತೊಬ್ಬ ಹುಡುಗನ ಜೊತೆಗೆ ಮದುವೆ ಫಿಕ್ಸ್ ಆಗುತ್ತದೆ. ಹಾಗಿದ್ದರು ಈ ಹುಡುಗನ ಮೇಲೆ ಪ್ರೀತಿ ಕಡಿಮೆ ಅಗುವುದಿಲ್ಲ. ಇವನ ಜೊತೆಯಲ್ಲೂ ಚೆನ್ನಾಗಿಯೇ ಇರುತ್ತಾಳೆ. ಒಂದು ದಿನ ತನ್ನ ಬಾಯ್ ಫ್ರೆಂಡ್ ಬರ್ತ್ ಡೇ ಎಂದು ಗೊತ್ತಾದ ದಿನ ಅವನನ್ನು ಬರೋದಕ್ಕೆ ಹೇಳಿ, ಅವನ ಜೊತೆಗೆ ದೇವಸ್ಥಾನಕ್ಕೆ ಹೋಗುತ್ತಾಳೆ. ದೇವಸ್ಥಾನದಲ್ಲಿ ಪೂಜೆ ಮಾಡಿಸಿದ ಬಳಿಕ ಇಬ್ಬರು ಪಾರ್ಕ್ ಗೆ ಹೋಗುತ್ತಾರೆ..

ಅಲ್ಲಿ ಇವರಿಬ್ಬರು ಸಲುಗೆಯಿಂದ ಇರುವುದನ್ನು ಟೀಚರ್ ಫಿಯಾನ್ಸಿ ನೋಡಿ ತಕ್ಷಣವೇ ಆಕೆಯ ಅಣ್ಣನಿಗೆ ಫೋನ್ ಮಾಡಿ, ನಿಮ್ಮ ತಂಗಿ ಜೊತೆ ನನಗೆ ಮದುವೆ ಆಗಿದೆ, ಆದರೆ ಇಲ್ಲಿ ಆಕೆ ಮತ್ತೊಬ್ಬ ಹುಡುಗನ ಜೊತೆಗೆ ಕ್ಲೋಸ್ ಆಗಿದ್ದಾಳೆ ಎಂದು ಕಂಪ್ಲೇಂಟ್ ಮಾಡುತ್ತಾನೆ. ಆಗ ಅಲ್ಲಿಗೆ ಬರುವ ಟೀಚರ್ ಅಣ್ಣ ಟೀಚರ್ ಜೊತೆಯಲ್ಲಿದ್ದ ಆ ಸ್ಟುಡೆಂಟ್ ಗೆ ಚೆನ್ನಾಗಿ ಹೊಡೆದು ಕಳಿಸುತ್ತಾನೆ.

ಹುಟ್ಟುಹಬ್ಬದ ದಿನ ಆ ಹುಡುಗ ವಾಪಸ್ ಮನೆಗೆ ಹೋದಾಗ, ಅವನ ಕೈಗೆ ಗಾಯ ಆಗಿರುವುದನ್ನು ನೋಡಿ ಆತನ ಅಪ್ಪ ಅಮ್ಮ ಗಾಬರಿಯಾಗಿ ಏನಾಯಿತು ಎಂದು ಕೇಳುತ್ತಾರೆ. ಆಗ ಆ ಹುಡುಗ ನಡೆದ ಎಲ್ಲಾ ವಿಚಾರವನ್ನು ತನ್ನ ತಂದೆ ಜೊತೆಗೆ ಹೇಳಿದ್ದಾನೆ. ತನ್ನ ಟೀಚರ್ ಜೊತೆಗೆ ಸ್ನೇಹವಿತ್ತು ಎಂದು ಹೇಳಿ, ಆಗಾಗ ಫೋನ್ ನಲ್ಲಿ ಮಾತನಾಡುತ್ತಿದ್ದೆ, ಮೀಟ್ ಮಾಡುತ್ತಿದ್ದೆ ಹುಟ್ಟುಹಬ್ಬ ಅಂತ ಹೇಳಿದ್ದಕ್ಕೆ ದೇವಸ್ಥಾನಕ್ಕೆ ಹೋಗೋಣ ಅಂತ ಕರೆದರು, ಅಲ್ಲಿಂದ ಪಾರ್ಕ್ ಗೆ ಹೋದ್ವಿ.

ಪಾರ್ಕ್ ಗೆ ಅವರ ಅಣ್ಣ ಬಂದು ಹೊಡೆದರು ಎಂದು ತಿಳಿಸಿದ ಬಳಿಕ ಹುಡುಗನ ತಂದೆ ತಾಯಿ ಪೊಲೀಸರ ಬಳಿ ಹೋಗಿ ಟೀಚರ್ ಮತ್ತು ಆಕೆಯ ಅಣ್ಣನ ಮೇಲೆ ದೂರು ನೀಡಿದ್ದಾರೆ. ತಮ್ಮ ಮಗನಿಗೆ 17 ವರ್ಷ ಅವನು ಅಪ್ರಾಪ್ತ ಬಾಲಕ, ಆ ಟೀಚರ್ ತಮ್ಮ ಮಗನ ತಲೆಕೆಡಿಸಿದ್ದಾರೆ, ಆಕೆಯ ಅಣ್ಣ ಮಗನ ಮೇಲೆ ಹಲ್ಲೆ ಮಾಡಿದ್ದಾರೆ ಆದರೆ ಈ ರೀತಿ ಆಗಿದೆ ಎಂದು, ಅವರ ಮೇಲೆ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಈ ಘಟನೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮಕ್ಕಳಿಗೆ ಬುದ್ಧಿ ಕಲಿಸಿ, ಸರಿದಾರಿಗೆ ಕರೆದುಕೊಂಡು ಹೋಗಬೇಕಾದ ಶಿಕ್ಷಕಿಯೇ ಈ ರೀತಿ ಮಾಡಿದರೆ ವಿದ್ಯಾರ್ಥಿಗಳ ಗತಿಯೇನು ಎಂದು ಹೇಳಲಾಗುತ್ತಿದೆ.

Leave A Reply

Your email address will not be published.