Viral News: ಮಗಳನ್ನು ಹೂವಿನಂತೆ ಸಾಕಿ ಮದುವೆ ಮಾಡಿಕೊಟ್ಟಿದ್ದ ತಂದೆ, ನಂತರ ಆಗಿದ್ದೆ ಬೇರೆ.

0 7,648

Viral News: ಗೂಳಯ್ಯನ ಹಟ್ಟಿಯ ಗೋವಿಂದಪ್ಪ ಎನ್ನುವವರು ತಮ್ಮ ಮಗಳಾಗಿರುವ ಗೌತಮಿಯನ್ನು ಚಿತ್ರದುರ್ಗದ (Chitradurga) ವಾಹನ ಚಾಲಕ (Driver) ಆಗಿರುವಂತಹ ಚಂದ್ರಶೇಖರ್ ನಿಗೆ ಕೊಟ್ಟು ಮದುವೆ ಮಾಡುವ ಮೂಲಕ ತಮ್ಮ ಮಗಳು ಒಂದೊಳ್ಳೆ ಜೀವನವನ್ನು ನಡೆಸಬಹುದು ಎನ್ನುವುದಾಗಿ ಕನಸು ಕಂಡಿದ್ದರು. ತಂದೆಯ ಪ್ರೀತಿ ಕಾಣದ ಮಗಳಾಗಿರುವ ಗೌತಮಿಯನ್ನು ಗೋವಿಂದಪ್ಪ ಅತ್ಯಂತ ಪ್ರೀತಿಯಿಂದ ಸಾಕಿದ ಹೀಗಾಗಿ ತನ್ನ ಗಂಡನ ಮನೆಯಲ್ಲಿ ಕೂಡ ಹಾಕಿ ಸುಖವಾಗಿ ಬಾಳುತ್ತಾಳೆ ಎಂಬುದು ಅವರ ಕನಸಾಗಿತ್ತು.

ಗಂಡನ ಮನೆಯಲ್ಲಿ ಕೂಡ ಚಂದ್ರಶೇಖರ್ (Chandrasekar) ಗೌತಮಿಯನ್ನು ಅತ್ಯಂತ ಪ್ರೀತಿಯಿಂದ ಕಾವ್ಯ ಎಂದು ಕರೆಯುತ್ತಿದ್ದ ಹೀಗಾಗಿ ಇವರ ಪ್ರೀತಿಯ ಫಲವಾಗಿ ಹೆಣ್ಣು ಮಗು ಒಂದು ಜನಿಸಿತು. ಆದರೆ ಇದರ ನಡುವಲ್ಲಿ ಆತ ಹೆಂಡತಿ ಮನೆಯಿಂದ ವರದಕ್ಷಿಣೆ ಬೇಕು ಎನ್ನುವುದಾಗಿ ಆಕೆಗೆ ಕಿರು’ ಕುಳ ನೀಡಲು ಪ್ರಾರಂಭಿಸಿದ್ದಾನೆ. ಆಗ ಗೋವಿಂದಪ್ಪ ಚೀಟಿಯಿಂದ ಬಂದ ಹಣದಲ್ಲಿ ನಿನಗೆ ಎರಡು ಲಕ್ಷ ರೂಪಾಯಿ ನೀಡುತ್ತೇನೆ ಎಂಬುದಾಗಿ ಹೇಳಿದ್ದ.

ಆದರೆ ದುರದೃಷ್ಟವಶಾತ್ ಎನ್ನುವಂತೆ ಆ ಹಣ ಕೂಡ ಸಿಗಲಿಲ್ಲ. ಈ ಕಡೆ ಚಂದ್ರಶೇಖರ್ ಕೂಡ ಗೌತಮಿಯನ್ನು ಇನ್ನಿಲ್ಲದಂತೆ ಕಾಡಲು ಪ್ರಾರಂಭಿಸುತ್ತಾನೆ. ಆದರೆ ಸಡನ್ನಾಗಿ ಇತ್ತೀಚಿಗಷ್ಟೇ ಅಂದರೆ ಮಾರ್ಚ್ 10ನೇ ತಾರೀಖಿನಂದು ಪೊಲೀಸ್ ಸ್ಟೇಷನ್ ಗೆ ಹೋಗಿ ಚಂದ್ರಶೇಖರ್ ತನ್ನ ಹೆಂಡತಿ ಆತ್ಮಹ’ ತ್ಯೆ ಮಾಡಿಕೊಂಡಿದ್ದಾಳೆ ಎಂಬ ಹೇಳಿಕೆಯನ್ನು ದಾಖಲಿಸಿದ್ದಾನೆ.

ಇದನ್ನೂ ಓದಿ..Bike Price Hike: ಬೈಕ್ ಖರೀದಿಸೋ ಗ್ರಾಹಕರಿಗೆ ಬಿಗ್ ಶಾ’ಕ್ ಏಪ್ರಿಲ್ ತಿಂಗಳಿಂದ ಜಾಸ್ತಿ ಆಗಲಿದೆ ಈ ಬೈಕ್ ಗಳ ಬೆಲೆ

ಇದನ್ನು ತಿಳಿದ ಗೋವಿಂದಪ್ಪ ತನ್ನ ಅಳಿಯನೇ ತನ್ನ ಮಗಳನ್ನು ವರದಕ್ಷಿಣೆಗಾಗಿ ಮುಗಿಸಿದ್ದಾನೆ ಎಂಬುದಾಗಿ ಹೇಳಿದ್ದಾರೆ. ಆದರೆ ಪೊಲೀಸರು ಈ ಕುರಿತಂತೆ ಗಮನವಹಿಸದ ಕಾರಣ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿ ಧರಣಿಗೆ ಕೂತಿದ್ದರು. ಈಗ ಡಿವೈಎಸ್ಪಿ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದ್ದು ಗೋವಿಂದಪ್ಪ ಧರಣಿಯನ್ನು ಹಿಂತೆಗೆದುಕೊಂಡು ತಮ್ಮ ಮಗಳ ಸಾ’ ವಿಗೆ ನ್ಯಾಯವನ್ನು ಕೇಳುತ್ತಿದ್ದಾರೆ.

Leave A Reply

Your email address will not be published.