ಬಹುದಿನದ ನಂತರ ಸಿಹಿಸುದ್ದಿ ಕೊಟ್ಟ ನಟ ವಿನೋದ್ ರಾಜ್

0 0

ವಿನೋದ್ ರಾಜ್ ಕನ್ನಡ ಚಿತ್ರರಂಗದ ನಾಯಕ ನಟರಲ್ಲಿ ಒಬ್ಬರು. ಖ್ಯಾತ ನಟಿ ಡಾ.ಲೀಲಾವತಿ ಅವರ ಪುತ್ರ. ಡ್ಯಾನ್ಸ್ ರಾಜಾ ಡ್ಯಾನ್ಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಕೃಷ್ಣಾ ನೀ ಕುಣಿದಾಗ, ಕಾಲೇಜ್ ಹೀರೋ, ನಂಜುಂಡ, ಮಹಾಭಾರತ, ಶ್ರೀ ವೆಂಕಟೇಶ್ವರ ಮಹಿಮೆ, ನನಗೂ ಹೆಂಡ್ತಿ ಬೇಕು, ಯುದ್ಧಪರ್ವ, ನಾಯಕ, ಬನ್ನಿ ಒಂದ್ಸಲ ನೋಡಿ, ಗಿಳಿ ಬೇಟೆ, ಕ್ಯಾಪ್ಟನ್, ಬೊಂಬಾಟ್ ರಾಜ ಬಂಡಲ್ ರಾಣಿ, ರಂಭಾ ರಾಜ್ಯದಲ್ಲಿ ರೌಡಿ, ರಾಜಣ್ಣ, ದಳವಾಯಿ, ಸ್ನೇಹಲೋಕ, ಓಂ ಶಕ್ತಿ, ಬ್ರಹ್ಮ ವಿಷ್ಣು, ವಂದೇ ಮಾತರಂ, ರಾಷ್ಟ್ರಗೀತೆ, ಶ್ರೀ ಮಂಜುನಾಥ, ನಮ್ಮ ಸಂಸಾರ ಆನಂದ ಸಾಗರ, ಪಾಂಡವ, ಕನ್ನಡದ ಕಂದ, ಶುಕ್ರ, ಯಾರದು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇಷ್ಟೆಲ್ಲಾ ಕನ್ನಡದ ಚಿತ್ರಗಳಲ್ಲಿ ನಟನೆ ಮಾಡಿದ ವಿನೋದ್ ರಾಜ್ ಅವರು ಇಷ್ಟು ವರ್ಷಗಳ ಕಾಲ ನಟನೆಯಿಂದ ಹಾಗೂ ಡ್ಯಾನ್ಸ್ ನಿಂದಾ ಕೂಡಾ ದೂರ ಇದ್ದು ಈಗ ಒಂದು ಸಿಹಿ ಸುದ್ಧಿಯನ್ನು ನೀಡಿದ್ದಾರೆ. ಅದೇನು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಎಂಬತ್ತರ ದಶಕದ ಕನ್ನಡದ ಮೈಕಲ್ ಜಾಕ್ಸನ್ ಎಂದೇ ಪ್ರಸಿದ್ಧಿ ಪಡೆದ ಅಂದಿನ ಯುವ ನಟ ವಿನೋದ್ ರಾಜ್ ಅವರನ್ನ ಎಲ್ಲರೂ ಇಂದಿಗೂ ಹೆಚ್ಚು ಇಷ್ಟಪಡುತ್ತಾರೆ. ಮತ್ತು ಅವರ ಸರಳತೆ ಎಲ್ಲರಿಗೂ ಕೂಡ ಅಚ್ಚುಮೆಚ್ಚು ಎಂದೇ ಹೇಳಬಹುದು. ಅಂದಹಾಗೆ ಈ ಲೇಖನದಲ್ಲಿ ನಾವು ನಿಮಗೆ ವಿನೋದ್ ರಾಜ್ ಅವರ ಬಗ್ಗೆ ಒಂದು ವಿಚಾರವನ್ನು ಹೇಳಲು ಇಚ್ಚಿಸುತ್ತೇವೆ. ಇತ್ತೀಚೆಗೆ ಮಾಧ್ಯಗಳ ಮೂಲಕ ತಿಳಿದು ಬಂದ ವಿಷಯ ಎಂದರೆ ನಟ ವಿನೋದ್ ರಾಜ್ ಅವರು 2021ರಲ್ಲಿ ಭಾರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ನಮಗೆಲ್ಲ ತಿಳಿದಿರುವಂತೆ ವಿನೋದ್ ರಾಜ್ ಒಬ್ಬ ಅತ್ಯುತ್ತಮ ಡ್ಯಾನ್ಸರ್. ಆದರೆ ಇವರಿಗೆ ಇಂದಿಗೂ ಕೂಡ ಯಾವುದೇ ಕನ್ನಡ ವಾಹಿನಿಗಳ ಡ್ಯಾನ್ಸ್ ಪ್ರೋಗ್ರಾಮ್ ಗಳಲ್ಲಿ ಜಡ್ಜ್ ಆಗಿ ಆಯ್ಕೆ ಮಾಡಿಲ್ಲ ಎನ್ನುವುದು ಅಭಿಮಾನಿಗಳ ಬೇಸರ.

ಹಾಗೆ ಡ್ಯಾನ್ಸ್ ಬಗ್ಗೆ ಗಂಧಗಾಳಿ ಗೊತ್ತಿಲ್ಲದವರನ್ನು ಪ್ರೋಗ್ರಾಮ್ ಗೆ ಕರೆ ತಂದು ನೃತ್ಯದ ಕಾರ್ಯಕ್ರಮದಲ್ಲಿ ಕೂರಿಸುವ ಬದಲು, ನಟ ವಿನೋದ್ ರಾಜ್ ಅವರನ್ನು ನಿಮ್ಮ ಶೋಗೆ ಕರೆತನ್ನಿ ಎಂದು ಇಂದಿಗೂ ಕೂಡ ಸಾಕಷ್ಟು ಅಭಿಮಾನಿಗಳು ಹಾಗೂ ಕನ್ನಡದ ಜನತೆ ಆಗ್ರಹಿಸುತ್ತಿದ್ದಾರೆ. ಇದರ ನಡುವೆ ಎಸ್ ಕೆ ಬ್ಯಾನರಡಿಯಲಿ ಬರುತ್ತಿರುವ ಮುಖವಾಡ ಎಂಬ ಹೊಸ ಸಿನಿಮಾ ತಂಡವು ನಟ ವಿನೋದ್ ರಾಜ್ ಅವರನ್ನು ತಮ್ಮ ಸಿನಿಮಾದಲ್ಲಿ ಅಭಿನಯಿಸಲಿಕ್ಕೆ ಅವಕಾಶ ಕೊಟ್ಟಿದೆಯಂತೆ. ಹಾಗೂ ತಮ್ಮ ಸಿನಿಮಾದಲ್ಲಿ ಅಭಿನಯ ಮಾಡಿ ಸರ್ ಎಂದು ಮುಖವಾಡ ಚಿತ್ರ ತಂಡದವರು ಮನವಿಯನ್ನು ಕೂಡ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಖುಷಿಯ ವಿಚಾರ ವಿನೋದ್ ರಾಜ್ ಅವರ ತಾಯಿ ಲೀಲಾವತಿಯವರಿಗೆ ಸಂತಸದ ವಿಷಯವಾಗಿದೆ ಎಂದೇ ಹೇಳಬಹುದು. ಹಾಗೆ ತಮ್ಮ ಆಸೆ ಈಡೇರಿದಂತೆ ಆಯಿತು ಎಂದು ಹೇಳಿಕೊಂಡಿದ್ದಾರೆ.

ವಿನೋದ್ ರಾಜ್ ಅವರು ಮುಖವಾಡ ಸಿನಿಮಾದಲ್ಲಿ ಅಭಿನಯ ಮಾಡುತ್ತಾರೋ ಇಲ್ಲವೋ ಎಂಬುದು ಇನ್ನು ತಿಳಿದು ಬಂದಿಲ್ಲ, ಆದ್ರೆ ಚಿತ್ರತಂಡ ಹೇಳುವ ಹಾಗೆ ನಟ ವಿನೋದ್ ರಾಜ್ ಅವರ ಉತ್ತರವನ್ನು ಕಾಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಕನ್ನಡ ಜನತೆ ಯಾವುದಾದರೂ ಟಿವಿ ರಿಯಾಲಿಟಿ ಶೋನಲ್ಲಿ ವಿನೋದ್ ರಾಜ್ ಅವರನ್ನು ಜಡ್ಜ್ ಆಗಿ ಕರೆತನ್ನಿ ಎಂದು ಹೇಳಿದರೂ ಪ್ರಯೋಜನ ಆಗಿರಲಿಲ್ಲ ಆದರೆ ಈಗ ಎಷ್ಟೋ ವರ್ಷಗಳ ನಂತರ ವಿನೋದ್ ರಾಜ್ ಅವರು ಮತ್ತೆ ಬಣ್ಣ ಹಚ್ಚಿ ಸಿನಿಮಾ ಮಾಡಲಿದ್ದಾರ? ಎನ್ನುವ ಕುತೂಹಲ ಅಂತೂ ಅವರ ಅಭಿಮಾನಿಗಳಲ್ಲಿ, ಕನ್ನಡದ ಜನತೆಯಲ್ಲಿ ಖಂಡಿತ ಇದೆ.

Leave A Reply

Your email address will not be published.