ಸಾಧಿಸುವವನಿಗೆ ಛಲ ಇದ್ರೆ ಖಂಡಿತ ಯಶಸ್ಸು ತನ್ನದಾಗಿಸಿ ಕೊಳ್ಳಬಹುದು ಹಾಗೂ ಅದಕ್ಕೆ ತಕ್ಕ ಪರಿಶ್ರಮ ಇದ್ರೆ ಖಂಡಿತ ಪ್ರತಿಫಲ ಸಿಕ್ಕೇ ಸಿಗುತ್ತದೆ ಅನ್ನೋದನ್ನ ಈ ವ್ಯಕ್ತಿ ಒಂದು ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೆ ಇಲ್ಲದ ಇವರು ಇಂದು 3,300 ಕೋಟಿ ಸಂಪಾದನೆ ಮಾಡುವ ಮೂಲಕ ಸಾಧನೆ ಮಾಡಿ ತೋರಿಸಿದ್ದಾರೆ. ಅಷ್ಟೇ ಅಲ್ಲದೆ ಸಾಧನೆ ಅನ್ನೋದು ಬರಿ ಶ್ರೀಮಂತರಿಗೆ ಅಷ್ಟೇ ಅಲ್ಲ ಬಡವ ಕೂಡಾ ಸಾಧನೆ ಮಾಡಿ ಶ್ರೀಮಂತ ಕೂಡಾ ಆಗಬಹದು ಎನ್ನುವುದನ್ನು ಇವರು ತೋರಿಸಿದ್ದಾರೆ. ಹಾಗಿದ್ದರೆ ಆ ವ್ಯಕ್ತಿ ಯಾರು? ಅವರು ಮಾಡಿದ ಸಾಧನೆ ಆದರೂ ಏನು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮನುಷ್ಯನಿಗೆ ಸಾದಿಸುವ ಛಲ ಹಾಗೂ ಶ್ರಮ ಇದ್ರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ ತಾಳ್ಮೆ ಇರಬೇಕು ಅಷ್ಟೇ. ಒಂದು ಕಾಲದಲ್ಲಿ ಶಾಲೆಯ ಊಟಕ್ಕೆ ಸ್ಲೇಟ್ ಹಿಡಿದು ಊಟ ಮಾಡಿದ ವ್ಯಕ್ತಿ ಈಗ ಸಾವಿರಾರು ಕೋಟಿಯ ಆಸ್ತಿ ಒಡೆಯ. ಇವರ ಹೆಸರು ಅರೋಕಿಸ್ವಾಮಿ ವೆಲುಮಣಿ ಎಂದು ಈಗ ಇವರು ಕಷ್ಟ ಪಟ್ಟು ಬೆಳೆದು ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ತಾವೂ ಒಬ್ಬರಾಗಿ ನಿಂತ್ತಿದ್ದಾರೆ. ಒಂದು ಕೈಯ್ಯಲ್ಲಿ ಸ್ಲೇಟ್ ಮತ್ತೊಂದು ಕೈಯಲ್ಲಿ ಒಂದು ಪ್ಲೇಟ್ ಎನ್ನುವ ಈ ಒಂದು ಮಾತನ್ನು ನೆನಪಿನಲ್ಲಿಟ್ಟುಕೊಂಡು ವಿಶ್ವದ ಅತಿದೊಡ್ಡ ಥೈರಾಯ್ಡ್ ಪರೀಕ್ಷಾ ಪ್ರಯೋಗಾಲಯವನ್ನು ಪ್ರಾರಂಭಿಸಿ 3,300 ಕೋಟಿ ರೂಪಾಯಿ ವಹಿವಾಟು ಮಾಡುತ್ತಿರುವ ವೇಲುಮಣಿ ಸ್ವತಹ ತಮ್ಮ ಸಾಧನೆಯ ಬಗ್ಗೆ ತಿಳಿಸಿದ್ದಾರೆ. ಅವರು ತಮ್ಮ ಸಾಧನೆಯ ಬಗ್ಗೆ ಏನು ಹೇಳಿದ್ದಾರೆ ಎನ್ನುವುದನ್ನು ನೋಡೋಣ.

ಎರಡು ಹೊತ್ತಿನ ಊಟವು ದುಬಾರಿಯಾದ ಕುಟುಂಬ ನಮ್ಮದು ಬಾಲ್ಯದಲ್ಲಿ ನಮಗೆ ತಿನ್ನಲು ಊಟದ ಸವಲತ್ತು ಕೂಡ ಇರಲಿಲ್ಲ ಹಾಕಲು ಬಟ್ಟೆಗಳು ಕೂಡ ಸರಿಯಾಗಿ ಇರಲಿಲ್ಲ, ಎಂದು TEDx ಸಮಾವೇಶದಲ್ಲಿ ಮಾತನಾಡುತ್ತಾ ನಾನು ಬಡತನದಲ್ಲಿ ಬೆಳೆದುಬಂದು ಯಶಸ್ಸನ್ನು ಗಳಿಸಿದ್ದೇನೆ. ತಮಿಳು ನಾಡಿನ ಕೊಯಮತ್ತೂರಿನಲ್ಲಿ 7 ಜನರು ಇರುವ ಕುಟುಂಬದಲ್ಲಿ ಏಪ್ರಿಲ್ 1959 ರಲ್ಲಿ ಸ್ವಂತ ಭೂಮಿ ಕೂಡಾ ಇಲ್ಲದಿರುವ ರೈತರ ಮನೆಯಲ್ಲಿ ಜನಿಸಿದ ಇವರು ಆಗ ಇವರ ತಂದೆಗೆ ಮನೆಯನ್ನು ನಿಭಾಯಿಸಲು ಕೂಡ ಕಷ್ಟವಾಗಿತ್ತು. ತನ್ನ ತಾಯಿ ಎರಡು ಎಮ್ಮೆಗಳನ್ನು ಸಾಕಿ ವಾರಕ್ಕೆ 50 ರೂಪಾಯಿ ಗಳಿಸುತ್ತಿದ್ದರು ಅದರಿಂದ ಮನೆ ನಡೆಯುತ್ತಿತ್ತು. ತನಗೆ ಒಂದು ಜೋಡಿ ಚಪಲ್ಲಿ ಕೊಡಿಸಲು ಸಹ ಆಗುತ್ತಿರಲಿಲ್ಲ ಅಷ್ಟೊಂದು ಕಡು ಬಡತನ ನಮ್ಮದು, ಶಾಲೆಯಲ್ಲಿ ಸಿಗುವ ಊಟದ ಆಸೆಗೆ ಶಾಲೆಯ ಮೆಟ್ಟಿಲು ಹತ್ತುತ್ತಿದೆ ಅದೇ ನನಗೆ ಜೀವನ ಕಲಿಸಿತು. ನಂತರ ಬಿಎಸ್ಸಿ ಪದವಿ ಪಡೆದು ಕೊಯಮತ್ತೂರಿನಲ್ಲಿ ಸಣ್ಣ ಔಷಧೀ ಕಂಪೆನಿಯನ್ನು ಸೇರಿಕೊಂಡೆ ಆಗ ನನಗೆ 150 ರೂಪಾಯಿ ಸಂಬಳ ವಿತ್ತು 3 ವರ್ಷದಲ್ಲಿ ಆ ಕಂಪನಿ ಮುಚ್ಚಿಕೊಂಡಿತು. ನಂತರ 3 ವರ್ಷಗಳು ಕೆಲಸವಿಲ್ಲದೇ ತಿರುಗುವ ಪರಿಸ್ಥಿತಿ ಬಂದಿತ್ತು.

ನಂತರ ಪ್ರತಿಷ್ಠಿತ ಭಭಾ ಅಟಾಮಿಕ್ ಸಂಶೋಧನಾ ಕೇಂದ್ರದಲ್ಲಿ ಕೆಲಸ ದೊರೆಯಿತು. ಇಲ್ಲಿ ವೃತ್ತಿಯ ಜೊತೆಗೆ ಹೆಚ್ಚಿನ ಸಂಶೋಧನೆ ಮಾಡಲು ಸಾಧ್ಯವಾಗಿತು. ಇದರಿಂದ ಥೈರಾಯ್ಡ್ ಜೀವರಸಾಯನಶಾಸ್ತ್ರದಲ್ಲಿ P.HD ಪದವಿಯನ್ನು ಪಡೆದುಕೊಂಡರು ನಂತರ ಇವರ ಶ್ರದ್ಧೆ ಮತ್ತು ಗಮನದಿಂದ “1982 ರಲ್ಲಿ ಥೈರಾಯಿಡ್ ಗ್ರಂಥಿ ಎಲ್ಲಿದೆ ಎಂದು ತಿಳಿದಿರದ ಇವರಿಗೆ 1995 ರ ಹೊತ್ತಿಗೆ ಥೈರಾಯ್ಡ್ ಜೀವರಸಾಯನಶಾಸ್ತ್ರದಲ್ಲಿ ಪದವಿಯನ್ನು ಪಡೆದುಕೊಳ್ಳುತ್ತಾರೆ. ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ಸುಮತಿ ಅವರನ್ನು ಮದುವೆಯಾದರು ಸ್ವಲ್ಪ ದಿನಗಳ ನಂತರ ಸ್ವಂತ ಥೈರಾಯಿಡ್ ಪ್ರಯೋಗಾಲಯವನ್ನು ಪ್ರಾರಂಭಿಸುವ ಯೋಚನೆಯಲ್ಲಿ ಸುಮತಿ ಕೆಲಸ ಬಿಡಲು ತಿಳಿಸಿದೆ. ಸುಮತಿ ಈಗಾಗಲೇ 14 ವರ್ಷಗಳು ಬ್ಯಾಂಕ್-ನಲ್ಲಿ ಕೆಲಸ ಮಾಡಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ಪ್ರಾವಿಡೆಂಟ್ ನಿಧಿಯಿಂದ 2 ಲಕ್ಷ ರೂಪಾಯಿ ಹೂಡಿಕೆಯೊಂದಿಗೆ ಅವರು ಥೈರೋರೆರ್ ಅನ್ನು ಪ್ರಾರಂಭಿಸಿದರು.

ಆರಂಭದಲ್ಲಿ, ಈ ಕಂಪನಿ ಥೈರೊಡೈರ್ ಥೈರಾಯಿಡ್-ಸಂಬಂಧಿತ ಅಸ್ವಸ್ಥತೆಗಳ ರೋಗನಿರ್ಣಯದ ಮೇಲೆ ಗಮನ ಕೇಂದ್ರೀಕರಿಸಲ್ಪಟ್ಟಿತು. ನಂತರ ಕಂಪನಿಯು ಬೆಳದಂತೆ ಡೊಮೇನ್ ಮಧುಮೇಹ, ಬಂಜೆತನ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಲೈಂ,ಗಿಕವಾಗಿ ಹರಡುವ ರೋಗಗಳು ಪತ್ತೆಹಚ್ಚುವ ಪ್ರಯೋಗಾಲಯವನ್ನು ವಿಸ್ತರಿಸಿದರು. ಎರಡು ವರ್ಷಗಳ ಹಿಂದೆ ಕಂಪನಿ 3,415 ಕೋಟಿ ರೂಪಾಯಿ ಮೌಲ್ಯದ ಔಷಧಿ ಮಾರುಕಟ್ಟೆಗೆ ತಲುಪಿದೆ. ಇದು ಭಾರತದ ತುಂಬೆಲ್ಲ ನೇಪಾಳ, ಬಾಂಗ್ಲಾದೇಶ, ಮಧ್ಯಪ್ರದೇಶ ಸೇರಿದಂತೆ 1,250 ಕೇಂದ್ರಗಳನ್ನು ಹೊಂದಿದೆ. ಕಂಪನಿ ಒಂದು ವರ್ಷಕ್ಕೆ ಈಗ 30 ಮಿಲಿಯನ್ ರೋಗನಿರ್ಣಯ ಪರೀಕ್ಷೆಗಳನ್ನು ಮಾಡುತ್ತಿದೆ. ಈ ಸಾಧನೆಗೆ ಬೆನ್ನೆಲಬು ಆದ ವೇಲುಮಣಿ ಪತಿ ಸುಮತಿ ಫೆಬ್ರವರಿ 2016 ರಲ್ಲಿ ಕ್ಯಾನ್ಸರ್ ರೋಗಗಕ್ಕೆ ತುತ್ತಾಗಿ ಈಗ ತಮ್ಮ ಮಕ್ಕಳ ಜೊತೆಯಲ್ಲಿ ಜೀವನ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *