ಒಬ್ಬ ವ್ಯಕ್ತಿ ಯಶಸ್ಸಿನ ಹಾದಿಯನ್ನು ಮೆಟ್ಟಿದ್ದಾನೆ ಹಾಗೂ ತಾನು ಅಂದು ಕೊಂಡಿದ್ದನ್ನು ಸಾಧಿಸಿದ್ದಾನೆ ಅಂದಾಗಲೇ ಅವನ ಜೀವನ ಚರಿತ್ರೆ ಎಲ್ಲರಿಗೂ ತಿಳಿಯೋದು ಪ್ರತಿ ಯಶಸ್ಸಿನ ಪುರುಷನ ಹಿಂದೆ ಕಷ್ಟದ ಜೀವನಗಳು ಇದ್ದೆ ಇರುತ್ತದೆ ಅನ್ನೋದಕ್ಕೆ ಹಲವು ಉದಾಹರಣೆಗಳಿವೆ. ಅದೇ ಸಾಲಿನಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ತಂದೆಯವರ ಜೊತೆಗೆ ಬಿಡುವಿನ ವೇಳೆ ವಿಳ್ಳೇದೆಲೆ ಅಡಿಕೆ ವ್ಯಾಪಾರ ಮಾಡಿ ತಂದೆ ತಾಯಿಗಳಿಗೆ ಅಸರೆಯಾಗುತ್ತಿದ್ದ ವ್ಯಕ್ತಿ ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಿದ್ದಾರೆ, ಅಷ್ಟಕ್ಕೂ ಇವರ ಯಶಸ್ಸಿನ ಹಾದಿ ಹೇಗಿತ್ತು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ.

ಆತ್ಮೀಯ ಓದುಗರೇ ಇವರ ಹೆಸರು ಟಿ.ಎಸ್ ದಿವಾಕರ್ ಎಂಬುದಾಗಿ ತಿಪಟೂರಿನವರು 2016 ನೇ ಸಾಲಿನಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 600 ನೇ ರ‍್ಯಾಂಕ್ ಪಡೆದಿದ್ದಾರೆ. ಇದು ಮೊದಲ ಪ್ರಯತ್ನದಲ್ಲಿ ಅಲ್ಲದೆ ಇದ್ದರು ಕೂಡ ಈ ಹಿಂದೆ ಇವರು ಯು.ಪಿ.ಎಸ್.ಸಿ ಪರೀಕ್ಷೆ ಬರೆದಿದ್ದರು. ಅದರಲ್ಲಿ ಕೇವಲ 19 ಅಂಕಗಳಿಂದ ಅನುತ್ತೀರ್ಣರಾಗಿದ್ದರು. ಕುಗ್ಗದೆ ಮತ್ತೊಮ್ಮೆ ಪ್ರಯತ್ನದಲ್ಲಿ ಸಫಲರಾಗಿದ್ದಾರೆ

ಇವರ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದಾದರೆ ಇವರು ಓದಿದ್ದು ಕಂಪ್ಯೂಟರ್ ಎಂಜಿನಿಯರಿಂಗ್‌ ಇವರ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಹೈದ್ರಾಬಾದ್ ನ ಖಾಸಗಿ ಕಂಪನಿಯಲ್ಲಿ ಇಂಜಿನಿಯರಿಂಗ್ ಕೆಲಸ ಸಿಕ್ಕಿತು ಆದ್ರೆ ಇದರಿಂದ ನಾನು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ಕೊಡುವುದಕ್ಕೆ ಆಗೋದಿಲ್ಲ ನಾಲ್ಕು ಜನರಿಗೆ ನನ್ನಿಂದ ಒಳ್ಳೆಯ ಕೆಲಸ ಆಗಬೇಕು ಅನ್ನೋ ಉದ್ದೇಶದಿಂದ ಕೆಲಸ ಬಿಟ್ಟು ಹುನ್ನತ ಉದ್ಧೆಯನ್ನು ಸ್ವೀಕರಿಸಬೇಕು ಅನ್ನೋ ಛಲದೊಂದಿಗೆ ಮನೆಯಲ್ಲಿ ತಂದೆ ತಾಯಿಗಳ ಜೊತೆಗೆ ಅವರ ಆಸರೆಯಾಗಿ ಯಾವುದೇ ಕೋಚಿಂಗ್ ಹೋಗದೆ ಮನೆಯಲ್ಲೇ ಓದಿ UPSCಪರೀಕ್ಷೆಗೆ ತಯಾರಿ ನಡೆಸಿ ಇಂದಿನ ದಿನಗಳಲ್ಲಿ ರ‍್ಯಾಂಕ್ ಪಡೆದಿದ್ದಾರೆ. ಇವರ ಮನೆಯವರು ತನ್ನ ತಾತನ ಕಾಲದಿಂದಲೂ ಕೂಡ ವಿಳ್ಳೇದೆಲೆ ಅಡಿಕೆ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು ಇಂದು ಕೂಡ ಈ ವೃತ್ತಿಯನ್ನೇ ಮುಂದುವರೆಸಿದ್ದಾರೆ, ಇವರ ಯಶಸ್ಸಿಗೆ ತನ್ನ ತಂದೆ ತಾಯಿಗಳೇ ಬೆನ್ನೆಲುಬಾಗಿ ನಿಂತಿದ್ದಾರೆ.

ಹೌದು ಇವರ ಯಶಸ್ಸಿನ ಹಾದಿ ಅಷ್ಟೊಂದು ಸುಲಭವಾಗಿಲ್ಲದಿದ್ದರು ಕಠಿಣ ಶ್ರಮ ಹಾಗೂ ಛಲದಿಂದ ಅದನ್ನು ಸುಲಭ ಮಾಡಿಕೊಂಡಿದ್ದಾರೆ.ಅದೇನೇ ಇರಲಿ ಸಾಧಿಸುವವನಿಗೆ ಛಲದ ಜೊತೆಗೆ ಕಠಿಣ ಶ್ರಮ ಇದ್ದರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ ಅನ್ನೋದಕ್ಕೆ ಇವರು ಉತ್ತಮ ಉದಾಹರಣೆ ಅನ್ನಬಹುದು. ಅದೇನೇ ಇರಲಿ ಯಶಸ್ಸು ಅನ್ನೋದು ಅಷ್ಟೊಂದು ಸುಲಭವಾಗಿ ಯಾರಿಗೂ ದಕ್ಕುವುದಿಲ್ಲ ಪರಿಶ್ರಮ ಸತತ ಪ್ರಯತ್ನ ಇದ್ರೆ ಖಂಡಿತ ಯೆಸುಹಾಸಿನ ದಾರಿ ಸುಲಭವಾಗುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *