ಜೀವನದಲ್ಲಿ ಒಳ್ಳೆ ಸಮಯ ಬರುವ ಮುನ್ನ ಈ 5 ಸೂಚನೆಗಳನ್ನು ನೀಡುತ್ತೆ ತುಳಸಿ ಗಿಡ

0 2,297

Tulasi Pant Vastu in Home: ನಮ್ಮ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಅದರಲ್ಲೂ ಭಗವಾನ್ ಶ್ರೀಕೃಷ್ಣನಿಗೆ ತುಳಸಿ ಗಿಡ ಬಹಳ ಇಷ್ಟವಾದದ್ದು, ತುಳಸಿ ಇಲ್ಲದೆ ಕೃಷ್ಣ ಯಾವ ಪ್ರಸಾರವನ್ನು ಸ್ವೀಕರಿಸುವುದಿಲ್ಲ. ಶ್ರೀಕೃಷ್ಣನೇ ಹೇಳಿರುವ ಹಾಗೆ, ಪ್ರತಿದಿನ ತುಳಸಿಗೆ ಯಾರು ಪೂಜೆ ಮಾಡುತ್ತಾರೋ ಅವರ ಬದುಕಿನಲ್ಲಿ ಯಾವುದೇ ಕಷ್ಟ ಬರುವುದಿಲ್ಲ. ತುಳಸಿದಳವನ್ನು ಸೇವನೆ ಮಾಡುವವರಿಗೆ ಜೀವನದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ತುಳಸಿಗೆ ಎಲ್ಲಾ ಥರದ ರೋಗಗಳನ್ನು ಗುಣ ಮಾಡುವ ಸಾಮರ್ಥ್ಯ ಇದೆ.

ತುಳಸಿ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಿದರೆ ನಿಮ್ಮ ಮನೆಗೆ ಯಾವುದೇ ನೆಗಟಿವ್ ಎನರ್ಜಿ ಬರುವುದಿಲ್ಲ. ಮನೆಯ ಒಳಗೆ ಯಾವಾಗಲೂ ಪಾಸಿಟಿವಿಟಿ ಇರುವ ಹಾಗೆ ಮಾಡುತ್ತದೆ. ಲಕ್ಷ್ಮೀದೇವಿ ನಿಮ್ಮ ಮನೆಗೆ ಆಗಮಿಸುತ್ತಿರುವ ವೇಳೆ ಕೂಡ ತುಳಸಿ ಗಿಡದ ಮೂಲಕ ನಿಮಗೆ ಸೂಚನೆ ಸಿಗುತ್ತದೆ. ಹಾಗಿದ್ದಲ್ಲಿ, ತುಳಸಿಗೆ ನೀರು ಹಾಕುವಾಗ ನೀವು ಗಮನಿಸಬೇಕಾದ ಅಂಶಗಳು ಯಾವ್ಯಾವು ಎಂದು ತಿಳಿಸುತ್ತೇವೆ ನೋಡಿ..

ಮೊದಲನೆಯದಾಗಿ: ಒಂದು ವೇಳೆ ನಿಮ್ಮ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ತುಳಸಿ ಗಿಡ ಒಣಗುವುದಕ್ಕೆ ಶುರು ಮಾಡಿದರೆ, ಅದರಿಂದ ಸಿಗುವ ಸೂಚನೆ ನಿಮಗೆ ಶೀಘ್ರದಲ್ಲೇ ಹೆಚ್ಚಿನ ಖರ್ಚು ಬೀಳುತ್ತದೆ ಮತ್ತು ಯಾವುದೋ ಒಂದು ರೀತಿಯಲ್ಲಿ ಕಷ್ಟಗಳು ಬರುತ್ತದೆ ಎನ್ನುವುದಾಗಿದೆ. ಹಾಗೆಯೇ ನಿಮಗೆ ಹೆಚ್ಚು ಹಣ ಖರ್ಚಾಗುತ್ತದೆ ಎನ್ನುವುದನ್ನು ಕೂಡ ಸೂಚಿಸುತ್ತದೆ..

Tulasi Pant Vastu in Home

ಎರಡನೆಯದಾಗಿ: ತುಳಸಿ ಗಿಡದ ಎಲೆಗಳು ಒಣಗಿ, ಹಳದಿ ಬಣ್ಣಕ್ಕೆ ತಿರುಗಿ ಬೀಳುವುದಕ್ಕೆ ಶುರುವಾದರೆ, ಅದರಿಂದ ನಿಮಗೆ ಯಾವುದೇ ತೊಂದರೆ ಅಥವಾ ಸಮಸ್ಯೆ ಉಂಟಾಗುವುದಿಲ್ಲ., ಗಾಳಿಗೆ ಎಲೆ ಬಿದ್ದಿರುತ್ತದೆ. ನೀವು ಗಾಬರಿ ಪಡಬೇಡಿ. ಸಂಜೆ ಸಮಯದಲ್ಲಿ ತುಳಸಿ ಗಿಡದ ಬಳಿ ತುಪ್ಪದ ದೀಪ ಹಚ್ಚಿರಿ, ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ಜಗಳ ನಡೆಯುವುದಿಲ್ಲ.

ಮೂರನೆಯದಾಗಿ: ಒಂದು ವೇಳೆ ನಿಮ್ಮ ಮನೆಯ ತುಳಸಿ ಗಿಡದ ಪಕ್ಕದಲ್ಲೇ ಬೇರೆ ಗಿಡಗಳು ಹುಟ್ಟುತ್ತಿದ್ದರೆ, ಅದು ಮನೆಗೆ ಶಾಂತಿ, ಸಮೃದ್ಧಿಯ ಪ್ರವೇಶ ಆಗುತ್ತದೆ ಎನ್ನುವುದರ ಸಂಕೇತ ಆಗಿದೆ. ತುಳಸಿ ಕೊಡುವ ಈ ಸೂಚನೆ ಇಂದ ನೀವು ಬಿಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ. ನಿಮಗೆ ಮುಂದೆ ಒಳ್ಳೆಯದಾಗುತ್ತೋ ಕೆಟ್ಟದ್ದಾಗುತ್ತೋ ಎನ್ನುವುದು ತುಳಸಿ ಗಿಡದಿಂದ ಮೊದಲೇ ಗೊತ್ತಾಗುತ್ತದೆ.

ನಾಲ್ಕನೆಯದಾಗಿ: ಒಂದು ವೇಳೆ ನಿಮ್ಮ ಮನೆಯ ತುಳಸಿ ಗಿಡದ ಹತ್ತಿರ ನೀವು ಕ್ಲೀನ್ ಮಾಡಿದ್ದರು ಕೂಡ, ಜೇಡರ ಹುಳಗಳು ಬಂದಿವೆ ಎಂದರೆ, ಅದರಿಂದ ಗಿಡ ಹಾಳಾಗುತ್ತಿದೆ ಎಂದು ಅರ್ಥ. ಇದರ ಅರ್ಥ ಹೊರಗಿನ ವ್ಯಕ್ತಿಯೊಬ್ಬರು ನಿಮ್ಮ ಬದುಕಿಗೆ ತೊಂದರೆ ಉಂಟು ಮಾಡುತ್ತಾರೆ ಎಂದು.

ಐದನೆಯದಾಗಿ: ಒಂದು ವೇಳೆ ನಿಮ್ಮ ತುಳಸಿ ಗಿಡದ ಮೇಲೆ ಚಿಟ್ಟೆ ಅಥವಾ ಪಕ್ಷಿಗಳು ಕುಳಿತಿದ್ದು, ಆ ನೋಟ ನಿಮಗೆ ಖುಷಿ ತಂದರೆ, ನಿಮಗೆ ಹೆಚ್ಚು ಧನಲಾಭ ಆಗುತ್ತದೆ ಎನ್ನುವುದನ್ನು ಸೂಚಿಸುತ್ತದೆ..ಅಥವಾ ನಿಮ್ಮ ಆಸೆಗಳು ನೆರವೇರುತ್ತದೆ ಎನ್ನುವುದು ಅರ್ಥ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.