Trigrahi yoga 2023: ಮಂಗಳ, ಬುಧ ಹಾಗೂ ಸೂರ್ಯ ಗ್ರಹಗಳ ಸಂಯೋಜನೆಯಿಂದ ತ್ರಿಗ್ರಾಹಿ ಯೋಗ (Trigrahi yoga 2023) ಸೃಷ್ಟಿಯಾಗುತ್ತದೆ ಈ ಯೋಗದ ಪರಿಣಾಮವಾಗಿ ಕೆಲವು ರಾಶಿಗಳಲ್ಲಿ ಜನಿಸಿದವರಿಗೆ ವೃತ್ತಿಜೀವನ, ಆರೋಗ್ಯ ಮೊದಲಾದ ವಿಷಯಗಳಲ್ಲಿ ಒಳ್ಳೆಯದಾಗುತ್ತದೆ ಹಾಗಾದರೆ ತ್ರಿಗ್ರಾಹಿ ಯೋಗದಿಂದ ಪ್ರಯೋಜನ ಪಡೆಯುವ ರಾಶಿಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ

ಡಿಸೆಂಬರ್ 27 ನೇ ತಾರೀಖು ಮಂಗಳ ಗ್ರಹ ಧನುರಾಶಿಯನ್ನು ಪ್ರವೇಶ ಮಾಡುತ್ತಾನೆ, ಸೂರ್ಯ ಮತ್ತು ಬುಧ ಈಗಾಗಲೆ ಧನು ರಾಶಿಯಲ್ಲಿ ಚಲಿಸುತ್ತಿವೆ ತ್ರಿಗ್ರಾಹಿ ಯೋಗ ಉಂಟಾಗಿದೆ ಮೂರು ರಾಜಯೋಗ ಸೃಷ್ಟಿಯಾಗುತ್ತವೆ. ಈ ಯೋಗದಿಂದ ಕೆಲವು ರಾಶಿಗಳಲ್ಲಿ ಜನಿಸಿದವರಿಗೆ ವೃತ್ತಿಜೀವನ, ಹಣಕಾಸು, ಆರೋಗ್ಯದ ವಿಷಯದಲ್ಲಿ ಹೆಚ್ಚು ಪ್ರಯೋಜನವಿದೆ. ಮೇಷ ರಾಶಿಯವರಿಗೆ ತ್ರಿಗ್ರಾಹಿ ಯೋಗ ಅನುಕೂಲ ಫಲಿತಾಂಶವನ್ನು ಕೊಡುತ್ತದೆ. ಹಣಕ್ಕೆ ಸಂಬಂಧಿಸಿದಂತೆ ಇವರ ಯೋಜನೆಗಳು ಯಶಸ್ವಿಯಾಗುತ್ತದೆ. ಪ್ರತಿಯೊಂದು ಕೆಲಸದಲ್ಲಿ ಇವರಿಗೆ ಯಶಸ್ಸು ದೊರೆಯುತ್ತದೆ. ಮೇಷ ರಾಶಿಯವರು ಸಾಹಸ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಪ್ರೇಮ ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು.

ತುಲಾ ರಾಶಿಯಲ್ಲಿ ಜನಿಸಿದವರು ತ್ರಿಗ್ರಾಹಿ ಯೋಗದಿಂದ ಶುಭ ಫಲವನ್ನು ಪಡೆಯುತ್ತಾರೆ. ಇವರು ವೃತ್ತಿ ಹಾಗೂ ಆರ್ಥಿಕ ವಿಷಯದಲ್ಲಿ ಪ್ರಯೋಜನ ಪಡೆಯುತ್ತಾರೆ. ಈ ರಾಶಿಯ ಫ್ರೀಲೆನ್ಸರ್ ಹಾಗೂ ಸ್ವಂತ ಉದ್ಯೋಗ ಮಾಡುವವರು ಲಾಭದ ನಿರೀಕ್ಷೆ ಮಾಡಬಹುದು. ವರ್ಷದ ಕೊನೆಯಲ್ಲಿ ಸಂಗಾತಿಯೊಂದಿಗೆ ಹೊರಗಡೆ ಸುತ್ತಾಡುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ದೊರೆಯುತ್ತದೆ. ವೃಶ್ಚಿಕ ರಾಶಿಯವರಿಗೆ ತ್ರಿಗ್ರಾಹಿ ಯೋಗದಿಂದ ಭೌತಿಕ ಸೌಲಭ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕ ಲಾಭವನ್ನು ಈ ರಾಶಿಯವರು ಪಡೆಯಬಹುದು. ಈ ರಾಶಿಯವರು ಇನ್ನೊಬ್ಬರೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು, ಪ್ರಯಾಣ ಮಾಡುವಾಗ ಇವರು ಎಚ್ಚರಿಕೆಯಿಂದ ಇರಬೇಕು

ಧನು ರಾಶಿಯಲ್ಲಿ ಜನಿಸಿದವರಿಗೆ ತ್ರಿಗ್ರಾಹಿ ಯೋಗದಿಂದ ಅನೇಕ ಪ್ರಯೋಜನಗಳಿವೆ. ಧನು ರಾಶಿಯವರ ಐಷಾರಾಮಿ ಜೀವನವನ್ನು ಹೆಚ್ಚಿಸುತ್ತದೆ ಈ ಸಮಯದಲ್ಲಿ ಧೈರ್ಯ, ಆತ್ಮವಿಶ್ವಾಸ ಹೆಚ್ಚುತ್ತದೆ. ಧನು ರಾಶಿಯವರು ಹಿರಿಯರಿಂದ ಆಶೀರ್ವಾದ ಪಡೆಯುತ್ತಾರೆ. ಇವರ ಪ್ರೇಮ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆ ಕಂಡುಬಂದರೂ ಹೆಚ್ಚಿನ ತೊಂದರೆ ಇಲ್ಲ.

ಮೀನ ರಾಶಿಯವರು ತ್ರಿಗ್ರಾಹಿ ಯೋಗದಿಂದ ವರ್ಷದ ಕೊನೆಯಲ್ಲಿ ಉತ್ತಮ ಅವಕಾಶವನ್ನು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ. ಇವರು ವೃತ್ತಿ ಜೀವನದಲ್ಲಿ ಹೊಂದಿರುವ ಗುರಿಯನ್ನು ಪೂರ್ಣಗೊಳಿಸುತ್ತಾರೆ. ಇವರು ಈ ಸಮಯದಲ್ಲಿ ಹೊಸದಾಗಿ ವ್ಯವಹಾರವನ್ನು ಪ್ರಾರಂಭಿಸಬಹುದು. ವೈವಾಹಿಕ ಜೀವನದಲ್ಲಿ ಏರಿಳಿತ ಕಂಡುಬರುತ್ತದೆ. ಇವರು ಯಾವುದೆ ನಿರ್ಧಾರ ತೆಗೆದುಕೊಳ್ಳಬೇಕಾದರೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *