ಈ ಹೂವಿನ ಗಿಡ ಎಲ್ಲಾದರೂ ಕಾಣಿಸಿದರೆ ಬಿಡಬೇಡಿ ಇದರಲ್ಲಿದೆ ಅಪಾರ ಅರೋಗ್ಯ

0 267

ನಾವಿಂದು ನಿಮಗೆ ಒಂದು ವಿಶೇಷವಾದ ಗಿಡದ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಸಾಮಾನ್ಯವಾಗಿ ಯಾರು ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ ಅಥವಾ ಹಳ್ಳಿಗಳಲ್ಲಿ ವಾಸಿಸುತ್ತಿರುತ್ತಾರೆ ಅಂತವರಿಗೆ ಈ ಗಿಡ ತುಂಬಾ ಪರಿಚಿತವಾಗಿರುತ್ತದೆ. ಆ ಗಿಡದ ಹೆಸರು ಆವರಿಕೆ ಗಿಡ ಅಥವಾ ತಂಗಡಿ ಗಿಡ. ಸಾಮಾನ್ಯವಾಗಿ ಯಾರು ಕೂಡ ಬೀಜವನ್ನು ಹಾಕಿ ಈ ಗಿಡವನ್ನು ಬೆಳೆಸುವುದಿಲ್ಲ ಇದು ತನ್ನಿಂದತಾನೆ ಬೆಳೆಯುವಂತಹ ಗಿಡವಾಗಿದೆ.

ಈ ಗಿಡ ಹೆಚ್ಚಾಗಿ ನಿಮಗೆ ಉತ್ತರ ಕರ್ನಾಟಕದ ಬಳಿ ಹೊಲಗದ್ದೆಗಳಲ್ಲಿ ನೋಡಲು ಸಿಗುತ್ತದೆ. ಈ ಗಿಡದ ಎಲೆಗಳು ಸಾಮಾನ್ಯವಾಗಿ ನೋಡುವುದಕ್ಕೆ ಹುಣಸೆ ಮರದ ಎಲೆಗಳ ರೀತಿಯಲ್ಲಿರುತ್ತದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಈಗಿಡವು ಹೂವನ್ನು ಬಿಡುತ್ತದೆ. ಸಾಮಾನ್ಯವಾಗಿ ಈ ಗಿಡವು ಮೂರರಿಂದ ಹತ್ತು ಅಡಿ ಇರುತ್ತದೆ ಈ ಗಿಡದಲ್ಲಿ ಸಣ್ಣ ಎಲೆಗಳಿದ್ದು ತುದಿಯಲ್ಲಿ ಅರಿಶಿಣ ಬಣ್ಣದ ಹೂಗೊಂಚಲು ಬಿಡುತ್ತದೆ.

ಉತ್ತರ ಕರ್ನಾಟಕದ ಎಲ್ಲಾ ಹೊಲಗದ್ದೆಗಳಲ್ಲಿ ಇದು ನೋಡುವುದಕ್ಕೆ ಹೇರಳವಾಗಿ ಸಿಗುತ್ತದೆ. ಈ ಗಿಡದ ಬೇರಿನಿಂದ ಹಿಡಿದು ಎಲೆಗಳಾಗಿರಬಹುದು ಹೂಗಳಾಗಿರಬಹುದು ಬೀಜಗಳಾಗಿರಬಹುದು ಕಾಂಡವಿರಬಹುದು ಎಲ್ಲವೂ ಕೂಡ ಔಷಧಿ ಗುಣಗಳನ್ನು ಹೊಂದಿರುತ್ತವೆ. ಹಾಗಾದರೆ ಈ ಗಿಡದಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಲಾಭವಿದೆ ಈ ಗಿಡದ ಉಪಯೋಗ ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ನಿಮಗೇನಾದರು ಗಾಯವಾದಾಗ ತಕ್ಷಣ ತಂಗಡಿ ಗಿಡದ ಹೂಗಳನ್ನು ತಂದು ಅದನ್ನು ಚೆನ್ನಾಗಿ ಹುರಿಯಬೇಕು ಗಾಯಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಹುರಿದಿರುವ ಹೂವುಗಳನ್ನು ಅದರಮೇಲೆ ಹಾಕಬೇಕು. ಹೀಗೆ ಮಾಡುವುದರಿಂದ ಗಾಯ ಬೇಗ ಕಡಿಮೆಯಾಗುತ್ತದೆ.ನಿಮಗೇನಾದರೂ ಹೊಟ್ಟೆಯಲ್ಲಿ ಜಂತುಹುಳುಗಳ ಸಮಸ್ಯೆ ಇದ್ದರೆ ಈ ಗಿಡದ ಎಲೆಗಳನ್ನು ತೆಗೆದುಕೊಂಡು ಕಷಾಯಮಾಡಿ ಕುಡಿಯುತ್ತಾ ಬಂದರೆ ಜಂತುಹುಳುಗಳು ನಾಶವಾಗುವುದಕ್ಕೆ ಸಹಾಯವಾಗುತ್ತದೆ.

ಈ ಗಿಡದ ಹೂವುಗಳ ದಳದಿಂದ ಚಹಾ ಮಾಡಿ ಕುಡಿಯುತ್ತಾ ಬಂದರೆ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುವುದಕ್ಕೆ ಸಹಾಯವಾಗುತ್ತದೆ. ಇದಷ್ಟೇ ಅಲ್ಲದೆ ಇದರ ಕಷಾಯವನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ತಂಪು ಸಿಗುತ್ತದೆ. ಇನ್ನು ತಂಗಡಿ ಗಿಡದ ಬೇರುಗಳನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಹಾಲಿನಲ್ಲಿ ಹಾಕಿ ಕುಡಿಯುವುದರಿಂದ ಪುರುಷರಲ್ಲಿರುವ ಲೈಂ ಗಿಕ ಸಮಸ್ಯೆ ನಿವಾರಣೆಯಾಗುತ್ತದೆ. ಇದರ ಕಾಯಿ ಮತ್ತು ಬೀಜವನ್ನು ಒಣಗಿಸಿ ಪುಡಿ ಮಾಡಿ ಹಾಲಿನಲ್ಲಿ ಹಾಕಿ ಕುಡಿಯುತ್ತಾ ಬಂದರೆ ದೇಹಕ್ಕೆ ಒಳ್ಳೆಯ ಚೈತನ್ಯ ಶಕ್ತಿ ದೊರೆಯುತ್ತದೆ. ಇನ್ನು ನಿಮ್ಮ ಮುಖದಲ್ಲಿ ಕಪ್ಪು ಕಲೆಗಳು ಅಥವಾ ಗಾಯದ ಕಲೆಗಳಿದ್ದರೆ ಇದು ಒಳ್ಳೆಯ ಮನೆಮದ್ದಾಗಿ ಕೆಲಸ ಮಾಡುತ್ತದೆ.

ಅದಕ್ಕಾಗಿ ನೀವು ಈ ಗಿಡದ ಹೂಗಳನ್ನು ತಂದು ಚೆನ್ನಾಗಿ ಹುರಿದು ಅವುಗಳನ್ನು ಪುಡಿ ಮಾಡಿ ಪ್ರತಿನಿತ್ಯ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುತ್ತಾ ಬಂದರೆ ಕಪ್ಪು ಕಲೆಗಳು ಬೇಗನೆ ನಿವಾರಣೆಯಾಗುತ್ತವೆ. ಈ ಗಿಡದ ಬೇರಿನಿಂದ ಹಾಗೂ ಬೀಜಗಳಿಂದ ಸಂಧಿವಾತಕ್ಕೆ ಚಿಕಿತ್ಸೆಯನ್ನು ಕೂಡ ನೀಡಲಾಗುತ್ತದೆ. ಗಿಡದಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇರುವುದಿಲ್ಲ ಆದರೂ ಕೂಡ ಇತ್ತೀಚೆಗೆ ಆಪರೇಷನ್ ಮಾಡಿಸಿಕೊಂಡಿರುವವರು ಗರ್ಭಿಣಿಯರು ಹಾಲುಣಿಸುವ ತಾಯಂದಿರು ಇದನ್ನು ಬಳಸುವಂತಿಲ್ಲ.

ನಿಮಗೆ ಆರೋಗ್ಯದ ಸಮಸ್ಯೆ ಇದ್ದರೆ ವೈದ್ಯರ ಸಲಹೆಯನ್ನು ಕೇಳಿ ಇದನ್ನು ಬಳಸುವುದು ಸೂಕ್ತ. ನೀವು ಕೂಡ ಈ ತಂಗಡಿ ಗಿಡದ ಔಷಧೀಯ ಗುಣಗಳ ಉಪಯೋಗವನ್ನು ಪಡೆದುಕೊಳ್ಳಿ ಮತ್ತು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಯದವರಿಗು ಸ್ನೇಹಿತರಿಗೂ ತಿಳಿಸಿರಿ.

Leave A Reply

Your email address will not be published.