Temple Story: ನಿಮ್ಮ ಕಣ್ಣೆದುರಲ್ಲೇ ಭವಿಷ್ಯ ನುಡಿಯುವ ಕರ್ನಾಟಕದ ಅಚ್ಚರಿಯ ಗಣಪತಿ

0 247

Temple Story in Karnataka: ಭಗವಾನ್ ಗಣೇಶ (Ganesha) ಹಿಂದುಗಳ ಆರಾಧ್ಯ ದೈವವಾಗಿದ್ದು ಹಿಂದೂಗಳು ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ ಹಾಗೆಯೇ ಪ್ರತಿ ಮನೆಯಲ್ಲಿ ಬಹಳ ವಿಜ್ರಂಭಣೆಯಿಂದ ಮನೆಯನ್ನು ಅಲಂಕರಿಸುತ್ತಾರೆ ಹಾಗೆಯೇ ವಿಧ ವಿಧವಾದ ಸಿಹಿ ತಿನಿಸುಗಳನ್ನು ಮಾಡಿ ಗಣೇಶನಿಗೆ (Ganesha) ನೈವೇದ್ಯ ಮಾಡುತ್ತಾರೆ ಹಾಗೆಯೇ ಪ್ರತಿ ಪೂಜೆಯಲ್ಲಿ ಸಹ ಗಣೇಶನಿಗೆ ಮೊದಲ ಆರಾಧನೆ ಪೂಜೆಯನ್ನು ಮಾಡುತ್ತಾರೆ

ಗಣೇಶನಿಗೆ ದೇವಾನು ದೇವತೆಗಳಲ್ಲಿ ಮಹತ್ತರ ಅಗ್ರಗಣ್ಯ ಸ್ಥಾನವನ್ನು ನೀಡಲಾಗಿದೆ. ಗಣೇಶನನ್ನು ವಿನಾಯಕ ಗಣಪತಿ (Ganapati) ವಿಗ್ನ ವಿನಾಶಕ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಾರೆ ಪ್ರತಿ ಕೆಲಸ ಕಾರ್ಯಗಳು ನೆರವೇರಲು ಗಣೇಶನ ಆರಾಧನೆ ಮಾಡಬೇಕು ವ್ಯಾಸರು ಮಹಾಭಾರತವನ್ನು ಅರ್ಥ ಮಾಡಿಕೊಂಡು ಬರೆಯತಕ್ಕವನು ಗಣಪತಿಯೇ ಎಂದು ಭಾವಿಸಿ ಮಧ್ಯೆ ಏಳದೆ ಬರೆದುಕೊಡುವಂತೆ ಆತನಲ್ಲಿ ಕೇಳುತ್ತಾರೆ ಆಗ ಗಣೇಶನು ಮಹಾಭಾರತವನ್ನು ಬರೆಯುತ್ತಾನೆ ನಾವು ಈ ಲೇಖನದ ಮೂಲಕ ಗರ್ಗೇಶ್ವರ ಗಣಪತಿ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ.

ದಕ್ಷಿಣಾಯನ ದಲ್ಲಿ ಮೊದಲು ಪ್ರಾರಂಭ ಆಗುವ ಹಬ್ಬದಲ್ಲಿ ಗಣೇಶ ಚತುರ್ಥಿ ಒಂದು ಈ ಹಬ್ಬವನ್ನು ಹಿಂದೂಗಳು ಶ್ರದ್ಧೆಯಿಂದ ಆಚರಿಸುತ್ತಾರೆ ಗಣೇಶನನ್ನು ಪೂಜಿಸುವ ಮುಖ್ಯ ಉದ್ದೇಶ ಕೈಗೊಂಡ ಕಾರ್ಯಗಳು ಸಂಪೂರ್ಣವಾಗಿ ನೆರವೇರಲಿ ಎಂದು ಪೂಜಿಸುತ್ತಾರೆ ಗಣೇಶನನ್ನು ಮಾನವರು ಅಷ್ಟೇ ಅಲ್ಲೇ ದೇವಾನು ದೇವತೆಗಳು ಹಾಗೂ ಬ್ರಹ್ಮ ವಿಷ್ನು ಮಹೆಶ್ವರರು ಸಹ ಪೂಜಿಸುತ್ತಾರೆ ಗಣೇಶನ ಜನ್ಮ ನಕ್ಷತ್ರ ಹಸ್ತ್ರ ಕನ್ಯಾ ರಾಶಿಯಾಗಿದೆ ಹಸ್ತ ಎಂದರೆ ಸೋಡಿಲು ಹೊಂದಿರುವ ಪ್ರಾಣಿಯಾಗಿದೆ ಆನೆಯ ಮುಖ ಹೊಂದಿರುವವನು ಗಣಪತಿಯಾಗಿದ್ದಾನೆ

ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹ ಬುಧ ಅಂದರೆ ಪಂಡಿತ ಎಂದರ್ಥ ಹಾಗೂ ಗಣೇಶ ಪಂಡಿತ ಹಾಗೂ ಬುದ್ದಿವಂತ ಈ ಕಾರಣದಿಂದ ಯಾವುದೇ ಕೆಲಸ ಕಾರ್ಯ ಆಗಬೇಕಾದರೆ ಬುದ್ಧಿಶಕ್ತಿಯನ್ನು ಆರಾಧನೆ ಮಾಡಬೇಕು ಅಂದರೆ ಗಣೇಶನ ಆರಾಧನೆ ಮಾಡಬೇಕು. ಬುಧನು ಹಸಿರು ಬಣ್ಣದಿಂದ ಇರುವುದರಿಂದ ಹಸಿರು ಪತ್ರೆ ಯಿಂದ ಗಣೇಶನನ್ನು ಆರಾಧನೆ ಮಾಡಬೇಕು ಈ ಪತ್ರೆಗಳು ಮಳೆಗಾಲದಲ್ಲಿ ಮಾತ್ರ ಲಭಿಸುತ್ತದೆ ಭಾದ್ರಪದ ಮಾಸದಲ್ಲಿ ಮಳೆ ಇರುವುದರಿಂದ ಎಲೆಗಳು ಹಸಿರಾಗಿ ಇರುತ್ತದೆ .

ಗಣೇಶನನ್ನು 21 ಪತ್ರೆಗಳಿಂದ ಆರಾಧನೆ ಮಾಡಬೇಕು ಭಾದ್ರಪದ ಮಾಸದ ಶುಕ್ಲಪಕ್ಷದಂದು ಪೂಜಿಸಿದರೆ ಒಳ್ಳೆಯದು ಫಾಲ್ಗುಣ ಮಾಸದಲ್ಲಿ ಪೂಜಿಸಿದರೆ ಸಂತಾನ ಭಾಗ್ಯ ಲಭಿಸುತ್ತದೆ ಆಶ್ವೀಜ ಮಾಸದಲ್ಲಿ ಪೂಜಿಸಿದರೆ ವಾಹನಗಳಿಂದ ಆಗುವ ಅಪಾಯವನ್ನು ತಪ್ಪೌಸಬಹುದಾಗಿದೆ ಪ್ರತಿ ತಿಂಗಳು ಕೃಷ್ಣ ಪಕ್ಷದ ಚೌತಿಯಂದು ಪೂಜಿಸಿದರೆ ಎಲ್ಲಾ ಸಂಕಟಗಳು ನಿವಾರಣೆ ಆಗುತ್ತದೆ ಹಾವು ಮತ್ತು ಇಳಿ ಸಹಜ ವೈರಿಗಳು ಹಾಗೆಯೇ ಇವು ಯಾವ ದೇವರ ಸನ್ನಿಧಿಯಲ್ಲಿ ವೈರತ್ವ ಮರೆತು ಇರುತ್ತದೆಯೋ ಅಂತಹ ದೇವರನ್ನು ಪೂಜಿಸಬೇಕು ಅಂದರೆ ಗಣಪತಿಯನ್ನು ಪೂಜಿಸಬೇಕು.

ಯೋಗ ಸಿದ್ದಿ ಪ್ರಾಪ್ತಿ ಆಗುತ್ತದೆ ಜಾತಕ ಅಥವಾ ಕುಂಡಲಿಯಲ್ಲಿ ಗಣೇಶ ಇದ್ದರೆ ಅಂದರೆ ಕುಂಡಲಿಯಲ್ಲಿ ಲಗ್ನದ ಹಿಂದಿನ ಮತ್ತು ಮುಂದಿನ ಮನೆಗಳು ಎರಡು ಕಣ್ಣುಗಳು ಇದರಲ್ಲಿ ರವಿ ಎಡಗಣ್ಣು ಹಾಗೂ ಚಂದ್ರ ಬಲಗಣ್ಣು ಹಾಗಾಗಿ ಲಗ್ನದ ಹಿಂದೆ ಮತ್ತು ಮುಂದೆ ಇದ್ದರೆ ಒಳ್ಳೆಯದು ಮತ್ತು ಆ ವ್ಯಕ್ತಿಯದ್ದು ಚಿಕ್ಕ ಕಣ್ಣುಗಳು ಇರುತ್ತದೆ ಗಣೇಶ ನಂದು ಸಹ ಚಿಕ್ಕ ಕಣ್ಣು ಮತ್ತು ಪ್ರತಿಯೊಂದನ್ನೂ ಸೂಕ್ಷ್ಮ ದೃಷ್ಟಿಯಿಂದ ಗುರುತಿಸಬೇಕು ಗಣಪತಿಯ ಕಿವಿ ದೊಡ್ಡದು ಇರುತ್ತದೆ ನೋಡಲು ಮೊರದಂತೆ ಇರುತ್ತದೆ ಅದರಲ್ಲಿ ಧಾನ್ಯವನ್ನು ಹೊಟ್ಟು ಚೊಳ್ಳುಗಳನ್ನು ಬೇರ್ಪಡಿಸಲಾಗುತ್ತದೆ ಅದರಂತೆ ಕೆಟ್ಟ ವಿಷಯಗಳನ್ನು ಕೇಳದೆ ಒಳ್ಳೆಯ ವಿಷಯವನ್ನು ಕೇಳಬೇಕು ಶನಿ ಎಲ್ಲ ದೇವಾನು ದೇವತೆಗಳನ್ನೂ ಕಾಡಿದ್ದಾನೆ ಆದರೆ ಗಣಪತಿ ಹಾಗೂ ಆಂಜನೇಯನನ್ನು ಹಿಡಿಯಲು ಆಗಲಿಲ್ಲ.

ಸಾಡೇಸಾತಿ ಶನಿ ದೋಷ ಇರುವವರು ಗಣೇಶನ ಆರಾಧನೆ ಮಾಡಬೇಕು ಹೀಗೆ ಜೋತಿಷ್ಯ ಹಾಗೂ ಸಂಖ್ಯಾ ಶಾಸ್ತ್ರದಲ್ಲಿ ಗಣಪತಿಗೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ ಹಲವಾರು ಗಣಪತಿಯ ದೇವಾಲಯಗಳು ಇದೆ ಕೆಲವೊಮ್ಮೆ ದೇವಸ್ಥಾನ ಸಮೀಪದಲ್ಲಿ ಇದ್ದರು ಸಹ ದೇವಸ್ಥಾನದ ಪವಾಡ ಮತ್ತು ಶಕ್ತಿ ಗೊತ್ತಿರುವುದು ಇಲ್ಲ ಗರ್ಗಿಶ್ವರ ಗಣಪತಿ ದೇವರು ಅನೇಕ ಪವಾಡಗಳನ್ನು ಒಳಗೊಂಡ ದೇವಸ್ಥಾನವಾಗಿದೆ ಈ ದೇವಸ್ಥಾನವು ಮೈಸೂರು ನಗರದ ಟಿನರಸಿಪುರ ತಾಲೂಕಿನ ಗರ್ಗೇಶ್ವರಿ ಎನ್ನುವ ಗ್ರಾಮದಲ್ಲಿಈ ದೇವಸ್ಥಾನವಿರುತ್ತದೆ

ಈ ಗಣೇಶನ ದೇವಸ್ಥಾನದಲ್ಲಿ ಶಿವ ಹಾಗೂ ಪಾರ್ವತಿಯ ದೇವಸ್ಥಾನವನ್ನು ನೋಡಬಹುದಾಗಿದೆ ಈ ದೇವಸ್ಥಾನದಲ್ಲಿ ಶಿವ ಹಾಗೂ ಪಾರ್ವತಿಯ ಅರ್ಧ ನಾರಿಶ್ವರ ರೂಪದಲ್ಲಿ ಕೆತ್ತನೆ ಮಾಡಲಾಗಿದೆ ಈ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇರುತ್ತದೆ .ಈ ದೇವಸ್ಥಾನದಲ್ಲಿ ಗಣೇಶ ತನ್ನ ತಂದೆ ತಾಯಿಯ ಜೊತೆಯಲ್ಲಿ ಸಾವಿರಾರು ವರ್ಷಗಳಿಂದ ಇದ್ದಾನೆ ಈ ದೇವಸ್ಥಾನದಲ್ಲಿ ಪವಾಡಗಳು ನಡೆಯುತ್ತಿರುತ್ತದೆ ಮನಸ್ಸಿನಲ್ಲಿ ಗೊಂದಲ ಮತ್ತು ಆತಂಕ ಇದ್ದರೆ ಈ ದೇವಸ್ಥಾನಕ್ಕೆ ಹೋಗಿ ಮನಸಾರೆ ಪ್ರಾಥನೆ ಮಾಡಬೇಕು

ಯಾವುದೇ ಕಷ್ಟಗಳು ಇದ್ದರು ಸಹ ತಕ್ಷಣ ನೆರವೇರುತ್ತದೆ ಹೀಗೆ ಜನರ ಕಷ್ಟವನ್ನು ನಿವಾರಿಸುವ ಗಣಪತಿ ಎಂದು ಪ್ರಸಿದ್ದಿಯಾಗಿದೆ ಮಾತನಾಡುವ ಯಂತ್ರ ಶಕ್ತಿ ಗಣಪತಿಯಾಗಿದ್ದು ಅನೇಕ ಸಂಕಷ್ಟವನ್ನು ನಿವಾರಿಸುತ್ತಾನೆ ಹೀಗೆ ಗಣೇಶನು ಪ್ರತಿಯೊಬ್ಬರ ಕಷ್ಟವನ್ನು ನಿವಾರಿಸುವ ದೇವರಗಿದ್ದು ಮತ್ತು ಪ್ರತಿ ಪೂಜೆಯಲ್ಲಿ ಸಹ ಗಣೇಶನನ್ನು ಮೊದಲು ಆರಾಧನೆ ಮಾಡಲಾಗುತ್ತದೆ. ಇದನ್ನೂ ಓದಿ Lord Lakshmi: ನಿಂತ ಲಕ್ಷ್ಮಿ ಫೋಟೋ ಮನೆಯ ಮುಖ್ಯ ದ್ವಾರಕ್ಕೆ ಹಾಕಿದ್ದಾರೆ ಏನಾಗುತ್ತೆ ಗೊತ್ತಾ?

Leave A Reply

Your email address will not be published.