ಸಿನೆಮಾ ಲೋಕದ ಬಗ್ಗೆ ಯಾರಿಗೆ ತಿಳಿದಿಲ್ಲ. ಇದೊಂದು ಮಾಯಾಲೋಕ ಇದ್ದಂತೆ. ಹಲವಾರು ಯುವಕರು ಮತ್ತು ಯುವತಿಯರು ಓದುವುದನ್ನು ಬಿಟ್ಟು ಸಿನೆಮಾ ಲೋಕಕ್ಕೆ ಆಕರ್ಷಿತರಾಗುತ್ತಾರೆ. ಮುಂದಿನ ಜೀವನ ಹೇಗೆ ಎಂದು ಆಲೋಚನೆ ಕೂಡ ಮಾಡುವುದಿಲ್ಲ. ದೊಡ್ಡ ಸ್ಟಾರ್ ಆಗಬೇಕು ಎಂಬ ಹಂಬಲ ಮಾತ್ರ ಇರುತ್ತದೆ. ಆದರೆ ಕೊನೆಗೆ ಏನೂ ಸಿಗದೆ ಜೀವನವನ್ನು ನಾಶ ಮಾಡಿಕೊಳ್ಳುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬ ನಟ ಇದ್ದಾನೆ. ಆತನ ಬಗ್ಗೆ ನಾವು ಇಲ್ಲಿ ತಿಳಿಯೋಣ.

ಕನ್ನಡದ ‘ಚೆಲುವಿನ ಚಿತ್ತಾರ’ ಸಿನೆಮಾ ತೆಲುಗಿನಲ್ಲಿ ‘ಕಾದಲ್’ ಎಂಬ ಹೆಸರಿನಿಂದ ಡಬ್ಬಿಂಗ್ ಆಗಿತ್ತು. ‘ಕಾದಲ್’ ಚಿತ್ರ ತಮಿಳಿನಲ್ಲಿ ದೊಡ್ಡ ಸಂಚಲನವನ್ನು ರೂಪಿಸಿತ್ತು. ಈ ಚಿತ್ರದಲ್ಲಿ ಸಿನೆಮಾ ಅವಕಾಶವನ್ನು ಹುಡುಕಿಕೊಂಡು ಚೆನ್ನೈಗೆ ಬಂದ ಹುಡುಗನ ಪಾತ್ರದಲ್ಲಿ ಪಲ್ಲುಬಾಬು ನಟಿಸಿದ್ದರು. ಇವನ ನಟನೆ ಮತ್ತು ಮಾತುಗಳು ಜನರಿಗೆ ಬಹಳ ಮನರಂಜನೆ ನೀಡಿತ್ತು.ಹಾಗೆಯೇ ಚಿತ್ರದ ನಂತರ ತನಗೆ ಬೇಕಾದಷ್ಟು ಅವಕಾಶಗಳು ಸಿಗುತ್ತವೆ ಎಂದು ಭಾವಿಸಿದ್ದರು ಇವರು.

ಆದರೆ ‘ಕಾದಲ್’ ಚಿತ್ರದ ನಂತರ ಈ ನಟನಿಗೆ ಅಲ್ಲೊಂದು ಇಲ್ಲೊಂದು ಚಿಕ್ಕ ಪಾತ್ರ ಸಿಕ್ಕಿತ್ತಾದರೂ ಅವು ಕೈ ಹಿಡಿಯಲಿಲ್ಲ. ನಂತರ ಯಾವ ಅವಕಾಶಗಳೂ ದೊರೆಯಲಿಲ್ಲ. ಅತ್ತ ಬಡತನದಿಂದ ಬೆಂದು ಹೋಗಿದ್ದರು ಇವನ ತಂದೆ ತಾಯಿ. ಇವರುಗಳು ಅನಾರೋಗ್ಯದಿಂದ ಮರಣ ಹೊಂದಿದರು.ಓದುವ ವಯಸ್ಸಿನಲ್ಲಿ ನಟನೆಯ ಕಡೆ ಆಕರ್ಷಣೆ ಬೆಳೆಸಿಕೊಂಡು ಶಾಲೆಯನ್ನು ಬಿಟ್ಟಿದ್ದರಿಂದ ವಿದ್ಯೆಯಿಲ್ಲದ ಕಾರಣ ಯಾವುದೇ ಕೆಲಸ ಸಿಗಲಿಲ್ಲ. ತಂದೆ ತಾಯಿಯನ್ನು ಕಾಪಾಡಿಕೊಳ್ಳಲೂ ಆಗಲಿಲ್ಲ.

ಇದರಿಂದ ಮಾನಸಿಕವಾಗಿ ನೊಂದ ಪಲ್ಲುಬಾಬು ಅವರು ಹೊಟ್ಟೆಪಾಡಿಗಾಗಿ ಸಮೀಪದ ದೇವಸ್ಥಾನದಲ್ಲಿ ಭಿಕ್ಷೆ ಬೇಡಲೆಂದು ಒಂದು ದಿನ ಕುಳಿತುಕೊಂಡರು. ನಂತರ ಅದೇ ಅವನ ಕೆಲಸವಾಯಿತು.ಸ್ಟಾರ್ ಆಗಬೇಕೆಂದು ತುಂಬಾ ಜನ ಬರುತ್ತಾರೆ ಆದರೆ ಕೆಲವರಿಗೆ ಮಾತ್ರ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ.ಹೆಚ್ಚು ಜನಕ್ಕೆ ಆಗುವುದಿಲ್ಲ. ಇವನ ಸ್ಥಿತಿ ನೋಡಿದ ಕೆಲವರು ಸಹಾಯದ ಹಸ್ತ ಚಾಚಿದ್ದಾರೆ. ಇನ್ನು ಮುಂದೆಯಾದರೂ ಇವರ ಜೀವನದಲ್ಲಿ ಹೊಸ ಬೆಳಕು ಮೂಡಲಿ.

Leave a Reply

Your email address will not be published. Required fields are marked *