ರಾಜ್ಯದಲ್ಲಿ ಹಲವು ದೇವಾಲಯಗಳಿವೆ ಆದ್ರೆ ಪ್ರತಿ ದೇವಾಯಲಗಳು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ, ಅದೇ ನಿಟ್ಟಿನಲ್ಲಿ ಈ ದೇವಾಲಯವು ಕೂಡ ಹಲವು ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ ಅಷ್ಟಕ್ಕೂ ಈ ದೇವಾಲಯ ಯಾವುದು ಅನ್ನೋದನ್ನ ಹೇಳುವುದಾರೆ ಹದ್ದಿನ ಕಲ್ಲು ಹನುಮಂತರಾಯನ ದೇವಾಲಯವಾಗಿದೆ ಇದು ಇರೋದಾದರೂ ಎಲ್ಲಿ ಅನ್ನೋದನ್ನ ತಿಳಿಯುವುದಾದರೆ ಬೆಂಗಳೂರು ಮತ್ತು ಮಂಗಳೂರು ಹೆದ್ದಾರಿಯಲ್ಲಿ ಯಡಿಯೂರನ್ನು ದಾಟಿದಾಗ ಒಂದು ಸುಂದರವಾದ ಬೆಟ್ಟವಿದೆ ಆ ಬೆಟ್ಟದ ಮೇಲೆ ಹದ್ದಿನಕಲ್ಲು ಹನುಮಂತರಾಯನು ನೆಲೆಸಿದ್ದಾನೆ.

ಈ ಬೇಟದ ಮೇಲಿನ ಆಂಜನೇಯನ ಸ್ವಾಮಿಯನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಅಷ್ಟೊಂದು ಪವರ್ ಫುಲ್ ಎಂಬುದಾಗಿ ಹೇಳಲಾಗುತ್ತದೆ. ಮಹಿಮೆ ಹಾಗೂ ಪವಾಡವನ್ನು ಹೊಂದಿರುವಂತ ಮಹಿಮಾನ್ವಿತವಾದ ಹನುಮನತನ ದೇವಾಲಯವೆಂದರೆ ಅದು ಹದ್ದಿನಕಲ್ಲು ಹನುಮಂತರಾಯ ದೇವಾಲಯ ಅಥವಾ ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ, ಈ ದೇವಾಲಯವು ತೀರ್ಥಯಾತ್ರಾ ಸ್ಥಳವಾಗಿದೆ. ಮತ್ತೊಂದು ವಿಶೇಷತೆ ಏನು ಅಂದ್ರೆ ಈ ದೇವರಿಗೆ ಹದ್ದಿನಕಲ್ಲು ಆಂಜನೇಯ ಎಂಎಂಬುದಾಗಿ ಹೆಸರು ಬರಲು ಕಾರಣವೇನು ಅನ್ನೋದಾದರೆ, ಇಲ್ಲಿನ ಅಪೂರ್ವವಾದ ಕಲ್ಲಿಗೆ “ಹದ್ದಿನ ಕಲ್ಲು” ಎಂದು ಕರೆಯುತ್ತಾರೆ. ಹೀಗಾಗಿ ಈ ಬೆಟ್ಟದ ಮೇಲೆ ನೆಲೆಸಿರುವ ಹನುಮಂತನಿಗೆ ಹದ್ದಿನಕಲ್ಲು ಆಂಜನೇಯ ಸ್ವಾಮಿ ಎಂದು ಹೆಸರು ಬಂದಿತು ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ

ಈ ದೇವಾಲಯದ ವಿಶೇಷತೆ ಹಾಗೂ ಮಹತ್ವವೇನು ಅನ್ನೋದನ್ನ ನೋಡುವುದಾದರೆ ಇಲ್ಲಿ ರಾವಣನ ಮಗ ಇಂದ್ರಜಿತ್‍ನ ಸಣ್ಣದಾದ ಪ್ರತಿಮೆಯನ್ನು ನೀವು ಈ ದೇವಾಲಯದ ಬಲ ಭಾಗದಲ್ಲಿ ಕಾಣಬಹುದಾಗಿದೆ. ಮೆಟ್ಟಿಲುಗಳನ್ನು ಹತ್ತುವಾಗ ಯಾವುದೇ ಕಾರಣಕ್ಕೂ ಪಾದರಕ್ಷೆಗಳನ್ನು ಧರಿಸುವಂತೆ ಇಲ್ಲ. ಇನ್ನು ಈ ದೇವಾಲಯಕ್ಕೆ ಬೆಳಗ್ಗಿನ ಜಾವಾ ಅಂದರೆ ಸೂರ್ಯೋದಯದ ವೇಳೆಯಲ್ಲಿ ಈ ದೇವರ ಬೆಟ್ಟವನ್ನು ಹತ್ತುವಾಗ ಯಾತ್ರಿಕರಿಗೆ ಅದ್ಭುತವಾದ ಅನುಭವ ನೀಡುತ್ತದೆ.

ಈ ದೇವಾಲಯದ ಮತ್ತೊಂದು ವಿಶೇಷತೆ ಏನು ಅನ್ನೋದಾದರೆ ಈ ಆಂಜನೇಯನ ಸನ್ನಿದಿಯಲ್ಲಿ ಅಂದರೆ ಆಂಜನೇಯ ಸ್ವಾಮಿ ನೆಲೆಸಿರುವ ಸ್ತಂಭದ ಕೆಳಗೆ ರಾವಣನ ಮಗ ಇಂದ್ರಜಿತ್ ಕೂಡ ನೆಲೆಸಿದ್ದಾನೆ. ಇದೊಂದು ವಿಭಿನ್ನವಾದ ದೇವಾಲಯ ಎಂದೇ ಹೇಳಬಹುದು, ನಿಮಗೆ ತಿಳಿದಿರುವಂತೆ ಶ್ರೀ ರಾಮನು ರಾವಣನನ್ನು ಸಂಹಾರ ಮಾಡುತ್ತಾನೆ. ಆ ರಾವಣನ ಮಗನೇ ಈ ಇಂದ್ರಜಿತ್. ಇದು ರಾವಣನ ಮಗ ಇಂದ್ರಜಿತ್‍ಗೆ ಮೀಸಲಾಗಿರುವ ದೇವಾಲಯದಲ್ಲಿ ಇದೊಂದೇ ಆಗಿರಬಹುದು. ಇನ್ನು ಈ ದೇವಾಲಯಕ್ಕೆ ಅನೇಕ ಮಂದಿ ಭಕ್ತರು ಬಂದು ತಮ್ಮ ಇಷ್ಟಾರ್ಥವನ್ನು ಸಿದ್ಧಿಗೊಳಿಸುವಂತೆ ಬೇಡಿಕೊಳ್ಳುತ್ತಾರೆ, ಅಷ್ಟೇ ಅಲ್ಲದೆ ಕೆಲವರು ಇಲ್ಲಿ ಮಾಂಸಾಹಾರವನ್ನು ತಂದು ಅಡುಗೆ ಮಾಡಿ ಸೇವನೆ ಮಾಡುತ್ತಾರೆ. ದೆವ್ವ ಭೂತ ಪ್ರೇತ ಮೆತ್ತಿರುವಂತವರಿಗೆ ಇಲ್ಲಿ ಕರೆತಂದು ಬಿಡಿಸಲಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!