ಗುರು ರಾಯರ ಈ ಚಿಕ್ಕ ಮಂತ್ರ ಪಠಣದಿಂದ ಸಕಲ ಸಂಕಷ್ಟ ಪರಿಹಾರ

0 4,920

ಈ ಒಂದು ಮಂತ್ರವನ್ನು ಪ್ರತಿನಿತ್ಯ ಭಕ್ತಿಯಿಂದ ನೀವು ಪಡಿಸಿದ್ದೇ ಆದಲ್ಲಿ ಸಾಕ್ಷಾತ್ ಗುರುರಾಯರು ನಿಮ್ಮ ಕನಸಿನಲ್ಲಿ ಬಂದು ಅನುಗ್ರಹ ನೀಡುತ್ತಾರೆ. ರಾಘವೇಂದ್ರ ಸ್ವಾಮಿಗಳು ಮಹಾಮಹಿಮರು ಮತ್ತು ಜೀವಂತ ದೇವರು. ಇವರ ಆರಾಧ್ಯ ದೈವ ಮೂಲರಾಮ ಅಂದರೆ ಮಹಾವಿಷ್ಣುವಿನ ಅವತಾರ. ಜೀವನದಲ್ಲಿ ಎಂತಹ ಕಷ್ಟ ಬಂದರೂ ಸಹ ಶ್ರೀ ಗುರುರಾಯರ ಸ್ಮರಣೆಮಾಡುವುದರಿಂದ ಎಂತಹದೇ ಕಷ್ಟ ಇದ್ದರೂ ಕೂಡ ತಕ್ಷಣವೇ ಎಲ್ಲಾ ಕಷ್ಟಗಳು ಮಂಜಿನಂತೆ ಕರಗಿಹೋಗುತ್ತವೆ. ನಮಗೆಲ್ಲ ತಿಳಿದಿರುವಂತೆ ಶ್ರೀ ಗುರು ರಾಯರನ್ನು ನೆನೆಯಲು ಹಲವಾರು ರೀತಿಯ ಮಂತ್ರಗಳು ಇವೆ. ಅದರಲ್ಲಿ ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರವು ತುಂಬಾ ಶ್ರೇಷ್ಠವಾದ ಮಂತ್ರವಾಗಿದೆ.

ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನಕ್ಕೆ ಒಂದು ಬಾರಿ, 3 ಬಾರಿ, 5 ಬಾರಿ, 9 ಬಾರಿ, 21ಬಾರಿ ಹಾಗೂ 1008 ಬಾರಿ ಜಪಿಸಬಹುದು. ರಾಘವೇಂದ್ರ ಗಾಯತ್ರಿ ಮಂತ್ರ ಪಠಿಸಲು ಕೆಲವು ನಿಯಮಗಳಿವೆ ಆ ಎಲ್ಲ ನಿಯಮಗಳನ್ನು ನೀವು ಪಾಲಿಸಿದರೆ ಶ್ರೀ ಗುರುರಾಯರು ಪ್ರತೀ ದಿನ ನಿಮ್ಮ ಕನಸಿನಲ್ಲಿ ಬಂದು ಅನುಗ್ರಹ ನೀಡಿ ನಿಮ್ಮ ಸಕಲ ಕಷ್ಟಗಳನ್ನು ನಿವಾರಣೆ ಮಾಡುತ್ತಾರೆ. ಆ ನಿಯಮಗಳು ಈ ರೀತಿಯಾಗಿವೆ. ಒಂದು ವೇಳೆ ನಿಮಗೆ ಶ್ರೀ ಗುರುರಾಯರ ಗಾಯತ್ರಿ ಮಂತ್ರವನ್ನು ಪ್ರತಿದಿನವು ಪಟಿಸಲು ಆಗದೇ ಇದ್ದರೂ ಶ್ರೀ ಗುರುರಾಯರ ವಿಶೇಷ ದಿನವಾದ ಗುರುವಾರದಂದು ಪಡಿಸಬಹುದು.

ಒಂದು ವೇಳೆ ಸತತವಾಗಿ ನಲವತ್ತೆಂಟು ದಿನಗಳಕಾಲ ಪಡಿಸುವುದು ಆದರೆ ಈ ನಿಯಮಗಳನ್ನು ಪಾಲಿಸಬೇಕು. ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ಆರಂಭಿಸಲು ಗುರುವಾರ ಅಥವಾ ಶುಕ್ಲಪಕ್ಷ ಪುಷ್ಯ ನಕ್ಷತ್ರ ದಿನಗಳಲ್ಲಿ ತುಂಬ ವಿಶೇಷ ಶಕ್ತಿ ಇರುವ ದಿನಗಳ ಆಗಿರುವುದರಿಂದ ಈ ದಿನಗಳಲ್ಲಿ ಆರಂಭಿಸಿದರೆ ಬಹಳ ಒಳ್ಳೆಯದಾಗುವುದು. ಪ್ರತಿದಿನ ಸಾವಿರದ ಎಂಟು ಬಾರಿಯಂತೆ ನಲವತ್ತೆಂಟು ದಿನಗಳ ಕಾಲ ಸತತವಾಗಿ ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರ ಪಠಿಸುತ್ತಾ ಬಂದಲ್ಲಿ ಕಲಿಯುಗದ ಕಾಮಧೇನು , ಕಲ್ಪವೃಕ್ಷ , ಭಕ್ತರ ಪಾಲಿನ ಆಪದ್ಬಾಂಧವ ಶ್ರೀ ಗುರುರಾಘವೇಂದ್ರರ ನಿಮ್ಮ ಕನಸಿನಲ್ಲಿ ಬರುವುದು ಖಚಿತ.

ನಿಮ್ಮ ಕನಸಿನಲ್ಲಿ ಗುರು ರಾಘವೇಂದ್ರ ರಾಯರ ಬಂದರೆ ನಿಮ್ಮ ಸಕಲ ಸಂಕಷ್ಟಗಳು ಪರಿಹಾರವಾಗುವುದು ಖಚಿತ. ಗುರು ರಾಘವೇಂದ್ರ ರಾಯರನ್ನು ಪಠೀಸುವಂತಹ ಗಾಯತ್ರಿ ಮಂತ್ರ ಈ ರೀತಿಯಾಗಿದೆ. ಓಂ ವೆಂಕಟನಾಥಯ ವಿದ್ಮಹೆ ಸಚ್ಚಿದಾನಂದಾಯ ಧೀಮಹೀ ತನ್ನೋ ರಾಘವೇಂದ್ರಃ ಪ್ರಚೋದಯಾತ್”

ಓಂ ವೆಂಕಟನಾಥಯ ವಿದ್ಮಹೆ
ತಿಮ್ಮಣ್ಣ ಪುತ್ರಾಯ ಧೀಮಹಿ ತನ್ನೋ ರಾಘವೇಂದ್ರಃ ಪ್ರಚೋದಯಾತ್ ಓಂ ಪ್ರಹಲಾದಾಯ ವಿದ್ಮಹೇ ವ್ಯಾಸರಾಜಯ ಧೀಮಹಿ ತನ್ನೋ ರಾಘವೇಂದ್ರಃ ಪ್ರಚೋದಯಾತ್”

ಈ ಮಂತ್ರವನ್ನು ಪ್ರತಿನಿತ್ಯ ಮೇಲೆ ಹೇಳಿದ ರೀತಿಯಲ್ಲಿ ಪಠಿಸಿದರೆ ನಿಮ್ಮ ಎಲ್ಲಾ ಕಷ್ಟ ಸಂಕಷ್ಟಗಳು ದೂರವಾಗಿ ನೆಮ್ಮದಿ ದೊರೆಯುವುದು.

Leave A Reply

Your email address will not be published.