ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 5 ರಾಶಿಗಳಿಗೆ ರಾಜಯೋಗ ಕೊಡುವನು ಶುಕ್ರ ಗ್ರಹ. ಕೆಲವೇ ದಿನಗಳಲ್ಲಿ, ಈ ರಾಶಿಯವರ ಜೀವನದಲ್ಲಿ ಬಹುದೊಡ್ಡ ಬದಲಾವಣೆ ಆಗುತ್ತದೆ.

ಏಪ್ರಿಲ್ 24 ರ ತನಕ ಉಚ್ಛ ರಾಶಿಯಾದ ಮೀನ ರಾಶಿಯಲ್ಲಿ ಶುಕ್ರ ಗ್ರಹ ಸಂಚಾರ ಮಾಡುತ್ತದೆ. ಇದೇ, ಸಮಯದಲ್ಲಿ 3 ವಿಭಿನ್ನ ರಾಜ ಯೋಗಗಳು ನಿರ್ಮಾಣ ಆಗುತ್ತವೆ. ಇದರಿಂದಾಗಿ, ಈ 5 ರಾಶಿಯವರ ಅದೃಷ್ಟ ಬದಲಾಗುತ್ತದೆ.

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಒಂದು ನಿರ್ದಿಷ್ಟ ಸಮಯಕ್ಕೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುತ್ತವೆ. ಅದೇ, ರೀತಿಯಲ್ಲಿ ಸಮೃದ್ಧಿ ಸೌಂದರ್ಯದ ಪ್ರತೀಕ ಆಗಿರುವಂತಹ ಶುಕ್ರ ಗ್ರಹ ಅದರ ಉಚ್ಛ ರಾಶಿ ಆಗಿರುವ ಮೀನ ರಾಶಿಗೆ ಕಾಲಿಟ್ಟಿದ್ದಾನೆ. ಏಪ್ರಿಲ್ 24 ರ ತನಕ ಸಹ ಇದೇ, ರಾಶಿಯಲ್ಲಿ ಇರಲಿದ್ದಾನೆ. ರಾಹುವಿನ ಜೊತೆಗೆ ಸಂಯೋಗ ಸೇರಿದಂತೆ ಸಾಕಷ್ಟು ರಾಜಯೋಗಗಳು ಕೂಡ ಈ ಸಂದರ್ಭದಲ್ಲಿ ನಿರ್ಮಾಣ ಆಗುತ್ತವೆ.

ನಾರಾಯಣ ಯೋಗ, ಮಾಲವ್ಯ ರಾಜಯೋಗ, ವಿಪರೀತ ರಾಜಯೋಗ ಈ ರೀತಿಯ 3 ರಾಜಯೋಗಗಳು ನಿರ್ಮಾಣ ಆಗುತ್ತವೆ. ಈ ಕಾರಣದಿಂದಾಗಿ ಹಲವು ರಾಶಿಯವರ ಬದುಕಿನಲ್ಲಿ ಶುಕ್ರ ಗ್ರಹ ಸಕಾರಾತ್ಮಕ ಪರಿಣಾಮವನ್ನು ತರುವನು. ಆ ಅದೃಷ್ಟವಂತ ರಾಶಿಗಳು ಯಾವುದು ಎನ್ನುವುದನ್ನು ನೋಡೋಣ;

ಮಿಥುನ ರಾಶಿ :-ಮಿಥುನ ರಾಶಿಯವರಿಗೆ ಈ ಅವಧಿಯಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ಅವಕಾಶಗಳು ಸಹ ಲಾಭವನ್ನು ತಂದು ಕೊಡುತ್ತವೆ. ಅದರಲ್ಲಿ, ವಿಶೇಷವಾಗಿ ಮಾಲವ್ಯ ರಾಜಯೋಗ ಮಿಥುನ ರಾಶಿಯವರ ಅದು, ಕರ್ಮ ಯೋಗದಲ್ಲಿ ನಿರ್ಮಾಣವಾಗಿದೆ. ಹೀಗಾಗಿ, ಈ ರಾಶಿಯ ಜನರಿಗೆ ಉದ್ಯೋಗ ಕ್ಷೇತ್ರದಲ್ಲಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಅದೃಷ್ಟದ ಪಡೆಯುವುದರ ಜೊತೆಗೆ ಉತ್ತಮ ಲಾಭವನ್ನು ಕೂಡ ಸಂಪಾದನೆ ಮಾಡುವರು. ಆದಾಯದ ಮೂಲಗಳು ಸಹ ಹೆಚ್ಚಾಗುತ್ತವೆ ಜೊತೆಗೆ ಹಣದ ಒಳಹರಿವು ಹೆಚ್ಚಳವಾಗುವ ಸಾಧ್ಯತೆಗಳಿವೆ.

ಅನಿರೀಕ್ಷಿತವಾಗಿ ಧನ ಲಾಭ ಪಡೆಯಬಹುದು. ಒಂದು ವೇಳೆ ಯಾರಾದರೂ ಹೊಸ ಉದ್ಯೋಗ ಪಡೆಯಲು ಪ್ರಯತ್ನವನ್ನು ಮಾಡ್ತಾ ಇದ್ರೆ, ಅವರಿಗೆ ಇಷ್ಟ ಆಗುವ ಕೆಲಸದ ಆಫರ್ ಅವರನ್ನು ಹುಡುಕಿಕೊಂಡು ಬರುತ್ತದೆ.ಭೌತಿಕ ಸುಖವನ್ನು ಪಡೆದುಕೊಳ್ಳುವ ಯೋಗ ಸಹ ಮಿಥುನ ರಾಶಿಯವರಿಗೆ ಈ ಸಂದರ್ಭದಲ್ಲಿ ಕೂಡಿ ಬರುತ್ತದೆ.

ಕಟಕ ರಾಶಿ :-ಕಟಕ ರಾಶಿಯವರ ಅದೃಷ್ಟದ ಸ್ಥಾನದಲ್ಲಿ ಶುಕ್ರ ಗ್ರಹ ಮತ್ತು ರಾಹು ಗ್ರಹದ ಸಂಯೋಗ ನಡೆದಿದ್ದು. ಇದರಿಂದಾಗಿ, ಕಟಕ ರಾಶಿಯವರು ಈ ಸಮಯದಲ್ಲಿ ವಿಶೇಷವಾಗಿ ಸಾಕಷ್ಟು ಲಾಭವನ್ನು ಸಂಪಾದನೆ ಮಾಡುವರು.ಹೊಸ ನೌಕರಿಗಾಗಿ ಕಟಕ ರಾಶಿಯವರು ಎದುರು ನೋಡುತ್ತಿದ್ದರೆ ಖಂಡಿತವಾಗಿ ಅವರಿಗೆ ಇಷ್ಟ ಆಗುವ ಕ್ಷೇತ್ರದಲ್ಲಿ ಕೈ ತುಂಬಾ ಸಂಬಳ ಸಿಗುವ ಕೆಲಸ ಸಿಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಸಾಗ ಉನ್ನತಿಯನ್ನು ಕಾಣುವರು. ಅನಿರೀಕ್ಷಿತವಾಗಿ ಕೆಲಸ ಮತ್ತು ವ್ಯಾಪಾರದಲ್ಲಿ ದೊಡ್ಡ ಮಟ್ಟದ ಧನ ಲಾಭ ಆಗುವ ಸಾಧ್ಯತೆ ಹೆಚ್ಚಾಗಿದೆ. ಈ ಸಮಯದಲ್ಲಿ ಕಟಕ ರಾಶಿಯವರು ಅವರ ಬದುಕಿನಲ್ಲಿ  ದೊಡ್ಡ ಮಟ್ಟದ ಸಾಧನೆ ಮಾಡಬಲ್ಲ ಅವಕಾಶಗಳು ಸಹ ಸಿಗುತ್ತದೆ.

ಆದರೆ, ಸರಿಯಾದ ರೀತಿಯಲ್ಲಿ ಅದರ ಬಳಕೆಯನ್ನು ಮಾಡಿಕೊಳ್ಳಬೇಕು ಅಷ್ಟೇ. ಶುಕ್ರ ಗ್ರಹದ ಅನುಗ್ರಹ ಕಟಕ ರಾಶಿಯವರ ಮೇಲೆ ವ್ಯಾಪಾರ ಮತ್ತು ಉದ್ಯೋಗದ ಮೇಲೆ ಇರುವುದರಿಂದಾಗಿ ಯಾವುದೇ ರೀತಿಯ ಆದಾಯದ ತೊಂದರೆಗಳು ಈ ಸಮಯದಲ್ಲಿ ಕಾಣುವುದಿಲ್ಲ.

ಸಿಂಹ ರಾಶಿ :-ಶುಕ್ರ ಗ್ರಹ ಮತ್ತು ರಾಹು ಗ್ರಹದ ಸಂಯೋಗ ಎನ್ನುವುದು ಸಿಂಹ ರಾಶಿಯವರ ರಾಶಿ ಚಕ್ರದ 10ನೇ ಸ್ಥಾನದಲ್ಲಿ ನಡೆಯುತ್ತಿದೆ. ಮಾಡುವ ಪ್ರತಿ ಒಂದು ಕೆಲಸದಲ್ಲಿ ಸಹ ಸಿಂಹ ರಾಶಿಯವರಿಗೆ ಅದೃಷ್ಟದ ಸಹಾಯ ಸಿಗುತ್ತದೆ. ಸಿಂಹ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ಸಹ ಸುಧಾರಣೆ ಕಂಡು ಬರುತ್ತದೆ. ಆದಾಯದ ಹೆಚ್ಚಿನ ಮೂಲಗಳು ಸಿಂಹ ರಾಶಿಯವರಿಗಾಗಿ ತೆರೆದುಕೊಳ್ಳಲಿದೆ.

ಸಿಂಹ ರಾಶಿಯವರು ಯಾರೆಲ್ಲ ವಿವಾಹವಾಗಿ ಸಂತಾನ ಭಾಗ್ಯಕ್ಕಾಗಿ ಎದುರು ನೋಡುತ್ತಿದ್ದಾರೆ ಅವರಿಗೆ, ಈ ಸಮಯದಲ್ಲಿ ಒಳ್ಳೆಯ ಸುದ್ದಿ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಿಂಹ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ಸಹ ಸಾಕಷ್ಟು ಪ್ರಗತಿಯನ್ನು ಸಾಧಿಸುವರು. ಉದ್ಯೋಗ ಕ್ಷೇತ್ರದಲ್ಲಿ ಸಹ ಸಂಬಳ ಹೆಚ್ಚಾಗುತ್ತದೆ ಮತ್ತು ಮೇಲಿನ ಸ್ಥಾನಕ್ಕೆ ಬಡ್ತಿ ಸಿಗುವ ಸಾಧ್ಯತೆಗಳು ಹೆಚ್ಚಾಗಿ ಕಾಣುತ್ತಿದೆ. ಮುಂಬರುವ ದಿನಗಳಲ್ಲಿ ಉತ್ತಮ ಬೆಳವಣಿಗೆಗಳನ್ನು ಈ ರಾಶಿಯವರು ಕಾಣುವರು.

ಕನ್ಯಾ ರಾಶಿ :-ಶುಕ್ರ ಗ್ರಹದ ರಾಶಿ ಬದಲಾವಣೆ ಎನ್ನುವುದು ಕನ್ಯಾ ರಾಶಿಯವರಿಗೆ ಸಾಕಷ್ಟು ಲಾಭವನ್ನು ತಂದು ಕೊಡುತ್ತದೆ. ಮಾಲವ್ಯ ರಾಜಯೋಗ ಎನ್ನುವುದು ಕನ್ಯಾ ರಾಶಿಯವರಿಗೆ ಹಣದ ವಿಚಾರದಲ್ಲಿ ಸಾಕಷ್ಟು ಲಾಭವನ್ನು ತಂದುಕೊಡುತ್ತದೆ. ಒಂದು ವೇಳೆ ಜಂಟಿ ವ್ಯಾಪಾರವನ್ನು ಮಾಡುವುದಕ್ಕೆ ನಿರ್ಧಾರ ಮಾಡಿದ್ದರೆ ಖಂಡಿತವಾಗಿ ಕೈ ತುಂಬಾ ಲಾಭ ಸಿಗುತ್ತದೆ. ಸಾಕಷ್ಟು ಸಮಯದಿಂದ ಸಿಗದೆ ಇರುವ ಪಿತ್ರಾರ್ಜಿತ ಆಸ್ತಿ ಈ ಸಂದರ್ಭದಲ್ಲಿ ಬಂದು ಕೈ ಸೇರುತ್ತದೆ. ಅನಿರೀಕ್ಷಿತ ಧನ ಲಾಭ ಆಗುವ ಸಾಧ್ಯತೆ ಸಹ ಇದೆ.

ಈಗಾಗಲೇ, ಉದ್ಯೋಗದಲ್ಲಿ ಇರುವವರು ಮತ್ತು ಈ ಹೊಸ ಉದ್ಯೋಗದ ಹುಡುಕಾಟದಲ್ಲಿ ಇರುವವರಿಗೆ ಅವರ ಅರ್ಹತೆಗೆ ತಕ್ಕನಾಗಿ ಇರುವ ಹಾಗು ಇಷ್ಟವಾದ ಕೆಲಸವೇ ದೊರಕುತ್ತದೆ. ಕನ್ಯಾ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ಗುರುತಿಸಿ ಸರಿಯಾದ ರೀತಿಯಲ್ಲಿ ಸನ್ಮಾನವನ್ನು ಸಹೋದ್ಯೋಗಿಗಳು ಮಾಡಲಿದ್ದಾರೆ. ವರಿಷ್ಠ ಅಧಿಕಾರಿಗಳಿಂದ ಸಹ ಕೆಲಸದ ಮೇಲೆ ಮೆಚ್ಚುಗೆ ಪಡೆಯಲಿದ್ದೀರಿ.

ಧನಸ್ಸು ರಾಶಿ :-ಮಾಲವ್ಯ ರಾಜಯೋಗ ಎನ್ನುವುದು ಧನು ರಾಶಿಯವರಿಗೆ ಯಾವುದೇ ರೀತಿಯಲ್ಲಿ ದೈವ ನೀಡಿರುವ ವರ ಎಂದು ಹೇಳಬಹುದು. ಬದುಕಿನಲ್ಲಿ ಅಂದುಕೊಂಡಿರುವ ಇಚ್ಛೆಗಳು ನೆರವೇರುತ್ತವೆ, ಮನೆ ನಿರ್ಮಾಣ ಮಾಡಬೇಕು ಮತ್ತು ಹೊಸ ವಾಹನವನ್ನು ಖರೀದಿ ಮಾಡಬೇಕು ಎನ್ನುವ ಕನಸು ನನಸಾಗುತ್ತದೆ. ಒಳ್ಳೆಯ ಕೆಲಸಗಳಿಂದಾಗಿ ಸಮಾಜದಲ್ಲಿ ಇರುವ ಗೌರವಗಳು ಇನಷ್ಟು ಹೆಚ್ಚಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಇರುವ ವ್ಯಕ್ತಿಗಳು ದೊಡ್ಡಮಟ್ಟದ ಬಡ್ತಿ ಪಡೆದುಕೊಳ್ಳುವರು.

ಈ ರಾಶಿಯವರು ಮಾಡುವ ಪ್ರತಿ ಒಂದು ಕೆಲಸಗಳಲ್ಲಿ ಮತ್ತು ತೆಗೆದುಕೊಳ್ಳುವ ಪ್ರತಿ ಒಂದು ನಿರ್ಧಾರಗಳಲ್ಲಿ ಕುಟುಂಬಸ್ಥರ ಮತ್ತು ಸ್ನೇಹಿತರ ಬೆಂಬಲ ಸಹ ಇರುತ್ತದೆ. ಇದು, ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Reply

Your email address will not be published. Required fields are marked *