1 ವರ್ಷದ ಮಗು ಹಾಗೂ ಗಂಡ ಕಾಣೆಯಾಗಿದ್ದಾರೆ ಅಂತ ದೂರು ಕೊಟ್ಟಳು, ಆದ್ರೆ ತನಿಖೆಯಲ್ಲಿ ಗೊತ್ತಾಯ್ತು ಈಕೆಯ ಅಸಲೀಮುಖ
Kannada News: ಇತ್ತೀಚಿನ ದಿನಗಳಲ್ಲಿ ಅಕ್ರ ಮ ಸಂಬಂಧಗಳಿಂದ ಹಲವಾರು ಸಮಸ್ಯೆಗಳು (marriage) ದಾಂಪತ್ಯ ಜೀವನದಲ್ಲಿ ಉಂಟಾಗುತ್ತವೆ ಅಂತಹದ್ದೇ ಒಂದು ಅಪರೂಪದ ಘಟನೆ ವೆಲ್ಲೂರಿನಲ್ಲಿ ನಡೆದಿತ್ತು .
2019ರಲ್ಲಿ ವೆಲ್ಲೂರು ಜಿಲ್ಲೆಯ ಅರ್ಕಾಟ್ ಬಳಿ ತನ್ನ ಪತಿ ಮತ್ತು ಮಗನನ್ನು ಬಲಿ ತೆಗೆದುಕೊಂಡ ಘಟನೆ ಬೆಳಕಿಗೆ ಬಂದಿದ್ದು ಪೊಲೀಸರು ತನಿಖೆ ನಡೆಸಿದಾಗ 20 ವರ್ಷದ ಮಹಿಳೆಯನ್ನ ಆರೋಪಿ ಎಂದು ಗುರುತಿಸಿ ಬಂಧಿಸಲಾಗಿತ್ತು ಈ ಮಹಿಳೆ ಮೊದಲೇ ತನ್ನ ಮಗು ಮತ್ತು ಗಂಡ ಕಾಣೆಯಾಗಿದ್ದಾರೆ ಎಂಬುದಾಗಿ ಪೊಲೀಸರಿಗೆ ದೂರು ನೀಡಿದ್ದಳು ಇದೇ ಮಹಿಳೆಯನ್ನ ಪೊಲೀಸರು ಬಂಧಿಸಿದ್ದರು.
ಅರ್ಕಾಟ್ ಸಮೀಪದ ತಾಜಾಪುರ ಗ್ರಾಮದ ದೀಪಿಕಾ ಎಂಬ 20 ವರ್ಷದ ಯುವತಿ ಎರಡು ವರ್ಷದ ಹಿಂದೆ ಅದೇ ಪ್ರದೇಶದ ಸುಬ್ರಮಣಿ ಎಂಬುವವರ ಮಗ ರಾಜ ಎಂಬ ಯುವಕನನ್ನು ವಿವಾಹವಾಗಿದ್ದಳು ಇವರಿಬ್ಬರಿಗೆ ಒಂದು ವರ್ಷದ ಗಂಡು ಮಗು ಕೂಡ ಇದ್ದು ಆತನ ಹೆಸರು ಪ್ರಾಣೇಶ್ ಎಂಬುದಾಗಿತ್ತು.
ಹೀಗಿರುವಾಗ ದೀಪಿಕಾ ತನ್ನ ಪತಿ ಮತ್ತು ಒಂದು ವರ್ಷದ ಮಗ ಕಾಣೆಯಾಗಿರುವುದಾಗಿ ಪೊಲೀಸರಲ್ಲಿ ದೂರು ನೀಡಿದ್ದಳು ಈ ದೂರಿನ ಕುರಿತು ಪೊಲೀಸರು ವಿಶ್ಲೇಷಣೆ ನಡೆಸಿ ತನಿಖೆ ಪ್ರಾರಂಭಿಸಿದಾಗ ತಿಳಿದು ಬಂದುದೇನೆಂದರೆ, ದೀಪಿಕಾಳ ನಡವಳಿಕೆ ಮತ್ತು ಅವಳ ಹೇಳಿಕೆಯನ್ನ ಅನುಮಾನಿಸಿ ಅವರು ಆಕೆಯನ್ನು ಬಂಧಿಸಿದ್ದರು ಇವರ ಅನುಮಾನದಂತೆ ಇದು ನಿಜ ಕೂಡ ಆಗಿತ್ತು.
ಸ್ವತಹ ದೀಪಿಕಾ ತಾನೇ ತನ್ನ ಮಗು ಮತ್ತು ಗಂಡನನ್ನು ಮುಗಿಸಿದ್ದಳು, ತನ್ನ ಮನೆಯ ಬಳಿ ಹೂತಿರುವುದಾಗಿ ಒಪ್ಪಿಕೊಂಡಿದ್ದಳು ದೀಪಿಕಾ ಹೇಳಿದ ಸ್ಥಳವನ್ನು ಪೊಲೀಸರು ಪರಿಶೀಲಿಸಿದಾಗ ಅವರಿಬ್ಬರ ಶವವು ಅಲ್ಲಿ ಪತ್ತೆಯಾಗಿತ್ತು ಈ ಎರಡು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ದೀಪಿಕಾ ತನ್ನ ಪತಿಯ ತಲೆಗೆ ಗಟ್ಟಿಯಾಗಿ ಹೊಡೆದು ಸಾಯಿಸಿರುವುದಾಗಿ ತಿಳಿದು ಬಂದಿತ್ತು ಹಾಗೆ ಪ್ರಾಣೇಶ್ನ ಕುತ್ತಿಗೆಯನ್ನ ಹಿಸುಕಿ ಮುಗಿಸಿದ್ದಳು ಎಂಬುದು ಬೆಳಕಿಗೆ ಬಂತು.
ಇದನ್ನೂ ಓದಿ..ಪತ್ನಿ ಇದ್ದರೂ ಪರಸ್ತ್ರೀಯನ್ನು ಗಂಡ ಮೋಹಿಸುವುದು ಯಾಕೆ ಗೊತ್ತಾ? ಚಾಣಿಕ್ಯ ಹೇಳಿದ 5 ಕಾರಣ ಇಲ್ಲಿದೆ
ಅಂದ ಹಾಗೆ ದೀಪಿಕಾ ತನ್ನ ಪತಿಯನ್ನು ಮುಗಿಸಲು ಕಾರಣವೇನೆಂದರೆ ದೀಪಿಕಾ ತನ್ನ ಪತಿಯ ಸ್ನೇಹಿತನೊಂದಿಗೆ ಅಕ್ರಮ ಸಂಬಂಧವನ್ನು ಬೆಳೆಸಿಕೊಂಡಿದ್ದಳು ಈ ವಿಷಯದಲ್ಲಿ ತನ್ನ ಪತಿ ಮತ್ತು ತನ್ನ ಮಗ ಅಡ್ಡ ಬಂದುದರಿಂದ ಇಬ್ಬರು ಸೇರಿ ಅವರನ್ನು ಸಾಯಿಸಿದ್ದಾರೆ ಎಂದು ಹೇಳಲಾಗಿದೆ. ಅದೇನೇ ಇರಲಿ ಮನೆಯ ಹೆಣ್ಣು ದಾರಿ ತಪ್ಪಿದರೆ ಏನೆಲ್ಲಾ ಆಗುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.