ಧನಸ್ಸುರಾಶಿಯವರಿಗೆ ಏಳೂವರೆ ವರ್ಷದ ಶನಿಕಾಟದಿಂದ ಮುಕ್ತಿ, ಇನ್ಮುಂದೆ ಇವರ ಜೀವನ ಹೇಗಿರತ್ತೆ ಗೊತ್ತಾ

0 41

ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಗ್ರಹಗಳಲ್ಲಿ ಶನಿಯ ರಾಶಿಚಕ್ರ ಬದಲಾವಣೆಯು ವಿಶೇಷ ಮಹತ್ವವನ್ನು ಹೊಂದಿದೆ. ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಸುಮಾರು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಈ ಕಾರಣಕ್ಕಾಗಿ, ­ ಶುಭ ಮತ್ತು ಅಶುಭ ಪರಿಣಾಮಗಳು ಸ್ಥಳೀಯರ ಮೇಲೆ ದೀರ್ಘಕಾಲ ಉಳಿಯುತ್ತವೆ. ಶನಿಯ ಸಾಡೇಸಾತಿ ಮತ್ತು ಧೈಯ್ಯಾವು ತುಂಬಾ ಮಾರಕವಾಗಿರುತ್ತದೆ. ಆದ್ದರಿಂದ ಜನರು ಯಾವಾಗಲೂ ಸಾಡೇಸಾತಿಯಿಂದ ಭಯಪಡುತ್ತಾರೆ.

ಶನಿದೇವನು ರಾಶಿಯನ್ನು ಬದಲಾಯಿಸಿದಾಗ, ಶನಿ ಸಾಡೇಸಾತಿ ಮತ್ತು ಶನಿ ಧೈಯ್ಯಾ ಅಂದರೆ ಎರಡೂವರೆ ವರ್ಷದ ಶನಿ ದೆಸೆ ಕೆಲವರ ಜೀವನದಲ್ಲಿ ಆರಂಭವಾದರೆ ಇನ್ನು ಕೆಲವರು ಈ ದೆಸೆಯಿಂದ ಮುಕ್ತಿ ಹೊಂದುತ್ತಾರೆ. ಶನಿದೇವನು 2023 ಜನವರಿ 17ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿಯ ಕುಂಭ ರಾಶಿ ಪ್ರವೇಶದಿಂದಾಗಿ ಧನು ರಾಶಿಯವರು ಏಳೂವರೆ ವರ್ಷದ ಶನಿ ಸಾಡೇಸಾತಿಯಿಂದ ಬಿಡುಗಡೆ ಹೊಂದಲಿದ್ದಾರೆ.

ಶನಿದೇವ ಪ್ರಸ್ತುತ ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಅಕ್ಟೋಬರ್ 23, 2022 ರಂದು ಮಕರ ರಾಶಿಯಲ್ಲಿಯೇ ನೇರ ನಡೆ ಆರಂಭಿಸಲಿದ್ದಾನೆ. ಇದರೊಂದಿಗೆ ಜನವರಿ 17, 2023 ರವರೆಗೆ ಶನಿದೇವನು ಮಕರ ರಾಶಿಯಲ್ಲಿ ನೇರ ನಡೆಯಲ್ಲಿರುತ್ತಾನೆ. ನಂತರ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿಯು ತನ್ನದೇ ಆದ ರಾಶಿಗೆ, ಅಂದರೆ ಕುಂಭ ರಾಶಿಗೆ ಬರುವುದರಿಂದ ಕೆಲವು ರಾಶಿಯವರಿಗೆ ಸಾಡೇ ಸತಿ ಮತ್ತು ಧೈಯ್ಯಾದಿಂದ ಮುಕ್ತಿ ಸಿಗಲಿದೆ. ಮತ್ತೊಂದೆಡೆ, ಕೆಲವು ರಾಶಿಯವರು ಶನಿಯ ಕೋಪವನ್ನು ಎದುರಿಸಬೇಕಾಗುತ್ತದೆ. ಶನಿ ಸಾಡೇಸಾತ್ ಎಂದರೆ ಎಲ್ಲರಿಗೂ ಭಯ. ಶನಿಯ ಹೆಸರು ಕೇಳಿದಾಕ್ಷಣ, ಇನ್ಯಾವ ರೀತಿಯ ಕಷ್ಟಗಳನ್ನು ಎದುರಿಸಬೇಕಾದೀತು ಎಂಬ ಚಿಂತೆ ಸಹಜವಾಗಿ ಕಾಡುತ್ತದೆ. ಕರ್ಮಕ್ಕೆ ತಕ್ಕ ಫಲವನ್ನು ನೀಡುವ ನ್ಯಾಯ ದೇವ ಶನಿದೇವ.

ಶನಿಯ ದೃಷ್ಟಿ ಬೀರಿದ ಮೇಲೆ ಅವರಿಗೆ ಕಷ್ಟಗಳು ತಪ್ಪಿದ್ದಲ್ಲವೆಂದು ಹೇಳಲಾಗುತ್ತದೆ. ಹಾಗಂತ ಶನಿ ಸಾಡೇಸಾತ್‌ನಿಂದ ಕೇವಲ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಸುಳ್ಳು. ಶನಿಯ ದೃಷ್ಟಿ ಬಿದ್ದ ಮೇಲೆ ಅನೇಕರು ಅಭಿವೃದ್ಧಿಯನ್ನು ಕಂಡಂತ ನಿದರ್ಶನಗಳು ಸಿಗುತ್ತವೆ. ಶನಿಯು ಉತ್ತಮ ಫಲವನ್ನು ನೀಡುವುದರ ಜೊತೆಗೆ ಶಿಕ್ಷೆಯನ್ನು ನೀಡುತ್ತಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವಂತೆ ಜಾತಕದಲ್ಲಿ ಶನಿಯ ಅಶುಭ ಪ್ರಭಾವ ಬೀರಲು ಆರಂಭವಾದಾಗ ಅನೇಕ ಕಷ್ಟ-ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಶನಿಯು ಒಂದು ರಾಶಿಯಲ್ಲಿ ಬರೋಬ್ಬರಿ ಏಳೂವರೇ ವರ್ಷ ಸ್ಥಿತನಾಗಿರುತ್ತಾನೆ. ಬೇರೆಲ್ಲ ಗ್ರಹಗಳಿಂತ ನಿಧಾನವಾಗಿ ಸಂಚರಿಸುವ ಗ್ರಹ ಶನಿಯಾಗಿದೆ. ಶನಿ ಸಾಡೇಸಾತ್‌ನಲ್ಲಿ ಮೂರು ಚರಣಗಳಿರುತ್ತವೆ.

ಶನಿ ಸಾಡೇಸಾತ್‌ನ ಮೊದಲನೇ ಚರಣದಲ್ಲಿ ವ್ಯಕ್ತಿಯು ಮಾನಸಿಕ ಕಷ್ಟಗಳನ್ನು ಅನುಭವಿಸಬೇಕಾದ ಸ್ಥಿತಿ ಎದುರಾಗುತ್ತದೆ. ಸಾಡೇಸಾತ್ ಆರಂಭವಾದ ಮೊದಲ ನೂರು ದಿನಗಳು ವ್ಯಕ್ತಿಯ ಮುಖದ ಮೇಲಿರುತ್ತದೆ ಎಂದು ಹೇಳಲಾಗುತ್ತದೆ. ಇದು ಅತ್ಯಂತ ಕಷ್ಟಕರವಾಗಿರುವ ಸಮಯವಾಗಿರುತ್ತದೆ ಎಂದು ಸಹ ಹೇಳಲಾಗುತ್ತದೆ. ಅದೆಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದರೆ ಶನಿ ಸಾಡೇಸಾತಿ ಎಂಬ ಹೆಸರು ಕೇಳಿದರೆ ಸಾಕು ನಡುಕ ಉಂಟಾಗುವಷ್ಟು ಭಯ ತರಿಸುತ್ತದೆ. ಶನಿ ಸಾಡೇಸಾತ್‌ನ ಎರಡನೇ ಚರಣದಲ್ಲಿ ಆರ್ಥಿಕ ಮತ್ತು ಶಾರೀರಿಕ ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ಅನೇಕ ರೀತಿಯಲ್ಲಿ ಕಷ್ಟಗಳನ್ನು, ದೈಹಿಕ ಅನಾರೋಗ್ಯವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಎರಡನೇ ಚರಣದಲ್ಲೂ ಹಲವಾರು ನೋವು-ಸಂಕಟಗಳನ್ನು ಎದುರಿಸಿ ಗೆಲ್ಲಬೇಕಾಗುತ್ತದೆ.

ಎರಡನೇ ಚರಣದ ಕೊನೆಯಲ್ಲಿ ಮತ್ತು ಮೂರನೇ ಚರಣದ ಸಂದರ್ಭದಲ್ಲಿ ನಿಧಾನವಾಗಿ ವ್ಯಕ್ತಿಯ ಸಮಸ್ಯೆಗಳು, ಸಂಕಟಗಳು ದೂರವಾಗುತ್ತಾ ಬರುತ್ತವೆ. ಅಂತಿಮ ಚರಣದಲ್ಲಿ ಶನಿದೇವ ವ್ಯಕ್ತಿಯ ಮೇಲೆ ಹೆಚ್ಚಿನ ಕೃಪಾದೃಷ್ಟಿಯನ್ನು ಬೀರುತ್ತಾನೆ ಮತ್ತು ಹೆಚ್ಚೆಚ್ಚು ಒಳಿತನ್ನು ಮಾಡುತ್ತಾನೆ ಎಂದು ಹೇಳಲಾಗುತ್ತದೆ. ಆರ್ಥಿಕ ಲಾಭವನ್ನು ತಂದುಕೊಡುವ ಶನಿ ಸಾಡೇಸಾತ್‌ನ ಅಂತಿಮ ಚರಣ ಈಗ ಧನುರಾಶಿಯವರಿಗಿದೆ.

ಶನಿ ಸಾಡೇಸಾತ್‌ನ ಕೊನೆಯ ಚರಣದಲ್ಲಿ ಈಗ ಧನುರಾಶಿಯವರಿದ್ದಾರೆ. ಈ ರಾಶಿಯವರಿಗೆ ಶನಿಸಾಡೇ ಸಾತ್‌ನಿಂದ ಮುಕ್ತಿ ದೊರೆಯುವ ಸಮಯ ಬಂದಾಗಿದೆ. ಇಷ್ಟು ದಿನ ಅನುಭವಿಸಿದ ಕಷ್ಟ-ನೋವುಗಳು ಕೊನೆಯಾಗಲಿದೆ. ಅಂತಿಮ ಚರಣದಲ್ಲಿ ಒಳಿತು ಮಾಡುವ ಶನಿ ಸಾಡೇಸಾತ್ ಈಗ ಧನು ರಾಶಿಯವರ ಪಾಲಿಗೆ ಒಳ್ಳೆಯದನ್ನು ತಂದುಕೊಡಲಿದೆ. ಶನಿ ಗ್ರಹವು 2022 ಏಪ್ರಿಲ್ 29 ರಂದು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸಲಿದೆ. ಈ ಅವಧಿಯಲ್ಲಿ ಧನು ರಾಶಿಯವರಿಗೆ ಶನಿ ಸಾಡೇಸಾತ್ ಪೂರ್ಣಗೊಳ್ಳಲಿದೆ. ಇದು ಈ ಧನು ರಾಶಿಯವರಿಗೆ ಮಾನಸಿಕ ಮತ್ತು ದೈಹಿಕ ನೆಮ್ಮದಿಯನ್ನು ನೀಡಲಿದೆ. ಉತ್ತಮ ದಿನಗಳು ಮುಂದೆ ಬರಲಿವೆ ಎಂಬ ಆಶಾಭಾವನೆ ಈ ರಾಶಿಯವರಲ್ಲಿ ಮೂಡಲಿದೆ.

ಅಷ್ಟೇ ಅಲ್ಲದೇ ಶನಿದೇವನು ಇದೇ ಜುಲೈ 12 ರಿಂದ 2023ರ 17 ಜನವರಿ ತನಕ ವಕ್ರಿ ಸ್ಥಿತಿಯಲ್ಲಿ ಸಂಚರಿಸುತ್ತಾ ಮಕರ ರಾಶಿಯನ್ನು ಪ್ರವೇಶಿಸಲಿದೆ. ಹಾಗಾಗಿ ಮತ್ತೊಂದು ಬಾರಿ ಧನು ರಾಶಿಯವರಿಗೆ ಶನಿ ಸಾಡೇಸಾತ್‌ನ ಕರಿನೆರಳು ಬೀಳಲಿದೆ. ಆದರೆ ಇದರ ಪ್ರಭಾವ ಈ ರಾಶಿಯವರನ್ನು ಅಷ್ಟಾಗಿ ಕಾಡುವುದಿಲ್ಲ. 2023ರ ಜನವರಿ 17ರ ನಂತರ ಧನು ರಾಶಿಯವರಿಗೆ ಶನಿ ಸಾತ್‌ನಿಂದ ಸಂಪೂರ್ಣ ಮುಕ್ತಿ ಸಿಗಲಿದೆ. ಜನವರಿ 17, 2023ರಂದು ಶನಿಯ ರಾಶಿಚಕ್ರ ಬದಲಾವಣೆಯಿಂದ ರಾಶಿಯವರು ಶನಿಯ ಧೈಯ್ಯಾದಿಂದ ಮುಕ್ತಿ ಪಡೆಯಲಿದ್ದಾರೆ. ಇದಲ್ಲದೇ ಕಳೆದ ಏಳೂವರೆ ವರ್ಷಗಳಿಂದ ನಡೆಯುತ್ತಿರುವ ಸಾಡೇ ಸತಿಯಿಂದ ಧನು ರಾಶಿಯವರಿಗೆ ಮುಕ್ತಿ ಸಿಗಲಿದೆ.

ನಂತರ ಹಿಮ್ಮುಖವಾಗಿ ಮಕರ ರಾಶಿಗೆ ಸಾಗುತ್ತದೆ. ಬಳಿಕ ಜನವರಿ 18, 2023 ರಿಂದ ಮಾರ್ಚ್ 29, 2025 ರವರೆಗೆ ಮತ್ತೆ ಕುಂಭ ರಾಶಿಗೆ ಚಲಿಸಲಿದೆ. ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ಸಾಗುವಾಗ ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. 3 ರಾಶಿಚಕ್ರದ ಮೇಲೆ ಶನಿಯ ಪ್ರಭಾವವು ಕೊನೆಗೊಂಡಾಗ, ಜನರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಸ್ಥಗಿತಗೊಂಡ ಕಾಮಗಾರಿ ಮತ್ತೆ ಆರಂಭವಾಗಲಿದೆ. ಸಂಪತ್ತು ವೃದ್ಧಿ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ. ಒಳ್ಳೆಯ ಕೆಲಸದ ಆಫರ್ ಬರಬಹುದು. ವ್ಯಾಪಾರದಲ್ಲಿ ಉತ್ತಮ ಲಾಭ ಮತ್ತು ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

Leave A Reply

Your email address will not be published.