Shani gocharapala For Leo Horoscope: ಸಿಂಹ ರಾಶಿಯಲ್ಲಿ ವಿಶೇಷವಾಗಿರುವಂತಹ ಫಲಗಳಿದ್ದು ಸಿಂಹ ರಾಶಿಯಲ್ಲಿರುವಂತಹ ವ್ಯಕ್ತಿಗಳಿಗೆ ಅವರ ರಾಶಿಯಾಧಿಪತಿಯಾದಂತಹ ರವಿಯು ರಾಜಗ್ರಹವಾಗಿರಲಿದ್ದಾನೆ ಆದ್ದರಿಂದ ರವಿಯು ವಿಶೇಷವಾದ ಚೈತನ್ಯ,ಧೈರ್ಯ, ಮತ್ತು ಆತ್ಮ ಬಲವನ್ನು ನೀಡುತ್ತಾನೆ. ವಿಶೇಷವಾಗಿ ರಾಜಕೀಯ ಸ್ಥಾನದಲ್ಲಿರುವ ವ್ಯಕ್ತಿಗಳಿಗೆ ಯಶಸ್ಸಿನ ಜೊತೆಗೆ ಸ್ವಲ್ಪ ಸಮಸ್ಯೆಗಳು ಉಂಟಾಗುತ್ತವೆ. ಶನಿ ರಾಶಿಗೆ ಮಾರಕವಾದರೂ ಕೂಡ ಸಪ್ತಮದಲ್ಲಿ ಸ್ವಲ್ಪಮಟ್ಟಿಗೆ ಅನುಕೂಲವನ್ನು ಕೂಡ ಮಾಡಿಕೊಡುತ್ತಾನೆ ಆದ್ದರಿಂದ ಸಿಂಹರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಸ್ವಲ್ಪ ಮಟ್ಟಿಗೆ ಕೋಪ ಜಾಸ್ತಿ ಆದ್ದರಿಂದ ಇವರಿಗೆ ಕರ್ಮಫಲಗಳು ಕೂಡ ಕಾಡಿಸುತ್ತವೆ.

ಸಿಂಹ ರಾಶಿಯವರಿಗೆ ಬೇಕಾದಷ್ಟು ಹಣಕಾಸು ಬರುತ್ತಿದ್ದರು ಸಹ ಅದು ಕೈಯಲ್ಲಿ ನಿಲ್ಲುವುದಿಲ್ಲ ಇಂತಹ ಹಣವು ಶುಭ ಕಾರ್ಯಕ್ಕೆ ಅಥವಾ ಒಳ್ಳೆಯ ಕಾರ್ಯಕ್ಕೆ ಖರ್ಚಾಗುತ್ತದೆ ಆದ್ದರಿಂದ ಯೋಚಿಸುವ ಅಗತ್ಯವಿಲ್ಲ. ಸಿಂಹ ರಾಶಿಯವರು ನೇರವಾದ ನಡೆ-ನುಡಿಯಿಂದ ಒಳ್ಳೆಯ ಹೆಸರನ್ನು ಮಾಡಿರುತ್ತೀರಿ ಅದರಿಂದ ನೀವು ಸಮಾಜದಲ್ಲಿ ಉತ್ತಮವಾದ ಗೌರವವನ್ನು ಪಡೆದಿರುತ್ತೀರಿ ಹಾಗೆ ಉತ್ತಮ ಮಾತುಗಾರರಾಗಿರುತ್ತೀರಿ ನಿಮ್ಮ ಮಾತಿನಲ್ಲಿ ಅರ್ಥ ಇರುತ್ತದೆ. ವಿವಾಹವಾಗದೇ ಇರುವಂತಹ ವ್ಯಕ್ತಿಗಳಿಗೆ ವಿವಾಹದ ಯೋಗ ಈ ಸಂದರ್ಭದಲ್ಲಿ ಬರಲಿದ್ದು ಕೆಲವರಿಗೆ ಸಂತಾನಯೋಗವು ಸಹ ಪ್ರಾಪ್ತಿಯಾಗುತ್ತದೆ ಹಾಗೆಯೇ ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಸ್ವಲ್ಪ ಮಟ್ಟಿಗೆ ಗೊಂದಲಗಳು ಕಂಡುಬರುತ್ತವೆ ನಿಮ್ಮ ಕೆಲಸ ಕಾರ್ಯಗಳಲ್ಲಿ ನಿಧಾನ ಉಂಟಾಗುತ್ತದೆ ಆದರೂ ಕೂಡ ಭಯಪಡುವ ಅವಶ್ಯಕತೆ ಇಲ್ಲ ನಿಧಾನವಾದರೂಸಹ ನಿಮ್ಮ ಪ್ರಯತ್ನದಿಂದ ಆ ಕೆಲಸ ಪೂರ್ಣಗೊಳ್ಳುತ್ತದೆ.

Shani gocharapala For Leo Horoscope

ಹಾಗೆಯೇ ಈ ಸಮಯದಲ್ಲಿ ಕೆಲಸಗಳಿಗೆ ಸ್ವಲ್ಪ ಅಲೆದಾಟ ಜಾಸ್ತಿ ಇದರ ಜೊತೆಗೆ ವಿಶೇಷವಾಗಿ ತಂದೆ ತಾಯಿಯ ಆರೋಗ್ಯಕ್ಕೆ ಹೆಚ್ಚಿನ ಗಮನವನ್ನು ಹರಿಸುವುದು ಒಳ್ಳೆಯದು ಗುರುಹಿರಿಯರ ಸೇವೆಯಿಂದ ಅವರ ಆಶೀರ್ವಾದವನ್ನು ಪಡೆದುಕೊಳ್ಳಿ. ಈ ಸಮಯದಲ್ಲಿ ಶತ್ರುಗಳ ತೊಂದರೆ ನಿಮಗೆ ಸ್ವಲ್ಪ ಮಟ್ಟಿಗೆ ಕಾಡುತ್ತದೆ ಅದನ್ನು ಕೂಡ ನೀವು ತಡೆದುಕೊಳ್ಳಬೇಕು ಇದರ ಜೊತೆಗೆ ದಾಂಪತ್ಯದಲ್ಲಿ ಅಸಮಾಧಾನ ವಿರಸಗಳು ಉಂಟಾಗುವ ಸಾಧ್ಯತೆಯೂ ಕೂಡ ಈ ಸಮಯದಲ್ಲಿ ಇದೆ ಆದ್ದರಿಂದ ತಾಳ್ಮೆಯಿಂದ ಎಲ್ಲವನ್ನು ನಿಭಾಯಿಸುವುದರಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಇದನ್ನ ಹೊರತುಪಡಿಸಿ ನಿಮ್ಮ ಆಯುಷ್ಯ ಅದೃಷ್ಟ ಎಲ್ಲವೂ ಚೆನ್ನಾಗಿಯೇ ಇದೆ ದೃಢವಾದ ಮನಸ್ಸಿನಿಂದ ನಿರಂತರವಾಗಿ ನಿಮ್ಮ ಕಾರ್ಯವನ್ನ ನೀವು ಮಾಡಿದ್ದಲ್ಲಿ ದೇವರ ಅನುಗ್ರಹದಿಂದ ನೀವು ಯಶಸ್ಸನ್ನ ಕಾಣುತ್ತೀರಿ.

ಅನಿರೀಕ್ಷಿತವಾಗಿ ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಉಂಟಾಗಬಹುದು ಹಾಗೆ ಧನಾಗಮನ ಆಗುವ ಯೋಗ ಕೂಡ ನಿಮ್ಮಲ್ಲಿದೆ. ವಿದೇಶ ಪ್ರಯಾಣ ಮಾಡುವ ಸಂಭವವು ಈ ಸಮಯದಲ್ಲಿ ಕಂಡು ಬರಬಹುದು ಜೊತೆಗೆ ಪುಣ್ಯಕ್ಷೇತ್ರಗಳ ದರ್ಶನದ ಯೋಗ ಕೂಡ ಈ ಸಮಯದಲ್ಲಿ ನಿಮ್ಮ ರಾಶಿಯವರಿಗೆ ಇದೆ. ಈ ಸಮಯದಲ್ಲಿ ಸಂಘ ಸಂಸ್ಥೆಗಳು ಹಾಗೆ ರಾಜಕೀಯ ಕ್ಷೇತ್ರಗಳಲ್ಲಿ ಹೆಸರು ಮಾಡುವಂತಹ ಯೋಗವನ್ನ ನೀವು ಹೊಂದಿರುತ್ತೀರಿ.

ಸಿಂಹ ರಾಶಿಯವರು ತಮ್ಮ ತೂಂದರೆ ಕಾರ್ಪಣ್ಯಗಳನ್ನು ದೂರ ಮಾಡಿಕೊಳ್ಳಲು ನಿಮ್ಮ ಹತ್ತಿರದ ಈಶ್ವರನ ದೇವಸ್ಥಾನಕ್ಕೆ ಹೋಗಿ 9 ಸೋಮವಾರ ಬಿಲ್ವಪತ್ರೆಯ ಅರ್ಚನೆಯನ್ನು ಮಾಡುವುದರಿಂದ ನಿಮ್ಮಲ್ಲಿರುವ ದೋಷಗಳನ್ನು ಪರಿಹರಿಸಿಕೊಳ್ಳಬಹುದು.

Leave a Reply

Your email address will not be published. Required fields are marked *