ಸಾಮಾನ್ಯವಾಗಿ ಒಬ್ಬ ಮನುಷ್ಯನ ಜೀವಿತಾವಧಿ ನೂರು ವರ್ಷ ಎಂದು ಹೇಳಲಾಗುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ 60 ವಯಸ್ಸಿಗೆ ಸಾವನ್ನಪ್ಪುತ್ತಿದ್ದಾರೆ. ಇನ್ನು ಕೆಲವರು 35ವರ್ಷ ವಯಸ್ಸಿನ ಒಳಗೆ ಸಾಯುತ್ತಿದ್ದಾರೆ. ಈ ರೀತಿಯ ಸಾವಿಗೆ ಏನು ಕಾರಣ, ಮನುಷ್ಯ ಹೇಗೆ ಜೀವಿಸಬೇಕು ಎಂಬ ಆಧ್ಯಾತ್ಮಿಕ ವಿಷಯಗಳನ್ನು ಈ ಲೇಖನದಲ್ಲಿ ನೋಡೋಣ.

ಕೆಲವರು ಚಿಕ್ಕ ವಯಸ್ಸಿನಲ್ಲಿ ಆಕ್ಸಿಡೆಂಟಾಗಿ ಸತ್ತುಹೋಗುತ್ತಾರೆ, ಇನ್ನು ಕೆಲವರು ನೀರಿಗೆ ಬಿದ್ದು ಉಸಿರುಕಟ್ಟಿ ಸಾಯುತ್ತಾರೆ, ನೇಣು ಹಾಕಿಕೊಂಡು ಸಾಯುತ್ತಾರೆ. ಈ ರೀತಿಯ ಸಾವನ್ನು ನಾವು ನೋಡಿರುತ್ತೇವೆ ಆಗ ಜನರು ಸಾಮಾನ್ಯವಾಗಿ ಅಲ್ಲಿಗೆ ಹೋಗಿಲ್ಲ ಅಂದಿದ್ದರೆ ಉಳಿದುಕೊಳ್ಳುತ್ತಿದ್ದರು ಎಂಬಿತ್ಯಾದಿ ಮಾತುಗಳನ್ನು ಆಡುತ್ತಾರೆ.‌ ನಮ್ಮ ಹಣೆಯಲ್ಲಿ ಜೀವನದಲ್ಲಿ ನಮಗೆ ಏನೇನು ಆಗುತ್ತದೆ, ಯಾವೆಲ್ಲಾ ಘಟನೆಗಳು ನಡೆಯಬೇಕು ಎಂದು ಬರೆದಿರುತ್ತದೆಯೋ ಆ ಘಟನೆಗಳು ನಡೆದೇ ನಡೆಯುತ್ತವೆ. ನಾವು ಹೀಗೆ ಸಾಯಬೇಕು ಎಂದು ಇರುತ್ತದೆ ಹಾಗೆ ನಾವು ಸಾಯುತ್ತೇವೆ ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ.

ನಾವು ಹುಟ್ಟುವ ಮೊದಲೆ ಹುಟ್ಟಿದ ನಂತರ ನಮ್ಮ ಜೀವನದಲ್ಲಿ ಏನೇನು ಆಗಬೇಕು ಎಂದು ನಿಶ್ಚಯವಾಗಿರುತ್ತದೆ, ಹಾಗೆಯೇ ಸಾವು ಕೂಡ ನಿಶ್ಚಯವಾಗಿರುತ್ತದೆ. ಖಾಯಿಲೆಯಿಂದ ಸಾಯುತ್ತೇವೆ ಎಂದು ಇದ್ದರೆ ಹಾಗೆ ಸಾಯುತ್ತೇವೆ, ಸಣ್ಣಪುಟ್ಟ ದುರ್ಘಟನೆ ನಡೆದು ಸಾಯಬೇಕು ಎಂದಿದ್ದರೆ ಹಾಗೆ ಸಾಯುತ್ತೇವೆ. ಕೆಲವರಿಗೆ 30 ವರ್ಷದ ಒಳಗೆ ಸಾವು ಬರುತ್ತದೆ ಅದು ಕೂಡ ಹಣೆಬರಹದ ಪರಿಣಾಮ. ಮಹಾಭಾರತದಲ್ಲಿ ಬರುವ ಭೀಷ್ಮ ಪಿತಾಮಹರು ಬಾಣದ ಹಾಸಿಗೆಯಲ್ಲಿ ಸ್ವಲ್ಪ ದಿನಗಳ ಕಾಲ ಇದ್ದು ನಂತರ ಸಾವನ್ನಪ್ಪುತ್ತಾರೆ ಅವರು ಸಾಯುವುದು ಕೂಡ ಮೊದಲೇ ನಿಶ್ಚಿಯವಾಗಿತ್ತು ಹಾಗೆಯೇ ಅವರು ಸತ್ತರು.

ಕೆಲವರು ಅಕಾಲ ಮೃತ್ಯುವನ್ನು ಹೊಂದುತ್ತಾರೆ ಅಂದರೆ 35 ವರ್ಷ ವಯಸ್ಸಿನ ಒಳಗೆ ಸತ್ತರೆ ಅದನ್ನು ಅಕಾಲ ಮೃತ್ಯು ಎನ್ನುವರು. ಹಿಂದಿನ ಜನ್ಮದಲ್ಲಿ ಪಾಪ ಮಾಡಿದರೆ ಈ ರೀತಿಯ ಮೃತ್ಯು ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಅಕಾಲ ಮೃತ್ಯು ಹೊಂದಿದವರು ಈ ಜನ್ಮದಲ್ಲಿ ಒಳ್ಳೆಯ ಕೆಲಸ ಮಾಡಿದರೆ ಸ್ವರ್ಗಕ್ಕೆ ಹೋಗುವ ಸಂಭವವಿರುತ್ತದೆ ಎಂದು ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಅದೇ ಈ ಜನ್ಮದಲ್ಲಿ ಕೆಟ್ಟ ಕೆಲಸ ಮಾಡಿದರೆ, ತಂದೆ-ತಾಯಿ, ಗುರುಹಿರಿಯರಿಗೆ ಅವಮಾನ ಮಾಡಿದರೆ ನರಕ ಹಾಗೂ ಸ್ವರ್ಗಕ್ಕೆ ಹೋಗದೆ ದೆವ್ವ-ಭೂತಗಳಾಗಿ ಅಲೆದಾಡುತ್ತಾರೆ ಎಂದು ಹೇಳಬಹುದು.

ಇದರಿಂದ ನಮಗೆ ತಿಳಿಯುವುದೇನೆಂದರೆ ನಾವು ಯಾರಿಗೂ ನೋವುಂಟು ಮಾಡದೆ, ಅವಮಾನ ಮಾಡದೆ, ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು ಇದರಿಂದ ನಾವು ಸತ್ತ ನಂತರ ಸ್ವರ್ಗಕ್ಕೆ ಹೋಗುತ್ತೇವೆ. ನಾವು ಭೂಮಿಯ ಮೇಲೆ ಬದುಕಿರುವವರೆಗೆ ನಮ್ಮ ನಡವಳಿಕೆ ಹೇಗೆ ಇರುತ್ತದೆ ಎನ್ನುವುದರ ಮೇಲೆ ಅಂದರೆ ನಮ್ಮ ಕರ್ಮಗಳು ಹೇಗಿರುತ್ತವೆ ಎನ್ನುವುದರ ಮೇಲೆ ಸ್ವರ್ಗ-ನರಕ ಎಂಬುದು ನಿರ್ಧಾರವಾಗುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡಲು ಆಗದಿದ್ದರೂ ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸುವುದು, ಕೆಟ್ಟ ಯೋಚನೆ ಮಾಡುವುದಾಗಲಿ, ಕೆಟ್ಟ ಕೆಲಸ ಮಾಡುವುದಾಗಲಿ ಮಾಡಬಾರದು. ನಮ್ಮಿಂದ ಇನ್ನೊಬ್ಬರಿಗೆ ಒಳ್ಳೆಯದಾಗದೆ ಇದ್ದರೂ ನಡೆಯುತ್ತದೆ ಆದರೆ ನಮ್ಮಿಂದ ಇನ್ನೊಬ್ಬರಿಗೆ ಕೆಟ್ಟದ್ದಾಗಬಾರದು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *