ಸ್ಯಾಂಡಲ್ವುಡ್ನಲ್ಲಿ ಮಾದಕ ವಸ್ತುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಹೆಸರಾಂತ ನಿರೂಪಕಿ ಅನುಶ್ರೀ ಅವರನ್ನು ಸಿಸಿಬಿ ಪೊಲೀಸರು ಈಗಾಗಲೇ ಒಂದು ಸುತ್ತಿನ ವಿಚಾರಣೆಗೆ ಒಳಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅನುಶ್ರೀ ಅವರು ಕೆಲವು ಮಾಧ್ಯಮಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ತಾನು ಸಿಸಿಬಿ ವಿಚಾರಣೆಯಲ್ಲಿ ಭಾಗಿಯಾದ ತಕ್ಷಣ ಅಪರಾಧಿ ಆಗುವುದಿಲ್ಲ ಎಂದು ಅನುಶ್ರೀ ಕಣ್ಣೀರು ಹಾಕಿದ್ದಾರೆ. ಹಲವಾರು ವರ್ಷಗಳಿಂದ ಅನುಶ್ರೀ ಅವರನ್ನು ಟಿವಿ ಮಾಧ್ಯಮಗಳ ಮೂಲಕ ನೋಡಿಕೊಂಡು ಬಂದಿರುವಂತಹ ಕನ್ನಡಿಗರು ಹಾಗೂ ಅವರ ಅಭಿಮಾನಿಗಳು ಅವರ ಪರವಾಗಿ ನಿಂತಿದ್ದಾರೆ. ಇದೇ ಸಾಲಿಗೆ ಸೇರುತ್ತಾರೆ ಬ್ರಹ್ಮಗಂಟು ಧಾರಾವಾಹಿಯ ಗೀತಾ ಭಟ್ ಕೂಡ. ಬ್ರಹ್ಮಗಂಟು ದಾರವಾಹಿ ಯ ಗೀತಾ ಭಟ್ ಅವರು ಅನುಶ್ರೀ ಅವರಿಗೆ ನಾವೆಲ್ಲರೂ ನಿಮ್ಮ ಜೊತೆಗೆ ಇದ್ದೇವೆ ನೀವು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ನಾವು ನಿಮ್ಮ ಜೊತೆಯಾಗಿ ನಿಲ್ಲುತ್ತೇವೆ ಎಂದು ಹೇಳಿದ್ದಾರೆ. ಇದೇ ರೀತಿ ಸರಿಗಮಪ ಖ್ಯಾತಿಯ ಹನುಮಂತ ಕೂಡ ಅನುಶ್ರೀ ಅವರ ಬಗ್ಗೆ ಮಾತನಾಡಿದ್ದು ಹನುಮಂತ ಅನುಶ್ರೀ ಅವರ ಬಗ್ಗೆ ಏನೆಂದು ಹೇಳುತ್ತಾರೆ ಅನ್ನೋದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮಾದಕ ವಸ್ತುಗಳ ವಿಚಾರವಾಗಿ ಸಂಜನಾ ಮತ್ತು ರಾಗಿಣಿ ಅವರನ್ನು ಈಗಾಗಲೇ ಬಂಧಿಸಲಾಗಿದೆ ಆದರೆ ಅನುಶ್ರೀ ಅವರನ್ನು ಇನ್ನೂ ಬಂಧಿಸಲಾಗಿಲ್ಲ ಬರೀ ವಿಚಾರಣೆ ನಡೆದಿದೆ. ಅನುಶ್ರೀ ಅವರನ್ನು ಬಂಧನ ಮಾಡಲಾಗದಂತೆ ಆಕೆಯ ಪರವಾಗಿ ಶುಗರ್ ಡ್ಯಾಡಿ ಒಬ್ಬರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ವಕೀಲ ಪ್ರಶಾಂತ್ ಸಂಬರಗಿ ಟ್ವೀಟ್ ಮಾಡಿದ್ದಾರೆ. ಇದುವರೆಗೂ ಅನುಶ್ರೀಯ ಬಂಧನ ಮಾಡಲಾಗದಂತೆ ಶುಗರ್ ಡ್ಯಾಡಿ ಒಬ್ಬರು ತಡೆದಿದ್ದಾರೆ. ಇನ್ನು ಮುಂದೆ ಅದು ಹಾಗೆ ಆಗುವುದಿಲ್ಲ ಅನುಶ್ರೀ ತಪ್ಪಿಗೆ ಆಕೆಗೆ ಶಿಕ್ಷೆ ಆಗುವುದು ಖಚಿತ. ಅನುಶ್ರೀಯ ಮತ್ತಷ್ಟು ರಹಸ್ಯಗಳು ಬಯಲಾಗುವುದು ಖಚಿತ ಎಂದು ಸಹ ಪ್ರಶಾಂತ ಸಂಬರಗಿ ಯವರ ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಹಣ ಮತ್ತು ಐಷಾರಾಮಿ ಜೀವನದ ಆಸೆಯನ್ನು ತೋರಿಸಿ, ಐಷಾರಾಮಿ ಉಡುಗೊರೆಗಳನ್ನು ನೀಡುವ ಮೂಲಕ ಯುವತಿಯರನ್ನು ತನ್ನತ್ತ ಸೆಳದುಕೊಳ್ಳುವ ಹಿರಿಯ ವ್ಯಕ್ತಿಗೆ ಶುಗರ್ ಡ್ಯಾಡಿ ಎಂದು ಹೇಳಲಾಗುತ್ತದೆ. ಅನುಶ್ರೀ ಹಿಂದೆಯೂ ಕೂಡ ಅಂತಹ ಒಬ್ಬ ವ್ಯಕ್ತಿ ಇದ್ದಾರೆ ಎಂದು ಪ್ರಶಾಂತ ಸಂಬರಗಿ ಆರೋಪಿಸಿದ್ದಾರೆ.

ಆದರೆ ಸದ್ಯಕ್ಕೆ ಪ್ರಶಾಂತ್ ಸಂಬರಗಿ ಆ ವ್ಯಕ್ತಿ ಹೆಸರನ್ನು ಬಾಯಿಬಿಡುತ್ತಿಲ್ಲ. ಈ ಪ್ರಕರಣ ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ ಅಷ್ಟೇ. ಇನ್ನು ಅನುಶ್ರೀ ಅವರನ್ನು ಪ್ರೀತಿಯಿಂದ ಅಕ್ಕ ಎಂದು ಕರೆಯುತ್ತಿದ್ದ ಸರಿಗಮಪ ಖ್ಯಾತಿಯ ಹನುಮಂತ ಕೂಡ ಇದರ ಬಗ್ಗೆ ಮಾತನಾಡಿದ್ದು, ಅನುಶ್ರೀ ಅಕ್ಕ ಅಳುತ್ತಾ ವಿಡಿಯೋ ಮಾಡಿರುವುದನ್ನು ನೋಡಿ ಬಹಳ ಬೇಸರವಾಯಿತು ಅವರು ಯಾವತ್ತಿಗೂ ಎಂದಿಗೂ ಇನ್ನೊಬ್ಬರಿಗೆ ನೋವು ಮಾಡಿದವರಲ್ಲ. ಸಾಕಷ್ಟು ಜನರ ಕಷ್ಟಕ್ಕೆ ನೆರವಾಗಿದ್ದಾರೆ ಅವರನ್ನು ಈ ರೀತಿಯಾಗಿ ನೋಡಲು ಆಗುತ್ತಿಲ್ಲ ಆದಷ್ಟು ಬೇಗ ಸತ್ಯ ಹೊರಗೆ ಬಂದು ಅನುಶ್ರೀ ಅಕ್ಕ ಆದಷ್ಟು ಬೇಗ ಈ ಆರೋಪದಿಂದ ಹೊರಬರಲಿ ಎಂದು ಸರಿಗಮಪ ಖ್ಯಾತಿಯ ಹನುಮಂತ ಹೇಳಿದ್ದಾರೆ.

Leave a Reply

Your email address will not be published. Required fields are marked *