Ultimate magazine theme for WordPress.

ರಂಗರಾಜುಗೆ ತೆಲುಗು ಕನ್ನಡ ಎರಡು ಭಾಷೆಯಲ್ಲಿ ಚಳಿ ಬಿಡಿಸಿದ ಕನ್ನಡದ ಖ್ಯಾತ ನಟ

0 1

ವಿಷ್ಟುವರ್ಧನ್ ಅವರು ಒಬ್ಬ ಒಳ್ಳೆಯ ಹೆಸರಾಂತ ಕನ್ನಡ ನಟರಲ್ಲಿ ಒಬ್ಬರು. ಇವರ ನಟನೆ ಅತ್ಯಂತ ಅದ್ಭುತ ಆಗಿರುತ್ತಿತ್ತು. ಹಾಗೆಯೇ ಇವರು ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಇವರು ನಿಧನ ಹೊಂದಿದರು. ಅವರು ಭೂಮಿಯನ್ನು ಬಿಟ್ಟು ಹೋದರೂ ಕನ್ನಡ ಚಿತ್ರರಂಗ ಅವರನ್ನು ಇಂದಿಗೂ ಮರೆತಿಲ್ಲ. ಹಾಗೆಯೇ ಎಂದಿಗೂ ಮರೆಯುವುದಿಲ್ಲ. ವಿಷ್ಣುವರ್ಧನ್ ಅವರ ಬಗ್ಗೆ ಕೀಳಾಗಿ ಮಾತನಾಡಿದ ಒಬ್ಬ ವ್ಯಕ್ತಿಗೆ ನಟ ಚರಣ್ ರಾಜ್ ಅವರು ಬಹಳ ಖಡಕ್ ಆಗಿ ಮಾತನಾಡಿದ್ದಾರೆ. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಚರಣ್ ರಾಜ್ ಅವರು ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಅವರನ್ನು ದೇವರು ಎಂದು ಪರಿಗಣಿಸುತ್ತಾರೆ. ಏಕೆಂದರೆ ಅಷ್ಟೊಂದು ಭಕ್ತಿ ಮತ್ತು ಗೌರವ ಇಟ್ಟಿದ್ದಾರೆ. ಚರಣ್ ರಾಜ್ ಅವರು ಸೂರಪ್ಪ ಸಿನೆಮಾದಲ್ಲಿ ವಿಷ್ಣುವರ್ಧನ್ ಅವರ ಜೊತೆ ಅಭಿನಯ ಮಾಡಿದ್ದರು. ಚರಣ್ ರಾಜ್ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಇವರು ಒಟ್ಟಾರೆಯಾಗಿ ಐದು ಭಾಷೆಗಳಲ್ಲಿ 500 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹೀಗಿದ್ದಾಗ ಯಾರಾದರೂ ವಿಷ್ಣುವರ್ಧನ್ ಅವರ ಬಗ್ಗೆ ಕೀಳಾಗಿ ಮಾತನಾಡಿದರೆ ಕ್ರೋಧ ಉಂಟಾಗುವುದು ಸಹಜ.

ಕನ್ನಡ ಚಿತ್ರರಂಗದ ಮಹಾನ್ ನಟ ವಿಷ್ಣುವರ್ಧನ್ ಅವರ ಬಗ್ಗೆ ತೆಲುಗು ಚಿತ್ರರಂಗದ ವಿಜಯ್ ರಂಗರಾಜು ಎನ್ನುವ ವ್ಯಕ್ತಿ ಕೀಳು ಮಟ್ಟದಲ್ಲಿ ಮಾತನಾಡಿರುವುದು ಕನ್ನಡದ ಅಭಿಮಾನಿಗಳಿಗೆ ಆಕ್ರೋಶ ಉಂಟಾಗಿದೆ. ಚರಣ್ ರಾಜ್ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಕನ್ನಡದ ಮೇಲೆ ತುಂಬಾ ಅಭಿಮಾನ ಇಟ್ಟಿದ್ದಾರೆ. ತೆಲುಗು ಚಿತ್ರರಂಗದ ವಿಜಯ್ ರಂಗರಾಜು ಎನ್ನುವವರು ವಿಷ್ಣುವರ್ಧನ್ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಹಾಗಾಗಿ ಚರಣ್ ರಾಜ್ ಅವರು ಕೂಡ ಕ್ರೋಧಗೊಂಡಿದ್ದಾರೆ.

ಆದ್ದರಿಂದ ರಂಗರಾಜು ಅವರಿಗೆ ನೀವು ಹೀಗೆ ಮಾತನಾಡಬಾರದಿತ್ತು. ಏಕೆಂದರೆ ಅಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಮಾತನಾಡುವ ಅರ್ಹತೆ ಯಾರಿಗೂ ಇಲ್ಲ. 500 ಸಿನೆಮಾಗಳಲ್ಲಿ ನಟನೆ ಮಾಡಿದ ನನಗೂ ಕೂಡ ಆ ಅರ್ಹತೆ ಇಲ್ಲ. ಯಾರೇ ಆಗಲಿ ವಿಷ್ಣುವರ್ಧನ್ ಹಾಗೂ ರಾಜ್ ಕುಮಾರ್ ಅವರ ಬಗ್ಗೆ ಮಾತನಾಡಿದರೆ ನಮ್ಮ ಕನ್ನಡದ ಅಭಿಮಾನಿಗಳು ಸುಮ್ಮನೆ ಇರುವುದಿಲ್ಲ. ನಿಮ್ಮ ಹತ್ತಿರ ಅದೆಷ್ಟೇ ದೊಡ್ಡಸ್ತಿಕೆ ಇದ್ದರೂ ಅದನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ. ಅಂಬರೀಶ್ ಅವರು ಇದ್ದಿದ್ದರೆ ಈಗ ಇದರ ಪರಿಣಾಮ ಬೇರೆ ಆಗುತ್ತಿತ್ತು ಎಂದು ಹೇಳಿದ್ದಾರೆ.

Leave A Reply

Your email address will not be published.