ರಕ್ಷಿತಾ ಪ್ರೇಮ್ ಅವರ ತೋಟದಲ್ಲಿ ಸಂಕ್ರಾಂತಿ ಸಂಭ್ರಮ ಹೇಗಿತ್ತು ನೋಡಿ ವಿಡಿಯೋ

0 0

ಸುಂಟರಗಾಳಿ ಎಂಬ ಕನ್ನಡ ಸಿನಿಮಾ ಎಂದರೆ ನೆನಪಾಗುವುದು ರಕ್ಷಿತಾ ಪ್ರೇಮ್ ಅವರು. ಇವರು ಕನ್ನಡ ಚಿತ್ರರಂಗದಲ್ಲಿ ತುಂಬಾ ಚೆನ್ನಾಗಿ ಅಭಿನಯ ಮಾಡಿರುವ ಮತ್ತು ಮಾಡುತ್ತಿರುವ ನಟಿಯಾಗಿದ್ದಾರೆ. ಇವರು ನಟ ಮತ್ತು ನಿರ್ದೇಶಕ ಆದ ಪ್ರೇಮ್ ಅವರನ್ನು ವಿವಾಹವಾಗಿದ್ದಾರೆ. ಪ್ರತಿವರ್ಷ ಈ ಕುಟುಂಬ ಸಂಕ್ರಾಂತಿ ಹಬ್ಬವನ್ನು ಮನೆಯಲ್ಲಿ ಆಚರಿಸುತ್ತಿತ್ತು. ಆದರೆ ಈ ವರ್ಷ ತನ್ನ ಅಮ್ಮನ ತೋಟದಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿಕೊಂಡ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ರಕ್ಷಿತಾ ಅವರು 1983 ಮಾರ್ಚ್31 ರಂದು ಮುಂಬೈನಲ್ಲಿ ಜನಿಸುತ್ತಾರೆ. ಇವರ ತಂದೆ ಪ್ರಖ್ಯಾತ ಕ್ಯಾಮೆರಾಮೆನ್ ಬಿ ಸಿ ಗೌರಿಶಂಕರ್ ಅವರು ಹಾಗೂ ತಾಯಿ ಮಮತಾ ರಾವ್. ರಕ್ಷಿತಾ ಅವರು 2007ರಲ್ಲಿ ಪ್ರೇಮ್ ಅವರನ್ನು ವಿವಾಹವಾಗುತ್ತಾರೆ. ಶ್ವೇತಾ ಅಂದ್ರೆ ಕನ್ನಡಿಗರ ಪ್ರೀತಿಯ ಫೇವರಿಟ್ ಹೀರೋಯಿನ್ ‘ಕ್ರೇಜಿ ಕ್ವೀನ್’ ರಕ್ಷಿತಾ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಯಶಸ್ಸಿನಲ್ಲಿದ್ದಾಗಲೇ ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾಗಿದ್ದು ಮಾತ್ರ ಆಗ ಹಲವರಿಗೆ ಶಾಕ್ ನೀಡಿತ್ತು. ಪ್ರೇಮ್ ಅವರ ಮಂಡ್ಯದವರು, ಇಂಗ್ಲಿಷ್ ಗೊತ್ತಿಲ್ಲ. ಆದರೆ ರಕ್ಷಿತಾ ಮಾತ್ರ ಸಿಟಿಯಲ್ಲಿ, ಶ್ರೀಮಂತ ಮನೆಯಲ್ಲಿ ಬೆಳೆದವರು.

ರಕ್ಷಿತಾಗೆ ಹಳ್ಳಿಯ ಬದುಕು, ಸೊಗಡಿನ ಬಗ್ಗೆ ಏನೂ ಗೊತ್ತಿಲ್ಲ. ಇವರಿಬ್ಬರು ಹೇಗೆ ಪ್ರೀತಿ ಮಾಡಿದರು? ಹೇಗೆ ಮದುವೆಯಾದರು ಎಂಬುದು ಹಲವರಿಗೆ ಇನ್ನೂ ಆಶ್ಚರ್ಯವಾಗಿ ಉಳಿದಿದೆ. ಮನಸು ಮನಸುಗಳು ಒಂದಾದರೆ ಇನ್ನೇನು ಬೇಕು ಅಲ್ಲವೇ! ಹಾಗೆಯೇ ರಕ್ಷಿತಾ-ಪ್ರೇಮ್ ಪ್ರೀತಿಸಿ ಮದುವೆಯಾದರು. ಇಂದು ಈ ದಂಪತಿಗೆ ಸೂರ್ಯ ಎಂಬ ಮಗನಿದ್ದಾನೆ. ರಕ್ಷಿತಾ ತಂದೆ ತಾಯಿ ಸಪರೇಟ್ ಆಗಿದ್ದರು. ಇವರು ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ಮದುವೆ ಬಗ್ಗೆ ರಕ್ಷಿತಾಗೆ ಮೊದಲು ನಂಬಿಕೆಯಿರಲಿಲ್ಲ. ಆದರೆ ಪ್ರೇಮ್ ಅವರಲ್ಲಿ ತಂದೆಯ ಗುಣಗಳನ್ನು ಕಂಡ ರಕ್ಷಿತಾ ಅವರನ್ನೇ ಮದುವೆಯಾಗಲು ನಿರ್ಧಾರ ಮಾಡಿದರು.

ನಟ ಪ್ರೇಮ್‌ಗೆ ಯಾವುದೇ ದುಶ್ಚಟಗಳಿಲ್ಲ. ಹೀಗಾಗಿ ರಕ್ಷಿತಾ ಅವರು ಪ್ರೇಮ್ ಅವರನ್ನು ಪ್ರೀತಿಸಿ ವಿವಾಹವಾಗುತ್ತಾರೆ. ಇವರು ಸಂಕ್ರಾಂತಿ ಹಬ್ಬವನ್ನು ಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಹಸು ಎಮ್ಮೆ ಕುರಿ ಗಳ ಜೊತೆ ಸಾಂಪ್ರದಾಯಕವಾಗಿ ಆಚರಿಸಿದ್ದಾರೆ. ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ.

ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.ಸಂಕ್ರಾಂತಿ ಹಬ್ಬವೆಂದರೆ ಎಲ್ಲರಿಗೂ ವಿಶೇಷವಾದ ಮತ್ತು ಅದ್ಭುತವಾದ ಹಬ್ಬವಾಗಿದೆ. ಇದನ್ನು ಎಲ್ಲರೂ ವಿಜ್ರಂಭಣೆಯಿಂದ ಪ್ರೀತಿಯಿಂದ ಎಲ್ಲರೂ ಸೇರಿ ಆಚರಿಸುತ್ತಾರೆ.ಸಂಕ್ರಾಂತಿ ಎಂದರೆ ಎಳ್ಳು-ಬೆಲ್ಲ ತೋಟದ ಮನೆಗೆ ಪ್ರೇಮ್ ಅವರು ಅಮ್ಮನ ತೋಟ ಎಂದು ಹೆಸರಿಟ್ಟಿದ್ದಾರೆ.ಈ ಸಲ ಸಂಕ್ರಾಂತಿ ಹಬ್ಬಕ್ಕೆ ಈ ತೋಟದ ಮನೆಗೆ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್,ಸೂರಜ್,ಮುಂತಾದವರು ಬಂದು ರಕ್ಷಿತಾ ಮತ್ತು ಪ್ರೇಮ್ ದಂಪತಿಗಳು ಜೊತೆ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸಿರಿಯ ರಕ್ಷಿತಾ ಮತ್ತು ಪ್ರೇಮ್ ದಂಪತಿಗಳು ತಮ್ಮ ತೋಟದ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ವಿಜ್ರಂಭಣೆಯಿಂದ ವಿಶೇಷತೆಯಿಂದ ಆಚರಿಸಿದ್ದಾರೆ.

Leave A Reply

Your email address will not be published.