ರಾಜ್ಯದಲ್ಲಿ ಇನ್ನೂ 7 ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ

0 749

ಬಿಸಿಲಿನ ಝಳಕ್ಕೆ ಬರಗಾಲದ ಛಾಯೆ ಉಂಟಾಗಿದೆ. ಎಲ್ಲಿ ನೋಡಿದರೂ ನೀರಿಗೆ ಅಭಾವ ಸೃಷ್ಟಿ ಆಗಿದೆ. ಮಳೆ ಬಂದು ಭೂಮಿ ತಂಪು ಮಾಡದ ಹೊರತು ಬೇರೆ ಯಾವ ದಾರಿ ಇಲ್ಲ ಬಿಸಿಲಿನಿಂದ ಪಾರಾಗಲು.

ಮುಂಗಾರಿನ ತನಕ ಕಾಯಬೇಕು ಎನ್ನುವ ಅಗತ್ಯ ಇಲ್ಲ ಯುಗಾದಿ ಹಬ್ಬಕ್ಕೆ ಹೊಸ ವರ್ಷಕ್ಕೆ ಹೊಸ ಮೆರಗು ನೀಡಲು ಮಳೆರಾಯ ಸ್ವಾಗತ ನೀಡುವನು ಎಂದು ಹವಾಮಾನ ಇಲಾಖೆಯ ವರದಿ ಮಾಡಿದೆ. ಈ ಬಿರು ಬಿಸಿಲಿನ ತಾಪಕ್ಕೆ ಎಷ್ಟೇ ನೀರು ಸೇವನೆ ಮಾಡಿದರು ಅದು ದಣಿವು ತಿರಿಸುತ್ತಿಲ್ಲ. ಬಿಸಿಲು ಎಷ್ಟಿದೆ ಎಂದರೆ ಟಾರ್ ರಸ್ತೆ ಮೇಲೆ ಒಂದು ಬಾರಿ ಕಾಲು ಇಟ್ಟರೆ ಬೆಂದು ಬೊಬ್ಬೆ ಬರುವಷ್ಟು ಕಾದು ಸುಡುತ್ತಿದೆ ನೆಲ.

ರಾಜ್ಯದಲ್ಲಿ 7 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ. ರಾಜ್ಯ ಮುಂಬರುವ 7 ದಿನಗಳ ಕಾಲ ಬಿಸಿ ಗಾಳಿ ಹಾಗೂ ಮಳೆ ಎರಡಕ್ಕೂ ಸಾಕ್ಷಿಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಯುಗಾದಿ ಹಬ್ಬ ಕಳೆದ ನಂತರ ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಬಿಸಿ ಗಾಳಿ ಇರಲಿದೆ. ಆದರೆ ಅದೇ, ದಿನಗಳಲ್ಲಿ ಅಂದು ಕೊಡಗು, ಚಿಕ್ಕಮಗಳೂರು ಮತ್ತು ಮಂಡ್ಯ ಜಿಲ್ಲೆಗಳ ಕೆಲವು ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಮಾವಾಸ್ಯೆ ಕಳೆದ ನಂತರ ಕೊಡಗು, ಚಿಕ್ಕಮಗಳೂರು ಮತ್ತು ಮೈಸೂರು ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೊದಲೇ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

ಏಪ್ರಿಲ್‌ 9 ಮತ್ತು 10 ರಂದು ಬಹುತೇಕ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆ ರಾಯ ಧರೆಗಿಳಿದು ಭೂಮಿ ಧಗೆಯನ್ನು ತಂಪು ಮಾಡುವನೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ. ಮುಂಗಾರು ಬರುವ ಮುನ್ನ ಬರುವ ಮಳೆ ಬೆಳೆಗೆ ಯಾವ ಉಪಯೋಗ ನೀಡದೆ ಇದ್ದರು ಬಿಸಿಲಿಗೆ ಒಣಗಿ ನಿಂತಿರುವ ಭೂಮಿ ತಾಯಿ ಒಡಲನ್ನು ತಂಪು ಮಾಡಬಹುದು.

Leave A Reply

Your email address will not be published.