ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಸಕ್ತರು ಅರ್ಜಿ ಸಲ್ಲಿಸಿ

0 3

ನಮ್ಮ ದೇಶ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ ಅವುಗಳಲ್ಲಿ ನಿರುದ್ಯೋಗ ಒಂದು ಪ್ರಮುಖ ಸಮಸ್ಯೆಯಾಗಿದೆ. ನಿರುದ್ಯೋಗ ಎಂಬ ಸಮಸ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ ಅಲ್ಲದೆ ಕೊರೋನ ಮಹಾಮಾರಿ 2020ರಲ್ಲಿ ಕಾಣಿಸಿಕೊಳ್ಳುವ ಮೂಲಕ ನಿರುದ್ಯೋಗದ ಪ್ರಮಾಣ ಇನ್ನೂ ಹೆಚ್ಚಾಗಿದೆ. ಇದರ ನಡುವೆ ಸರ್ಕಾರಿ ರೇಲ್ವೆ ಇಲಾಖೆಯಿಂದ ಒಂದು ಶುಭ ಸಮಾಚಾರ ಸಿಕ್ಕಿದೆ. ರೇಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಹಾಗೂ ಅಪ್ಲೈ ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ರೇಲ್ವೆ ಡಿಪಾರ್ಟ್ಮೆಂಟ್ ಅಂದರೆ ಐಆರ್ ಸಿಟಿಸಿ 2021ರಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ. ಇದು ರೇಲ್ವೆ ಇಲಾಖೆಯ ಅಡಿಯಲ್ಲಿ ಬರುವ ಜಾಬ್ ಆಗಿದ್ದು, ಬಹಳಷ್ಟು ಜನರಿಗೆ ಸರ್ಕಾರಿ ಕೆಲಸ ಮಾಡುವ ಕನಸಿರುತ್ತದೆ ಅದರಲ್ಲೂ ರೇಲ್ವೆ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುವ ಕನಸು ಇರುತ್ತದೆ. ಈ ಜಾಬ್ ಪಡೆಯಲು ಯಾವುದೇ ಎಕ್ಸಾಮ್ ಬರೆಯಬೇಕಾಗಿಲ್ಲ ಸಂದರ್ಶನದ ಮೂಲಕ ನೀವು ಇದನ್ನು ಪಡೆಯಬಹುದು. ಸಂದರ್ಶನದಲ್ಲಿ ನೀವು ಉತ್ತೀರ್ಣರಾದರೆ ಬೆಂಗಳೂರಿನಲ್ಲಿ ನಿಮಗೆ ರೇಲ್ವೆ ಇಲಾಖೆಯಲ್ಲಿ ಕೆಲಸ ಸಿಗುತ್ತದೆ.

ಈ ಜಾಬ್ ಗೆ ಅಪ್ಲೈ ಮಾಡಲು ಅಭ್ಯರ್ಥಿಗಳಿಗೆ ಕೆಲವು ಅರ್ಹತೆಗಳಿರಬೇಕು. ಅಭ್ಯರ್ಥಿ 18 ವರ್ಷದಿಂದ 55 ವರ್ಷದೊಳಗಿರಬೇಕು. ಅಭ್ಯರ್ಥಿಯು ಬಿಇ ಅಥವಾ ಬಿಟೆಕ್ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಈ ಜಾಬ್ ಗೆ ಸೇರಿಕೊಂಡರೆ ನಿಮಗೆ ಒಂದು ತಿಂಗಳಿಗೆ 70 ಸಾವಿರ ರೂಪಾಯಿಯಿಂದ 2,20,000 ರೂಪಾಯಿವರೆಗೆ ಸಂಬಳ ಸಿಗುತ್ತದೆ, ಸ್ಯಾಲರಿ ಪ್ಯಾಕೇಜ್ ಉತ್ತಮವಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ವೆಬ್ ಸೈಟ್ ಮೂಲಕ ತಮ್ಮ ಅಪ್ಲಿಕೇಷನ್ ಅನ್ನು ಸಲ್ಲಿಸಬೇಕು. ಅಪ್ಲಿಕೇಷನ್ ಸಲ್ಲಿಸಲು ಜುಲೈ 14, 2021ರಂದು ಪ್ರಾರಂಭವಾಗಿ ಅಗಸ್ಟ್ 6, 2021 ರವರೆಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಪೋಸ್ಟ್ ಪೋನ್ ಆಗುವ ಸಾಧ್ಯತೆಗಳಿವೆ.

ಬಿಟೆಕ್, ಬಿಇ ಪದವಿ ಓದಿದ ಅಭ್ಯರ್ಥಿಗಳು ಕಡಿಮೆ ಸಂಬಳಕ್ಕೆ ಖಾಸಗಿ ಕಂಪನಿಗಳಿಗೆ ಹೋಗಿ ಹೆಚ್ಚು ಸಮಯ ದುಡಿಯುವುದಕ್ಕಿಂತ ಸರ್ಕಾರದ ರೇಲ್ವೆ ಇಲಾಖೆಯಲ್ಲಿ ಜಾಬ್ ಮಾಡುವುದರಿಂದ ಹೆಚ್ಚು ಸಂಬಳವೂ ಬರುತ್ತದೆ ಹಾಗೂ ಕೆಲಸದ ಸಮಯ ನಿಗದಿತವಾಗಿರುತ್ತದೆ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ ಅರ್ಹ ಅಭ್ಯರ್ಥಿಗಳು ಜಾಬ್ ಗೆ ಅಪ್ಲೈ ಮಾಡುವ ಮೂಲಕ ಉತ್ತಮ ಜಾಬ್ ಪಡೆಯಬಹುದಾಗಿದೆ ಇದರಿಂದ ನಮ್ಮ ದೇಶದ ನಿರುದ್ಯೋಗ ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು. ಸರ್ಕಾರದ ಈ ಅವಕಾಶವನ್ನು ತಪ್ಪದೇ ಎಲ್ಲರೂ ಬಳಸಿಕೊಳ್ಳಿ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.