Rahu Ketu Gochar 2023: 18 ತಿಂಗಳಿಗೊಮ್ಮೆ ತನ್ನ ಸ್ಥಾನವನ್ನ ಬದಲಾಯಿಸಿಕೊಳ್ಳುವಂತಹ ರಾಹುವು ಮೇಷ ರಾಶಿಯಿಂದ ಮೀನರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಕೇತು ತುಲಾ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಾನೆ ಈ ರಾಹು ಕೇತುಗಳ ಪರಿವರ್ತನೆಯು ಮಕರ ರಾಶಿಯವರಿಗೆ ಅದ್ಭುತ ಫಲಗಳನ್ನು ಕೊಡಲು ಕಾರಣವಾಗುತ್ತದೆ. ಮಕರ ಲಗ್ನ ಮಕರ ರಾಶಿಯವರಿಗೆ ರಾಶಿಯಾಧಿಪತಿಯಾದಂತಹ ಶನಿ ಮಹಾತ್ಮ ದ್ವಿತೀಯ ಸ್ವಾಕ್ಷೇತ್ರದಲ್ಲಿ ಸಂಚಾರ ಮಾಡುತ್ತಿರುವುದರಿಂದ ಖಂಡಿತವಾಗಿ ಶುಭ ಫಲವನ್ನು ನೀಡುತ್ತಾನೆ ನಿಮ್ಮ ಆರೋಗ್ಯದ ವಿಚಾರದಲ್ಲಿ ಬರಬಹುದಾದಂತಹ ಯಾವುದೇ ಸಮಸ್ಯೆಗಳಿಗೆ ಶನಿಯು ಪರಿಹಾರವಾಗುತ್ತಾನೆ.

ಈ ಸಮಯದಲ್ಲಿ ವಿಶೇಷವಾಗಿ ಮಕರ ರಾಶಿಯವರು ಪ್ರಯಾಣದ ವಿಷಯವಾಗಿ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು ಇದನ್ನು ಹೊರತುಪಡಿಸಿ ಆರೋಗ್ಯದ ವಿಚಾರದಲ್ಲಿ ಯಾವುದೇ ದೊಡ್ಡ ಸಮಸ್ಯೆಗಳಿಗೆ ಅವಕಾಶ ಇರುವುದಿಲ್ಲ ಹಾಗೆಯೇ ನಿಮಗೆ ಧನಕಾರಕನಾದಂತಹ ಶುಕ್ರ ಅಷ್ಟಮದಲ್ಲಿ ಇರುವುದರಿಂದ ಈ ತಿಂಗಳು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಬಹುದು ಆದ್ದರಿಂದ ಯಾವುದೇ ವ್ಯವಹಾರಗಳನ್ನ ಈ ಸಮಯದಲ್ಲಿ ಮಾಡದೇ ಇರುವುದು ಉತ್ತಮ ಇದರ ಜೊತೆಗೆ ಕುಟುಂಬದಲ್ಲಿ ಈ ಸಮಯದಲ್ಲಿ ನೆಮ್ಮದಿ ಇರುತ್ತದೆ ಏಕೆಂದರೆ ಶನಿಯು ಸಾಡೇಸಾತಿಯನ್ನು ಬಿಡುವ ಸಂದರ್ಭದಲ್ಲಿ ಮಕರ ರಾಶಿಯವರಿಗೆ ಕುಟುಂಬದಲ್ಲಿ ಶಾಂತಿ ನೆಮ್ಮದಿಯನ್ನು ನೀಡುತ್ತಾನೆ. ಈ ತಿಂಗಳಲ್ಲಿನ ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗೆ ಪರಿಹಾರ ಏನೆಂದರೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಆರಾಧನೆ ಮಾಡುವುದರಿಂದ ಈ ಸಮಸ್ಯೆ ಪರಿಹಾರವಾಗುತ್ತದೆ.

Rahu Ketu Gochar 2023

ಮಕರ ರಾಶಿಯ ಸಹೋದರರ ನಡುವೆ ಯಾವುದಾದರೂ ಮನಸ್ತಾಪಗಳಿದ್ದರೆ ಅದು ಈ ಸಮಯದಲ್ಲಿ ಸರಿಹೋಗುವ ಸಾಧ್ಯತೆಗಳು ಇವೆ ಯಾವುದೇ ವ್ಯವಹಾರಿಕ ಬಿಕ್ಕಟ್ಟುಗಳಿಂದ ನೀವು ವಿಮೋಚನೆಯನ್ನು ಪಡೆಯುತ್ತೀರಿ. ಹಾಗೆಯೇ ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಣಬಹುದು ಅದರಿಂದ ನವರಾತ್ರಿಯ ಸಂದರ್ಭದಲ್ಲಿ ಸರಸ್ವತಿಯ ಆರಾಧನೆಯನ್ನು ಮಾಡುವುದು ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದು ಇನ್ನು ಮಕರ ರಾಶಿಯವರಿಗೆ ಆಸ್ತಿ ಅಥವಾ ಕಟ್ಟಡದ ವಿಚಾರಗಳಲ್ಲಿ ಯಾವುದಾದರೂ ಸಮಸ್ಯೆಗಳು ಇದ್ದರೆ ಈ ತಿಂಗಳ ಕೊನೆಯ ಭಾಗದಲ್ಲಿ ಅದನ್ನ ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಇದರ ಜೊತೆಗೆ ಮಕರ ರಾಶಿಯಲ್ಲಿನ ಜನರು ವಾಹನವನ್ನು ಚಲಾಯಿಸುವಾಗ ಹೆಚ್ಚಿನ ಜಾಗರೂಕತೆಯನ್ನು ವಹಿಸಬೇಕು.

ನಿಮ್ಮ ಮಾತೃವಿನ ಆರೋಗ್ಯದಲ್ಲಿ ಈ ಸಮಯದಲ್ಲಿ ವ್ಯತ್ಯಾಸ ಉಂಟಾಗಬಹುದು ಆದ್ದರಿಂದ ಸ್ವಲ್ಪ ಕಾಳಜಿ ವಹಿಸಬೇಕಾಗುತ್ತದೆ ವಿಶೇಷವಾಗಿ ಈ ತಿಂಗಳಲ್ಲಿನ ಅನಾವಶ್ಯಕ ಹಣಕಾಸಿನ ಖರ್ಚಾಗುವ ಸಾಧ್ಯತೆ ಕೂಡ ಇದೆ.
ನಾಗದೇವತೆಯ ದರ್ಶನ ಮಾಡುವುದು ಹಾಗೂ ಉದ್ದು ಮತ್ತು ಉರುಳಿ ಕಾಳುಗಳಿಂದ ತುಲಾಭಾರ ಮಾಡಿಸುವುದು ಇತ್ಯಾದಿಗಳಿಂದ ನಿಮ್ಮ ಆರೋಗ್ಯ ಮತ್ತು ಪ್ರಯಾಣದಲ್ಲಿ ಇರುವಂತಹ ಘಟಕಗಳು ದೂರವಾಗುತ್ತವೆ ಹಾಗೆಯೇ ಅಕ್ಟೋಬರ್ ತಿಂಗಳು ಶರನ್ ನವರಾತ್ರಿ ತಿಂಗಳಾಗಿರುವುದರಿಂದ ಈ ತಿಂಗಳು ದುರ್ಗಾಪರಮೇಶ್ವರಿಯ ಆರಾಧನೆಯನ್ನು ಮಾಡುವುದರಿಂದ ಸಕಲ ಸಂಕಷ್ಟಗಳನ್ನ ದೂರ ಮಾಡಿಕೊಂಡು ನೆಮ್ಮದಿಯಿಂದ ಜೀವನವನ್ನು ಸಾಗಿಸಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *