ಪುನೀತ್ ಪತ್ನಿ ಅಶ್ವಿನಿ ಅವರನ್ನು ಭೇಟಿ ನೀಡಿ ಸಾಂತ್ವನ ಹೇಳಿದ ಅಲ್ಲೂ ಅರ್ಜುನ್

0 1

ಪುನೀತ್ ರಾಜಕುಮಾರ್ ಅವರು ಹಠಾತ್ತನೆ ಹೃದಯಾಘಾತದಿಂದ ನಿಧನರಾದರು ಈ ದುಃಖದಿಂದ ಕರ್ನಾಟಕದ ಜನತೆಗೆ ಹೊರ ಬರಲು ಸಾಧ್ಯವಾಗಿಲ್ಲ. ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಈಗಲೂ ಪ್ರತಿದಿನ ನಮನ ಸಲ್ಲಿಸಲು ಬರುತ್ತಾರೆ. ಟಾಲಿವುಡ್ ನ ನಟರು ಸಹ ಪುನೀತ್ ರಾಜಕುಮಾರ್ ಅವರ ಸಾವಿಗೆ ಸಂತಾಪ ಸೂಚಿಸಿದರು. ಇದೀಗ ಪುಷ್ಪ ಸಿನಿಮಾ ನಾಯಕ ನಟ ಅಲ್ಲು ಅರ್ಜುನ್ ಅವರು ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಹಾಗೂ ಪುನೀತ್ ನಿವಾಸಕ್ಕೆ ಭೇಟಿ ನೀಡಿದರು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ತೆಲುಗು ನಟ ಅಲ್ಲು ಅರ್ಜುನ್ ಅವರು ಕಂಠೀರವ ಸ್ಟುಡಿಯೋಕ್ಕೆ ಭೇಟಿ ನೀಡಿ ಅಲ್ಲಿ ಇರುವ ಅಪ್ಪು ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಅಪ್ಪು ಅವರು ನಮ್ಮನ್ನು ಅಗಲಿರುವುದು ನಮ್ಮಿಂದ ಇಂದಿಗೂ ಮರೆಯಲು ಸಾಧ್ಯವಿಲ್ಲ ಆದರೂ ಅವರ ನೆನಪಿನೊಂದಿಗೆ ಮುಂದಿನ ಜೀವನ ನಡೆಸಬೇಕಿದೆ. ಅಪ್ಪು ಅವರ ಸಮಾಧಿಗೆ ಅನೇಕ ಟಾಲಿವುಡ್ ನಟರು ಭೇಟಿ ನೀಡಿದ್ದಾರೆ. ಪುನೀತ್ ಅವರ ಸಾವಿನ ಸಮಯದಲ್ಲಿ ಅಲ್ಲು ಅರ್ಜುನ್ ಅವರಿಗೆ ಬರಲು ಆಗಲಿಲ್ಲ ಆದ್ದರಿಂದ ಈಗ ಅವರು ಪುನೀತ್ ಅವರ ನಿವಾಸಕ್ಕೆ ಹಾಗೂ ಸಮಾಧಿಗೆ ಭೇಟಿ ನೀಡಿದ್ದಾರೆ.

ಮೊದಲಿಗೆ ಅವರು ಪುನೀತ್ ಅವರ ನಿವಾಸಕ್ಕೆ ತೆರಳಿ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು, ಪುನೀತ್ ಅವರ ಪತ್ನಿ ಅಶ್ವಿನಿ ಅವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರ ಭಾವಚಿತ್ರದ ಕೆಳಗೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಇಡಲಾಗಿದೆ ಅದನ್ನು ನೋಡಿದ ಅಲ್ಲು ಅರ್ಜುನ್ ಅವರು ನಮಿಸಿದರು. ನಂತರ ಅವರು ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿದರು. ಪುನೀತ್ ಅವರ ಸಮಾಧಿಯನ್ನು ನೋಡಲು ಪ್ರತಿದಿನ ನೂರಾರು ಜನರು ಭೇಟಿ ನೀಡುತ್ತಿದ್ದು ಅಲ್ಲು ಅರ್ಜುನ್ ಬರುವುದರಿಂದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಪುನೀತ್ ಅವರು ಬದುಕಿದ್ದಾಗ ಅಲ್ಲು ಅರ್ಜುನ್ ಅವರೊಂದಿಗೆ ವಿಶೇಷವಾದ ಆತ್ಮೀಯತೆಯನ್ನು ಹೊಂದಿದ್ದರು ಹಲವು ಬಾರಿ ಪುನೀತ್ ಹಾಗೂ ಅಲ್ಲು ಅರ್ಜುನ್ ಒಟ್ಟಿಗೆ ಕಾಣಿಸಿಕೊಂಡ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಕುಟುಂಬದ ವಿಶೇಷಗಳಲ್ಲಿ ಇಬ್ಬರು ಒಟ್ಟಿಗೆ ಇರುವ ಫೋಟೋಗಳನ್ನು ನೋಡಬಹುದು.

ತಮ್ಮ ಗೆಳೆಯನ ಸಮಾಧಿಗೆ ಭೇಟಿ ನೀಡಿದ ಅಲ್ಲು ಅರ್ಜುನ್ ಅವರು ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರ ಸಮಾಧಿಗೂ ಪುಷ್ಪ ನಮನ ಸಲ್ಲಿಸಿದರು. ಕನ್ನಡ ಚಿತ್ರರಂಗದ ಇನ್ನೊಬ್ಬ ಮೇರು ನಟ ಅಂಬರೀಷ್ ಅವರ ಸಮಾಧಿಗೂ ಅಲ್ಲು ಅರ್ಜುನ್ ಅವರು ಪುಷ್ಪ ನಮನ ಸಲ್ಲಿಸಿದರು. ಅಲ್ಲು ಅರ್ಜುನ್ ಅವರು ಭೇಟಿ ನೀಡಿದ ವಿಡಿಯೊ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.

Leave A Reply

Your email address will not be published.