ಭೂಮಿಯ ಮೇಲೆ ಹಲವಾರು ರೀತಿಯಸಸ್ಯಜಾತಿಗಳಿವೆ.ಅವುಗಳಲ್ಲಿ ಎಷ್ಟೋ ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿರುತ್ತವೆ.ಅದರಲ್ಲಿ ಪಾರಿಜಾತಗಿಡ ಕೂಡ ಒಂದು.ನಾವು ಇಲ್ಲಿ ಪಾರಿಜಾತ ಗಿಡದ ಎಲೆಯ ಪ್ರಯೋಜನದ ಬಗ್ಗೆ ಮಾಹಿತಿಯನ್ನು ತಿಳಿಯೋಣ.

ಕೀಲುನೋವು, ಮೂಳೆಸವೆತ ಸಾಮಾನ್ಯವಾಗಿ 30 ರಿಂದ 45 ವರ್ಷದವರಿಗೆ ಉಂಟಾಗುತ್ತದೆ.ಅದಕ್ಕಾಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡುತ್ತಾರೆ. ಯಾವ ರೋಗಕ್ಕಾದರೂ ಹಣ ವ್ಯಯ ಮಾಡಿದರೆ ಅದು ವಾಸಿಯಾಗಬಹುದು.ಆದರೆ ದೇಹದ ಕಾಲುಗಳ ಮತ್ತು ಮೂಳೆಗಳ ನೋವಿಗೆ ಹಣ ವ್ಯಯ ಮಾಡಿದರೆ ವಾಸಿಯಾಗುವುದು ಬಹಳ ಕಡಿಮೆ. ನೋವುಗಳಿಗೆ ಹೆಚ್ಚಾಗಿ ಹಳ್ಳಿ ಔಷಧಿಯನ್ನೇ ಮಾಡಬೇಕು.

ಈ ಮನೆಮದ್ದನ್ನು ಮಾಡುವುದರಿಂದ ಕೀಲುನೋವುಗಳು ವಾಸಿಯಾಗಿ ಕೀಲುಗಳು ಕಬ್ಬಿಣದಷ್ಟು ಗಟ್ಟಿಯಾಗುತ್ತವೆ.ಇದಕ್ಕೆ ಯಾವುದೇ ರೀತಿಯ ಹಣದ ಅವಶ್ಯಕತೆ ಇಲ್ಲ. ಸುಲಭವಾಗಿ ಈ ಮನೆಮದ್ದನ್ನು ತಯಾರಿಸಬಹುದು. ಈ ಮದ್ದಿಗೆ ಬೇಕಾಗುವ ಗಿಡದ ಹೆಸರು ಪಾರಿಜಾತ.ಈ ಗಿಡ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ಹೆಚ್ಚಾಗಿ ದೇವಸ್ಥಾನಗಳಲ್ಲಿ ಕಾಣಸಿಗುತ್ತವೆ.ಈ ಗಿಡಕ್ಕೆ ಬಿಳಿಹೂವುಗಳು ಬಿಡುತ್ತವೆ.

ಇದರ ಎಲೆಯ ಕಷಾಯವನ್ನು ಮಾಡಿ ಕುಡಿಯಬೇಕು.ಇದನ್ನು ಮಾಡುವ ವಿಧಾನವೆಂದರೆ ಮೊದಲು 5 ರಿಂದ 6 ಪಾರಿಜಾತದ ಎಲೆಯನ್ನು ಚೆನ್ನಾಗಿ ತೊಳೆದು ಅದನ್ನು ಪೇಸ್ಟ್ ಮಾಡಿಕೊಳ್ಳಬೇಕು. ಅದಕ್ಕೆ ಒಂದು ಲೋಟ ನೀರು ಹಾಕಿ ಚೆನ್ನಾಗಿ ಕುದಿಸಬೇಕು.ಆ ನೀರು ಅರ್ಧ ಲೋಟ ಆಗುವವರೆಗೂ ಕುದಿಸಬೇಕು. ರಾತ್ರಿ ಕುದಿಸಿದ ಈ ಕಷಾಯವನ್ನು ಹಾಗೇ ಇಟ್ಟು ಬೆಳಗ್ಗೆ ಎದ್ದು ತಕ್ಷಣ ಕುಡಿಯಬೇಕು.ಇದನ್ನು ಒಂದು ವಾರ ಕುಡಿಯಬೇಕು.

ಈ ಕಷಾಯ ಮೂಳೆಗಳು ಸವೆದು ಕಳೆದು ಹೋಗಿರುವ ಅಂಶ ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ.ಇದು ಡೆಂಗ್ಯೂ ಜ್ವರಕ್ಕೂ ಉಪಯುಕ್ತವಾಗಿದ್ದು ಆಗ ಉಂಟಾಗುವ ನೋವುಗಳನ್ನು ದೂರಗೊಳಿಸುತ್ತದೆ. ಆದ್ದರಿಂದ ಇದನ್ನು ಬಳಸಿ ಇದರ ಪ್ರಯೋಜನ ಪಡೆದುಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!