ವೃಷಭ ರಾಶಿಯವರ ಪಾಲಿಗೆ ಅಕ್ಟೋಬರ್ ತಿಂಗಳ ವ್ಯಾಪಾರ ವ್ಯವಹಾರಗಳು ಹೇಗಿರತ್ತೆ ನೋಡಿ..

0 10,182

ಜ್ಯೋತಿಷ್ಯಶಾಸ್ತ್ರವು ಸಮುದ್ರವಿದ್ದಂತೆ 12 ರಾಶಿಗಳಲ್ಲಿ ಹುಟ್ಟುವ ಪ್ರತಿಯೊಬ್ಬ ವ್ಯಕ್ತಿ ತನ್ನದೆ ಆದ ರಾಶಿಯ ಆಧಾರದ ಮೇಲೆ ತನ್ನ ಭವಿಷ್ಯವನ್ನು ಅನುಭವಿಸುತ್ತಾರೆ. ಅದರಂತೆ ಎರಡನೇ ರಾಶಿಯಾದ ವೃಷಭ ರಾಶಿಯಲ್ಲಿ ಜನಿಸಿದವರು ಅಕ್ಟೋಬರ್ ತಿಂಗಳಿನಲ್ಲಿ ಯಾವ ರೀತಿಯ ಅನುಕೂಲ, ಅನಾನುಕೂಲ ಹೊಂದಿರುತ್ತಾರೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದ ಮೂಲಕ ತಿಳಿಯೋಣ.

ಯಾವಾಗಲೂ ಚುರುಕಾಗಿರುವ, ಸಾಹಿತ್ಯ, ಕಲೆ, ಬಿಸಿನೆಸ್ ನಲ್ಲಿ ಆಸಕ್ತಿ ಹೊಂದಿರುವ ವೃಷಭ ರಾಶಿಯಲ್ಲಿ ರಾಹು ಇರುವುದರಿಂದ ಬಹಳ ಕಾಲದಿಂದ ಆಗದೆ ಇರುವ ಕೆಲಸ ಅಕ್ಟೋಬರ್ ತಿಂಗಳಿನಲ್ಲಿ ಪೂರ್ಣಗೊಳ್ಳುತ್ತದೆ. ವೃಷಭ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಸ್ನೇಹಿತರು ಸಹಾಯ ಮಾಡುತ್ತಾರೆ. ಈ ರಾಶಿಯವರ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಕಂಡು ಬರುವುದರಿಂದ ಯೋಗ, ಧ್ಯಾನಗಳನ್ನು ಮಾಡಬೇಕು.

ವೃಷಭ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ಕಿರಿಕಿರಿ ಉಂಟಾಗುತ್ತದೆ, ಮೇಲಾಧಿಕಾರಿಗಳಿಂದ ಸಣ್ಣಪುಟ್ಟ ಸಮಸ್ಯೆ ಎದುರಾಗುತ್ತದೆ. ಬಿಸಿನೆಸ್ ಮಾಡುತ್ತಿರುವವರು, ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವೃಷಭ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಜಾಗೃತರಾಗಿರಬೇಕು. ವೃಷಭ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಖರ್ಚು ಮಾಡುತ್ತಾರೆ ಆದ್ದರಿಂದ ಖರ್ಚಿನ ಬಗ್ಗೆ ನಿಗಾ ಇರಲಿ.

ವೃಷಭ ರಾಶಿಯ ವಿದ್ಯಾರ್ಥಿಗಳು ಗೊಂದಲವನ್ನು ಅನುಭವಿಸಬೇಕಾಗುತ್ತದೆ ಆದರೆ ಗೊಂದಲವನ್ನು ಪರಿಹರಿಸಿಕೊಂಡು ಏಕಾಗ್ರತೆಯಿಂದ ಮುನ್ನುಗ್ಗಿದರೆ ಒಳ್ಳೆಯದಾಗುತ್ತದೆ. ಈ ರಾಶಿಯವರು ಸರಿಯಾಗಿ ತಿಳಿದುಕೊಳ್ಳದೆ ಮೈಮರೆಯುವ ಮೂಲಕ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳಬಹುದು ಆದ್ದರಿಂದ ಅಕ್ಟೋಬರ್ ತಿಂಗಳಿನಲ್ಲಿ ವೃಷಭ ರಾಶಿಯವರು ಜಾಗೃತೆಯಿಂದ ನಡೆದುಕೊಳ್ಳಬೇಕು.

ವೃಷಭ ರಾಶಿಯ ಕೃಷಿಕರಿಗೆ ಕೃಷಿಯಲ್ಲಿ ಲಾಭಾಂಶ ಕಡಿಮೆಯಾಗುತ್ತದೆ ಆದ್ದರಿಂದ ಕುಲದೇವತೆಯ ಆರಾಧನೆ ಮಾಡಬೇಕು ಅಥವಾ ಈ ತಿಂಗಳಿನಲ್ಲಿ ನವರಾತ್ರಿಯಲ್ಲಿ ದುರ್ಗಿಯನ್ನು ಆರಾಧನೆ ಮಾಡಬೇಕು. ಹೈನುಗಾರಿಕೆ, ಕೋಳಿ, ಕುರಿ ಸಾಕಾಣಿಕೆ ಮಾಡುವವರಿಗೆ ಈ ತಿಂಗಳು ಶುಭವಾಗಲಿದೆ. ಈ ರಾಶಿಯವರು ಅಕ್ಟೋಬರ್ ತಿಂಗಳ ನಂತರದ ದಿನಗಳಲ್ಲಿ ಹೆಚ್ಚಿನ ಲಾಭಾಂಶಗಳನ್ನು ಪಡೆಯಲಿದ್ದಾರೆ. ವೃಷಭ ರಾಶಿಯ ವ್ಯಾಪಾರ, ವ್ಯವಹಾರ ಮಾಡುತ್ತಿರುವವರಿಗೆ ಈ ತಿಂಗಳು ಅನುಕೂಲಕರವಾಗಲಿದೆ.

ವೃಷಭ ರಾಶಿಯ ಟೆಕ್ನಿಕಲ್ ಕೆಲಸ ಮಾಡುತ್ತಿರುವವರು ಅಕ್ಟೋಬರ್ ತಿಂಗಳಿನಲ್ಲಿ ಜಾಗ್ರತೆ ವಹಿಸಬೇಕು. ಸರ್ಕಾರದಿಂದ ಬರುವ ಅನುದಾನದ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು ಆದರೆ ಅನುದಾನ ಬಂದ ನಂತರವೆ ಕೆಲಸವನ್ನು ಮುಂದುವರಿಸಬೇಕು. ಮನೆಯಲ್ಲಿ ಹಿರಿಯರಿದ್ದರೆ ಅವರನ್ನು ಜಾಗರೂಕತೆಯಿಂದ ನೋಡಿಕೊಳ್ಳಿ. ವೃಷಭ ರಾಶಿಯಲ್ಲಿ ರಾಹು ಇರುವುದರಿಂದ ಬೇರೆಯವರು ತಪ್ಪು ಮಾಡಿದ್ದಾರೆ ಎಂಬ ಕಿರಿಕಿರಿ, ಬೇಡದ ಆಲೋಚನೆ ಉಂಟಾಗುತ್ತದೆ.

ಈ ರಾಶಿಯವರು ನವರಾತ್ರಿ ಪ್ರಾರಂಭವಾಗಿ 8ನೆ ದಿನದಂದು ಶ್ರೀ ಬ್ರಹ್ಮಚರಣ್ಯೇ ನಮಃ ಎಂದು ಧ್ಯಾನ ಮಾಡಬೇಕು, ಜಗತ್ತಿನಲ್ಲಿ ನಮಗೆ ಚೈತನ್ಯ ಬ್ರಹ್ಮಸ್ವರೂಪವನ್ನು ಭಗವತಿ ಕೊಡುತ್ತಾಳೆ ಎಂಬುದು ಈ ಮಂತ್ರದ ಅರ್ಥವಾಗಿದೆ. ವೃಷಭ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಮುನ್ನುಗ್ಗುವುದು ಅವಶ್ಯಕವಾಗಿದೆ ಮುನ್ನುಗ್ಗುವ ಶಕ್ತಿಯನ್ನು ಭಗವತಿ ಕೊಡುತ್ತಾಳೆ. ಭಗವಂತನ ಧ್ಯಾನ ಮಾಡುವುದರಿಂದ ವೃಷಭರಾಶಿಗೆ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಅನುಕೂಲಕರವಾಗಲಿದೆ. ಈ ಮಾಹಿತಿ ಉಪಯುಕ್ತವಾಗಿದ್ದು, ವೃಷಭರಾಶಿಯವರಿಗೆ ತಪ್ಪದೆ ತಿಳಿಸಿ ಅಕ್ಟೋಬರ್ ತಿಂಗಳಿನಲ್ಲಿ ನಿಮ್ಮ ಭವಿಷ್ಯ ಉತ್ತಮವಾಗಲಿ.

Leave A Reply

Your email address will not be published.