October Libra Horoscope 2023: ಮೊದಲಿಗೆ ಅಕ್ಟೋಬರ್ ತಿಂಗಳಿನಲ್ಲಿ ಸ್ಥಾನ ಬದಲಾವಣೆ ಮಾಡುವ ಗ್ರಹಗಳು ಯಾವುವು ಎಂದು ನೋಡುವುದಾದರೆ, ಅಕ್ಟೋಬರ್ 1ರಂದು ಬುಧ ಶುಕ್ರ ಇಬ್ಬರ ಸ್ಥಾನ ಬದಲಾವಣೆ ಕೂಡ ನಡೆಯಲಿದ್ದು, ಬುಧ ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದಾನೆ. 3ನೇ ತಾರೀಕು ಕುಜ ಗ್ರಹ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ, 17ನೇ ತಾರೀಕಿನಂದು ಸೂರ್ಯ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. 18ನೇ ತಾರೀಕಿನಂದು ಬುಧ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ..

ತುಲಾ ರಾಶಿಯ ಯಾವ ಮನೆಯಲ್ಲಿ ಯಾವ ಗ್ರಹದ ಸಂಚಾರ ಇರುತ್ತದೆ ಎಂದು ನೋಡುವುದಾದರೆ, ಸೂರ್ಯದೇವನು 12ನೇ ಮತ್ತು 2ನೇ ಮನೆಯಲ್ಲಿ ಸಂಚಾರ ಮಾಡಲಿದ್ದಾನೆ. ಕುಜನ ಸಂಚಾರ 1ನೇ ಮನೆಯಲ್ಲಿ ಇರುತ್ತದೆ. ಬುಧನ ಸಂಚಾರ 12ನೇ ಮತ್ತು 1ನೇ ಮನೆಯಲ್ಲಿ ಇರುತ್ತದೆ. ಗುರುವಿನ ಸಂಚಾರ 7ನೇ ಮನೆಯಲ್ಲಿ ಇರುತ್ತದೆ. ಶುಕ್ರನ ಸಂಚಾರ 11ನೇ ಮನೆಯಲ್ಲಿ, ಶನಿಯ ಸಂಚಾರ 5ನೇ ಮನೆಯಲ್ಲಿ ಇರುತ್ತದೆ. ರಾಹುವಿನ ಸಂಚಾರ 7ನೇ ಮನೆಯಲ್ಲಿ, ಕೇತುವಿನ ಸಂಚಾರ 1ನೇ ಮನೆಯಲ್ಲಿ ಇರುತ್ತದೆ.

ಅಕ್ಟೋಬರ್ ತಿಂಗಳಿನಲ್ಲಿ ತುಲಾ ರಾಶಿಯವರಿಗೆ ಮಿಶ್ರಫಲ ಇರುತ್ತದೆ. ಹೇಗೆ ಅಂದ್ರೆ ಹಣದ ಬರುವಿಕೆ ಹೆಚ್ಚಾಗಿರುತ್ತದೆ, ಆದರೆ ಖರ್ಚು ಕೂಡ ಅಷ್ಟೇ ಇರುತ್ತದೆ. ಸಾಲ ಜಾಸ್ತಿ ಆಗಬಹುದು, ಈ ವೇಳೆ ಇನ್ನು ಮದುವೆ ಆಗದೆ ಇರುವವರಿಗೆ ಕಂಕಣಭಾಗ್ಯ ಕೂಡಿ ಬರುವ ಯೋಗವಿದೆ. ಫ್ರೆಂಡ್ಸ್ ಇಂದ ಧನಲಾಭ ಇರುತ್ತದೆ. ಆದಯಕ್ಕಿಂತ ಖರ್ಚು ಆಗುವುದರಿಂದ ಒಂದಾದ ನಂತರ ಒಂದು ತೊಂದರೆಗಳು ಹೆಚ್ಚಾಗುತ್ತಲೇ ಇರುತ್ತದೆ. ಮಕ್ಕಳ ಯೋಗವಿದೆ.

October Libra Horoscope 2023

ಈ ವೇಳೆ ಪ್ರಯಾಣ ಮಾಡುವಾಗ ಹುಷಾರಾಗಿರಿ, ನಿಮ್ಮ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳಬಹುದು. ಗೃಹಿಣಿಯರು ಮತ್ತು ಎಲ್ಲರು ಕೂಡ ಹರಿತವಾದ ವಸ್ತುಗಳ ಜೊತೆಗೆ ಬಹಳ ಹುಷಾರಾಗಿರಿ. ಅಗ್ನಿ ಅವಘಡ ಉಂಟಾಗುವ ಸಾಧ್ಯತೆ ಇರುವುದರಿಂದ ಬೆಂಕಿ ವಿಚಾರದಲ್ಲಿ ಹುಷಾರಾಗಿರಿ. ಅನಾರೋಗ್ಯ ಉಂಟಾಗಬಹುದು, ಆಗ ವೈದ್ಯರ ಸಹಾಯ ಪಫೆಯುವುದು ಉತ್ತಮ. ರಕ್ತಕ್ಕೆ ಸಂಬಂಧಿಸಿದ ಖಾಯಿಲೆಗಳು ಅಥವಾ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಖಾಯಿಲೆಗಳು ಇದ್ದರೆ, ಅದು ಜಾಸ್ತಿ ಆಗಬಹುದು. ಶತ್ರುಗಳಿಂದ ನಿಮಗೆ ತೊಂದರೆ ಆಗಬಹುದು. ಮನಸ್ಸಿನ ನೆಮ್ಮದಿ ಹಾಳಾಗುತ್ತದೆ.

ನಂಬಿಕೆ ದ್ರೋಹ, ಶತ್ರುಕಾಟದ ಸಮಸ್ಯೆ ಹೆಚ್ಚು. ಪಂಚಮ ಶನಿ ಇಂದಲೂ ಸಮಸ್ಯೆ ಉಂಟಾಗಬಹುದು. ಗ್ರಹಗಳಿಂದ ನಿಮಗೆ ತೊಂದರೆ ಇದೆಯಾ ಎನ್ನುವುದನ್ನ ತಿಳಿದುಕೊಳ್ಳಲು ನಿಮ್ಮ ಜನ್ಮಜಾತಕವನ್ನು ಪರಿಶೀಲಿಸಿ. ಈ ತಿಂಗಳು ವೈದ್ಯರು, ಕಲಾವಿದರು, ರಂಗಕರ್ಮಿಗಳಿಗೆ ನಷ್ಟ ಉಂಟಾಗಬಹುದು, ಬಂದ ಅವಕಾಶಗಳು ಕೈತಪ್ಪಿ ಹೋಗಬಹುದು. ರಾಜಕಾರಣಿಗಳು ಮತ್ತು ಇಂಜಿನಿಯರ್ ಗಳಿಗೂ ಇದು ಒಳ್ಳೆಯ ಸಮಯ ಆಗಿಲ್ಲ. ಕೆಸಿನೋ ನಡೆಸುವವರಿಗೆ ಕೂಡ ಹೆಚ್ಚಿನ ಲಾಭ ಸಿಗೋದಿಲ್ಲ.

ಪುಸ್ತಕಗಳನ್ನು ಮಾರಾಟ ಮಾಡುವವರಿಗೆ, ಭೋಗದ ವಸ್ತುಗಳನ್ನ ಮಾರಾಟ ಮಾಡುವವರಿಗೂ ದೊಡ್ಡ ಲಾಭ ಇರುವುದಿಲ್ಲ. ಈ ಕಾರಣಗಳಿಂದ ತುಲಾ ರಾಶಿಯವರಿಗೆ ಮಿಶ್ರಫಲ ಇರುತ್ತದೆ. ಕೃಷಿ ಉತ್ಪನ್ನಗಳನ್ನ ಮಾರಾಟ ಮಾಡುವವರಿಗೆ ಲಾಭ ಹೆಚ್ಚಾಗಿರುತ್ತದೆ. ಈ ತೊಂದರೆಗಳಿಗೆ ಪರಿಹಾರಗಳು ಏನು ಎಂದರೆ, ಚಿತ್ತ ನಕ್ಷತ್ರದ 2ನೇ ಮತ್ತು 3ನೇ ಪಾದದಲ್ಲಿ ಹುಟ್ಟಿದವರು ತಿರುಚಂದೂರು ಸುಬ್ರಹ್ಮಣ್ಯೇಶ್ವರನ ದರ್ಶನ ಮಾಡಿ, ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ. ಸ್ವಾತಿ ನಕ್ಷತ್ರದಲ್ಲಿ ಹುಟ್ಟಿದವರು ಪ್ರತಿದಿನ ವಿಷ್ಣುಸಹಸ್ರನಾಮದ ಪಠಣೆ ಮಾಡಿ.

ವಿಶಾಖ ನಕ್ಷತ್ರದ 1ನೇ, 2ನೇ ಮತ್ತು 3ನೇ ಪಾದದಲ್ಲಿ ಹುಟ್ಟಿರುವವರಿಗೆ ಮೃತ್ಯುಂಜಯ ಮಹಾಮಂತ್ರದ ಪಠಣೆ ಮಾಡಿ, ಪೂಜೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ..ಇದಕ್ಕಿಂತ ಮೊದಲು ಸಾಮಾಜಿಕ ಪರಿಹಾರ ಮಾಡಿಕೊಳ್ಳುವುದು ಕೂಡ ಒಳ್ಳೆಯದು. ಪ್ರಕೃತಿಯನ್ನು ಕಾಪಾಡುವ ಪ್ರಯತ್ನ ಮಾಡಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *