ಕಿರುತೆರೆಯಲ್ಲಿ ನಂಬರ್ 1 ಸ್ಥಾನ ಕನ್ನಡದ ಹೊಸ ಧಾರಾವಾಹಿ

0 1

ಕನ್ನಡ ಕಿರುತೆರೆಯಲ್ಲಿ ಜೀ ವಾಹಿನಿಯ ಸೀರಿಯಲ್ ಗಳು ಎಂದರೆ ಹೌದು ಪ್ರೇಕ್ಷಕರಿಗೆ ಬಹಳ ಅಚ್ಚುಮೆಚ್ಚು.‌ ಅದರಲ್ಲೂ ಟಾಪ್ ರೇಟಿಂಗ್ ನೊಂದಿಗೆ, ಟಾಪ್ ಸ್ಥಾನ ಗಳಲ್ಲಿ ಕೂಡಾ ಇಲ್ಲಿನ ಸೀರಿಯಲ್ ಗಳು ಅಬ್ಬರಿಸುತ್ತಿವೆ. ಈ ವಾಹಿನಿಯ ಜೊತೆ ಜೊತೆಯಲಿ ಧಾರಾವಾಹಿ, ಸೀರಿಯಲ್ ಲೋಕದಲ್ಲಿ ಒಂದು ಸಂಚಲನವನ್ನೇ ಸೃಷ್ಟಿಸಿ ಕಿರುತೆರೆ ಇತಿಹಾಸದಲ್ಲಿ ಒಂದು ಹೊಸ ದಾಖಲೆಯನ್ನು ಬರೆದಿತ್ತು. ಪ್ರತಿ ವಾರ ಧಾರಾವಾಹಿಗಳ ಟಿಆರ್‌ಪಿ ಹೊರಬೀಳುವುದು. ಅಂತೆಯೇ ಈ ವಾರ ಕೂಡ ಸೀರಿಯಲ್ ಟಿಆರ್‌ಪಿ ಹೊರಬಿದ್ದಿದೆ. ಕಳೆದ ಬಾರಿ ಸೀರಿಯಲ್‌ಗಳ ಸ್ಥಾನದಲ್ಲಿ ತುಂಬ ವ್ಯತ್ಯಾಸ ಇತ್ತು. ಈ ಬಾರಿ ಕೂಡ ದೊಡ್ಡ ಅಚ್ಚರಿಯೊಂದು ಕಾದಿದೆ. ಇಷ್ಟು ವಾರಗಳ ಕಾಲ ನಂಬರ್ 1 ಹಾಗೂ ನಂಬರ್ 2 ಸ್ಥಾನದಲ್ಲಿದ್ದ ಗಟ್ಟಿಮೇಳ ಹಾಗೂ ಜೊತೆ ಜೊತೆಯಲಿ ಧಾರಾವಾಹಿಗಳನ್ನು ಹೊಸ ಧಾರಾವಾಹಿಯೊಂದು ಹಿಂದಕ್ಕೆ ಹಾಕಿದೆ. ಸೀರಿಯಲ್ ಪ್ರಸಾರ ಆರಂಭಿಸಿದ ಕೆಲವೇ ದಿನಗಳಲ್ಲಿ ಎಲ್ಲಾ ಧಾರಾವಾಹಿಗಳನ್ನು ಹಿಂದಿಕ್ಕಿ ಜೊತೆ ಜೊತೆಯಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡು ನಂಬರ್ 1 ಸೀರಿಯಲ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಳೆದ ವಾರ ಗಟ್ಟಿಮೇಳ ಧಾರಾವಾಹಿ 1 ಸ್ಥಾನದಲ್ಲಿತ್ತು. ಜೊತೆ ಜೊತೆಯಲಿ ಧಾರಾವಾಹಿ 2 ಸ್ಥಾನದಲ್ಲಿತ್ತು. ಆರಂಭವಾದ ಮೊದಲ ವಾರದಲ್ಲಿಯೇ 2 ನೇ ಸ್ಥಾನಕ್ಕೆ ಬಂದು ಆಕ್ರಮಿಸಿದ್ದ ಸತ್ಯ ಧಾರಾವಾಹಿ ಈಗ ನಂಬರ್ ಸ್ಥಾನಕ್ಕೆ ಬಂದು ಕೂತಿದೆ. ಇದು ನಿಜಕ್ಕೂ ಅಚ್ಚರಿಕರ ಬೆಳವಣಿಗೆ. ಈ ಮೂಲಕ ಗಟ್ಟಿಮೇಳ, ಜೊತೆ ಜೊತೆಯಲಿ ಧಾರಾವಾಹಿಗಳಿಗೆ ಸೋಲುಣಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ಕೂಡಾ ಗಟ್ಟಿಮೇಳ ಧಾರಾವಾಹಿ ಕಿರುತೆರೆಯ ನಂಬರ್ 1 ಸೀರಿಯಲ್ ಆಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರೆ, ಜೊತೆ ಜೊತೆಯಲಿ ಎರಡನೇ ಸ್ಥಾನದಲ್ಲಿತ್ತು. ಆದರೆ ಲಾಕ್ ಡೌನ್ ನಂತರ ಇತ್ತೀಚೆಗೆ ಆರಂಭವಾದ ಹೊಸ ಧಾರವಾಹಿಗಳಲ್ಲಿ ಸತ್ಯ ಧಾರವಾಹಿ ಒಂದು ನೂತನ ಕಥಾಹಂದರವನ್ನು ಹೊತ್ತುಕೊಂಡು ಬಂದಿದೆ. ಎಂಟ್ರಿ ಕೊಟ್ಟ ಎರಡನೇ ವಾರಕ್ಕೆ ಈ ಸೀರಿಯಲ್ ಉತ್ತಮ ರೇಟಿಂಗ್ ಅನ್ನು ಪಡೆದು ಜೊತೆ ಜೊತೆಯಲಿ ಧಾರಾವಾಹಿಯನ್ನು ಹಿಂದಿಕ್ಕಿ ಟಾಪ್ ಟು ಸೀರಿಯಲ್ ಸ್ಥಾನವನ್ನು ಪಡೆದುಕೊಂಡಿದೆ. ಡಿಸೆಂಬರ್ 7ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಸತ್ಯ ಧಾರವಾಹಿ ಪ್ರಸಾರವಾಗುತ್ತಿದೆ. ನಟ ಸಾಗರ್ ಬಿಳಿಗೌಡ, ಗೌತಮಿ ಜಾಧವ್ ನಟನೆಯ ಈ ಧಾರಾವಾಹಿಯಲ್ಲಿ ನಟಿ ಪ್ರಿಯಾಂಕಾ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸ್ವಪ್ನಾ ಕೃಷ್ಣ ಸತ್ಯ ಧಾರಾವಾಹಿಯ ನಿರ್ದೇಶಕರು. ನಿರ್ದೇಶಕ ಕೃಷ್ಣ ಅವರು ಈ ಸೀರಿಯಲ್‌ಗೆ ಬಂಡವಾಳ ಹೂಡಿದ್ದಾರೆ. ಪ್ರತಿ ಮನೆಯ ತಾಯಿಯು ಕೂಡ ತನ್ನ ಮಗಳು ಹೀಗೆ ಧೈರ್ಯಶಾಲಿಯಾಗಿರಬೇಕು ಅಂತ ಬಯಸುವ ಟಾಮ್‌ಬಾಯ್ ಹುಡುಗಿಯ ಕಥೆಯೇ ಸತ್ಯ ಧಾರವಾಹಿ. ಈ ಸೀರಿಯಲ್‌ನ ಪಾತ್ರ, ಟ್ವಿಸ್ಟ್‌, ಕುತೂಹಲ ಪ್ರೇಕ್ಷಕರಿಗೆ ತುಂಬ ಇಷ್ಟವಾಗಿದೆ.

ಆಗಲೇ ಸತ್ಯ ಧಾರಾವಾಹಿ ಗಟ್ಟಿ ಮೇಳ ಕ್ಕೂ ಕೂಡಾ ಸ್ಪರ್ಧೆ ಒಡ್ಡಬಹುದು ಎಂಬುದು ಕೆಲವರ ಅಭಿಪ್ರಾಯ ಆಗಿತ್ತು ಕೂಡಾ‌. ಈಗ ಅದೆಲ್ಲದರ ನಡುವೆ ಸತ್ಯ ಧಾರಾವಾಹಿ ಮತ್ತೊಂದು ಹೊಸ ಸಾಧನೆಯನ್ನು ಮಾಡಿದೆ. ಸತ್ಯ ಮಾಡಿರುವ ಈ ಹೊಸ ಸಾಧನೆ ಏನೆಂದರೆ, ಈ ಸೀರಿಯಲ್ 10.9 ಟಿವಿಆರ್ ಪಡೆದು ನಂಬರ್ ಒನ್ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಆರಂಭವಾದ ಕೆಲವೇ ವಾರಗಳಲ್ಲಿ ಧಾರಾವಾಹಿ ಧಾರವಾಹಿ ನಂಬರ್ 1 ಸ್ಥಾನಕ್ಕೆ ಬಂದಿರುವುದು ಸಹಜವಾಗಿಯೇ ಇಡೀ ತಂಡಕ್ಕೆ ಖುಷಿಯನ್ನು ನೀಡುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.

ಈ ಮೂಲಕ ಸತ್ಯ ಮನರಂಜನೆಯ ವಿಷಯದಲ್ಲಿ ಜೊತೆ ಜೊತೆಯಲಿ ಹಾಗೂ ಗಟ್ಟಿಮೇಳ ಎರಡಕ್ಕೂ ಗಟ್ಟಿ ಪೈಪೋಟಿಯನ್ನು ನೀಡುತ್ತಿದೆ ಎನ್ನುವುದು ತಿಳಿಯುತ್ತಿದೆ. ಇನ್ನು ಮುಂಬರುವ ವಾರಗಳಲ್ಲಿ ಸತ್ಯ ತನ್ನ ಈ ಸ್ಥಾನವನ್ನು ಉಳಿಸಿಕೊಳ್ಳುವುದೋ ಅಥವಾ ಜೊತೆ ಜೊತೆಯಲಿ ಹಾಗೂ ಗಟ್ಟಿಮೇಳ ಮತ್ತೊಮ್ಮೆ ತಮ್ಮ ಸ್ಥಾನಗಳನ್ನು ಮರಳಿ ಪಡೆಯುವುದೋ ನಾವು ಕಾದುನೋಡಬೇಕಿದೆ. ಒಟ್ಟಾರೆ ಲಾಕ್ ಡೌನ್ ವೇಳೆ ಇದ್ದಕ್ಕಿದ್ದಂತೆ ನಿಂತು ಹೋದ ಸುಬ್ಬಲಕ್ಷ್ಮಿ ಸಂಸಾರದ ನಂತರ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ಮತ್ತೊಮ್ಮೆ ಭರ್ಜರಿಯಾಗಿ ಸತ್ಯ ಸೀರಿಯಲ್ ಮೂಲಕ ರೀ ಎಂಟ್ರಿಯನ್ನು ಕೊಟ್ಟಿದ್ದು, ಬಹಳ ಅದ್ದೂರಿಯಾಗಿ ಹಿರಿಯ ಹಾಗೂ ಜನಪ್ರಿಯ ಕಲಾವಿದರ ಸಂಗಮದೊಂದಿಗೆ ಅಚ್ಚುಕಟ್ಟಾದ ಕಥೆಯೊಂದಿಗೆ ಜನರ ಮನಸ್ಸನ್ನು ಗೆದ್ದಿದ್ದಾರೆ.

Leave A Reply

Your email address will not be published.