ಬಹಳಷ್ಟು ಹೆಣ್ಣುಮಕ್ಕಳು, ಮಹಿಳೆಯರು ಕೂದಲಿನ ಸಮಸ್ಯೆಯನ್ನು ಅನುಭವಿಸುತ್ತಾರೆ. ಕೂದಲು ಉದುರುವುದು, ಸಣ್ಣ ವಯಸ್ಸಿನಲ್ಲಿ ಬಿಳಿ ಕೂದಲು ಆಗುವುದು ಇನ್ನಿತರ ಅನೇಕ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಬಿಳಿ ಕೂದಲು ಹೆಚ್ಚಾದರೆ ಮಾರ್ಕೆಟ್ ನಲ್ಲಿ ಸಿಗುವ ಕೆಮಿಕಲ್ ಬಳಸಿ ಕಲರ್ ಮಾಡಿಕೊಳ್ಳುತ್ತಾರೆ ಇದರಿಂದ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಹಾಗಾಗಿ ನೈಸರ್ಗಿಕವಾಗಿ ಕೂದಲಿಗೆ ಬಣ್ಣ ಬರಲು ಮನೆಯಲ್ಲಿಯೆ ಮನೆಮದ್ದು ತಯಾರಿಸಬಹುದು. ಹಾಗಾದರೆ ಮನೆಮದ್ದನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು ಯಾವುವು ಹಾಗೂ ತಯಾರಿಸುವ ವಿಧಾನವನ್ನು ಈ ಲೇಖನದಲ್ಲಿ ನೋಡೋಣ.

ಮನೆಮದ್ದನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು ಬಿಟರೂಟ್, ನೀರು, ನಿಂಬು, ಸಕ್ಕರೆ, ಮೆಹಂದಿ ಪೌಡರ್. ಮೊದಲು ಒಂದು ಚಿಕ್ಕದಾದ ಬೀಟರೂಟ್ ಅನ್ನು ಸಿಪ್ಪೆತೆಗೆದು ಚೆನ್ನಾಗಿ ತುರಿದುಕೊಳ್ಳಬೇಕು ನಂತರ ಒಂದು ಪಾತ್ರೆಯಲ್ಲಿ ತುರಿದ ಬೀಟರೂಟ್ ಹಾಕಿ ಒಂದು ಗ್ಲಾಸ್ ನೀರನ್ನು ಹಾಕಬೇಕು. ನಂತರ ಕುದಿಸಬೇಕು ಅರ್ಧ ಲೋಟ ಆಗುವವರೆಗೆ ಕುದಿಸಬೇಕು, ಕುದಿಸದಾಗ ಬಿಟರೂಟ್ ರಸ ಬಿಡುತ್ತದೆ. ನಂತರ ಒಂದು ಬೌಲ್ ಗೆ ಸೋಸಬೇಕು ರಸವನ್ನು ಮೆಹಂದಿ ಪೌಡರ್ ಗೆ ಸ್ವಲ್ಪ ಸ್ವಲ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಯಾವ ಮೆಹಂದಿ ಪೌಡರ್ ಬಳಸಿದರೂ ತೊಂದರೆ ಇಲ್ಲ, ಒಳ್ಳೆಯ ಮೆಹೆಂದಿ ಪೌಡರ್ ಬಳಸಬೇಕು. ನಂತರ ಅದಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಸೇರಿಸಬೇಕು.

ನಿಂಬೆಹಣ್ಣು ಕೂದಲಿಗೆ ಹೆಚ್ಚು ಬಣ್ಣವನ್ನು ನೀಡುತ್ತದೆ. ಅದಕ್ಕೆ ಒಂದು ಚಮಚ ನೆಲ್ಲಿಕಾಯಿ ಪೌಡರ್ ಹಾಕಬೇಕು ಒಂದು ವೇಳೆ ನೆಲ್ಲಿಕಾಯಿ ಪೌಡರ್ ಇಲ್ಲದೆ ಇದ್ದರೆ ಹಾಕಬೇಕು ಅಂತಿಲ್ಲ. ನೆಲ್ಲಿಕಾಯಿ ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸುತ್ತದೆ.

ನಂತರ ಅದಕ್ಕೆ ಒಂದು ಸ್ಪೂನ್ ಸಕ್ಕರೆಯನ್ನು ಸೇರಿಸಬೇಕು. ಮೆಹಂದಿ ಉತ್ತಮವಾಗಿ ಕೂದಲಿಗೆ ಬಣ್ಣ ಕೊಡಲು ಸಕ್ಕರೆ ಸಹಾಯಕಾರಿಯಾಗಿದೆ. ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಪ್ಲಾಸ್ಟಿಕ್ ಗ್ಲೌಸ್ ಅಥವಾ ಪ್ಲಾಸ್ಟಿಕ್ ಕವರ್ ಅನ್ನು ಕೈಗೆ ಹಾಕಿಕೊಂಡು ಕೂದಲಿನ ಬುಡಕ್ಕೆ ಮತ್ತು ಕೂದಲಿನ ಮೇಲೆ ಸರಿಯಾಗಿ ಅಪ್ಲೈ ಮಾಡಿಕೊಳ್ಳಬೇಕು. ಅಪ್ಲೈ ಮಾಡಿದ ನಂತರ ಪ್ಲಾಸ್ಟಿಕ್ ಕವರ್ ಸಿಗುತ್ತದೆ ಅದನ್ನು ಹಾಕಿಕೊಳ್ಳಬಹುದು ಅಥವಾ ನೀಟಾಗಿ ತುರುಬು ಕಟ್ಟಿಕೊಳ್ಳಬಹುದು. ಒಂದರಿಂದ ಎರಡು ಗಂಟೆ ಹಾಗೆಯೆ ಬಿಟ್ಟು ನಂತರ ತಲೆಸ್ನಾನ ಮಾಡಬೇಕು.

ತಲೆ ಸ್ನಾನ ಮಾಡುವಾಗ ಯಾವುದೆ ಶಾಂಪೂ, ಸೋಪನ್ನು ಬಳಸಬಾರದು ನೀರಿನಿಂದ ತಲೆಸ್ನಾನ ಮಾಡಬೇಕು. ಮರುದಿನ ಬೇಕಾದರೆ ಶಾಂಪೂ ಬಳಸಿ ಮತ್ತೊಮ್ಮೆ ತಲೆ ಸ್ನಾನ ಮಾಡಬಹುದು. ಈ ರೀತಿ ವಾರದಲ್ಲಿ ಒಂದು ಸರಿಯಂತೆ 2 ಬಾರಿ ಮಾಡಿದರೆ ಕೂದಲಿಗೆ ನೈಸರ್ಗಿಕವಾಗಿ ಬಣ್ಣ ದೊರೆಯುತ್ತದೆ.

ಈ ಮನೆಮದ್ದನ್ನು ತಯಾರಿಸಲು ಹೆಚ್ಚು ಹಣ ಖರ್ಚು ಮಾಡಬೇಕಾಗಿಲ್ಲ ಅಲ್ಲದೆ ಇದಕ್ಕೆ ಯಾವುದೆ ಕೆಮಿಕಲ್ ಹಾಕದೆ ಇರುವುದರಿಂದ ಕೂದಲಿಗೆ ಅಡ್ದ ಪರಿಣಾಮ ಉಂಟಾಗುವುದಿಲ್ಲ. ಈ ಮನೆಮದ್ದನ್ನು ಎಲ್ಲ ವಯಸ್ಸಿನ ಹೆಣ್ಣುಮಕ್ಕಳು ಬಳಸಬಹುದು. ಈ ಮಾಹಿತಿ ಉಪಯುಕ್ತವಾಗಿದ್ದು ತಿಳಿದುಕೊಳ್ಳಬೇಕಾದ ಮಾಹಿತಿಯಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ಹೆಣ್ಣುಮಕ್ಕಳಿಗೆ ಮತ್ತು ಮಹಿಳೆಯರಿಗೆ ತಿಳಿಸಿ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *