ರೈತರು ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುವುದಕ್ಕೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ತುಂಬಾ ಸಹಾಯಕವಾಗಿದೆ. ಈ ಯೋಜನೆ ಅಡಿಯಲ್ಲಿ ಕೆಲಸ ಮಾಡುವವರಿಗೆ ಸರ್ಕಾರದಿಂದ ಹಣ ಬರುತ್ತದೆ. ನೀವು ಎಂ ಜಿ ನರೇಗಾ ಯೋಜನೆಯ ಅಡಿಯಲ್ಲಿ ಯಾವುದಾದರೂ ಕೆಲಸವನ್ನು ಮಾಡಿಸಿದ್ದರೆ ಅದರ ಫಂಡ್ ಬಿಡುಗಡೆ ಆಗಿದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿಯುವುದು ಹೇಗೆ ಎಂಬುದನ್ನು ನಾವಿಂದು ನಿಮಗೆ ತಿಳಿಸುತ್ತೇವೆ.

ಮೊದಲಿಗೆ ನಿಮ್ಮ ಫೋನ್ ನಲ್ಲಿ ಗೂಗಲ್ ಅನ್ನು ತೆರೆದು ಅಲ್ಲಿ ನರೇಗಾ ಎಂದು ಸರ್ಚ್ ಮಾಡಿ. ಆಗ ನಿಮಗೆ ಅಲ್ಲಿ ಎಂ ಜಿ ನರೇಗಾ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಆಗ ಅಲ್ಲಿ ಎಂ ಜಿ ನರೇಗಾ ಹೊಮ್ ಪೇಜ್ ತೆರೆದುಕೊಳ್ಳುತ್ತದೆ. ಅದನ್ನು ಕೆಳಗೆ ಸೇರಿಸಿದಾಗ ನಿಮಗೆ ರಿಪೋರ್ಟ್ ಫಾರ್ ಎಂ ಐ ಎಸ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಕ್ಯಾಪ್ಚ ಕೋಡ್ ಕೇಳುತ್ತದೆ ಅದನ್ನು ಟೈಪ್ ಮಾಡಿ ವೇರಿಫೈ ಕೋಡ್ ಅನ್ನು ಕ್ಲಿಕ್ ಮಾಡಿ ನಂತರ ಅದು ನಿಮಗೆ ಯಾವ ಹಣಕಾಸು ವರ್ಷದ ಬಿಲ್ ಬೇಕು ಎಂಬುದನ್ನು ಕೇಳುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಿ.

ನಂತರ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ ನಂತರ ಹಾಗೆ ಕೆಳಗೆ ಬಂದು ಫೈನಾನ್ಸಿಯಲ್ ಪ್ರೋಗ್ರೆಸ್ ಅಂತ ಇರುತ್ತದೆ ಅಲ್ಲಿ ಫೈನಾನ್ಸಿಯಲ್ ಸ್ಟೇಟ್ಮೆಂಟ್ ಮೇಲೆ ಕ್ಲಿಕ್ ಮಾಡಿ ಆಗ ಅಲ್ಲಿ ಜಿಲ್ಲೆಯ ಹೆಸರುಗಳು ಕಾಣಿಸುತ್ತದೆ. ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ತಾಲೂಕನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ಗ್ರಾಮ ಪಂಚಾಯತಿಯ ಹೆಸರು ಬರುತ್ತದೆ ನಿಮ್ಮ ಗ್ರಾಮ ಪಂಚಾಯತ ಹೆಸರನ್ನು ಹುಡುಕಿ ಅದರ ಎದುರು ಕಾಣಿಸುವ ಕೆಂಪು ಬಣ್ಣದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಬೇಕು.

ನಂತರ ಅಲ್ಲಿ ಈ ಯೋಜನೆಯಡಿಯಲ್ಲಿ ಬರುವ ಬೇರೆ ಬೇರೆ ಕೆಲಸದ ಹೆಸರುಗಳು ಕಾಣಿಸುತ್ತದೆ. ಅದರಲ್ಲಿ ನೀವು ಯಾವ ಕೆಲಸವನ್ನು ಮಾಡಿದ್ದೀರಿ ಎಂಬುದನ್ನು ಹುಡುಕಿ ಅದರ ಕೆಳಗೆ ಕಾಣಿಸುವ ನೀಲಿ ಬಣ್ಣದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಬೇಕು.ಅಲ್ಲಿ ನಿಮಗೆ ಕಾಮಗಾರಿಯ ಫಂಡ್ ಬಿಡುಗಡೆ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಇಲ್ಲಿ ಎಸ್ಟು ಜನ ಕಾರ್ಮಿಕರು ನಿಮ್ಮ ಕಾಮಗಾರಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಅವರಿಗೆ ಎಷ್ಟು ಮೊತ್ತವನ್ನು ನೀಡಲಾಗಿದೆ ಯಾವ ಖಾತೆಗೆ ಯಾವ ದಿನಾಂಕದಂದು ಹಣ ಹೋಗಿದೆ ಎಂಬುದರ ಸಂಪೂರ್ಣ ಮಾಹಿತಿ ಸಿಗುತ್ತದೆ.

ಈ ರೀತಿಯಾಗಿ ನಿಮ್ಮ ನಿಮ್ಮ ಕಾಮಗಾರಿಗೆ ಎಷ್ಟು ಫಂಡ್ ಬಿಡುಗಡೆ ಆಗಿದೆ ಎಂಬುದನ್ನು ಸ್ವತಃ ನೀವೇ ಸುಲಭವಾಗಿ ನಿಮ್ಮ ಮೊಬೈಲ್ನಲ್ಲಿ ತಿಳಿದುಕೊಳ್ಳಬಹುದಾಗಿದೆ. ಯಾವುದೇ ಕರ್ಚಿಲ್ಲದೆ ಸುಲಭವಾಗಿ ನೀವು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *