ವಿಶ್ವದ ಎರಡನೇ ಅತಿ ಎತ್ತರದ ಶಿವ ಪ್ರತಿಮೆ ಇರೋದು ಎಲ್ಲಿ ಗೊತ್ತೇ, ಇದರ ಹಿಂದಿನ ರೋಚಕ ಕಥೆ ಓದಿ.

0 0

ಮುರುಡೇಶ್ವರ ಹಿಂದೂಗಳ ಪ್ರಸಿದ್ಧ ಯಾತ್ರಾ ಕೇಂದ್ರವಾಗಿದೆ. ಗೋಕರ್ಣದ ಸುತ್ತಮುತ್ತಲಿನ ಪಂಚಲಿಂಗಂ ದೇವಾಲಯಗಳಲ್ಲಿ ಮುರುಡೇಶ್ವರ ದೇವಾಲಯ ಕೂಡ ಒಂದು. ಮುರುಡೇಶ್ವರ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು ಮುರುಡೇಶ್ವರದ ದೇವಾಲಯದ ರಹಸ್ಯವೇನು? ಇಲ್ಲಿನ ಶಿವನನ್ನು ಮುರುಡೇಶ್ವರ ಎಂದು ಕರೆಯಲು ಕಾರಣವೇನು ಎಂಬ ಈ ಎಲ್ಲಾ ಪ್ರಶ್ನೆಗಳಿಗೆ ನಾವು ಈ ಲೇಖನದ ಮೂಲಕ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮುರುಡೇಶ್ವರದ ದೇವಾಲಯ ಮತ್ತು ರಾಜಗೋಪುರ ಮುರುಡೇಶ್ವರದ ಪ್ರಮುಖ ಆಕರ್ಷಣೆಯಾಗಿದೆ. ಇದು ಕಂಡುಕಾಗಿರಿ ಶಿಖರದಲ್ಲಿ ಇದೆ. ಈ ದೇವಾಲಯವು ಮೂರು ಕಡೆಗಳಿಂದಲೂ ಅರೆಬಿಯನ್ ಸಮುದ್ರದಿಂದ ಸುತ್ತುವರೆಯಲ್ಪಟ್ಟಿದ್ದು ಪೌರಾಣಿಕ ನಂಬಿಕೆಗಳ ಪ್ರಕಾರ, ಇಲ್ಲಿ ಗಣೇಶನು ಬ್ರಾಹ್ಮಣ ಹುಡುಗನ ಅವತಾರದಲ್ಲಿ ಬಂದು ರಾವಣನ ಬೇಡಿಕೆಯಂತೆ ಆತ್ಮಲಿಂಗವನ್ನು ಹಿಡಿದು ನಂತರ ರಾವಣನಿಗೆ ಶಿವನ ಆತ್ಮ ಲಿಂಗ ಸಿಗದಂತೆ ಆತ್ಮ ಲಿಂಗವನ್ನು ಕೆಳಗಿಟ್ಟ ಸ್ಥಳವಿದು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಭಗವಾನ್‌ ಶಿವನಿಗೆ ಅರ್ಪಿತವಾದ 123 ಅಡಿ ಉದ್ದದ ಶಿವನ ಪ್ರತಿಮೆ ಹಾಗೂ ಶಿವಲಿಂಗವನ್ನೂ ಈ ದೇವಾಲಯದಲ್ಲಿ ನಾವು ಕಾಣಬಹುದು. ಮುರುಡೇಶ್ವರದ ಬಗ್ಗೆ ಕೇವಲ ಇಷ್ಟು ಮಾತ್ರವಲ್ಲ, ನಮ್ಮನ್ನು ಬೆರಗುಗೊಳಿಸುವ ಇನ್ನು ಅನೇಕ ರಹಸ್ಯಗಳಿವೆ. ಅವುಗಳನ್ನು ಒಂದೊಂದೇ ನೋಡುವುದಾದರೆ , ಶಿವನ ಪ್ರತಿಮೆ ಮುರುಡೇಶ್ವರದಲ್ಲಿ ನೋಡುತ್ತಲೇ ಉಸಿರು ಬಿಡುವ ಶಿವನ ದೈತ್ಯ ವಿಗ್ರಹವು ಅತ್ಯಂತ ಜನಪ್ರಿಯವಾಗಿದೆ. ಅಂಕಿ ಅಂಶಗಳ ಪ್ರಕಾರ, ನೇಪಾಳದ ಕೈಲಾಸನಾಥ ಮಹಾದೇವ ಪ್ರತಿಮೆಯ ನಂತರ ವಿಶ್ವದ ಎರಡನೇ ಅತಿ ಎತ್ತರದ ಶಿವ ಪ್ರತಿಮೆ ಎಂದರೆ ಅದು ಮುರುಡೇಶ್ವರದಲ್ಲಿ ಇರುವ ಶಿವನ ಪ್ರತಿಮೆ ಎಂದು ಹೇಳಲಾಗುತ್ತದೆ.

ಈಗಾಗಲೇ ಹೇಳಿರುವ ಹಾಗೇ ಈ ಶಿವ ಪ್ರತಿಮೆಯು ಸರಿಸುಮಾರು 123 ಅಡಿ ಎತ್ತರವನ್ನು ಹೊಂದಿದೆ. ಕೆಲ ವರ್ಷಗಳ ಹಿಂದೆ ಸಿಡಿಲಿನ ಆರ್ಭಟಕ್ಕೆ ಈ ಶಿವ ಪ್ರತಿಮೆಯ ಕೈಭಾಗಕ್ಕೆ ಸ್ವಲ್ಪ ಹಾನಿಯಾಗಿತ್ತು. ಆದರೆ ಇದೀಗ ಪ್ರತಿಮೆಯನ್ನು ಮೊದಲಿನಂತೆ ಸರಿ ಮಾಡಲಾಗಿದೆ.

ಆಕರ್ಷಣೀಯ ರಾಜಗೋಪುರ. ರಾಜ ಗೋಪುರ ಎಂದರೆ ಕಿಂಗ್ ಆಫ್ ಟವರ್ಸ್, ಮುರುಡೇಶ್ವರದಲ್ಲಿರುವ ಈ ದೇವಾಲಯದ ಗೋಪುರವು ಅದರ ಹೆಸರೇ ಸೂಚಿಸುವಂತೆ ಮುರುಡೇಶ್ವರದ ರಾಜನಿದ್ದಂತಿದೆ. ರಾಜ ಗೋಪುರದಲ್ಲಿ 20 ಮಹಡಿಗಳಿದ್ದು, ಜನರು ಲಿಫ್ಟ್‌ಗಳನ್ನು ಬಳಸುವ ಮೂಲಕ ಗೋಪುರದ ಮೇಲ್ಭಾಗವನ್ನೂ ತಲುಪಬಹುದು. ಗೋಪುರದ ಕೊನೆಯ ಮಹಡಿಯಲ್ಲಿ ನಿಂತು ನೋಡಿದರೆ ನಾವು ಮುರುಡೇಶ್ವರದ ಸಂಪೂರ್ಣ ಸೌಂದರ್ಯವನ್ನು ಸವಿಯಬಹುದು. ಗೋಪುರದ ತುದಿಗೆ ಹೋಗುತ್ತಿದ್ದಂತೆ ಆಕಾಶದಲ್ಲಿ ಹಾರಾಡುತ್ತಿರುವ ಅನುಭವ ಸಿಗುವುದು. ಅತಿ ದೊಡ್ಡ ಶಿವನ ಪ್ರತಿಮೆಯೂ ಕೂಡ ಹತ್ತಿರದಲ್ಲಿರುವಂತೆ ಕಾಣುತ್ತದೆ.

ಮೂರನೇದಾಗಿ ಕಂಡುಕ ಬೆಟ್ಟ.. ಮುರುಡೇಶ್ವರದಲ್ಲಿನ ಕಂಡುಕಾ ಬೆಟ್ಟವು ಒಂದು ಪರ್ಯಾಯ ದ್ವೀಪವಾಗಿದೆ. ಪವಿತ್ರ ಮುರುಡೇಶ್ವರ ದೇವಾಲಯ ಇರುವುದು ಕೂಡ ಈ ಕಂಡುಕಾ ಬೆಟ್ಟದಲ್ಲಿ. ಬೃಹತ್ ಶಿವನನ್ನು ಹೊತ್ತಿರುವ ಈ ಕಂಡುಕಾ ಬೆಟ್ಟವು 3 ದಿಕ್ಕಿನಿಂದಲೂ ಅರೇಬಿಯನ್ ಸಮುದ್ರದಿಂದ ಆವೃತವಾಗಿದೆ. ಹೀಗಾಗಿ, ಸಮುದ್ರದ ಸುಮಧುರ ನೋಟವು ನೋಡುಗರ ಕಣ್ಣುಗಳಿಗೆ ಹಬ್ಬದೂಟ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೆ ನಮಗೆ ಮುರುಡೇಶ್ವರ ದೇವಾಲಯದ ರಚನೆಯು ಹಿಂದೂ ಮಹಾಕಾವ್ಯ ರಾಮಾಯಣದ ಕಾಲಕ್ಕೆ ಸಂಬಂಧಿಸಿದ್ದು ಆಗಿನ ಕೆಲವು ಘಟನೆಗಳನ್ನು ನೆನಪಿಸುತ್ತವೆ. ಈ ದೇವಾಲಯದಲ್ಲಿ ನಾವು ರಾಮಾಯಣಕ್ಕೆ ಸಂಬಂಧಿಸಿದ ಅನೇಕ ಘಟನೆಗಳನ್ನು, ದೃಶ್ಯಗಳನ್ನು ನೋಡಬಹುದು. ದೇವಾಲಯದ ಗುಹೆಯಲ್ಲಿ, ಗೋಡೆಗಳ ಮೇಲಿನ ಚಿತ್ರಗಳಲ್ಲಿ ನಾವು ರಾಮಾಯಣದ ದೃಶ್ಯಗಳನ್ನು ಕಾಣಬಹುದು. ದಂತಕಥೆಯ ಪ್ರಕಾರ, ರಾವಣನು ಲಂಕಾ ತಲುಪುವ ಮೊದಲು ಅದನ್ನು ನೆಲದ ಮೇಲೆ ಇಟ್ಟುಕೊಳ್ಳಬಾರದು ಎಂಬ ಷರತ್ತಿನ ಮೇರೆಗೆ ಶಿವನಿಂದ ಆತ್ಮ-ಲಿಂಗವನ್ನು ಸಂಪಾದಿಸಿದ್ದನು.

ರಾವಣನು ಅನೈತಿಕತೆಯಿಂದ ಶಕ್ತಿಶಾಲಿಯಾಗಿ ದೇವತೆಗಳನ್ನು ಆಳುವುದು ದೇವಾನುದೇವತೆಗಳಿಗೆ ಇಷ್ಟವಿರಲಿಲ್ಲ. ಹೇಗಾದರೂ ಮಾಡಿ ರಾವಣನನ ಕೈಲಿದ್ದ ಆತ್ಮಲಿಂಗವನ್ನು ನೆಲಕ್ಕಿಡುವಂತೆ ಮಾಡಲು ದೇವಾನುದೇವತೆಗಳು ಒಂದು ಯೋಜನೆಯನ್ನು ರೂಪಿಸಿದರು. ದೇವಾನು ದೇವತೆಗಳು ಗಣೇಶನ ಬಳಿ ಬಂದು ರಾವಣನು ಶಿವನ ಆತ್ಮಲಿಂಗವನ್ನು ಪಡೆದುಕೊಂಡಿರುವುದರ ಬಗ್ಗೆ ಮತ್ತು ಅದನ್ನು ಹಿಂಪಡೆಯಲು ಕೇಳಿಕೊಳ್ಳುತ್ತಾರೆ. ದೇವಾನುದೇವತೆಗಳ ಕೋರಿಕೆಯ ಮೇರೆಗೆ ಗಣೇಶನು ಹುಡುಗನ ರೂಪದಲ್ಲಿ ವೇಷ ಧರಿಸಿ ರಾವಣನಿಂದ ಆತ್ಮಲಿಂಗವನ್ನು ಪಡೆದುಕೊಳ್ಳಲು ಉಪಾಯ ಮಾಡುತ್ತಾನೆ. ಸಂಧ್ಯಾವಂದನೆ ಮಾಡಲೆಂದು ರಾವಣನು ತನ್ನ ಕೈಲಿದ್ದ ಆತ್ಮಲಿಂಗವನ್ನು ಬ್ರಾಹ್ಮಣ ಬಾಲಕನ ವೇಷಧರಿಸಿದ್ದ ಗಣೇಶನಿಗೆ ನೀಡುತ್ತಾನೆ. ರಾವಣನು ಸಂಧ್ಯಾವಂದನೆಯನ್ನು ಮುಗಿಸಿ ಬರುವಷ್ಟರಲ್ಲಿ ಗಣೇಶನು ತನ್ನ ಕೈಲಿದ್ದ ಆತ್ಮಲಿಂಗವನ್ನು ನೆಲದ ಮೇಲೆ ಇಡುತ್ತಾನೆ ಈ ಸ್ಥಳವೇ ಗೋಕರ್ಣವಾಗಿ ಪ್ರಸಿದ್ದಿ ಹೊಂದುತ್ತದೆ.

ರಾವಣನು ಬಂದು ನೋಡಿದಾಗ ಆತ್ಮಲಿಂಗ ಅದಾಗಲೇ ನೆಲದಲ್ಲಿ ಸ್ಥಿರವಾಗಿತ್ತು. ರಾವಣನು ಬಾಲಕನ ಮೇಲಿನ ಕೋಪದಲ್ಲಿ ಲಿಂಗವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾನೆ. ರಾವಣನ ಪ್ರಯತ್ನದ ಬಲದಿಂದ ಆತ್ಮಲಿಂಗ ಮುರಿದು ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಲಿಂಗದ ತುಣುಕುಗಳು ಗೋಕರ್ಣದ ಸುತ್ತ ಹರಡಿಕೊಂಡಿತು. ಮುಖ್ಯ ಆತ್ಮ-ಲಿಂಗವೆಂದರೆ ಮಹಾಬಲೇಶ್ವರ ದೇವಸ್ಥಾನ (ಗೋಕರ್ಣ), ಸಜ್ಜೇಶ್ವರ, ಧಾರೇಶ್ವರ, ಗುಣವಂತೇಶ್ವರ ಮತ್ತು ಆತ್ಮ-ಲಿಂಗಕ್ಕೆ ಹೊದಿಸಿದ್ದ ಬಟ್ಟೆ ಈ ಪವಿತ್ರ ಮುರುಡೇಶ್ವರದಲ್ಲಿ ಬಿದ್ದಿತು ಎನ್ನುವ ಉಲ್ಲೇಖವಿದೆ. ಮುರುಡೇಶ್ವರದಲ್ಲಿನ ಶಿವನ ದೈತ್ಯ ಪ್ರತಿಮೆಯನ್ನು ನಿರ್ಮಿಸಲು ಸರಿಸುಮಾರು 2 ವರ್ಷಗಳನ್ನು ತೆಗೆದುಕೊಂಡಿತು ಎನ್ನಲಾಗಿದೆ. ಶಿವನ ಈ ಪ್ರತಿಮೆಯ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬಿದ್ದು, ಸಾರ್ವಕಾಲಿಕವಾಗಿ ಪ್ರತಿಮೆಯು ಹೊಳೆಯುತ್ತಿರುವಂತೆ ನಿರ್ಮಿಸಲಾಗಿದೆ. ಆದ್ದರಿಂದ ಇಂದಗೂ ಕೂಡ ಈ ಶಿವ ಪ್ರತಿಮೆ ವಿಶೇಷ ಆಕರ್ಷಣೆಯನ್ನು ಒಳಗೊಂಡಿದೆ.

ಮುರುಡೇಶ್ವರ ದೇವಸ್ಥಾನವು ಕರ್ನಾಟಕದ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ. ಇದು ಆಧುನಿಕ ಮತ್ತು ಸಾಂಪ್ರದಾಯಿಕ ವಾಸ್ತುಶಿಲ್ಪದ ಮಿಶ್ರಣವನ್ನು ಹೊಂದಿದೆ. ಈ ಪ್ರತಿಮೆಯನ್ನು ಕಾಶಿನಾಥ ಎಂಬಾತ ನಿರ್ಮಿಸಿದ್ದು, ಆರ್.ಎನ್.ಶೆಟ್ಟಿ ಎಂಬ ಉದ್ಯಮಿ ಈ ದೇವಾಲಯದ ನಿರ್ಮಾಣಕ್ಕೆ ಆರ್ಥಿಕ ಸಹಕಾರವನ್ನು ನೀಡಿದ್ದಾರೆ. ದೈತ್ಯಾಕಾರದ ಶಿವ ಪ್ರತಿಮೆಯ ಬುಡದಲ್ಲಿ ದೇವಸ್ಥಾನವನ್ನು ನಾವು ನೋಡಬಹುದು. ಆತ್ಮ-ಲಿಂಗದ ಮೂಲ ತುಣುಕನ್ನು ಮೃದೇಶ ಲಿಂಗ ಎಂದು ಕರೆಯಲಾಗುತ್ತದೆ. ಈಗ ಇದನ್ನು ಮುರುಡೇಶ್ವರ ಎಂದು ಮರುನಾಮಕರಣ ಮಾಡಲಾಗಿದೆ. ಸುಂದರವಾದ ದೇವಾಲಯ ಸಂಕೀರ್ಣವು ಭಟ್ಕಳದ ಕಂದುಕಾ ಬೆಟ್ಟದಲ್ಲಿದೆ (ಕಂದುಕಾ ಗಿರಿ). ಅರೇಬಿಯನ್ ಸಮುದ್ರದ ಹಿನ್ನೆಲೆಯೊಂದಿಗೆ ಎತ್ತರದ ರಾಜ ಗೋಪುರ ಮತ್ತು ಶಿವ ವಿಗ್ರಹವನ್ನು ನಾವಿಲ್ಲಿ ನೋಡಬಹುದು. ಗೋಕರ್ಣದ ಸುತ್ತಮುತ್ತಲಲ್ಲಿರುವ ಪಂಚಲಿಂಗಂ ದೇವಾಲಯಗಳಲ್ಲಿ ಮುರುಡೇಶ್ವರ ಕೂಡ ಒಂದು. ಇದು ಖಂಡಿತವಾಗಿಯೂ ಭಾರತದ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಒಂದಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

Leave A Reply

Your email address will not be published.