ನಾವೀಗ 2024ರ ಪ್ರಾರಂಭದಲ್ಲಿ ಇದ್ದೇವೆ. ಕಳೆದ ವರ್ಷದಲ್ಲಿ ಕಷ್ಟ ನೋವು ಮರೆಯಾಗಿ ಹೊಸ ವರ್ಷದಲ್ಲಿ ಹೊಸ ಜೀವನ ಶುರುವಾಗುತ್ತಿದೆ. ಹೊಸ ವರ್ಷದಲ್ಲಿ ದ್ವಾದಶ ರಾಶಿಗಳಲ್ಲಿ ಪ್ರಮುಖ ರಾಶಿ ಮೇಷ ರಾಶಿಯವರಿಗೆ ಗುರುಬಲ ಯಾವಾಗ ಬರುತ್ತದೆ ಹಾಗೂ ಗುರು ಬಲದಿಂದ ಏನೆಲ್ಲಾ ವಿಷಯದಲ್ಲಿ ಬದಲಾವಣೆಯಾಗುತ್ತದೆ. ಉದ್ಯೋಗ, ವಿದ್ಯಾಭ್ಯಾಸ, ಆರೋಗ್ಯ ಮೊದಲಾದ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ವರ್ಷದ ಆರಂಭದಲ್ಲಿ ಪ್ರತಿಯೊಬ್ಬರು ಗುರು ಬಲ ಶನಿ ಬಲ ಹೇಗಿದೆ ಎಂದು ತಿಳಿಕೊಳ್ಳಲು ಇಷ್ಟಪಡುತ್ತಾರೆ. ದೀರ್ಘಕಾಲ ತನ್ನ ಫಲ ಕೊಡುವ ಗ್ರಹಗಳಲ್ಲಿ ಗುರು ಹಾಗೂ ಶನಿ ಪ್ರಮುಖವಾಗಿದೆ. ಒಂದನೆ ತಾರೀಖು 2024ರಂದು ಗುರು ತನ್ನ ಸ್ಥಾನವನ್ನು ಬದಲಾಯಿಸುತ್ತಿದ್ದಾನೆ ಮೇಷ ರಾಶಿಯಿಂದ ವೃಷಭ ರಾಶಿಗೆ ಬದಲಾಗುತ್ತಿದ್ದಂತೆ ಎರಡು ವರ್ಷದಿಂದ ಕಷ್ಟದಲ್ಲಿದ್ದ ಮೇಷ ರಾಶಿಯವರಿಗೆ ಗುರು ಬಲ ಸಿಗುತ್ತದೆ. ವಿವಾಹಿತರಿಗೆ ವಿವಾಹವಾಗುತ್ತಿರಲಿಲ್ಲ, ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿರಲಿಲ್ಲ,

ವೃತ್ತಿಯಲ್ಲಿ ಏಳಿಗೆ ಇಲ್ಲದೆ ಮನೆಯಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು, ಅನಾರೋಗ್ಯ ಹಿಂಸೆ ಯಾತನೆ ಕಾಡುತಿತ್ತು. ಗುರು ವೃಷಭ ರಾಶಿಗೆ ಬದಲಾಗುವುದರ ಜೊತೆಗೆ ಆರು ಎಂಟು ಹಾಗೂ 10ನೆ ಮನೆಯನ್ನು ನೋಡುತ್ತಿದ್ದಾನೆ. ಹಣದ ಆಗಮನ ಹೆಚ್ಚಾಗುತ್ತದೆ. ಅನಾರೋಗ್ಯವಿದ್ದರೆ ನಿವಾರಣೆಯಾಗುತ್ತದೆ ಹಾಗೂ ಕೆಲಸ ಕಾರ್ಯದಲ್ಲಿ ಅಭಿವೃದ್ಧಿಯಾಗುತ್ತದೆ.

ಗುರು ಬಲದ ಜೊತೆಗೆ ದೈವ ಬಲವು ಮೇಷ ರಾಶಿಯವರಿಗೆ ಸಿಗುತ್ತದೆ. ಮೇಷ ರಾಶಿಯ ರಿಯಲ್ಎಸ್ಟೇಟ್ ವ್ಯವಹಾರ ಮಾಡುತ್ತಿರುವವರಿಗೆ ಸ್ಕೂಲ್ ನಡೆಸುತ್ತಿರುವವರಿಗೆ, ಟ್ಯೂಷನ್ ಸೆಂಟರ್ ನಡೆಸುತ್ತಿರುವವರಿಗೆ ಧಾರ್ಮಿಕ ಕಾರ್ಯದಲ್ಲಿ ತೊಡಗಿರುವವರಿಗೆ, ಸೂಪರ್ ಮಾರ್ಕೆಟ್ ನಡೆಸುತ್ತಿರುವವರಿಗೆ, ಬಿಸಿನೆಸ್ ಪ್ರಾರಂಭಿಸುವವರಿಗೆ ಇದು ಬಹಳ ಉತ್ತಮ ಸಮಯವಾಗಿದೆ. ಗುರುಬಲ ಇದ್ದಾಗ ನಾವು ಕೈ ಹಾಕಿದ ಕೆಲಸ ಯಶಸ್ಸು ಕೊಡುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಈ ಸಮಯದಲ್ಲಿ ಉದ್ಯೋಗ ಸಿಗುತ್ತದೆ.

ಕೆಲವು ಸಣ್ಣಪುಟ್ಟ ತೊಂದರೆಗಳಿಗೆ ಪರಿಹಾರ ಮಾಡಿಕೊಳ್ಳಲೆಬೇಕಾಗುತ್ತದೆ ಮೊದಲನೆಯದಾಗಿ ಸಾಮಾಜಿಕ ಪರಿಹಾರ ನಾವು ಪ್ರಕೃತಿಯಲ್ಲಿದ್ದೇವೆ ಪ್ರಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿಯಾಗಿರುತ್ತದೆ, ಮನೆಯ ಅಂಗಳದಲ್ಲಿ ನೀರನ್ನು ಇಡುವುದರಿಂದ ಎಷ್ಟೊ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ನಿವಾರಣೆಯಾಗುತ್ತದೆ. ನಮ್ಮ ಕೆಲಸವನ್ನು ನೋಡಿ ಭಗವಂತ ಮೆಚ್ಚಿಕೊಂಡರೆ ದೈವಬಲ ಸಿಕ್ಕಂತೆ. ಕಷ್ಟ ಇದ್ದರೂ ಪರಿಹಾರ ಮಾಡುವ ವಿಧಾನವೆಂದರೆ ಲಲಿತಾದೇವಿ ಪೂಜೆ, ಲಲಿತಾದೇವಿ ಹೋಮವನ್ನು 2024 ರ ಮೊದಲ ಅಮಾವಾಸ್ಯೆಯಂದು ಮಾಡಬೇಕು.

ಪ್ರತಿಯೊಬ್ಬರು ಅದರಲ್ಲೂ ಮೇಷ ರಾಶಿಯವರು ಓಂ ಧ್ರಾಂ ದತ್ತಾತ್ರೇಯ ನಮಃ ಎಂದು ಪ್ರತಿದಿನ ಪಠಿಸಬೇಕು ಇದರಿಂದ ಒಳ್ಳೆಯದಾಗುತ್ತದೆ. ಇದು ಕೇವಲ ಗೋಚಾರ ಫಲವೆ ಹೊರತು ಜನ್ಮ ಜಾತಕವನ್ನು ಒಮ್ಮೆ ತೋರಿಸಿದಾಗ ವಿವರವಾದ ಮಾಹಿತಿ ತಿಳಿಯುತ್ತದೆ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!