Ultimate magazine theme for WordPress.

ಮಗು ಹಾಗೂ ಗಂಡನ ಕುರಿತು ಮೊದಲ ಬಾರಿಗೆ ಮಾತನಾಡಿದ ಮೇಘನಾರಾಜ್ ಏನ್ ಅಂದ್ರು ನೋಡಿ

0 0

ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು , ಜೂನಿಯರ್ ಚಿರು ಅವರ ಆಗಮನ ಆದ ವಿಷಯ ಎಲ್ಲರಿಗೂ ತಿಳಿದೇ ಇದೆ. ಬಹಳ ದಿನಗಳ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದ ಮೇಘನಾ ರಾಜ್ ಅವರು ತಮ್ಮ ಮಗ ಹಾಗೂ ಚಿರು ಅವರ ಬಗ್ಗೆ ಎನು ಹೇಳಿದ್ದಾರೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ದಸರಾ ಹಬ್ಬದ ಸಂದರ್ಭದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್ ಹಾಗೂ ಚಿರು ಅವರ ಮಗನಿಗೆ ನಾಮಕರಣ ಶಾಸ್ತ್ರವನ್ನು ಕೂಡ ಸಂಭ್ರಮದಿಂದ ಮಾಡಲಾಗಿದೆ. ಬಹಳ ದಿನಗಳ ನಂತರ ಮಾಧ್ಯಮದ ಮುಂದೆ ಮಾತನಾಡಿದ ಮೇಘನಾ ರಾಜ್ ಈ ರೀತಿಯಾಗಿ ಹೇಳಿದ್ದಾರೆ. ಮೇಘನಾ ಅವರಿಗೆ ಅವರ ಮಗುವೇ ಅವರ ಶಕ್ತಿ ಆಗಿದ್ದು ಚಿರು ಎಲ್ಲ ನನ್ನ ಕೈಯಿಂದ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ. ಚಿರು ಅವರ ಅಗಲಿಕೆಯ ನೋವು ಮರೆಯೋದು ಅಸಾಧ್ಯದ ಮಾತು ಆದರೆ ಪುಟ್ಟ ಕಂದನನ್ನು ನೋಡಿದಾಗ ಅದರಲ್ಲಿ ತನಗೆ ಚಿರು ಕಾಣಿಸ್ತಾರೆ ಎಂದು ಹೇಳಿ ಮೇಘನಾ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಚಿರು ಹಾಗೂ ಮೇಘನಾ ರಾಜ್ ಅವರ ಮಗುವಿನ ತೊಟ್ಟಿಲ ಶಾಸ್ತ್ರ ನಡೆದ ಸಂದರ್ಭದಲ್ಲಿ ಹಲವು ದಿನಗಳ ಬಳಿಕ ಮಧ್ಯಮಗಳ ಜೊತೆ ಮಾತನಾಡಿದ ಮೇಘನಾ ಅವರು, ನಾನು ಚಿರುನಿಂದ ಕಷ್ಟದ ಸಮಯವನ್ನು , ದಿನಗಳನ್ನು ಎದುರಿಸಲು ಕಲಿತಿರುವೆ. ಚಿರು ಅಂದ್ರೆ ಮೇಘನಾ ಅವರ ಸಂತೋಷವೇ ಆಗಿದ್ದರೂ. ಮಗ ಬಂದಿರೋದು ಡಬಲ್ ಸಂಭ್ರಮ ಬಂದಿದೆ ಎಂದು ಪತಿಯ ಅಗಲಿಕೆಯ ನೋವಿನಲ್ಲೂ ಸಂತಸ ವ್ಯಕ್ತಪಡಿಸಿದರು. ಚಿರು ಬೂದಿ ಮುಚ್ಚಿದ ಕೆಂಡದಂತೆ. ಆದರೆ ಈ ರೀತಿ ಆಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಮಗನ ತೊಟ್ಟಿಲಶಾಸ್ತ್ರ ಇದು ಮೇಘನಾ ಅವರ ಪಾಲಿಗೆ ಮರೆಯಲಾಗದ್ದು ಎಂದು ಹೇಳಿದರು. ಬಹಳ ದಿನಗಳ ಬಳಿಕ ನಾನು ಮಾಧ್ಯಮದ ಮುಂದೆ ಬಂದಿದ್ದೇನೆ. ಎಲ್ಲರೂ ನನ್ನನ್ನ ಮನೆ ಮಗಳಾಗಿ ನೋಡಿದ್ದೀರಿ. ನಿಮಗೆ ಎಷ್ಟು ಸಮಯ ಕೊಟ್ಟರೂ ಸಾಲುವುದಿಲ್ಲ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಮೇಘನಾ ತಿಳಿಸಿದರು.

Leave A Reply

Your email address will not be published.