Meena Rashi September Horoscope: ಮೀನ ರಾಶಿಯ ಭವಿಷ್ಯ ಈ ತಿಂಗಳು ಹೇಗಿರುತ್ತದೆ ಎಂದು ನೋಡುವುದಾದರೆ. ಈ ರಾಶಿಯವರಿಗೆ ಈಗ ಗುರು ಬಲವಿಲ್ಲ, ಆದರೆ ಮೀನ ರಾಶಿಗೆ ಆಕ್ಟೊಬರ್ 30ರಂದು ರೇವತಿ ನಕ್ಷತ್ರಕ್ಕೆ ರಾಹುವಿನ ಪ್ರವೇಶವಾಗುತ್ತದೆ. ಇದರಿಂದ ಮೀನ ರಾಶಿಯವರಿಗೆ ಒಳ್ಳೆಯದು ಮತ್ತು ಕೆಟ್ಟದ್ದು ಎರಡು ಕೂಡ ಆಗುತ್ತದೆ. ಈ ರಾಶಿಯವರಿಗೆ ಗುರುಬಲ ಇಲ್ಲ, ನಿಮ್ಮ ರಾಶಿಯ ಅಧಿಪತಿ ಮಿತ್ರನ ಮನೆಯಲ್ಲಿ ಇರುವುದರಿಂದ ನಿಮಗೆ ಗುರುಬಲ ಇಲ್ಲದೆ ಹೋದರು ಗುರುವಿನ ಆಶೀರ್ವಾದ ಸಿಗುತ್ತದೆ. ಶನಿದೇವರು 12ನೇ ಮನೆಯಲ್ಲಿದ್ದಾರೆ.

ಈ ವೇಳೆ ಉದ್ಯೋಗದಲ್ಲಿ ಇರುವವರಿಗೆ ಸಣ್ಣಪುಟ್ಟ ಅಡಚಣೆ ಉಂಟಾಗಬಹುದು. ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಬದಲಾವಣೆ ಆಗಬಹುದು. ಈ ವೇಳೆ ಶನಿದೇವರು ನಿಮ್ಮ ರಾಶಿ ಕಡೆಗೆ ತಿರುಗಿದ್ದಾರೆ, ಗುರು ಕೂಡ ಕುಜನ ಮನೆಯಲ್ಲಿ ಬಲವಾಗಿ ನಿಲ್ಲಲಿದ್ದಾರೆ. ನಿಮ್ಮ ರಾಶಿಯ ಪೂರ್ವ ಪುಣ್ಯ ಸ್ಥಾನದಲ್ಲಿ ಶುಕ್ರ ಇದ್ದಾನೆ. ಸೂರ್ಯ ಮತ್ತು ಬುಧ ಪರಿವರ್ತನಾ ಯೋಗದಲ್ಲಿದ್ದು, ಕೇತು 8ನೇ ಮನೆಯಲ್ಲಿದ್ದಾನೆ, ಕುಜ 7ನೇ ಮನೆಯಲ್ಲಿದ್ದಾನೆ. ಕೇತು 8ನೇ ಮನೆಯಿಂದ 7ನೇ ಮನೆಗೆ ಪ್ರವೇಶ ಮಾಡುವುದಕ್ಕೆ ಶುರು ಮಾಡಿದ್ದಾನೆ.

ಈ ತಿಂಗಳು ನಿಮಗೆ ಕೋಪ ಹೆಚ್ಚಾಗಿ, ಕೂಗಾಟ ಚೀರಾಟ ಇವುಗಳಿಂದ ಸಂಯಮ ಕಳೆದುಕೊಳ್ಳುತ್ತೀರಿ. ಯೋಚನೆಯ ಶಕ್ತಿ ಕಡಿಮೆಯಾಗುತ್ತದೆ, ನೆಗಟಿವಿಟಿ ಹೆಚ್ಚಾಗಬಹುದು. ಹಾಗಾಗಿ ಕೋಪ ಕಡಿಮೆ ಮಾಡಿಕೊಳ್ಳಿ. ಈ ವೇಳೆ ನೀವು ದೇಹವನ್ನು ಆದಷ್ಟು ಕೂಲ್ ಆಗಿ ಇಟ್ಟುಕೊಳ್ಳುವುದು ಒಳ್ಳೆಯದು. ಶುಕ್ರ 5ನೇ ಮನೆಯಲ್ಲಿದ್ದಾನೆ, ಇದರಿಂದ ನಿಮಗೆ ವಾಹನ ಯೋಗ ಸಿಗುತ್ತದೆ. ಐಷಾರಾಮಿ ವಾಹನ ಖರೀದಿ ಮಾಡುತ್ತೀರಿ. ಯಾವುದೇ ಒಂದು ವಾಹನ ಖರೀದಿ ಮಾಡುವುದಕ್ಕೂ ಇದು ಉತ್ತಮವಾದ ಸಮಯ ಆಗಿದೆ, ಹಾಗೆಯೇ ಅಭಿವೃದ್ಧಿ ಹೊಂದುತ್ತೀರಿ..

Meena Rashi September Horoscope

ಬಹಳ ಸಮಯದಿಂದ ಆಗದೆ ಇರುವ ಕೆಲಸಗಳು ಮೀನ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಆಗುತ್ತದೆ. ಕೋರ್ಟ್ ಕೆಲಸಗಳಲ್ಲಿ ಜಯ ಸಿಗುತ್ತದೆ, ನಿಮ್ಮ ಹಣ ಇನ್ನೊಬ್ಬರ ಬಳಿ ಸ್ಟಕ್ ಆಗಿದ್ದರೆ ಅದು ವಾಪಸ್ ಬರುತ್ತದೆ. ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲೇ ಸಂತೋಷ ಕಾಣುತ್ತೀರಿ. ಸಾಮೂಹಿಕ ವಿವಾಹ ಮಾಡಿಸುವುದು, ಅನಾಥರಿಗೆ ಸಹಾಯ ಮಾಡುವುದು, ಭಿಕ್ಷುಕರಿಗೆ ಸಹಾಯ ಮಾಡುವುದು ಹೀಗೆ ಸಮಾಜ ಸೇವೆಯ ಕೆಲಸಗಳನ್ನು ಮಾಡುತ್ತೀರಿ. ಈ ತಿಂಗಳು ದಂಪತಿಗಳಿಗೆ ಒಳ್ಳೆಯ ಸಮಯ, ಸೆಪ್ಟೆಂಬರ್ ನಲ್ಲಿ ಸಂತಾನ ಯೋಗ ಕೂಡ ಇರುತ್ತದೆ.

ಈ ವೇಳೆ ನೀವು ದೇವಸ್ಥಾನಕ್ಕೆ ಹೆಚ್ಚಾಗಿ ಹೋಗುವುದು, ದೇವರ ಸ್ತೋತ್ರ ಓದುವುದು, ದೇವರ ಪುಸ್ತಕ ಓದುವುದು ಇದೆಲ್ಲವನ್ನು ಹೆಚ್ಚಾಗಿ ಶುರು ಮಾಡುತ್ತೀರಿ. ಅಗಲಿರುವ ನಿಮ್ಮ ಮನೆಯ ಪೂರ್ವಿಕರಿಂದ ನಿಮಗೆ ಆಶೀರ್ವಾದ ಸಿಗುತ್ತದೆ. ಗಂಡ ಹೆಂಡತಿಯರ ನಡುವೆ ಸಣ್ಣ ಪುಟ್ಟ ಜಗಳ ಬಂದರು ಕೂಡ ಅದೆಲ್ಲವೂ ಪ್ರೀತಿಯಲ್ಲೇ ಸರಿ ಹೋಗುತ್ತದೆ..7ನೇ ಮನೆಯಲ್ಲಿ ಸೂರ್ಯ ಬಂದಾಗ ಒಳ್ಳೆಯ ಅಭಿವೃದ್ಧಿ ಕಾಣುತ್ತೀರಿ. 6ನೇ ಮನೆಯಲ್ಲಿ ಬುಧದೇವ ಇದ್ದು, ಅವರಿಂದ ಏನು ತೊಂದರೆ ಆಗುವುದಿಲ್ಲ. ಆದರೆ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಆಗಬಹುದು, ಮೈಕೈ ನೋವು ಉಂಟಾಗಿ ದೇಹ ಶಿಥಿಲವಾಗಬಹುದು. ಹಾಗಾಗಿ ದೇಹವನ್ನು ತಂಪಾಗಿ ಇಟ್ಟುಕೊಳ್ಳಿ.

ನೀವು ಹುಷಾರು ತಪ್ಪಬಹುದು, ಹುಷಾರಾಗಿರಿ. ಮೊಣಕಾಲಿನ ಕೆಳಗೆ ಸಮಸ್ಯೆ ಆಗಬಹುದು, ಜಾಗ್ರತೆಯಿಂದ ಇರಿ. ಈ ವೇಳೆ ಆರೋಗ್ಯ ವೃದ್ಧಿ ಆಗುತ್ತದೆ, ಧನಲಾಭ ಪ್ರಾಪ್ತಿಯಾಗುತ್ತದೆ. ಸಂತೋಷ ಇರುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ, ವ್ಯಾಪಾರದಲ್ಲಿ ಉತ್ತಮ ಲಾಭ. ಇಷ್ಟು ಬಿಟ್ಟು ಇನ್ಯಾವುದೇ ದೊಡ್ಡ ಸಮಸ್ಯೆ ಇಲ್ಲ. ವಿಶೇಷವಾದ ಪರಿಹಾರದ ಅವಶ್ಯಕತೆ ಇಲ್ಲ. ಈ ವೇಳೆ ನೀವು ಗೋಮುಖ ದರ್ಶನ ಮಾಡುವುದು ಒಳ್ಳೆಯದು. ನಿಮ್ಮಿಂದ ಸಾಧ್ಯವಾದರೆ ಗೋವಿಗೆ ಏನಾದರೂ ಸಹಾಯ ಮಾಡಿ. ಹೊರಗೆ ಹೋಗುವಾಗ ಹಸುವಿನ ದರ್ಶನ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ. ಒಂದು ವೇಳೆ ಸಿಟಿಯಲ್ಲಿ ಹಸುವನ್ನು ನೋಡೋದಕ್ಕೆ ಆಗಲ್ಲ ಎಂದರೆ, ಹಸುವಿನ ಫೋಟೋವನ್ನು ಡೌನ್ಲೋಡ್ ಮಾಡಿ ಅದನ್ನು ಬೆಳಗ್ಗೆ ಎದ್ದ ತಕ್ಷಣ ನೋಡಿ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *